MIRROR FOCUS

ತರಹೇವಾರಿ ಗೆಡ್ಡೆ-ಗೆಣಸುಗಳದ್ದೇ ಲೋಕ | ಜೋಯಿಡಾದಲ್ಲಿ ನಡೆಯಿತು ಅಪರೂಪದ ವಿವಿಧ ಜಾತಿಯ ಗೆಡ್ಡೆ-ಗೆಣಸುಗಳ ಪ್ರದರ್ಶನ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಉತ್ತರ ಕನ್ನಡ ಜಿಲ್ಲೆಯ(Uttara Kannada) ಮಂದಿ ಇನ್ನು ತಮ್ಮ ಮೂಲ ಆಹಾರ ಪದ್ಧತಿ, ಕಾಡು ಮೇಡು, ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಅಲ್ಲಿನ ಜನ ಇಂದಿಗೂ ತರಕಾರಿ(vegetable), ಸೊಪ್ಪು(Green vegetable), ಗೆಡ್ಡೆ ಗೆಣಸುಗಳನ್ನು(tubers-Potato) ಸಾಂಪ್ರದಾಯಿಕ ರೀತಿಯಲ್ಲಿ ಬೆಳೆಯುತ್ತಿದ್ದಾರೆ. ಕಂದಮೂಲ ಆಹಾರಗಳು ಮನುಷ್ಯನ ಮೊದಲ ಆಹಾರವಾಗಿದ್ದವು. ಗೆಡ್ಗೆ-ಗೆಣಸುಗಳು  ಬಹುಷಃ ಮನುಷ್ಯನ ಊಟೋಪಚಾರಕ್ಕೆ ಉಪಯೋಗವಷ್ಟು ಮತ್ಯಾವ ವಸ್ತುಗಳೂ ಬಳಸಲ್ಪಟ್ಟಿಲ್ಲ. ಉತ್ತರ ಕನ್ನಡ  ಜಿಲ್ಲೆಯ ಅಂಕೋಲಾ ಹಾಗೂ ಜೋಯಿಡಾ ಇವೆರೆಡೂ ಯಥೇಚ್ಛವಾಗಿ ಗೆಡ್ಡೆ ಗೆಣಸು ಬೆಳೆಯುವ ಸ್ಥಳ . ಜೋಯಿಡಾದ ಗುಡ್ಡಗಾಡಲ್ಲಿ ಹತ್ತಾರು ವಿಧದ ಗೆಡ್ಡೆ ಗೆಣಸುಗಳು ಈ ಕಾಲದಲ್ಲಿ ಸಿಗುತ್ತವೆ. ಅವುಗಳ ಪ್ರದರ್ಶನವನ್ನು(Exhibition) ಪ್ರತಿ ವರ್ಷ ಕಾಳಿ ಪ್ರವಾಸೋದ್ಯಮ ಇಲಾಖೆ ನಡೆಸುತ್ತದೆ.

Advertisement

ಗೆಡ್ಡೆ ಗೆಣಸುಗಳು ಪ್ರದರ್ಶನ : ಇಲ್ಲಿರುವ ಗೆಡ್ಡೆ ಗೆಣಸುಗಳು 1 ಕೆಜಿಯಿಂದ-50 ಕೆಜಿಯರೆಗೆ ತೂಕ ಹೊಂದಿರುತ್ತವೆ. ಪಂಜರುಗಡ್ಡೆ, ಕೆಸುವಿನ ಗೆಡ್ಡೆ, ತುಪ್ಪಗೆಣಸು, ಮರಗೆಣಸು, ಸಿಹಿಗೆಣಸು, ಕೆಸುವಿನ ಗೆಡ್ಡೆ, ರಚ್ಚೇವು ಗೆಡ್ಡೆ, ಕಂಬಕೆಸು, ಚಿಪ್ಪಗೆಸು, ನೇಗಲಗೊನ್ನೆ, ಪಂಜರಗೆಡ್ಡೆ, ಹಾಲುಗೆಸು, ಚೆಂಗೆಣಸು, ಚಿರಕಾಂಡೆ ಮುಂತಾದ ಗೆಣಸುಗಳ ಪ್ರದರ್ಶನ ಇಲ್ಲಿ ನಡೆಯಿತು. ಒಂದೊಂದು ಗೆಣಸಿಗೆ 500-1000ದಷ್ಟು ದರ ಇದ್ದರೂ ಜನ ಕೊಂಡೊಯ್ದರು. ಸುಮಾರು 125 ಸ್ಟಾಲ್ ಗಳು ಇದ್ದವು.

ಗದೆಯನ್ನು ಮೀರಿಸುವ ಸೈಜಿನ ಗೆಣಸು : ಬರೀ ಜೊಯಿಡಾ ಮಾತ್ರವಲ್ಲದೇ ಬೇರೆ ಬೇರೆ ಭಾಗದಿಂದಲೂ ಕೂಡ ಗೆಡ್ಡೆ-ಗೆಣಸು ಬೆಳೆಯುವ ಜನರು ಇಲ್ಲಿ ಪ್ರದರ್ಶನಕ್ಕೆ ಆಗಮಿಸಿದ್ದರು. ಒಂದೊಂದು ಗೆಡ್ಡೆಯಂತು ಒಂದು ಟಿಪಾಯಿಯ ಸೈಜ್, ಒಂದು ಒನಕೆಯ ಸೈಜ್, ಗದೆಯನ್ನು ಮೀರಿಸುವ ಸೈಜಿನ ಗೆಡ್ಡೆ ಗೆಣಸುಗಳು ಕಂಡುಬಂದವು. ಕೋನ್ ಗಳೆಂದು ಕರೆಯಲ್ಪಡುವ ಗೆಡ್ಡೆಗಳದ್ದೇ ಸಿಂಹಪಾಲಾಗಿತ್ತು.

– ಅಂತರ್ಜಾಲ ಮಾಹಿತಿ

Both Ankola and Zoida in Uttara Kannada district are the places where sweet potato is grown in abundance. Tens of varieties of tubers can be found in the hills of Joida during this season. Their exhibition is conducted by Kali Tourism Department every year.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮುಂದಿನ ಒಂದು ವರ್ಷ ಕೆಲವು ರಾಶಿಗಳಿಗೆ ಗುರು ಪ್ರವೇಶದಿಂದ ಆಗುವ ತೊಂದರೆಗಳು ಏನು..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

10 hours ago

ಅಡಿಕೆ ಹಾಳೆ ತಟ್ಟೆ ಅಮೆರಿಕದಲ್ಲಿ ಬ್ಯಾನ್ …

ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…

20 hours ago

ಅಡಿಕೆ ಧಾರಣೆ ಏರುಪೇರು ಯಾಕಾಗಿ?

ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…

1 day ago

ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ

ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…

1 day ago

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ – ಈಶ್ವರ ಖಂಡ್ರೆ

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…

1 day ago