Advertisement
ಪ್ರಮುಖ

ಗಣಪನ ಬೆಳಗುವ ಭಕ್ತರು | ಸಾರ್ವಜನಿಕ ಗಣೇಶೋತ್ಸವದಲ್ಲಿ ಭಕ್ತರಿಂದಲೇ ಗಣಪನಿಗೆ ಆರತಿ | ಉಬರಡ್ಕದಲ್ಲಿ ಮಾದರಿ ಗಣೇಶೋತ್ಸವ |

Share

ಗಣೇಶ ಚತುರ್ಥಿಯಿಂದ ಆರಂಭಗೊಂಡ ಹಲವು ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಹಲವು ಕಡೆ ನಡೆಯುತ್ತದೆ. ಕೆಲವು ಕಡೆ ಒಂದು ದಿನ, ಎರಡು ದಿನ, ಹೀಗೇ ವಾರಗಳ ಕಾಲವೂ ಗಣೇಶೋತ್ಸವ ನಡೆಯುತ್ತದೆ. ಈ ಸಾರ್ವಜನಿಕ ಉತ್ಸವದ ಮೂಲಕ ಸಂಭ್ರಮ ನಡೆಯುತ್ತದೆ. ಈ ಉತ್ಸವದ ಮೂಲ ಉದ್ದೇಶಗಳು ಹಲವು ಕಡೆ ಮರೆಯಾಗುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಉಬರಡ್ಕದಲ್ಲಿ  ಕಳೆದ 13  ವರ್ಷಗಳಿಂದ ಸಾರ್ವಜನಿಕ ಉತ್ಸವದ ಮೂಲ ಆಶಯವನ್ನು ಇರಿಸಿಕೊಂಡು ಉತ್ಸವ ಆಚರಿಸಲಾಗುತ್ತದೆ.

ಸಾರ್ವಜನಿಕ ಗಣೇಶ ಉತ್ಸವವು  ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಲೋಕಮಾನ್ಯ ಬಾಲಗಂಗಾಧರ್ ತಿಲಕರು  ಮಹಾರಾಷ್ಟ್ರದಲ್ಲಿ ಹುಟ್ಟು ಹಾಕಿದ್ದರು. ಸಾರ್ವಜನಿಕವಾಗಿ ಗಣೇಶನನ್ನು ಪ್ರತಿಷ್ಠಾಪಿಸಿ ಜನರನ್ನು ಒಗ್ಗೂಡಿಸುವ ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದ್ದರು. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ನಡೆಸಿದ ಹೋರಾಟಕ್ಕೆ ಸ್ಫೂರ್ತಿಯಾಗಿದ್ದ ಗಣೇಶೋತ್ಸವ ಇಂದಿಗೂ ನಡೆಯುತ್ತಿದೆ. ಈಗ ಸಂಘಟನೆ ಹಾಗೂ ಒಂದಾಗಿಸುವ ಉದ್ದೇಶ ಹೇಳಲಾಗುತ್ತಿದ್ದರೂ, ಹಲವು ಕಡೆ ಮೂಲ ಉದ್ದೇಶಗಳಿಂದ ನಡೆಯುತ್ತಿಲ್ಲ. ಸುಳ್ಯದ ಉಬರಡ್ಕ ಮಾತ್ರಾ ಇದಕ್ಕೆ ಅಪವಾದ, ಇಲ್ಲಿ  ಭಕ್ತರೇ ಗಣಪನಿಗೆ ಆರತಿ ಬೆಳಗುವ ಮೂಲಕ  ಸಾರ್ವಜನಿಕ ಉತ್ಸವದ ಮೂಲ ಉದ್ದೇಶವನ್ನು ಇಲ್ಲಿನ ಸಾರ್ವಜನಿಕ ಗಣೇಶೋತ್ಸವದಲ್ಲಿ ಉಳಿಸಲಾಗಿದೆ.

ಭಕ್ತರಿಂದ ಗಣಪನಿಗೆ ಆರತಿ

ಉಬರಡ್ಕದ ನರಸಿಂಹ ಶಾಸ್ತಾವು ದೇವಾಲಯ ಹಾಗೂ ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ  ಗಣೇಶೋತ್ಸವ ನಡೆಯುತ್ತದೆ. ಕಳೆದ 13 ವರ್ಷಗಳಿಂದ ಉತ್ಸವ ನಡೆದುಕೊಂಡು ಬರುತ್ತಿದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಈ ಗಣೇಶೋತ್ಸವ ಅಚ್ಚುಕಟ್ಟಾಗಿ ನಡೆಯುತ್ತಿದೆ. ಎರಡು ದಿನಗಳ ಕಾಲ ನಡೆಯುವ ಉತ್ಸವದ ಆರಂಭದಲ್ಲಿ ಇಲ್ಲಿನ ಅರ್ಚಕರು ಗಣಪತಿ ಪ್ರತಿಷ್ಟೆ ಹಾಗೂ ಪೂಜಾ ವಿಧಿವಿಧಾನ ಮಾಡಿದ ಬಳಿಕ ಗಣಪನಿಗೆ ಸೇವೆ ನಡೆಯುತ್ತದೆ. ಹಲವು ಸೇವೆಗಳ ನಡುವೆ ಮಂಗಳಾರತಿ ಇಲ್ಲಿ ವಿಶೇಷವಾಗಿರುವ ಸೇವೆ. ಭಕ್ತರೇ ಆರತಿ ಮಾಡುತ್ತಾರೆ, ಅರ್ಚಕರು ಮಂತ್ರ ಪಠಣ ಮಾಡುತ್ತಾರೆ, ಪ್ರಸಾದ ವಿತರಣೆ ಮಾಡುತ್ತಾರೆ. ಭಾವವೇ ಪ್ರಧಾನವಾಗಿರುವ ಈ ಸೇವೆ ಇಲ್ಲಿ ಹೆಚ್ಚು ಮಹತ್ವ ಪಡೆದಿದೆ. ಇಲ್ಲಿ ಗಣಪತಿ ಪ್ರತಿಷ್ಟೆಯ ಸಂದರ್ಭದಿಂದಲೇ ಭಕ್ತರಿಂದಲೇ ಆರತಿ ಬೆಳಗುವ ಸಂಕಲ್ಪ ಮಾಡಲಾಗಿತ್ತು, ಈ ಮೂಲಕ ಸಾರ್ವಜನಿಕ ಆಚರಣೆಗೆ ಮಹತ್ವ ನೀಡಲಾಗಿತ್ತು.

ಶ್ಯಾಮ್ ಪಾನತ್ತಿಲ
ಈಗ ಭಕ್ತರು ಆರತಿ ಬೆಳಗುವ ಮೂಲಕ ಗಣಪನನ್ನು ಹೆಚ್ಚು ಆಪ್ತವಾಗಿ ಆರಾಧನೆ ಮಾಡುತ್ತಾರೆ.  ಊರಿನ ಬಹುಪಾಲು ಮಂದಿ ಈ ಕಾರ್ಯದಲ್ಲಿ ಭಾಗವಹಿಸುತ್ತಾರೆ ಎಂದು ಹೇಳುತ್ತಾರೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶ್ಯಾಮ್ ಪಾನತ್ತಿಲ.‌
ಮಧ್ವರಾಜ ಭಟ್
ಸಂಕಲ್ಪ ಶಕ್ತಿಯೇ ದೊಡ್ಡದು. ಇಲ್ಲಿ ಭಕ್ತರು ಆರತಿ ಬೆಳಗಲು ಯಾವ ಅಡ್ಡಿಗಳಿಲ್ಲ, ಸರಳವಾಗಿ ಆರತಿ ಮಾಡುವ ಮೂಲಕ ತಾವೇ ಆರಾಧನೆ ಮಾಡುತ್ತಾರೆ,‌ ಭಾವನೆಗಳೇ ಇಲ್ಲಿ ಪ್ರದಾನವಾಗಿದೆ, ನಿಯಮಗಳು ಇಲ್ಲ ಎಂದು ಹೇಳುತ್ತಾರೆ ಅರ್ಚಕರಾದ ಮಧ್ವರಾಜ ಭಟ್

ಗಣಪನ ಬೆಳಗುವ ಭಕ್ತರು – ವಿಡಿಯೋ…

ಉಬರಡ್ಕದಲ್ಲಿ ಸುಮಾರು 13 ವರ್ಷಗಳ ಹಿಂದೆ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡುವ ವೇಳೆಯೇ ಆಗ ಈ ಉತ್ಸವದ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ಹಿರಿಯರು ಈ ಬಗ್ಗೆ ಯೋಚಿಸಿ, ಸಾರ್ವಜನಿಕ ಉತ್ಸವಗಳಲ್ಲಿ ನಿಯಮಗಳು ಕಡಿಮೆ ಇದ್ದು, ಊರಿನ ಜನರೆಲ್ಲಾ ಒಂದಾಗುವ ದಾರಿಗಳು ಇರಬೇಕು ಎಂದು ಯೋಚಿಸಿದ್ದರು. ಇಲ್ಲಿ ಗಣೇಶೋತ್ಸವದ ದಿನ ಆಟೋಟಗಳು ನಡೆಯುತ್ತಿತ್ತು, ಇದರ ಬದಲಾಗಿ ಗಣಪತಿ ಹವನ ನಡೆಸುವ ಯೋಚನೆ ಬಂದಾಗ ಗಣೇಶ ಉತ್ಸವವವೇ ನಡೆಸಲು ಯುವಕರು ಯೋಚಿಸಿದಾಗ ಬಾಲಗಂಗಾಧರ್ ತಿಲಕ ಯೋಚನೆಗಳು ಹಳ್ಳಿಯಲ್ಲೂ ಜಾರಿಗೆ ಬರಲು ಯೋಚನೆ ನಡೆಯಿತು. ಅಂದು ಸಮಿತಿಯ ಮಾರ್ಗದರ್ಶನ ನೀಡಿದ್ದ ಹಾಗೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಊರಿನ  ಪ್ರಮುಖರ ತಂಡವು ಗ್ರಾಮೀಣ ಭಾಗದಲ್ಲೂ ಬದಲಾವಣೆಗೆ ನಾಂದಿ ಹಾಡಿದ್ದರು. ಈ ತಂಡವು, ಮುಂದೆ ಹಂತ ಹಂತವಾಗಿ ಬದಲಾವಣೆಯನ್ನು ಬಯಸಿತ್ತು. ತಾಲೂಕಿನ ಪ್ರಮುಖ ಪುರೋಹಿತರು ಕೂಡಾ ಈ ಕ್ರಮವನ್ನು ಮೆಚ್ಚಿಕೊಂಡಿದ್ದರು.ಸಾಮಾಜಿಕ ಸಾಮರಸ್ಯಕ್ಕೆ ಇದು ನಾಂದಿಯಾಗಿದೆ ಎಂದೂ ಅಭಿಪ್ರಾಯಪಟ್ಟಿದ್ದರು.

ಗ್ರಾಮೀಣ ಭಾಗದಲ್ಲಿ ಈಗಲೂ ಇಂತಹದ್ದೊಂದು ಸಾಮರಸ್ಯದ , ಭಾವನೇ ಪ್ರದಾನವಾಗಿ ನಡೆಯುತ್ತಿರುವ ವಿಶೇಷವಾದ ಗಣೇಶೋತ್ಸವಗಳ ಸಾಲಿನಲ್ಲಿ ಉಬರಡ್ಕದ ಗಣೇಶೋತ್ಸವ ಮಾದರಿಯಾಗಿದೆ. ಪ್ರತೀ ಊರಿನಲ್ಲೂ ಸಾರ್ವಜನಿಕ ಗಣೇಶೋತ್ಸವ, ಆಚರಣೆಗಳೂ ಈ ಮಾದರಿಯಲ್ಲಿ ನಡೆಯಬೇಕಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ

ಬರಪೀಡಿತ ಎಂದು ಘೋಷಿಸಿರುವ ರಾಜ್ಯದ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿ ಅವಧಿಯನ್ನು…

6 hours ago

25 ಸಾವಿರ ವರ್ಷಗಳ ಹಿಂದೆಯೇ ಅಡಿಕೆ ಬಳಕೆ ? ಪುರಾತನ ಹಲ್ಲುಗಳಲ್ಲಿ ಸಿಕ್ಕಿದ ಸುಳಿವು

ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…

15 hours ago

“ಹನುಮಾನ್ ಅಂಶ್‌” ಬಾಕ್ಸ್ ಆಫೀಸ್ ದಾಖಲೆ – 40ನೇ ದಿನವೂ ₹8.25 ಕೋಟಿ – ಪಠಾಣ್‌, ಛಾವಾ, ಉರಿ ದಾಖಲೆ ಮೀರಿಸಿದ ಸಿನಿಮಾ

‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ…

17 hours ago

ಮುಂಗಾರು ಹಿಂದೆ ಸರಿಯಲು ಸಜ್ಜು – ಸೆ.17ರಿಂದ ಪಶ್ಚಿಮ ರಾಜಸ್ಥಾನದಲ್ಲಿ ಆರಂಭವಾಗುವ ಸಾಧ್ಯತೆ

ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…

22 hours ago

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…

24 hours ago

ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?

ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್‌ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…

1 day ago