Advertisement
MIRROR FOCUS

ಕೊಳ್ಳುಬಾಕ ಸಂಸ್ಕೃತಿ( ಕನ್ಸುಮರಿಸಮ್ ) ನಮಗೆ ಬೇಕೆ? | ಕೃಷಿಕ ಎ ಪಿ ಸದಾಶಿವ ಬರೆಯುತ್ತಾರೆ…|

Share

ಒಂದು ದಿನ ಸಪತ್ನೀಕನಾಗಿ ಪೇಟೆಯಲ್ಲಿ ಹೋಗುತ್ತಿದ್ದೆ. ನನ್ನ ಪತ್ನಿಯ ಸ್ನೇಹಿತರೊಬ್ಬರು ಸಿಕ್ಕಿದರು. ಪ್ರಸಿದ್ದ ಬಟ್ಟೆ ಅಂಗಡಿಯಲ್ಲಿ ಡಿಸ್ಕೌಂಟ್ ಸೇಲ್ ಇದೆ ನೀವು ಹೋಗಲಿಲ್ಲವೇ? ಪ್ರಶ್ನೆ. ಇಲ್ಲ ಎಂದಳು ನನ್ನಾಕೆ . ನಾನು ನಿನ್ನೆ ಹೋಗಿದ್ದೆ, ತುಂಬಾ ಸೀರೆಗಳು ಇವೆ. ಯಾವುದು ತೆಗೆಯುವುದು ಬಿಡುವುದು ಗೊತ್ತಾಗುವುದಿಲ್ಲ 5 ಸೀರೆ ತೆಗೆದೆ. ಕಳೆದ ವರ್ಷವೂ ನಾನು ತೆಗೆದಿದ್ದೆ. ಪ್ರಶ್ನೆ ಮುಗಿಯುವುದರೊಳಗೆ ಹೀಗೆ ಉತ್ತರವು ಬಂದಿತ್ತು.

Advertisement
Advertisement

ದಂಪತಿಗಳಿಗೆ ಕೈತುಂಬಾ ಸಂಪಾದನೆ, ಚಿಕ್ಕಮಗು. ಮಗುವನ್ನು ರಂಜಿಸಲು ಆಗಾಗ ಆಟಿಕೆಗಳ ಆಗಮನ ಮನೆಗೆ. ಮನೆಯಲ್ಲಿ ಎಲ್ಲಿ ನೋಡಿದರೂ ಆಟಿಕೆಗಳ ಸಾಮ್ರಾಜ್ಯವೇ. ಹೊಸತು ಬಂದಾಗ ಒಂದು ದಿನ ಆಡಿಯೋ, ಕುಟ್ಟಿ ಮುರಿದೋ ಸಂತೋಷ ಪಡುವ ಮಗು ಮರುದಿನಕ್ಕೆ ಹೊಸತಕ್ಕೆ ಬೇಡಿಕೆ.ಹೀಗೆ ಬಂದುದಕ್ಕೆ ಲೆಕ್ಕವಿಟ್ಟವರಿಲ್ಲ.

Advertisement

ನಾಲ್ಕಾರು ದಿನ ಬಳಸಿದಾಗ ಕಾಲಿನ ಪಾದರಕ್ಷೆ ಮಾಸುವುದು ಸಹಜ.ಹಾಗಾಗಿ ಆಗಾಗ ಪಾದರಕ್ಷೆಗಳ ಬದಲಾವಣೆ. ಉಡುವ ತೊಡುಗೆಗೆ ಹೊಂದುವಂತಹ ಪಾದರಕ್ಷೆಗಳು, ಬೂಟುಗಳು ಚಪ್ಪಲಿಗಳು ಕೋಟುಗಳು ಹೀಗೆ ನಾನಾ ವೈವಿಧ್ಯಗಳು.

ಮನೆಯೊಂದು ಹೊಸತು ಆದಾಗ ಅಲ್ಲೊಂದು ಪ್ರದರ್ಶನ ಕವಾಟು ( ಶೋ ಕೇಸ್ )ಆಗಾಗ ಅಲಂಕಾರಿಕ ವಸ್ತುಗಳ ಸಂಗ್ರಹ. ನೋಡಿದ್ದನ್ನೇ ನೋಡುವಾಗ ಮನಸ್ಸಿಗೆ ಬೇಜಾರು.ಧೂಳು ಕುಳಿತು ಮಾಸಿದಂತೆ ಅದನ್ನು ತೆಗೆದು ಬಿಸಾಡಿ ಇನ್ನೊಂದರ ಪ್ರದರ್ಶನ.

Advertisement

ಮೊಬೈಲೊಂದು ತೆಗೆದು ನಾಲ್ಕಾರು ತಿಂಗಳಾಗುತ್ತಿದ್ದಂತೆ, ಹೊಸ ನಮೂನೆ ಬಂದಾಗ ಕೈಯಲ್ಲಿದ್ದದ್ದು ಹಳತಾದಂತೆ ಗೋಚರಿಸುವುದು.

ಹೀಗೆ ಅನೇಕ ವಸ್ತುಗಳು ನಮಗೆ ಬೇಕಾಗಿಯೋ ಬೇಡವಾಗಿಯೋ ನಮ್ಮೆಲ್ಲರ ಮನೆಗಳಿಗೆ ಬರುತ್ತಿದೆ. ಇಂದು ಅವರವರ ಆರ್ಥಿಕ ಶಕ್ತಿಯನ್ನು ಮೀರಿ ಕೊಳ್ಳುಬಾಕ ಸಂಸ್ಕೃತಿಯ ಕಡೆಗೆ ನಾವಿಂದು ಆಕರ್ಷಿತರಾಗುತ್ತಿದ್ದೇವೆ. ಅದರ ಪರಿಣಾಮವಾಗಿ ನಮಗೆ ಬೇಡದ ವಸ್ತುಗಳ ನಿರ್ವಹಣೆ ಇಂದು ಸಾಮಾಜಿಕ ಸಮಸ್ಯೆಯಾಗಿ ಕಾಡುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳಂತೂ ಮಣ್ಣಿನಲ್ಲಿ ಮಣ್ಣಾಗದೆ ಜಲಮೂಲಗಳನ್ನು ಮಣ್ಣನ್ನು ನಾಶ ಮಾಡ ಹೊರಟಿದೆ. ಪ್ರಾಕೃತಿಕ ಸಂಪತ್ತು ನಮ್ಮ ಪೀಳಿಗೆಗೂ ಅಗತ್ಯ ಎಂಬುದು ನಮಗೆ ಮರೆತೇ ಹೋಗಿದೆ.

Advertisement

ಭಾರತೀಯ ಸಂಸ್ಕೃತಿಯಲ್ಲಿ ಬಳಸಿ ಎಸೆಯುವ ಮನೋಭಾವವೇ ಇರಲಿಲ್ಲ. ತೊಡುಗೆಗಳನ್ನಾಗಲಿ, ಚಪ್ಪಲಿಯನ್ನಾಗಲಿ ಹರಿದಲ್ಲಿ ಒಂದಷ್ಟು ಹೊಲಿಗೆ ಹಾಕಿ ಮತ್ತೆ ಮತ್ತೆ ಅದನ್ನೇ ಬಳಸುತ್ತಿದ್ದರು. ಹರಿದ ವಸ್ತ್ರಗಳು, ಮಕ್ಕಳನ್ನು ಮಲಗಿಸುವ ಬಟ್ಟೆಗಳಾಗಿ, ಕೌಪೀನವಾಗಿ, ನೆಲ ಒರೆಸುದಕ್ಕಾಗಿ ಬಳಕೆಯಾಗಿ ನಂತರ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತಿತ್ತು. ಆದರೆ ನಾವಿಂದು ಬಳಸುವ ವಸ್ತ್ರಗಳು ಮರುಬಳಕೆಗೆ ಯೋಗ್ಯವಿಲ್ಲದೆ ಪ್ರಕೃತಿಗೆ ಭಾರವಾಗುತ್ತಿದೆ. ನೆಲ ಒರೆಸುವುದಕ್ಕೂ ನಾವು ಮತ್ತೆ ಪೇಟೆಯನ್ನು ಅವಲಂಬಿಸುವಂತಾಗಿದೆ.

ಹುಟ್ಟಿದ ಮನುಷ್ಯನೊಬ್ಬ ಸಾರ್ಥಕ ಬಾಳನ್ನು ಬಾಳದೆ ಅಕಾಲಿಕ ಮರಣವನ್ನಪ್ಪಿದ್ದರೆ, ಇಲ್ಲ ಆತ್ಮಹತ್ಯೆಗೈದಿದ್ದರೆ, ಏನು ಅನ್ಯಾಯವಾಗುವುದೋ ಅಂತಹುದೇ ಅನ್ಯಾಯ ಇಂದು ಪ್ರತಿಯೊಂದು ವಸ್ತುವಿನಲ್ಲಿ ನಾವು ಕಾಣುತ್ತಿದ್ದೇವೆ.

Advertisement

ವಸ್ತುವೊಂದು ಬೇಕು ಅನ್ನಿಸಿದಾಗ, ಆ ವಸ್ತು ನಮಗೆ ಅನಿವಾರ್ಯವೇ? ಎಂದು ನಾವು ಆರು ತಿಂಗಳಿಂದ ಒಂದು ವರ್ಷದವರೆಗೆ ಪ್ರಶ್ನೆ ಮಾಡಿದಾಗ ನಮಗೆ ಅದು ಬೇಕೇ ಬೇಡವೇ ಎಂದು ಅರ್ಥ ಆಗುವುದು.

ಕೊಳ್ಳುಬಾಕ ಸಂಸ್ಕೃತಿಯಿಂದ ಪ್ರಕೃತಿ ಪೂರಕದೆಡೆಗೆ ಸಾಗೋಣ. ಪ್ರಕೃತಿಯನ್ನು ಉಳಿಸೋಣ. ಪ್ರಕೃತಿಯ ಸಂಪತ್ತನ್ನು ಮುಂದಿನ ಪೀಳಿಗೆಗೆ ಕಾಪಿಡೋಣ.

Advertisement

# ಎ.ಪಿ. ಸದಾಶಿವ ಮರಿಕೆ

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

Published by
ಎ ಪಿ ಸದಾಶಿವ ಮರಿಕೆ

Recent Posts

Karnataka Weather | 18-05-2024 | ರಾಜ್ಯದ ಹಲವು ಕಡೆ ಮಳೆ | ವಾಯುಭಾರ ಕುಸಿತದ ಲಕ್ಷಣ | ವಾಯುಭಾರ ಕುಸಿತದ ಪ್ರಭಲತೆಯ ಮೇಲೆ ಮುಂಗಾರು ಪರಿಣಾಮ |

ಈಗಿನಂತೆ ಮೇ 22ರ ಅಂದಾಜು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗುವ ಲಕ್ಷಣಗಳಿವೆ.

1 hour ago

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಭೆ ಮತ್ತು ಕೌಶಲ್ಯಕ್ಕೆ ಬಹುಬೇಡಿಕೆ: ಸಚಿವ ಎಸ್. ಜೈಶಂಕರ್

''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ(India) ಚಲನಶೀಲತೆ ಒಪ್ಪಂದಗಳನ್ನು(Mobility Agreement) ಮಾಡಿಕೊಳ್ಳಲು…

1 hour ago

ರಾಜ್ಯದ ಹಲವೆಡೆ ಮಳೆ | ತಂಪಾದ ಬರದ ನೆಲ | ಸಿಡಿಲು ಬಡಿದು ಬಾಲಕಿ ಸಾವು

ಬರದಿಂದ(Drought) ತತ್ತರಿಸಿದ್ದ ರಾಜ್ಯದ ಜನತೆಗೆ ವರುಣ(Rain) ತಂಪೆರೆದಿದ್ದಾನೆ. ರೈತರ(Farmer) ಮೊಗದಲ್ಲಿ ಮಂದಹಾಸ ಮೂಡಿದೆ.…

1 hour ago

ಸತ್ಯ……..ಸತ್ಯದ ಹುಡುಕಾಟ ನಿಮ್ಮ ಆದ್ಯತೆಯಾಗಿರಲಿ……..

ಏನೇ ಆಗಲಿ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ...... ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

2 hours ago

ಉದ್ಯಮಿ ಮುಕೇಶ್ ​ಅಂಬಾನಿಯ ಪ್ರತಿ ಗಂಟೆಯ ಗಳಿಕೆ ಎಷ್ಟು..? | ಅಂಬಾನಿ ಸಂಭಾವನೆ ಎಷ್ಟು ಗೊತ್ತಾ?

 ಮುಕೇಶ್ ಅಂಬಾನಿ(Mukesh Ambani), ರಿಲಯನ್ಸ್‌ ಇಂಡಸ್ಟ್ರೀಸ್‌(Reliance Industries) ಮುಖ್ಯಸ್ಥ, ನಮ್ಮ ದೇಶ ಮತ್ತು…

2 hours ago

ಕೃಷಿಯಲ್ಲಿ ಯುವ ರೈತನ ಸಾಧನೆ | 200 ರೂ. ಗೆ 1 ಕೆ.ಜಿ ಬೀನ್ಸ್ ಮಾರಾಟ ಮಾಡಿ 20 ಲಕ್ಷ ಬಂಪರ್‌ ಲಾಭ |

ರಾಜ್ಯದಲ್ಲಿ ಬರಗಾಲ(Drought) ತಾಂಡವವಾಡುತ್ತಿದೆ. ಕೆಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದೆ(Rain). ಉತ್ತರ ಕರ್ನಾಟಕ ಹಾಗೂ…

2 hours ago