Advertisement
MIRROR FOCUS

ಕೊಳ್ಳುಬಾಕ ಸಂಸ್ಕೃತಿ( ಕನ್ಸುಮರಿಸಮ್ ) ನಮಗೆ ಬೇಕೆ? | ಕೃಷಿಕ ಎ ಪಿ ಸದಾಶಿವ ಬರೆಯುತ್ತಾರೆ…|

Share

ಒಂದು ದಿನ ಸಪತ್ನೀಕನಾಗಿ ಪೇಟೆಯಲ್ಲಿ ಹೋಗುತ್ತಿದ್ದೆ. ನನ್ನ ಪತ್ನಿಯ ಸ್ನೇಹಿತರೊಬ್ಬರು ಸಿಕ್ಕಿದರು. ಪ್ರಸಿದ್ದ ಬಟ್ಟೆ ಅಂಗಡಿಯಲ್ಲಿ ಡಿಸ್ಕೌಂಟ್ ಸೇಲ್ ಇದೆ ನೀವು ಹೋಗಲಿಲ್ಲವೇ? ಪ್ರಶ್ನೆ. ಇಲ್ಲ ಎಂದಳು ನನ್ನಾಕೆ . ನಾನು ನಿನ್ನೆ ಹೋಗಿದ್ದೆ, ತುಂಬಾ ಸೀರೆಗಳು ಇವೆ. ಯಾವುದು ತೆಗೆಯುವುದು ಬಿಡುವುದು ಗೊತ್ತಾಗುವುದಿಲ್ಲ 5 ಸೀರೆ ತೆಗೆದೆ. ಕಳೆದ ವರ್ಷವೂ ನಾನು ತೆಗೆದಿದ್ದೆ. ಪ್ರಶ್ನೆ ಮುಗಿಯುವುದರೊಳಗೆ ಹೀಗೆ ಉತ್ತರವು ಬಂದಿತ್ತು.

ದಂಪತಿಗಳಿಗೆ ಕೈತುಂಬಾ ಸಂಪಾದನೆ, ಚಿಕ್ಕಮಗು. ಮಗುವನ್ನು ರಂಜಿಸಲು ಆಗಾಗ ಆಟಿಕೆಗಳ ಆಗಮನ ಮನೆಗೆ. ಮನೆಯಲ್ಲಿ ಎಲ್ಲಿ ನೋಡಿದರೂ ಆಟಿಕೆಗಳ ಸಾಮ್ರಾಜ್ಯವೇ. ಹೊಸತು ಬಂದಾಗ ಒಂದು ದಿನ ಆಡಿಯೋ, ಕುಟ್ಟಿ ಮುರಿದೋ ಸಂತೋಷ ಪಡುವ ಮಗು ಮರುದಿನಕ್ಕೆ ಹೊಸತಕ್ಕೆ ಬೇಡಿಕೆ.ಹೀಗೆ ಬಂದುದಕ್ಕೆ ಲೆಕ್ಕವಿಟ್ಟವರಿಲ್ಲ.

ನಾಲ್ಕಾರು ದಿನ ಬಳಸಿದಾಗ ಕಾಲಿನ ಪಾದರಕ್ಷೆ ಮಾಸುವುದು ಸಹಜ.ಹಾಗಾಗಿ ಆಗಾಗ ಪಾದರಕ್ಷೆಗಳ ಬದಲಾವಣೆ. ಉಡುವ ತೊಡುಗೆಗೆ ಹೊಂದುವಂತಹ ಪಾದರಕ್ಷೆಗಳು, ಬೂಟುಗಳು ಚಪ್ಪಲಿಗಳು ಕೋಟುಗಳು ಹೀಗೆ ನಾನಾ ವೈವಿಧ್ಯಗಳು.

ಮನೆಯೊಂದು ಹೊಸತು ಆದಾಗ ಅಲ್ಲೊಂದು ಪ್ರದರ್ಶನ ಕವಾಟು ( ಶೋ ಕೇಸ್ )ಆಗಾಗ ಅಲಂಕಾರಿಕ ವಸ್ತುಗಳ ಸಂಗ್ರಹ. ನೋಡಿದ್ದನ್ನೇ ನೋಡುವಾಗ ಮನಸ್ಸಿಗೆ ಬೇಜಾರು.ಧೂಳು ಕುಳಿತು ಮಾಸಿದಂತೆ ಅದನ್ನು ತೆಗೆದು ಬಿಸಾಡಿ ಇನ್ನೊಂದರ ಪ್ರದರ್ಶನ.

ಮೊಬೈಲೊಂದು ತೆಗೆದು ನಾಲ್ಕಾರು ತಿಂಗಳಾಗುತ್ತಿದ್ದಂತೆ, ಹೊಸ ನಮೂನೆ ಬಂದಾಗ ಕೈಯಲ್ಲಿದ್ದದ್ದು ಹಳತಾದಂತೆ ಗೋಚರಿಸುವುದು.

ಹೀಗೆ ಅನೇಕ ವಸ್ತುಗಳು ನಮಗೆ ಬೇಕಾಗಿಯೋ ಬೇಡವಾಗಿಯೋ ನಮ್ಮೆಲ್ಲರ ಮನೆಗಳಿಗೆ ಬರುತ್ತಿದೆ. ಇಂದು ಅವರವರ ಆರ್ಥಿಕ ಶಕ್ತಿಯನ್ನು ಮೀರಿ ಕೊಳ್ಳುಬಾಕ ಸಂಸ್ಕೃತಿಯ ಕಡೆಗೆ ನಾವಿಂದು ಆಕರ್ಷಿತರಾಗುತ್ತಿದ್ದೇವೆ. ಅದರ ಪರಿಣಾಮವಾಗಿ ನಮಗೆ ಬೇಡದ ವಸ್ತುಗಳ ನಿರ್ವಹಣೆ ಇಂದು ಸಾಮಾಜಿಕ ಸಮಸ್ಯೆಯಾಗಿ ಕಾಡುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳಂತೂ ಮಣ್ಣಿನಲ್ಲಿ ಮಣ್ಣಾಗದೆ ಜಲಮೂಲಗಳನ್ನು ಮಣ್ಣನ್ನು ನಾಶ ಮಾಡ ಹೊರಟಿದೆ. ಪ್ರಾಕೃತಿಕ ಸಂಪತ್ತು ನಮ್ಮ ಪೀಳಿಗೆಗೂ ಅಗತ್ಯ ಎಂಬುದು ನಮಗೆ ಮರೆತೇ ಹೋಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಬಳಸಿ ಎಸೆಯುವ ಮನೋಭಾವವೇ ಇರಲಿಲ್ಲ. ತೊಡುಗೆಗಳನ್ನಾಗಲಿ, ಚಪ್ಪಲಿಯನ್ನಾಗಲಿ ಹರಿದಲ್ಲಿ ಒಂದಷ್ಟು ಹೊಲಿಗೆ ಹಾಕಿ ಮತ್ತೆ ಮತ್ತೆ ಅದನ್ನೇ ಬಳಸುತ್ತಿದ್ದರು. ಹರಿದ ವಸ್ತ್ರಗಳು, ಮಕ್ಕಳನ್ನು ಮಲಗಿಸುವ ಬಟ್ಟೆಗಳಾಗಿ, ಕೌಪೀನವಾಗಿ, ನೆಲ ಒರೆಸುದಕ್ಕಾಗಿ ಬಳಕೆಯಾಗಿ ನಂತರ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತಿತ್ತು. ಆದರೆ ನಾವಿಂದು ಬಳಸುವ ವಸ್ತ್ರಗಳು ಮರುಬಳಕೆಗೆ ಯೋಗ್ಯವಿಲ್ಲದೆ ಪ್ರಕೃತಿಗೆ ಭಾರವಾಗುತ್ತಿದೆ. ನೆಲ ಒರೆಸುವುದಕ್ಕೂ ನಾವು ಮತ್ತೆ ಪೇಟೆಯನ್ನು ಅವಲಂಬಿಸುವಂತಾಗಿದೆ.

ಹುಟ್ಟಿದ ಮನುಷ್ಯನೊಬ್ಬ ಸಾರ್ಥಕ ಬಾಳನ್ನು ಬಾಳದೆ ಅಕಾಲಿಕ ಮರಣವನ್ನಪ್ಪಿದ್ದರೆ, ಇಲ್ಲ ಆತ್ಮಹತ್ಯೆಗೈದಿದ್ದರೆ, ಏನು ಅನ್ಯಾಯವಾಗುವುದೋ ಅಂತಹುದೇ ಅನ್ಯಾಯ ಇಂದು ಪ್ರತಿಯೊಂದು ವಸ್ತುವಿನಲ್ಲಿ ನಾವು ಕಾಣುತ್ತಿದ್ದೇವೆ.

ವಸ್ತುವೊಂದು ಬೇಕು ಅನ್ನಿಸಿದಾಗ, ಆ ವಸ್ತು ನಮಗೆ ಅನಿವಾರ್ಯವೇ? ಎಂದು ನಾವು ಆರು ತಿಂಗಳಿಂದ ಒಂದು ವರ್ಷದವರೆಗೆ ಪ್ರಶ್ನೆ ಮಾಡಿದಾಗ ನಮಗೆ ಅದು ಬೇಕೇ ಬೇಡವೇ ಎಂದು ಅರ್ಥ ಆಗುವುದು.

ಕೊಳ್ಳುಬಾಕ ಸಂಸ್ಕೃತಿಯಿಂದ ಪ್ರಕೃತಿ ಪೂರಕದೆಡೆಗೆ ಸಾಗೋಣ. ಪ್ರಕೃತಿಯನ್ನು ಉಳಿಸೋಣ. ಪ್ರಕೃತಿಯ ಸಂಪತ್ತನ್ನು ಮುಂದಿನ ಪೀಳಿಗೆಗೆ ಕಾಪಿಡೋಣ.

# ಎ.ಪಿ. ಸದಾಶಿವ ಮರಿಕೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

Published by
ಎ ಪಿ ಸದಾಶಿವ ಮರಿಕೆ

Recent Posts

ಆಸ್ಪತ್ರೆಗಳಲ್ಲಿ ಬಳಕೆಯಾಗದ ಔಷಧ ಮರುಬಳಕೆ – ಹಣವೂ ಉಳಿಯುತ್ತದೆ, ಪರಿಸರವೂ ಕಾಪಾಡುತ್ತದೆ..!

ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…

4 hours ago

ಮಲೆನಾಡಿನಿಂದ ಬಯಲುನಾಡಿನತ್ತ ಅಡಿಕೆ ಬೆಳೆ ವಿಸ್ತರಣೆ : ರಾಣೆಬೆನ್ನೂರಿನಲ್ಲಿ ಹೆಚ್ಚಿದ ರೈತರ ಆಸಕ್ತಿ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…

4 hours ago

ಕೊಂಬೆಯಲ್ಲ, ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಹಣ್ಣು! ಪಶ್ಚಿಮ ಘಟ್ಟದ ಅಪರೂಪದ ‘ಕೋಳಿಜುಟ್ಟು’ ಹಣ್ಣಿನ ಕಥೆ

ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…

11 hours ago

ಕಾಡು ಹಣ್ಣು…. ಕೋಳಿ ಜುಟ್ಟು ಹಣ್ಣು…!

ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…

13 hours ago

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಒಡಿಶಾದಲ್ಲಿ ಭಾರಿ ಮಳೆ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…

22 hours ago

ಭರ್ತಿಯಾಗುವ ಹಂತಕ್ಕೆ ಆಲಮಟ್ಟಿ ಜಲಾಶಯ – 114.896 ಟಿಎಂಸಿ ನೀರು ಸಂಗ್ರಹ, 73 ಸಾವಿರ ಕ್ಯೂಸೆಕ್ ಒಳಹರಿವು

ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…

22 hours ago