Advertisement
MIRROR FOCUS

ಕೊಳ್ಳುಬಾಕ ಸಂಸ್ಕೃತಿ( ಕನ್ಸುಮರಿಸಮ್ ) ನಮಗೆ ಬೇಕೆ? | ಕೃಷಿಕ ಎ ಪಿ ಸದಾಶಿವ ಬರೆಯುತ್ತಾರೆ…|

Share

ಒಂದು ದಿನ ಸಪತ್ನೀಕನಾಗಿ ಪೇಟೆಯಲ್ಲಿ ಹೋಗುತ್ತಿದ್ದೆ. ನನ್ನ ಪತ್ನಿಯ ಸ್ನೇಹಿತರೊಬ್ಬರು ಸಿಕ್ಕಿದರು. ಪ್ರಸಿದ್ದ ಬಟ್ಟೆ ಅಂಗಡಿಯಲ್ಲಿ ಡಿಸ್ಕೌಂಟ್ ಸೇಲ್ ಇದೆ ನೀವು ಹೋಗಲಿಲ್ಲವೇ? ಪ್ರಶ್ನೆ. ಇಲ್ಲ ಎಂದಳು ನನ್ನಾಕೆ . ನಾನು ನಿನ್ನೆ ಹೋಗಿದ್ದೆ, ತುಂಬಾ ಸೀರೆಗಳು ಇವೆ. ಯಾವುದು ತೆಗೆಯುವುದು ಬಿಡುವುದು ಗೊತ್ತಾಗುವುದಿಲ್ಲ 5 ಸೀರೆ ತೆಗೆದೆ. ಕಳೆದ ವರ್ಷವೂ ನಾನು ತೆಗೆದಿದ್ದೆ. ಪ್ರಶ್ನೆ ಮುಗಿಯುವುದರೊಳಗೆ ಹೀಗೆ ಉತ್ತರವು ಬಂದಿತ್ತು.

ದಂಪತಿಗಳಿಗೆ ಕೈತುಂಬಾ ಸಂಪಾದನೆ, ಚಿಕ್ಕಮಗು. ಮಗುವನ್ನು ರಂಜಿಸಲು ಆಗಾಗ ಆಟಿಕೆಗಳ ಆಗಮನ ಮನೆಗೆ. ಮನೆಯಲ್ಲಿ ಎಲ್ಲಿ ನೋಡಿದರೂ ಆಟಿಕೆಗಳ ಸಾಮ್ರಾಜ್ಯವೇ. ಹೊಸತು ಬಂದಾಗ ಒಂದು ದಿನ ಆಡಿಯೋ, ಕುಟ್ಟಿ ಮುರಿದೋ ಸಂತೋಷ ಪಡುವ ಮಗು ಮರುದಿನಕ್ಕೆ ಹೊಸತಕ್ಕೆ ಬೇಡಿಕೆ.ಹೀಗೆ ಬಂದುದಕ್ಕೆ ಲೆಕ್ಕವಿಟ್ಟವರಿಲ್ಲ.

ನಾಲ್ಕಾರು ದಿನ ಬಳಸಿದಾಗ ಕಾಲಿನ ಪಾದರಕ್ಷೆ ಮಾಸುವುದು ಸಹಜ.ಹಾಗಾಗಿ ಆಗಾಗ ಪಾದರಕ್ಷೆಗಳ ಬದಲಾವಣೆ. ಉಡುವ ತೊಡುಗೆಗೆ ಹೊಂದುವಂತಹ ಪಾದರಕ್ಷೆಗಳು, ಬೂಟುಗಳು ಚಪ್ಪಲಿಗಳು ಕೋಟುಗಳು ಹೀಗೆ ನಾನಾ ವೈವಿಧ್ಯಗಳು.

ಮನೆಯೊಂದು ಹೊಸತು ಆದಾಗ ಅಲ್ಲೊಂದು ಪ್ರದರ್ಶನ ಕವಾಟು ( ಶೋ ಕೇಸ್ )ಆಗಾಗ ಅಲಂಕಾರಿಕ ವಸ್ತುಗಳ ಸಂಗ್ರಹ. ನೋಡಿದ್ದನ್ನೇ ನೋಡುವಾಗ ಮನಸ್ಸಿಗೆ ಬೇಜಾರು.ಧೂಳು ಕುಳಿತು ಮಾಸಿದಂತೆ ಅದನ್ನು ತೆಗೆದು ಬಿಸಾಡಿ ಇನ್ನೊಂದರ ಪ್ರದರ್ಶನ.

ಮೊಬೈಲೊಂದು ತೆಗೆದು ನಾಲ್ಕಾರು ತಿಂಗಳಾಗುತ್ತಿದ್ದಂತೆ, ಹೊಸ ನಮೂನೆ ಬಂದಾಗ ಕೈಯಲ್ಲಿದ್ದದ್ದು ಹಳತಾದಂತೆ ಗೋಚರಿಸುವುದು.

ಹೀಗೆ ಅನೇಕ ವಸ್ತುಗಳು ನಮಗೆ ಬೇಕಾಗಿಯೋ ಬೇಡವಾಗಿಯೋ ನಮ್ಮೆಲ್ಲರ ಮನೆಗಳಿಗೆ ಬರುತ್ತಿದೆ. ಇಂದು ಅವರವರ ಆರ್ಥಿಕ ಶಕ್ತಿಯನ್ನು ಮೀರಿ ಕೊಳ್ಳುಬಾಕ ಸಂಸ್ಕೃತಿಯ ಕಡೆಗೆ ನಾವಿಂದು ಆಕರ್ಷಿತರಾಗುತ್ತಿದ್ದೇವೆ. ಅದರ ಪರಿಣಾಮವಾಗಿ ನಮಗೆ ಬೇಡದ ವಸ್ತುಗಳ ನಿರ್ವಹಣೆ ಇಂದು ಸಾಮಾಜಿಕ ಸಮಸ್ಯೆಯಾಗಿ ಕಾಡುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳಂತೂ ಮಣ್ಣಿನಲ್ಲಿ ಮಣ್ಣಾಗದೆ ಜಲಮೂಲಗಳನ್ನು ಮಣ್ಣನ್ನು ನಾಶ ಮಾಡ ಹೊರಟಿದೆ. ಪ್ರಾಕೃತಿಕ ಸಂಪತ್ತು ನಮ್ಮ ಪೀಳಿಗೆಗೂ ಅಗತ್ಯ ಎಂಬುದು ನಮಗೆ ಮರೆತೇ ಹೋಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಬಳಸಿ ಎಸೆಯುವ ಮನೋಭಾವವೇ ಇರಲಿಲ್ಲ. ತೊಡುಗೆಗಳನ್ನಾಗಲಿ, ಚಪ್ಪಲಿಯನ್ನಾಗಲಿ ಹರಿದಲ್ಲಿ ಒಂದಷ್ಟು ಹೊಲಿಗೆ ಹಾಕಿ ಮತ್ತೆ ಮತ್ತೆ ಅದನ್ನೇ ಬಳಸುತ್ತಿದ್ದರು. ಹರಿದ ವಸ್ತ್ರಗಳು, ಮಕ್ಕಳನ್ನು ಮಲಗಿಸುವ ಬಟ್ಟೆಗಳಾಗಿ, ಕೌಪೀನವಾಗಿ, ನೆಲ ಒರೆಸುದಕ್ಕಾಗಿ ಬಳಕೆಯಾಗಿ ನಂತರ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತಿತ್ತು. ಆದರೆ ನಾವಿಂದು ಬಳಸುವ ವಸ್ತ್ರಗಳು ಮರುಬಳಕೆಗೆ ಯೋಗ್ಯವಿಲ್ಲದೆ ಪ್ರಕೃತಿಗೆ ಭಾರವಾಗುತ್ತಿದೆ. ನೆಲ ಒರೆಸುವುದಕ್ಕೂ ನಾವು ಮತ್ತೆ ಪೇಟೆಯನ್ನು ಅವಲಂಬಿಸುವಂತಾಗಿದೆ.

ಹುಟ್ಟಿದ ಮನುಷ್ಯನೊಬ್ಬ ಸಾರ್ಥಕ ಬಾಳನ್ನು ಬಾಳದೆ ಅಕಾಲಿಕ ಮರಣವನ್ನಪ್ಪಿದ್ದರೆ, ಇಲ್ಲ ಆತ್ಮಹತ್ಯೆಗೈದಿದ್ದರೆ, ಏನು ಅನ್ಯಾಯವಾಗುವುದೋ ಅಂತಹುದೇ ಅನ್ಯಾಯ ಇಂದು ಪ್ರತಿಯೊಂದು ವಸ್ತುವಿನಲ್ಲಿ ನಾವು ಕಾಣುತ್ತಿದ್ದೇವೆ.

ವಸ್ತುವೊಂದು ಬೇಕು ಅನ್ನಿಸಿದಾಗ, ಆ ವಸ್ತು ನಮಗೆ ಅನಿವಾರ್ಯವೇ? ಎಂದು ನಾವು ಆರು ತಿಂಗಳಿಂದ ಒಂದು ವರ್ಷದವರೆಗೆ ಪ್ರಶ್ನೆ ಮಾಡಿದಾಗ ನಮಗೆ ಅದು ಬೇಕೇ ಬೇಡವೇ ಎಂದು ಅರ್ಥ ಆಗುವುದು.

ಕೊಳ್ಳುಬಾಕ ಸಂಸ್ಕೃತಿಯಿಂದ ಪ್ರಕೃತಿ ಪೂರಕದೆಡೆಗೆ ಸಾಗೋಣ. ಪ್ರಕೃತಿಯನ್ನು ಉಳಿಸೋಣ. ಪ್ರಕೃತಿಯ ಸಂಪತ್ತನ್ನು ಮುಂದಿನ ಪೀಳಿಗೆಗೆ ಕಾಪಿಡೋಣ.

# ಎ.ಪಿ. ಸದಾಶಿವ ಮರಿಕೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

Published by
ಎ ಪಿ ಸದಾಶಿವ ಮರಿಕೆ

Recent Posts

ಕಾಫಿ ಬೆಲೆ ಗರಿಗೆದರಿಕೆ- ಬ್ರೆಜಿಲ್‌ನಲ್ಲಿ ನಿರಂತರ ಮಳೆಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಏರಿಕೆ

ಬ್ರೆಜಿಲ್‌ನಲ್ಲಿ ಮಳೆಯಿಂದ ಕಾಫಿ ಕೊಯ್ಲು ವಿಳಂಬವಾಗಿರುವ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ಬೆಲೆ…

2 hours ago

ಹವಾಮಾನ ವರದಿ | 08-07-2026 | ಕರ್ನಾಟಕದಲ್ಲಿ ಮಳೆ ಇಳಿಮುಖ – ರೈತರಿಗೆ ಮಹತ್ವದ ಹವಾಮಾನ ಮಾಹಿತಿ..!

ಜುಲೈ 10ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಜುಲೈ 11…

4 hours ago

E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?

ಪವರ್‌ ಸ್ಪ್ರೇಯರ್‌ ಸಮಸ್ಯೆಯ ಅನುಭವದ ಮೂಲಕ E20 ಪೆಟ್ರೋಲ್‌ನ ಪರಿಣಾಮಗಳ ಬಗ್ಗೆ ಪ್ರಶ್ನೆ…

5 hours ago

₹1,500 ಕೋಟಿ ಅಕ್ರಮ ಅಡಿಕೆ ಜಾಲ ಬಯಲು – ED ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ

ಮ್ಯಾನ್ಮಾರ್‌ನಿಂದ ಅಕ್ರಮ ಅಡಿಕೆ ಸಾಗಾಟ ಮಾಡಿ ₹1,500 ಕೋಟಿ ಹಣ ವರ್ಗಾವಣೆ ನಡೆಸಿದ…

19 hours ago

ಮಹಾರಾಷ್ಟ್ರದಲ್ಲಿ ತಡೆಹಿಡಿದ ಅಡಿಕೆ ಲಾರಿಗಳ ಬಿಡುಗಡೆಗೆ ಫಡ್ನವೀಸ್‌ಗೆ ಮನವಿ

ಮಹಾರಾಷ್ಟ್ರದಲ್ಲಿ ತಡೆಹಿಡಿದಿರುವ 50ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ಬಿಡುಗಡೆ ಮಾಡುವಂತೆ ಫಡ್ನವೀಸ್‌ಗೆ ಅಡಿಕೆ…

20 hours ago

ರಾಜ್ಯದ ವಿವಿದೆಡೆ ಭಾರೀ ಮಳೆ – ಜುಲೈ 8 ರಂದು ಹಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರೀ ಮಳೆ ಹಿನ್ನೆಲೆಯಲ್ಲಿ ಜುಲೈ 8ರಂದು ರಾಜ್ಯದ ಹಲವು ಜಿಲ್ಲೆಗಳ ಶಾಲೆ-ಕಾಲೇಜುಗಳಿಗೆ ರಜೆ…

21 hours ago