ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ಇವರ ವತಿಯಿಂದ ಸಾರ್ವಜನಿಕ ಸಭೆ ಭಾನುವಾರ ಸಂಜೆ ಅಡ್ತಲೆಯಲ್ಲಿ ನಡೆಯಿತು. ಈ ಸಂದರ್ಭ ವಿವಿಧ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ, ಸಂಘಟನೆಯ ರಚನೆಯ ಉದ್ದೇಶದ ಬಗ್ಗೆ ಪ್ರಾಸ್ತವಿಕವಾಗಿ ಮಾಹಿತಿ ನೀಡಿದರು. ಪ್ರಮುಖವಾಗಿ ಅತ್ಯಂತ ಅಗಲ ಕಿರಿದಾದ ಅರಂತೋಡು – ಎಲಿಮಲೆ ರಸ್ತೆ ಅಗಲೀಕರಣ, ಅಡ್ತಲೆಯಲ್ಲಿ ಸರಕಾರಿ ಸ್ವಾಮ್ಯದ ಬಿ ಎಸ್ ಎನ್ ಎಲ್ ಟವರ್ ಕಾರ್ಯಾರಂಭ ಮತ್ತು ಅರಮನೆ ಗಯದಲ್ಲಿ ಬಲ್ನಾಡು ಹೊಳೆಗೆ ಸೇತುವೆ ಅಥವಾ ಸುಸಜ್ಜಿತ ತೂಗು ಸೇತುವೆ ನಿರ್ಮಾಣ ಇತ್ಯಾದಿ ಹಲವಾರು ವರ್ಷಗಳ ಬೇಡಿಕೆಗಳಿಗೆ ಸರಕಾರದಿಂದ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಸಂಘಟಿತ ಹೋರಾಟ ನಡೆಸುವ ಉದ್ದೇಶದಿಂದ ನಾಗರಿಕ ಹಿತರಕ್ಷಣಾ ವೇದಿಕೆ ರಚಿಸಲಾಗಿದೆ ಎಂದರು.
ಅಡ್ತಲೆ ವಾರ್ಡ್ ಮಟ್ಟದಲ್ಲಿ ಕಳೆದ ಐದಾರು ವರ್ಷಗಳಿಂದ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಸದಸ್ಯರ ಅನುದಾನಗಳ ನೆರವಿನಿಂದ ನಿರಂತರವಾಗಿ ನಡೆಯುತ್ತಿವೆ.ನಿಕಟಪೂರ್ವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರು ಹಾಗೂ ಹಾಲಿ ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ವಾರ್ಡ್ ನ ಸರ್ವತೋಮುಖ ಅಭಿವೃದ್ಧಿ ಮತ್ತು ಜನರ ಜೀವನ ಮಟ್ಟ ಸುಧಾರಣೆಗೆ ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರೆಲ್ಲರಿಗೆ ಎಲ್ಲ ಸಾರ್ವಜನಿಕ ಬಂಧುಗಳ ಪರವಾಗಿ ಅಭಿನಂದನೆಗಳು. ಆದರೆ ತಳಮಟ್ಟದ ಜನಪ್ರತಿನಿಧಿಗಳ ಆರ್ಥಿಕ ಅನುದಾನದ ವ್ಯಾಪ್ತಿಯನ್ನು ಮೀರಿದ ಮತ್ತು ಅತೀ ಅಗತ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಲವಾರು ವರ್ಷಗಳಿಂದ ನಿರಂತರ ಮನವಿ ಮಾಡಿಯೂ ಯಾವುದೇ ಸ್ಪಂದನೆ ದೊರೆಯದ ಕಾರಣ ಗ್ರಾಮಸ್ಥರ ನೆರವಿನೊಂದಿಗೆ ಸಂಘಟಿತ ಹೋರಾಟ ಮಾಡಿ ನ್ಯಾಯ ಪಡೆಯುವ ಉದ್ದೇಶದಿಂದ ನಾಗರಿಕ ಹಿತರಕ್ಷಣಾ ವೇದಿಕೆ ರಚನೆ ಮಾಡಲಾಗಿದೆ ಎಂದರು.
ಸಾರ್ವಜನಿಕರ ಸಲಹೆಯಂತೆ ರಸ್ತೆ ಅಗಲೀಕರಣ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಅರಂತೋಡು – ಎಲಿಮಲೆ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯನ್ನು ರಚಿಸಲಾಯಿತು. ಅಲ್ಲದೇ ಇನ್ನು ಮುಂದೆ ಎರಡೂ ಸಂಘಟನೆಗಳು ಜಂಟಿಯಾಗಿ ಹೋರಾಟವನ್ನು ತೀವ್ರಗೊಳಿಸುವ ನಿರ್ಧಾರಕ್ಕೆ ಬರಲಾಯಿತು. ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷರಾಗಿ ಚಿದಾನಂದ ಮಾಸ್ಟರ್ ಅಡ್ತಲೆ, ಅಧ್ಯಕ್ಷರಾಗಿ ಮೋಹನ್ ಅಡ್ತಲೆ, ಉಪಾಧ್ಯಕ್ಷರುಗಳಾಗಿ, ರೇಣುಕಾ ಬಲ್ಕಾಡಿ ಹಾಗೂ ಸಂತೋಷ್ ಕಿರ್ಲಾಯ, ಕಾರ್ಯದರ್ಶಿಯಾಗಿ ತೀರ್ಥರಾಮ ಕೊಚ್ಚಿ, ಜತೆ ಕಾರ್ಯದರ್ಶಿಯಾಗಿ ನಂದಕುಮಾರ್ ಅಡ್ತಲೆ, ಖಜಾಂಜಿಯಾಗಿ ಸುನಿಲ್ ಅಡ್ತಲೆ ಆಯ್ಕೆಯಾದರು. ಸದಸ್ಯರುಗಳಾಗಿ ಶರತ್ ಚೋಡಿಪಣೆ, ದಾಮೋದರ ಪೂಜಾರಿಮನೆ, ಯಶವಂತ ನಂಗಾರು, ಕಿಶೋರ್ ಅಡ್ಕ, ನರೇಂದ್ರ ಚಿಮಾಡು, ಯಶವಂತ ಚಿಮಾಡು, ಯತೀಶ್ ದೀಟಿಗೆ, ಜೀವನ್ ಪಿಂಡಿಮನೆ, ದೊಡ್ಡಯ್ಯ ಪಿಂಡಿಮನೆ, ಹರೀಶ್ ಎ. ಕೆ. ಅಡ್ತಲೆ ಗಿರೀಶ್ ಎ. ಹೆಚ್.ಅಡ್ತಲೆ,ಪುರುಷೋತ್ತಮ್ ಓಟೆಡ್ಕ, ಕಮಲಾಕ್ಷ ಓಟೆಡ್ಕ, ಕರುಣಾಕರ ಮೇಲಡ್ತಲೆ, ಚೇತನ್ ಎಮ್. ಎ. ಬೆದ್ರುಪಣೆ, ಶಿವರಾಮ ಕಲ್ಲುಗದ್ದೆ, ಜ್ಞಾನೇಶ್ ಕಾಯರ, ಚರಣ್ ಕಾಯರ, ಜಯಪ್ರಕಾಶ್ ಬಲ್ಕಾಡಿ, ರವೀಂದ್ರ ಬಾಳೆತೋಟ, ಲವಕುಮಾರ್ ಬಲ್ಕಾಡಿ, ಸತೀಶ್ ಬಲ್ಕಾಡಿ, ಪುರುಷೋತ್ತಮ್ ಮೇಲಡ್ತಲೆ ಆಯ್ಕೆಯಾದರು.
ಅನೇಕ ವರ್ಷಗಳ ಬೇಡಿಕೆ-ಹೋರಟದ ಬಳಿಕ ಬೃಹತ್ ಸೇತುವೆಯೊಂದು ನಿರ್ಮಾಣವಾಗಿದೆ. ಅಂಬಾರಗೂಡ್ಲು-ಕಳಸವಳ್ಳಿ ಸೇತುವೆಯ ಹೋರಾಟದ…
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯತಿ…
ಈ ವರ್ಷ ವಿಶೇಷವಾಗಿ ಗಮನ ಸೆಳೆದ ಕ್ಷೇತ್ರ ಕೊಟ್ಟಿಯೂರ್ ಅಥವಾ ತೃಚ್ಚೇರುಮನ ಕ್ಷೇತ್ರ…
ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನಲ್ಲಿ ಗಣನೀಯ ಏರಿಕೆಯಾಗಿದ್ದು, ಪ್ರಸಕ್ತ ಜಲಾಶಯದಲ್ಲಿ 77.144…
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ವಿವಿಧ ಕಲಾವಿದರ ಚಿತ್ರಕಲಾ ಪ್ರದರ್ಶನವನ್ನು ಹಮ್ಮಿಕೊಳ್ಳಾಗಿತ್ತು. ವಿವಿಧ ಚಿತ್ರಕಲಾವಿದರ…
ಕೋವಿಡ್ ಲಸಿಕೆ ಮತ್ತು ಹಠಾತ್ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಐಸಿಎಂಆರ್ ಹಾಗೂ…