ಪ್ರಪಂಚದಾದ್ಯಂತ ಅಡಿಕೆ ಹಾನಿಕಾರಕ ಎಂಬ ಭಯ ಹುಟ್ಟಿಸಲಾಗುತ್ತಿದೆ. ಅಡಿಕೆ ಕ್ಯಾನ್ಸರ್ಕಾರಕ ಎಂದೂ ಹೇಳಲಾಗುತ್ತದೆ. ಆದರೆ ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ಅಡಿಕೆಯ ಬಳಕೆ ಪರಂಪರಾಗತವಾಗಿ ಬಂದಿದೆ. ಶತಮಾನಗಳಿಂದ ಅಡಿಕೆಯ ಮೂಲ ರೂಪದಲ್ಲಿ ಸೇವನೆ, ಅಡಿಕೆಯ ಮಿತ ಬಳಕೆ ಆರೋಗ್ಯದ ಮೇಲೆ ಯಾವ ಪರಿಣಾಮವೂ ಬೀರಿಲ್ಲ.ಹಾಗಿದ್ದರೆ ಭಾರತದಲ್ಲಿ ಅಡಿಕೆಯ ಬಳಕೆ ಹಾಗೂ ಅಡಿಕೆ ಹಾನಿಕಾರಕವಲ್ಲ ಎನ್ನುವ ಸಂದೇಶ ಸಾರಬೇಕಾಗಿದೆ.
ಭಾರತದಲ್ಲಿ ಪಾನ್ ತಿನ್ನುವ ಸಂಪ್ರದಾಯವು ಶತಮಾನಗಳಷ್ಟು ಹಳೆಯದು. ಗ್ರಾಮೀಣ ಭಾಗದಲ್ಲಿ ಇಂದಿಗೂ ಒಂದು ಬೀಡಾ ಇಲ್ಲದೇ ಇದ್ದರೆ ಯಾವ ಕಾರ್ಯಕ್ರಮಗಳೂ ಪರಿಪೂರ್ಣವಲ್ಲ. ಜನರು ಸಾಮಾನ್ಯವಾಗಿ ವೀಳ್ಯದೆಲೆ, ಸುಣ್ಣ ಮತ್ತು ಅಡಿಕೆಯ ಚೂರುಗಳೊಂದಿಗೆ ವೀಳ್ಯದೆಲೆಯನ್ನು ಜಗಿಯುತ್ತಾರೆ. ಆದರೆ ಬೇರೆ ಬೇರೆ ಕಡೆ ವಿಧಾನಗಳು ಮಾತ್ರಾ ಬೇರೆಯದೇ ಇದೆ. ದಕ್ಷಿಣ ಕನ್ನಡದ ಭಾಗದಲ್ಲಿ ಹಸಿ ಅಡಿಕೆಯನ್ನು ಜಗಿದರೆ, ಉತ್ತರ ಕನ್ನಡ ಭಾಗದಲ್ಲಿ ಕೆಂಪಡಿಕೆ ಜಗಿಯುತ್ತಾರೆ, ಉತ್ತರ ಭಾರತದ ಕಡೆಗೆ ಹೋದರೆ ಚಾಲಿ ಅಡಿಕೆಯನ್ನು ಜಗಿಯುತ್ತಾರೆ. ಅದನ್ನು ತಿನ್ನುವ ವಿಧಾನ ಮತ್ತು ರುಚಿ ವಿವಿಧ ಸ್ಥಳಗಳಲ್ಲಿ ಸ್ವಲ್ಪ ಭಿನ್ನವಾಗಿರುತ್ತದೆ. ಆದರೆ ನೀವು ವೀಳ್ಯದೆಲೆಯನ್ನು ಸರಳ ರೀತಿಯಲ್ಲಿ ಸೇವಿಸಿದರೆ, ಅದು ಅನೇಕ ಆರೋಗ್ಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತವೆ, ಆರೋಗ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಶತಮಾನಗಳಿಂದಲೂ ಅನೇಕರು ಅಡಿಕೆ ಜಗಿಯುತ್ತಾರೆ, ಬೀಡಾ ಜಗಿಯುತ್ತಾರೆ. ವೀಳ್ಯದೆಲೆ ತಿನ್ನುವ ಪ್ರಯೋಜನಗಳು ಹೀಗಿವೆ…
ಕೆಮ್ಮು ಪರಿಹಾರ: ಆಂಟಿಆಕ್ಸಿಡೆಂಟ್ಗಳು ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ವೀಳ್ಯದೆಲೆಯಲ್ಲಿ ಕಂಡುಬರುತ್ತವೆ, ಇದು ಕೆಮ್ಮಿನ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮಧುಮೇಹಿಗಳಿಗೆ ಪ್ರಯೋಜನಗಳು: ವೀಳ್ಯದೆಲೆಯಲ್ಲಿ ಮಧುಮೇಹ-ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ, ಇದು ಮಧುಮೇಹಿಗಳಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಇದನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬಹುದು.
ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸಿಕೊಳ್ಳಿ: ವೀಳ್ಯದೆಲೆಯನ್ನು ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆಯು ಆರೋಗ್ಯಕರವಾಗಿರುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುವಾಗ ಜೀರ್ಣಾಂಗ ವ್ಯವಸ್ಥೆಯನ್ನು ಹೆಚ್ಚಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ನೀವು ಜೀರ್ಣಕ್ರಿಯೆಯನ್ನು ಸುಧಾರಿಸಲು ಬಯಸಿದರೆ, ವೀಳ್ಯದೆಲೆ, ಬೀಡಾ ತಿನ್ನಿರಿ.
ಹಸಿವನ್ನು ಹೆಚ್ಚಿಸುತ್ತವೆ: ಹಸಿವಿನ ಕೊರತೆ ಇರುವವರು ಬೀಡಾ,ವೀಳ್ಯದೆಲೆಯನ್ನು ಸೇವಿಸಬೇಕು. ವೀಳ್ಯದೆಲೆಯನ್ನು ಜಗಿಯುವುದರಿಂದ ಹಸಿವು ಹೆಚ್ಚಾಗುತ್ತದೆ.
ಬಾಯಿ ಹುಣ್ಣುಗಳಿಂದ ಪರಿಹಾರ: ವೀಳ್ಯದೆಲೆಯ ಸೇವನೆಯಿಂದ ಬಾಯಿ ಹುಣ್ಣಿನ ಸಮಸ್ಯೆಯೂ ದೂರವಾಗುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾದ ಗುಣಲಕ್ಷಣಗಳು ಬಾಯಿಯಲ್ಲಿ ಸೋಂಕು ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ.
ತಾಪಮಾನ ಅಧಿಕವಾಗಿದ್ದರೂ, ರಾತ್ರಿಯ ವೇಳೆ ತಂಪು ವಾತಾವರಣ ಇರುವುದರಿಂದ ಮಳೆಯ ಸಾಧ್ಯತೆ ಕ್ಷೀಣಿಸುತ್ತಿದೆ.
ಪರಿಶುದ್ಧ ಮನಸ್ಸಿನಿಂದ ಶಿವನ ಧ್ಯಾನ, ಉಪಾಸನೆ ಮಾಡಿದಾಗ ಸಕಲ ಪಾಪ ಕರ್ಮಗಳ ಕೊಳೆ…
ತಮಿಳುನಾಡಿನ ಕೊಯಮತ್ತೂರಿನ ಈಶಾ ಫೌಂಡೇಷನ್ ಆದಿ ಯೋಗಿ ಪ್ರತಿಮೆಯ ಬಳಿ ಹಮ್ಮಿಕೊಂಡಿದ್ದ ಶಿವರಾತ್ರಿ…
ಮಹಾಶಿವರಾತ್ರಿಯ ಹಿನ್ನಲೆಯಲ್ಲಿ ನೇಪಾಳದ ಕಠ್ಮಂಡುವಿನಲ್ಲಿರುವ ಪಶುಪತಿನಾಥ ಮಂದಿರಕ್ಕೆ ಲಕ್ಷಾಂತರ ಭಕ್ತಾದಿಗಳು ಭೇಟಿ ನೀಡಿ…
ರೈಲ್ವೆ ಇಲಾಖೆ ಪ್ರಯಾಗ್ರಾಜ್ನಿಂದ 350 ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಮ್ಯಾನ್ಮಾರ್ ಅಡಿಕೆ ಮಾರುಕಟ್ಟೆ ವಲಯದಲ್ಲಿ ಈ ಬಾರಿ ಭಾರತವು ಅಡಿಕೆ ಖರೀದಿಯನ್ನು ಪುನರಾರಂಭ…