Advertisement
ಅನುಕ್ರಮ

ಕೃಷಿ ಏಳು-ಬೀಳುಗಳ ನಡುವೆ ಸಮತೋಲನ ಹೇಗೆ | ಕೃಷಿಕ ಟಿ ಆರ್‌ ಸುರೇಶ್ಚಂದ್ರ ಬರೆಯುತ್ತಾರೆ… |

Share

ದೊಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುತ
ತೆರೆಯ ಮೇಗಡೆ ಸಾಗಲೀ..
ನಾವು ಲೀಲಾ ಮಾತ್ರ ಜೀವರು
ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ ಇಂದು ಇಂದಿಗೆ
ಇರಲಿ ನಾಳೆಯು ನಾಳೆಗೇ…

ಕೃಷಿ(Agriculture) ಬದುಕು ಇಷ್ಟೇ ಅಲ್ವೇ… ,ಹೌದು…. , ಅದರಿಂದಾಚೆಗಿನ ದಿನಗಳು ನಮ್ಮದಾಗಬೇಕಾದರೆ ಪ್ರಕೃತಿಯೊಂದಿಗೆ ಹೊಂದಿ ಸಾಗುವ ಮನಪರಿಸ್ಥಿತಿ ನಮಗಿರಬೇಕು. ಮಳೆ,ಗಾಳಿ, ರೋಗಗಳು,ಬರಗಾಲ ಇದೆಲ್ಲ ಕಾಣದ ,ಊಹಿಸಲಾರದ ಸಮಸ್ಯೆಗಳು. ಅದನ್ನು ಸಹಿಸಿಕೊಳ್ಳುವ, ಎದುರಿಸುವ ಪ್ರಯತ್ನ ನಮ್ಮಲ್ಲಿದ್ದಾಗ ಏಳು ಬೀಳುಗಳಲ್ಲೊಂದು ಲಯ ಕಾಣಬಹುದು.

ಕೃಷಿಕರಾದವರಿಗೆ ಕೆಲವು ಸೂತ್ರಗಳು ಅತೀ ಅಗತ್ಯ. ಅದು ಯಶಸ್ಸಿನ ಸೂತ್ರವೂ ಹೌದು.

13 ಸೂತ್ರಗಳು....
  • ಪ್ರತಿ ವರ್ಷವೂ ಅಡಿಕೆ/ತೆಂಗು/ಕಾಳುಮೆಣಸು ಗಿಡಗಳನ್ನು ಮಾಡಿಟ್ಟುಕೊಳ್ಳಲೇಬೇಕು.
  • ಪ್ರತೀ ವರ್ಷ ಖಾಲಿಯಾದ ಜಾಗಕ್ಕೆ ಸಮಯಕ್ಕನುಗುಣವಾಗಿ ಎಡೆ ಗಿಡಗಳನ್ನು ನೆಡಲೇಬೇಕು.
  • ಬಸಿಗಾಲುವೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು.
  • ವೈಜ್ಞಾನಿಕವಾಗಿ, ಪ್ರಕೃತಿಗೆ ಹಾನಿಯಾಗದಂತೆ ಗೊಬ್ಬರ ನಿರ್ವಹಣೆ ಮಾಡಬೇಕು.
  • ಕಾಲಕಾಲಕ್ಕೆ ರೋಗ ನಿರೋಧಕ ವ್ಯವಸ್ಥೆಗಳನ್ನು ಗಮನವಿಟ್ಟು ನಿರ್ವಹಿಸಲೇಬೇಕು.
  • ಸರಿಯಾದ, ಅತಿಯಾಗದ ನೀರಾವರಿ ವ್ಯವಸ್ಥೆ ಮಾಡಬೇಕು.
  • ಸ್ವಂತ ನರ್ಸರಿ ಬಗ್ಗೆ ಸರಿಯಾದ ತಿಳುವಳಿಕೆ ಪಡಕೊಳ್ಳಬೇಕು.
  • ಹಣಕಾಸಿನ ವ್ಯವಹಾರಗಳ ಬಗ್ಗೆ ಜಾಗರೂಕರಾಗಿರಬೇಕು.
  • ಕೃಷಿ/ವ್ಯವಹಾರ/ಮುಂತಾಗಿ ಸ್ವಂತ ತೀರ್ಮಾನ ಮಾಡುವಂತಿರಬೇಕು.
  • ಹತ್ತಾರು ತೋಟ, ಕೃಷಿ ಕ್ರಮಗಳನ್ನು ನೋಡಬೇಕು, ವಿಮರ್ಶಿಸಬೇಕು.
  • ಎಲ್ಲಕ್ಕಿಂತಲೂ ಹೆಚ್ಚು ನಮ್ಮ ತೋಟದೊಳಗೆ ದಿನಕ್ಕೆರಡು ಸುತ್ತು ಓಡಾಡಲೇಬೇಕು.
  • ಸದಾ ಜಾಗೃತನಾಗಿರಬೇಕು.
  • ಕೃಷಿ ಕಾರ್ಮಿಕರನ್ನು ಚೆನ್ನಾಗಿ ನೋಡಿಕೊಂಡು ಕಾಲಕಾಲಕ್ಕೆ ಕೆಲಸ ಕಾರ್ಯಗಳು ಆಗುವಂತೆ ನೋಡಿಕೊಳ್ಳಬೇಕು

ಅಂತೂ ಕೃಷಿ ಎನ್ನುವಂತಹದ್ದೂ ಒಂದು ಉದ್ಯಮ, ಸಮಯ ಪ್ರಕಾರದ ಕೆಲಸ ನಿರ್ವಹಣೆ ಅತೀ ಮುಖ್ಯ ಎನ್ನುವುದನ್ನು ಗಮನವಿರಿಸಿ ನಡೆದರೆ ಏಳು ಬೀಳುಗಳನ್ನು ಸಹಿಸುತ್ತಾ ಸಾಗಬಹುದು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹೊಂಬಾಳೆ ಕಳ್ಳರ ಹಾವಳಿ : ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದ ಕಳ್ಳತನ

ದೊಡ್ಡಬಳ್ಳಾಪುರ ಭಾಗದಲ್ಲಿ ಅಡಿಕೆ ಹೊಂಬಾಳೆಗಳನ್ನು ಕಳ್ಳರು ಕದ್ದೊಯ್ಯುತ್ತಿರುವ ಘಟನೆಗಳು ಹೆಚ್ಚಾಗಿವೆ. ಇದರಿಂದ ರೈತರು…

30 minutes ago

ಕೊಡಗಿನಲ್ಲಿ ಚೇತರಿಕೆ ಕಂಡ ಮಳೆ- ಮೈಕೊರೆಯುವ ಚಳಿ, ಕಾವೇರಿ ನೀರಿನ ಮಟ್ಟ ಏರಿಕೆ

ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕಾವೇರಿ ನೀರಿನ ಮಟ್ಟ…

3 hours ago

ಸರಿಯಾದ ಆಹಾರ ಪದ್ಧತಿಯೇ ರೋಗಮುಕ್ತ ಜೀವನದ ಮೂಲ – ರಾಘವೇಶ್ವರ ಶ್ರೀ

ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು…

14 hours ago

ಹವಾಮಾನ ವರದಿ | 30-07-2026 | ಕರ್ನಾಟಕದಲ್ಲಿ ಇನ್ನೆರಡು ದಿನ ಉತ್ತಮ ಮಳೆ

ಮಧ್ಯಪ್ರದೇಶದಲ್ಲಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು…

18 hours ago

ಸಮಾಜಕ್ಕೆ ಸರಿದಾರಿಯನ್ನು ತೋರುವುದು ಗುರುವಿನ ಕಾರ್ಯ : ರಾಘವೇಶ್ವರ ಶ್ರೀ

ಗೋಕರ್ಣದ ಅಶೋಕೆಯ ಮೂಲಮಠದಲ್ಲಿ 'ಅನ್ನಬ್ರಹ್ಮ ಚಾತುರ್ಮಾಸ್ಯ' ಆರಂಭಗೊಂಡಿದ್ದು, ಸಮಾಜಕ್ಕೆ ಸರಿಯಾದ ದಾರಿ ತೋರಿಸುವುದು…

1 day ago