Advertisement
ಅನುಕ್ರಮ

ಕೃಷಿ ಏಳು-ಬೀಳುಗಳ ನಡುವೆ ಸಮತೋಲನ ಹೇಗೆ | ಕೃಷಿಕ ಟಿ ಆರ್‌ ಸುರೇಶ್ಚಂದ್ರ ಬರೆಯುತ್ತಾರೆ… |

Share

ದೊಣಿ ಸಾಗಲಿ ಮುಂದೆ ಹೋಗಲಿ
ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುತ
ತೆರೆಯ ಮೇಗಡೆ ಸಾಗಲೀ..
ನಾವು ಲೀಲಾ ಮಾತ್ರ ಜೀವರು
ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ ಇಂದು ಇಂದಿಗೆ
ಇರಲಿ ನಾಳೆಯು ನಾಳೆಗೇ…

ಕೃಷಿ(Agriculture) ಬದುಕು ಇಷ್ಟೇ ಅಲ್ವೇ… ,ಹೌದು…. , ಅದರಿಂದಾಚೆಗಿನ ದಿನಗಳು ನಮ್ಮದಾಗಬೇಕಾದರೆ ಪ್ರಕೃತಿಯೊಂದಿಗೆ ಹೊಂದಿ ಸಾಗುವ ಮನಪರಿಸ್ಥಿತಿ ನಮಗಿರಬೇಕು. ಮಳೆ,ಗಾಳಿ, ರೋಗಗಳು,ಬರಗಾಲ ಇದೆಲ್ಲ ಕಾಣದ ,ಊಹಿಸಲಾರದ ಸಮಸ್ಯೆಗಳು. ಅದನ್ನು ಸಹಿಸಿಕೊಳ್ಳುವ, ಎದುರಿಸುವ ಪ್ರಯತ್ನ ನಮ್ಮಲ್ಲಿದ್ದಾಗ ಏಳು ಬೀಳುಗಳಲ್ಲೊಂದು ಲಯ ಕಾಣಬಹುದು.

ಕೃಷಿಕರಾದವರಿಗೆ ಕೆಲವು ಸೂತ್ರಗಳು ಅತೀ ಅಗತ್ಯ. ಅದು ಯಶಸ್ಸಿನ ಸೂತ್ರವೂ ಹೌದು.

13 ಸೂತ್ರಗಳು....
  • ಪ್ರತಿ ವರ್ಷವೂ ಅಡಿಕೆ/ತೆಂಗು/ಕಾಳುಮೆಣಸು ಗಿಡಗಳನ್ನು ಮಾಡಿಟ್ಟುಕೊಳ್ಳಲೇಬೇಕು.
  • ಪ್ರತೀ ವರ್ಷ ಖಾಲಿಯಾದ ಜಾಗಕ್ಕೆ ಸಮಯಕ್ಕನುಗುಣವಾಗಿ ಎಡೆ ಗಿಡಗಳನ್ನು ನೆಡಲೇಬೇಕು.
  • ಬಸಿಗಾಲುವೆಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು.
  • ವೈಜ್ಞಾನಿಕವಾಗಿ, ಪ್ರಕೃತಿಗೆ ಹಾನಿಯಾಗದಂತೆ ಗೊಬ್ಬರ ನಿರ್ವಹಣೆ ಮಾಡಬೇಕು.
  • ಕಾಲಕಾಲಕ್ಕೆ ರೋಗ ನಿರೋಧಕ ವ್ಯವಸ್ಥೆಗಳನ್ನು ಗಮನವಿಟ್ಟು ನಿರ್ವಹಿಸಲೇಬೇಕು.
  • ಸರಿಯಾದ, ಅತಿಯಾಗದ ನೀರಾವರಿ ವ್ಯವಸ್ಥೆ ಮಾಡಬೇಕು.
  • ಸ್ವಂತ ನರ್ಸರಿ ಬಗ್ಗೆ ಸರಿಯಾದ ತಿಳುವಳಿಕೆ ಪಡಕೊಳ್ಳಬೇಕು.
  • ಹಣಕಾಸಿನ ವ್ಯವಹಾರಗಳ ಬಗ್ಗೆ ಜಾಗರೂಕರಾಗಿರಬೇಕು.
  • ಕೃಷಿ/ವ್ಯವಹಾರ/ಮುಂತಾಗಿ ಸ್ವಂತ ತೀರ್ಮಾನ ಮಾಡುವಂತಿರಬೇಕು.
  • ಹತ್ತಾರು ತೋಟ, ಕೃಷಿ ಕ್ರಮಗಳನ್ನು ನೋಡಬೇಕು, ವಿಮರ್ಶಿಸಬೇಕು.
  • ಎಲ್ಲಕ್ಕಿಂತಲೂ ಹೆಚ್ಚು ನಮ್ಮ ತೋಟದೊಳಗೆ ದಿನಕ್ಕೆರಡು ಸುತ್ತು ಓಡಾಡಲೇಬೇಕು.
  • ಸದಾ ಜಾಗೃತನಾಗಿರಬೇಕು.
  • ಕೃಷಿ ಕಾರ್ಮಿಕರನ್ನು ಚೆನ್ನಾಗಿ ನೋಡಿಕೊಂಡು ಕಾಲಕಾಲಕ್ಕೆ ಕೆಲಸ ಕಾರ್ಯಗಳು ಆಗುವಂತೆ ನೋಡಿಕೊಳ್ಳಬೇಕು

ಅಂತೂ ಕೃಷಿ ಎನ್ನುವಂತಹದ್ದೂ ಒಂದು ಉದ್ಯಮ, ಸಮಯ ಪ್ರಕಾರದ ಕೆಲಸ ನಿರ್ವಹಣೆ ಅತೀ ಮುಖ್ಯ ಎನ್ನುವುದನ್ನು ಗಮನವಿರಿಸಿ ನಡೆದರೆ ಏಳು ಬೀಳುಗಳನ್ನು ಸಹಿಸುತ್ತಾ ಸಾಗಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಬ್ಬದ ಬೇಡಿಕೆಯನ್ನೇ ಕೃಷಿ ಅವಕಾಶವನ್ನಾಗಿ ಮಾಡಿದ ಕೇರಳ : 2.52 ಲಕ್ಷ ಟನ್ ತರಕಾರಿ ಉತ್ಪಾದನೆ

ಓಣಂ ಹಬ್ಬದ ಸಂದರ್ಭದ ಹೆಚ್ಚಿದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇರಳ ಕೃಷಿ ಇಲಾಖೆ ನಡೆಸಿದ…

23 minutes ago

ಹವಾಮಾನ ವರದಿ | 20-08-2026 | ಕರಾವಳಿಗೆ ಇನ್ನೂ ಮಳೆ ವಿರಾಮವಿಲ್ಲ…! ಆ.23–25 ಕ್ಕೆ ಮತ್ತೆ ಮಳೆ ಹೆಚ್ಚಾಗುವ ಸೂಚನೆ

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನವೂ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದ್ದು,…

2 hours ago

ಅಡಿಕೆ ತೋಟಗಳು ಹೆಚ್ಚುತ್ತಿವೆ… ಹಾಗಿದ್ದರೆ ಕರ್ನಾಟಕದಲ್ಲಿ ಇಳುವರಿ ಏಕೆ ಕುಸಿಯುತ್ತಿದೆ?

ಕರ್ನಾಟಕದಲ್ಲಿ ಅಡಿಕೆ ಬೆಳೆಯುವ ಪ್ರದೇಶ ಕಳೆದ ಐದು ವರ್ಷಗಳಲ್ಲಿ ಶೇ.32.42ರಷ್ಟು ಹೆಚ್ಚಾದರೂ, ಉತ್ಪಾದನೆ…

3 hours ago

ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯವೇ ದೊಡ್ಡ ಶಕ್ತಿಮೂಲ

ಇಂಡೋನೇಷ್ಯಾದ ತಾಳೆ ಎಣ್ಣೆ ಕಾರ್ಖಾನೆಗಳ ತ್ಯಾಜ್ಯದಿಂದ ವರ್ಷಕ್ಕೆ 3.6 ಬಿಲಿಯನ್ ಘನ ಮೀಟರ್…

19 hours ago

ಎಲ್ ನಿನೋ ಆತಂಕದ ನಡುವೆಯೂ ಖಾರಿಫ್ ಬಿತ್ತನೆ 1,000 ಲಕ್ಷ ಹೆಕ್ಟೇರ್ ದಾಟಿದೆ

ಎಲ್ ನಿನೋ ಆತಂಕದ ನಡುವೆಯೂ ಭಾರತದಲ್ಲಿ 2026ರ ಖಾರಿಫ್ ಬಿತ್ತನೆ 1,000 ಲಕ್ಷ…

21 hours ago

ಹವಾಮಾನ ವರದಿ | 19-08-2026 | ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲಿ? ಮುಂಗಾರು ಏಕೆ ದುರ್ಬಲವಾಗಿದೆ?

ಕರಾವಳಿ ಕರ್ನಾಟಕದಲ್ಲಿ ಮುಂದಿನ 10 ದಿನಗಳವರೆಗೆ ಬಿಸಿಲು–ಮೋಡದೊಂದಿಗೆ ಅಲ್ಲಲ್ಲಿ ಮಳೆ ಮುಂದುವರಿಯುವ ಸಾಧ್ಯತೆ…

1 day ago