Advertisement
MIRROR FOCUS

ಕಾಡಾನೆ ದಾಳಿಗೆ ಕೃಷಿ ನಾಶ | ಮನಕಲುವ ದೃಶ್ಯ ಇದು | ಕೃಷಿಕರ ಈ ನೋವಿಗೆ ಪರಿಹಾರ ಎಂದು ?

Share

ಕೈ ಕೆಸರಾದರೆ ಬಾಯಿ ಮೊಸರು ಬಹಳ ಹಳೆಯ ಗಾದೆ ಮಾತು. ಈಗ ಕೈ ಕೆಸರಾದರೆ ಬಾಯಿ ಮೊಸರು ಎನ್ನಲು ಕೆಲ ಕಾಲ ಬೇಕಾಗುತ್ತದೆ. ಸುಳ್ಯ ತಾಲೂಕಿನ ಹಲವು ಕಡೆಗಳಲ್ಲಿ  ಕೃಷಿ ಫಲ ನೀಡಿದರೂ ಕೈಗೆ ಸಿಗದ ಸ್ಥಿತಿ ನಿರ್ಮಾಣವಾಗುತ್ತಿದೆ. ಕೃಷಿ ಉಳಿಸುವುದೇ ಈಗ ಹಲವು ಕಡೆ ಕೃಷಿಕರಿಗೆ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ಕಾಡು ಪ್ರಾಣಿಗಳ ಹಾವಳಿ, ಅದರಲ್ಲೂ ಕಾಡಾನೆ ಹಾವಳಿ.

Advertisement
Advertisement

 

Advertisement

ಸುಳ್ಯ ತಾಲೂಕಿನ ವಿವಿಧ ಕಡೆಗಳಲ್ಲಿ  ಕಾಡಾನೆ ಹಾವಳಿ ಇದೆ. ಮಂಡೆಕೋಲು ಗ್ರಾಮದಲ್ಲಿ ಕಾಡಾನೆ ಹಾವಳಿ ತೀವ್ರವಿದೆ. ಹಗಲು ಹೊತ್ತಿನಲ್ಲಿಯೇ ಕಾಡಾನೆ ಕಾಣ ಸಿಗುತ್ತದೆ. ಈಚೆಗೆ ಆನೆಗಳ ಹಿಂಡೇ ಕಂಡುಬಂದಿತ್ತು.  ಅದೇ ಮಾದರಿಯ ಪರಿಸ್ಥಿತಿ ಈಗ ಕೊಲ್ಲಮೊಗ್ರ , ಬಾಳುಗೋಡು, ಕಲ್ಮಕಾರು, ಕಟ್ಟ ಪ್ರದೇಶದಲ್ಲಿ ಕಂಡುಬಂದಿದೆ. ಕಾಡಾನೆ ಮಾತ್ರವಲ್ಲ ಕಾಡುಕೋಣ, ಕಾಡೆಮ್ಮೆ, ಕಡವೆ, ಮಂಗಗಳ ಕಾಟವೂ ಸುಳ್ಯ ತಾಲೂಕಿನ ಕೃಷಿಕರಿಗೆ ವಿಪರೀತವಾಗಿ ಹಲವು ವರ್ಷಗಳಿಂದ ಬಾಧಿಸುತ್ತಿದೆ. ಇತ್ತೀಚೆಗೆ ಮಂಗಗಳ ಕಾಟಗಳಿಂದ ತೆಂಗಿನಕಾಯಿ ಫಸಲೇ ಕಡಿಮೆಯಾಗಿದೆ. ಈಗ ಆನೆಗಳ ಕಾಟದಿಂದ ಕೃಷಿಕರ ಬದುಕಿನ ಬೆಳೆಯಾದ ಅಡಿಕೆ, ತೆಂಗು ಕೂಡಾ ನಾಶವಾಗುತ್ತಿದೆ.

Advertisement

ಕೊಲ್ಲಮೊಗ್ರ , ಕಟ್ಟ ಪ್ರದೇಶದಲ್ಲಿ ಈಚೆಗ ಕಾಡಾೆನೆಗಳ ಹಾವಳಿ ಹೆಚ್ಚಾಗಿದ್ದು ಚೆನ್ನಾಗಿ ಬೆಳೆದಿರುವ ಕೃಷಿ ಕೈಗೆ ಸಿಗುವ ಮೊದಲೇ ಕಾಡು ಪ್ರಾಣಿಗಳಿಂದ ಹಾನಿಗೊಳಗಾಗುತ್ತಿದೆ. ಕಟ್ಟದ ಶಂಕರ ಭಟ್‌ ಎಂಬವರ ತೋಟಕ್ಕೆ ಈಚೆಗೆ ಕಾಡಾನೆ ದಾಳಿ ಮಾಡಿ ಅಡಿಕೆ, ಬಾಳೆ, ತೆಂಗು ಸಹಿತ ಕೃಷಿಯನ್ನು ನಾಶ ಮಾಡಿದೆ. ಕೃಷಿ ಮಾಡಿ ಫಸಲು ಬರುವ ಹೊತ್ತಿಗೆ ಹೀಗೆ ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿ ನಾಶವಾದರೆ ಕೃಷಿಕನ ವೇದನೆ ಯಾರ ಬಳಿ ಹೇಳುವುದು ? ಕೃಷಿ ನಾಶದ ಚಿತ್ರಣವೇ ಭಯಾನಕವಾಗಿದೆ. ಅನೇಕ ವರ್ಷಗಳ ಶ್ರಮ ವ್ಯರ್ಥವಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಇಲಾಖೆಗಳಿಗೆ, ಸರಕಾರಕ್ಕೆ, ಜನನಾಯಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೃಷಿ ನಾಶಕ್ಕೆ ಸೂಕ್ತ ಪರಿಹಾರ ಕ್ರಮದ ಬಗ್ಗೆ ಈಗ ಚಿಂತನೆ ನಡೆಯಬೇಕಿದೆ. ಸುಳ್ಯದ ಸಚಿವರೇ ಈಗ ಇರುವುದರಿಂದ ಸೂಕ್ತ ಕ್ರಮಕ್ಕಾಗಿ ಸರಕಾರವನ್ನು  ಒತ್ತಾಯ ಮಾಡಬೇಕು ಎಂದು ಕೃಷಿಕರು ಹೇಳುತ್ತಾರೆ.

ವಿವಿದೆಡೆ ತೋಟದಲ್ಲಿ ಓಡಾಡುವ ಕಾಡೆಮ್ಮೆ ಹಾಗೂ ಆನೆಗಳು ಹಿಂಡುಗಳ ವಿಡಿಯೋ :

Advertisement

 

Advertisement

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬಾಳೆದಿಂಡಿನ ರಸ ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಬಲ್ಲುದು..!

ಬಾಳೆದಿಂಡು ಉತ್ತಮ ಔಷಧವಾಗಿದೆ. ಬಾಳೆ ರಸದ ವಿವಿಧ ಔಷಧೀಯ ಗುಣಗಳ ಬಗ್ಗೆ ಕುಮಾರ್‌…

3 hours ago

ಆರೋಗ್ಯ ಕವಚ ಸಿಬಂದಿಗಳಿಗೆ ವೇತನವಾಗಿಲ್ಲ..! | ಗ್ರಾಮೀಣ ಭಾಗದ ಜೀವ ರಕ್ಷಕರು ಅತಂತ್ರದಲ್ಲಿ..!

ಆರೋಗ್ಯ ಕವಚ ಸಿಬ್ಬಂದಿಗಳಿಗೆ ಕಳೆದ ಹಲವು ತಿಂಗಳುಗಳಿಂದ ವೇತನವಾಗಿಲ್ಲ.

5 hours ago

ಮಲೆನಾಡ ಗಿಡ್ಡ ತಳಿಯ ಗೋರಕ್ಷಣೆ ಅನಿವಾರ್ಯತೆ ಏಕೆ..? | ಅವುಗಳ ಮಹತ್ವ ಏನು ? ಜೀವಾಮೃತದಿಂದ ಅಡಿಕೆ ತೋಟ ಏನಾಯ್ತ..?

ದೇಸೀ ಗೋವು ಉಳಿಯಬೇಕು ಏಕೆ ಎಂಬುದಕ್ಕೆ ಹಲವು ನಿದರ್ಶನ, ಉದಾಹರಣೆ ಇದೆ. ಈ…

10 hours ago

Karnataka Weather | 30-04-2024 | ರಾಜ್ಯದಲ್ಲಿ ಮೋಡದ ವಾತಾವರಣ | ಕೆಲವು ಕಡೆ ತುಂತುರು ಮಳೆ ಸಾಧ್ಯತೆ |

ಈಗಿನಂತೆ ಮೇ 6 ರಿಂದ ರಾಜ್ಯದ ಅಲ್ಲಲ್ಲಿ ಗುಡುಗು, ಗಾಳಿ ಸಹಿತ ಉತ್ತಮ…

13 hours ago

ಭಾರತವನ್ನು ಹೊಗಳಿದ ಪಾಕ್‌ ನಾಯಕ | ಭಾರತ ಸೂಪರ್ ಪವರ್ ಆಗುವ ಕನಸು ಕಾಣುತ್ತಿದ್ರೆ, ನಾವು ಭಿಕ್ಷೆ ಬೇಡುತ್ತಿದ್ದೇವೆ – ಫಜ್ಲುರ್ ರೆಹಮಾನ್

ಭಾರತ(India) ನೆರೆಯ ರಾಷ್ಟ್ರ ಪಾಕಿಸ್ತಾನ(Pakistana) ಸದಾ ಒಂದಲ್ಲ ಒಂದು ಕಿರಿಕ್‌ ಮಾಡುತ್ತಲೇ ಇರುತ್ತದೆ.…

13 hours ago