ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರದೇಶವಾದ ಕೊಲ್ಲಮೊಗ್ರದಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದೆ. ಕೃಷಿ ವ್ಯಾಪಕ ಹಾನಿಯಾಗುತ್ತಿದೆ. ಕೃಷಿಕರ ಈ ಸಮಸ್ಯೆಗೆ ಧ್ವನಿಯಾಗುವವರು ಯಾರು ?
ಕಳೆದ ಹಲಕವು ಸಮಯಗಳಿಂದ ಕೊಲ್ಲಮೊಗ್ರ, ಕಲ್ಮಕಾರು ಪ್ರದೇಶ ಹಲವು ಕಡೆಗಳಲ್ಲಿ ಕಾಡಾನೆ ಹಾವಳಿ ಇದೆ. ಹಗಲು ಹೊತ್ತಿನಲ್ಲಿಯೇ ಕಾಡಾನೆ ಕಾಣ ಸಿಕ್ಕಿದರೆ, ಈಗ ಕೃಷಿಯನ್ನೂ ವ್ಯಾಪಕವಾಗಿ ಹಾನಿ ಮಾಡುತ್ತಿದೆ. ಕಳೆದ ಕೆಲವು ಸಮಯಗಳ ಹಿಂದೆ ಕುಡಿಯುವ ನೀರಿನ ಪೈಪ್ ದುರಸ್ತಿ ಮಾಡಲು ತೆರಳಿದ ಕೃಷಿಕರೊಬ್ಬರಿಗೆ ಆನೆ ಧಾಳಿ ಮಾಡಿ ಗಾಯಗೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೀಗ ಈ ಪ್ರದೇಶದಲ್ಲಿ ಕೃಷಿಗೂ ಹಾನಿ ಮಾಡುತ್ತಿದೆ, ವ್ಯಾಪಕವಾಗಿ ಅಡಿಕೆ, ಬಾಳೆ, ತೆಂಗು ಸಹಿಉತ ಎಲ್ಲಾ ಕೃಷಿ ಹಾನಿಯಾಗುತ್ತಿದೆ. ಆನೆ ಬಂದಾಗ ಈಗ ತೋಟದ ಕಡೆಗೂ ಹೋಗಲು ಕೃಷಿಕರು ಭಯಪಡುತ್ತಿದ್ದಾರೆ. ಆಡಳಿತ, ಜನಪ್ರತಿನಿಧಿಗಳು ಇಷ್ಟಾದರೂ ಯಾವುದೇ ಧ್ವನಿ ಎತ್ತುತ್ತಿಲ್ಲ, ಈಗ ಸುಳ್ಯದ ಸಚಿವರೇ ಅಂದರೆ ಸರಕಾರವೇ ಇದ್ದರೂ ಯಾವುದೇ ಫಲವಿಲ್ಲ ಎಂದು ಕೃಷಿಕರು ಅಸಮಾಧಾನ ತೋಡುತ್ತಿದ್ದಾರೆ. ಆದಷ್ಟು ಶೀಘ್ರದಲ್ಲೇ ಆನೆ ಕಾಟಕ್ಕೆ ಪರಿಹಾರವಾಗಬೇಕಿದೆ.
ಬರಪೀಡಿತ ಎಂದು ಘೋಷಿಸಿರುವ ರಾಜ್ಯದ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿ ಅವಧಿಯನ್ನು…
ಇಂಡೋನೇಷ್ಯಾದ ಸುಲವೆಸಿಯಲ್ಲಿ ಪತ್ತೆಯಾದ ಸುಮಾರು 25,000 ವರ್ಷಗಳ ಹಿಂದಿನ ಮಾನವ ಹಲ್ಲುಗಳಲ್ಲಿ ಅಡಿಕೆ…
‘ಹನುಮಾನ್ ಅಂಶ್’ ಸಿನಿಮಾ 40ನೇ ದಿನವೂ ₹8.25 ಕೋಟಿ ಗಳಿಸಿ ಬಾಕ್ಸ್ ಆಫೀಸ್ನಲ್ಲಿ…
ನೈಋತ್ಯ ಮುಂಗಾರು ಹಿಂದೆ ಸರಿಯಲು ಪೂರಕ ಪರಿಸ್ಥಿತಿಗಳು ನಿರ್ಮಾಣವಾಗುತ್ತಿದ್ದು, ಸೆ.17ರ ವೇಳೆಗೆ ಪಶ್ಚಿಮ…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.17ರಂದು ಸಂಜೆ ಹಾಗೂ ರಾತ್ರಿ ಅಲ್ಲಲ್ಲಿ ಸಾಮಾನ್ಯ ಮಳೆಯ…
ಕೋಲಾರದಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿದ್ದ ಸುಮಾರು 10 ಟನ್ ಸಿಂಥೆಟಿಕ್ ಅಡಿಕೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ…