ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರದೇಶವಾದ ಕೊಲ್ಲಮೊಗ್ರದಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದೆ. ಕೃಷಿ ವ್ಯಾಪಕ ಹಾನಿಯಾಗುತ್ತಿದೆ. ಕೃಷಿಕರ ಈ ಸಮಸ್ಯೆಗೆ ಧ್ವನಿಯಾಗುವವರು ಯಾರು ?
ಕಳೆದ ಹಲಕವು ಸಮಯಗಳಿಂದ ಕೊಲ್ಲಮೊಗ್ರ, ಕಲ್ಮಕಾರು ಪ್ರದೇಶ ಹಲವು ಕಡೆಗಳಲ್ಲಿ ಕಾಡಾನೆ ಹಾವಳಿ ಇದೆ. ಹಗಲು ಹೊತ್ತಿನಲ್ಲಿಯೇ ಕಾಡಾನೆ ಕಾಣ ಸಿಕ್ಕಿದರೆ, ಈಗ ಕೃಷಿಯನ್ನೂ ವ್ಯಾಪಕವಾಗಿ ಹಾನಿ ಮಾಡುತ್ತಿದೆ. ಕಳೆದ ಕೆಲವು ಸಮಯಗಳ ಹಿಂದೆ ಕುಡಿಯುವ ನೀರಿನ ಪೈಪ್ ದುರಸ್ತಿ ಮಾಡಲು ತೆರಳಿದ ಕೃಷಿಕರೊಬ್ಬರಿಗೆ ಆನೆ ಧಾಳಿ ಮಾಡಿ ಗಾಯಗೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೀಗ ಈ ಪ್ರದೇಶದಲ್ಲಿ ಕೃಷಿಗೂ ಹಾನಿ ಮಾಡುತ್ತಿದೆ, ವ್ಯಾಪಕವಾಗಿ ಅಡಿಕೆ, ಬಾಳೆ, ತೆಂಗು ಸಹಿಉತ ಎಲ್ಲಾ ಕೃಷಿ ಹಾನಿಯಾಗುತ್ತಿದೆ. ಆನೆ ಬಂದಾಗ ಈಗ ತೋಟದ ಕಡೆಗೂ ಹೋಗಲು ಕೃಷಿಕರು ಭಯಪಡುತ್ತಿದ್ದಾರೆ. ಆಡಳಿತ, ಜನಪ್ರತಿನಿಧಿಗಳು ಇಷ್ಟಾದರೂ ಯಾವುದೇ ಧ್ವನಿ ಎತ್ತುತ್ತಿಲ್ಲ, ಈಗ ಸುಳ್ಯದ ಸಚಿವರೇ ಅಂದರೆ ಸರಕಾರವೇ ಇದ್ದರೂ ಯಾವುದೇ ಫಲವಿಲ್ಲ ಎಂದು ಕೃಷಿಕರು ಅಸಮಾಧಾನ ತೋಡುತ್ತಿದ್ದಾರೆ. ಆದಷ್ಟು ಶೀಘ್ರದಲ್ಲೇ ಆನೆ ಕಾಟಕ್ಕೆ ಪರಿಹಾರವಾಗಬೇಕಿದೆ.
ಗೋಕರ್ಣದಲ್ಲಿ ನಡೆದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಭೋಜನವೇ ಅದ್ವೈತ…
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…
ಉಪಗ್ರಹ, ಡ್ರೋನ್, GIS, AI ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ರಾಜ್ಯ…
ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್ನ…
ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 10ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸಿವೆ.…
ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…