ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರದೇಶವಾದ ಕೊಲ್ಲಮೊಗ್ರದಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದೆ. ಕೃಷಿ ವ್ಯಾಪಕ ಹಾನಿಯಾಗುತ್ತಿದೆ. ಕೃಷಿಕರ ಈ ಸಮಸ್ಯೆಗೆ ಧ್ವನಿಯಾಗುವವರು ಯಾರು ?
ಕಳೆದ ಹಲಕವು ಸಮಯಗಳಿಂದ ಕೊಲ್ಲಮೊಗ್ರ, ಕಲ್ಮಕಾರು ಪ್ರದೇಶ ಹಲವು ಕಡೆಗಳಲ್ಲಿ ಕಾಡಾನೆ ಹಾವಳಿ ಇದೆ. ಹಗಲು ಹೊತ್ತಿನಲ್ಲಿಯೇ ಕಾಡಾನೆ ಕಾಣ ಸಿಕ್ಕಿದರೆ, ಈಗ ಕೃಷಿಯನ್ನೂ ವ್ಯಾಪಕವಾಗಿ ಹಾನಿ ಮಾಡುತ್ತಿದೆ. ಕಳೆದ ಕೆಲವು ಸಮಯಗಳ ಹಿಂದೆ ಕುಡಿಯುವ ನೀರಿನ ಪೈಪ್ ದುರಸ್ತಿ ಮಾಡಲು ತೆರಳಿದ ಕೃಷಿಕರೊಬ್ಬರಿಗೆ ಆನೆ ಧಾಳಿ ಮಾಡಿ ಗಾಯಗೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೀಗ ಈ ಪ್ರದೇಶದಲ್ಲಿ ಕೃಷಿಗೂ ಹಾನಿ ಮಾಡುತ್ತಿದೆ, ವ್ಯಾಪಕವಾಗಿ ಅಡಿಕೆ, ಬಾಳೆ, ತೆಂಗು ಸಹಿಉತ ಎಲ್ಲಾ ಕೃಷಿ ಹಾನಿಯಾಗುತ್ತಿದೆ. ಆನೆ ಬಂದಾಗ ಈಗ ತೋಟದ ಕಡೆಗೂ ಹೋಗಲು ಕೃಷಿಕರು ಭಯಪಡುತ್ತಿದ್ದಾರೆ. ಆಡಳಿತ, ಜನಪ್ರತಿನಿಧಿಗಳು ಇಷ್ಟಾದರೂ ಯಾವುದೇ ಧ್ವನಿ ಎತ್ತುತ್ತಿಲ್ಲ, ಈಗ ಸುಳ್ಯದ ಸಚಿವರೇ ಅಂದರೆ ಸರಕಾರವೇ ಇದ್ದರೂ ಯಾವುದೇ ಫಲವಿಲ್ಲ ಎಂದು ಕೃಷಿಕರು ಅಸಮಾಧಾನ ತೋಡುತ್ತಿದ್ದಾರೆ. ಆದಷ್ಟು ಶೀಘ್ರದಲ್ಲೇ ಆನೆ ಕಾಟಕ್ಕೆ ಪರಿಹಾರವಾಗಬೇಕಿದೆ.
ಭಾರತದ 11,000 ಕಿ.ಮೀ ಕರಾವಳಿಗೆ ಮುಂದಿನ 15 ವರ್ಷಗಳಲ್ಲಿ ಹವಾಮಾನ ಬದಲಾವಣೆಯ ಗಂಭೀರ…
ಸೂಪರ್ ಎಲ್ ನಿನೊ ರೂಪುಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಭಾರತದ ಮುಂಗಾರು ಮಳೆ, ಕೃಷಿ…
ಗ್ರಾಮೀಣ ಪ್ರವಾಸೋದ್ಯಮದ ಮೂಲಕ ವಿಯೆಟ್ನಾಂನಲ್ಲಿ ಸಾಂಪ್ರದಾಯಿಕ ಕರಕುಶಲ ಗ್ರಾಮಗಳಿಗೆ ಹೊಸ ಜೀವ ಸಿಕ್ಕಿದೆ.…
ಮಿಜೋರಾಂನಲ್ಲಿ ₹339 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಹೂಡಿಕೆ ಮಾಡಿರುವ NEC, ಕೃಷಿ, ಅಡಿಕೆ…
ಹಸುವಿಗೆ ರಾಷ್ಟ್ರೀಯ ಪ್ರಾಣಿಯ ಸ್ಥಾನಮಾನ ನೀಡುವುದು ಅಥವಾ ದೇಶವ್ಯಾಪಿ ಗೋಹತ್ಯೆ ನಿಷೇಧ ಜಾರಿಗೊಳಿಸುವ…
ಬೆಳೆ ವೈರಸ್ ರೋಗಗಳಿಗೆ ಇನ್ನೂ ವ್ಯಾಕ್ಸಿನ್ ಇಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ರೋಗ…