ಬಂಜರು ಭೂಮಿಯಲ್ಲಿ ಕೊಳ ನಿರ್ಮಿಸಿ ಮೀನುಗಾರಿಕೆ ಮಾಡುತ್ತಿರುವ ರೈತ

February 15, 2022
11:08 AM

ಗದಗ ಜಿಲ್ಲೆಯ  ಮುಂಡರಗಿಯ ಬಸಾಪುರದಲ್ಲಿ ರೈತರೊಬ್ಬರು ತಮ್ಮ ಬಂಜರು ಭೂಮಿಯನ್ನು ಕೆರೆಯನ್ನಾಗಿಸಿ ಮೀನುಗಾರಿಕೆಗೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಮುಂಡರಗಿ ತಾಲೂಕಿನಲ್ಲಿ  ಕಲ್ಲು ಪುಡಿ ಮಾಡಿ ಐದು ಸಣ್ಣ ಕೆರೆಗಳನ್ನಾಗಿ ಮಾಡಲಾಗಿದ್ದು, ಅಲ್ಲಿ 25 ಲಕ್ಷ ಸಣ್ಣ ಮೀನುಗಳ ಸಾಕಾಣಿಕೆಯನ್ನು ಮಾಡಿದ್ದಾರೆ.

ಜಮೀನು ಫಲವತ್ತಾಗಿಲ್ಲ ಎಂಬ ಕಾರಣದಿಂದಾಗಿ 57 ವರ್ಷದ ಹನುಮಂತಪ್ಪ ಆ ಭೂಮಿಯನ್ನು ಸುಮ್ಮನೆ ಬಿಡಲಿಲ್ಲ, ತಜ್ಞರನ್ನು ಭೇಟಿ ಮಾಡಿ ಏನಾದರೂ ಮಾಡಲು ನಿರ್ಧರಿಸಿದರು. ಮೀನುಗಾರಿಕೆ ಇಲಾಖೆ ಸಿಬ್ಬಂದಿ ಹನುಮಂಪ್ಪ ಅವರಿಗೆ ಈಗ ಮಾರ್ಗದರ್ಶನ ನೀಡುತ್ತಿದ್ದಾರೆ.

ಬೋರ್ವೇಲ್ ಅಳವಡಿಸಿ ನೀರಿನ ಮೂಲ ಮಾಡಿಕೊಂಡು ಮೀನು ಸಾಕಾಣಿಕೆ ಆರಂಭಿಸಿದೆ. ಈ ವೇಳೆ ಮೀನುಗಳನ್ನು ತಿನ್ನಲು ಪಕ್ಷಿಗಳು ಬರಲು ಆರಂಭಿಸಿದ್ದವು. ಆಗ ಪಕ್ಷಿಗಳಿಂದ ಮೀನುಗಳನ್ನು ಉಳಿಸಲು ಅವರು ಕನ್ನಡಿಗಳಿಂದ ಕೆಲವು ಬುಟ್ಟಿಗಳನ್ನು ಸಹ ಮಾಡಿದರು. ಇದೀಗ ಬಿಸಿಲು ನಾಡಿನಲ್ಲೂ ಮೀನುಗಾರಿಕೆ ಸಾಧ್ಯವೆಂದು ಮಾಡಿ ತೋರಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಳೆ ಹೆಚ್ಚಿಸಲು ಮೋಡ ಬಿತ್ತನೆಗೆ ಚಾಲನೆ – ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ?
September 4, 2026
10:47 PM
by: ದ ರೂರಲ್ ಮಿರರ್.ಕಾಂ
3,000 ವರ್ಷಗಳ ಹಿಂದೆಯೇ ರೈತರು ಹವಾಮಾನ ಬದಲಾವಣೆಗೆ ಹೊಂದಿಕೊಂಡಿದ್ದರು..! ಬಿಹಾರದ ಪುರಾತನ ಬೀಜಗಳು ಹೇಳಿದ ಕೃಷಿ ಪಾಠ
September 4, 2026
8:50 PM
by: ದ ರೂರಲ್ ಮಿರರ್.ಕಾಂ
ಶ್ರೀಕೃಷ್ಣನನ್ನು ದೇವನಾಗಿ ಮಾತ್ರವಲ್ಲ, ಗುರುವಿನ ರೂಪದಲ್ಲೂ ಕಾಣುವ ದೃಷ್ಟಿ
September 4, 2026
3:11 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 04-09-2026 | ಮುಂಗಾರು ದುರ್ಬಲ… ಆದರೂ ಕರ್ನಾಟಕದಲ್ಲಿ ಗುಡುಗು ಮಳೆ ಮುಂದುವರಿಯುವ ಸಾಧ್ಯತೆ!
September 4, 2026
3:00 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror