ಗದಗ ಜಿಲ್ಲೆಯ ಮುಂಡರಗಿಯ ಬಸಾಪುರದಲ್ಲಿ ರೈತರೊಬ್ಬರು ತಮ್ಮ ಬಂಜರು ಭೂಮಿಯನ್ನು ಕೆರೆಯನ್ನಾಗಿಸಿ ಮೀನುಗಾರಿಕೆಗೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಮುಂಡರಗಿ ತಾಲೂಕಿನಲ್ಲಿ ಕಲ್ಲು ಪುಡಿ ಮಾಡಿ ಐದು ಸಣ್ಣ ಕೆರೆಗಳನ್ನಾಗಿ ಮಾಡಲಾಗಿದ್ದು, ಅಲ್ಲಿ 25 ಲಕ್ಷ ಸಣ್ಣ ಮೀನುಗಳ ಸಾಕಾಣಿಕೆಯನ್ನು ಮಾಡಿದ್ದಾರೆ.
ಜಮೀನು ಫಲವತ್ತಾಗಿಲ್ಲ ಎಂಬ ಕಾರಣದಿಂದಾಗಿ 57 ವರ್ಷದ ಹನುಮಂತಪ್ಪ ಆ ಭೂಮಿಯನ್ನು ಸುಮ್ಮನೆ ಬಿಡಲಿಲ್ಲ, ತಜ್ಞರನ್ನು ಭೇಟಿ ಮಾಡಿ ಏನಾದರೂ ಮಾಡಲು ನಿರ್ಧರಿಸಿದರು. ಮೀನುಗಾರಿಕೆ ಇಲಾಖೆ ಸಿಬ್ಬಂದಿ ಹನುಮಂಪ್ಪ ಅವರಿಗೆ ಈಗ ಮಾರ್ಗದರ್ಶನ ನೀಡುತ್ತಿದ್ದಾರೆ.
ಬೋರ್ವೇಲ್ ಅಳವಡಿಸಿ ನೀರಿನ ಮೂಲ ಮಾಡಿಕೊಂಡು ಮೀನು ಸಾಕಾಣಿಕೆ ಆರಂಭಿಸಿದೆ. ಈ ವೇಳೆ ಮೀನುಗಳನ್ನು ತಿನ್ನಲು ಪಕ್ಷಿಗಳು ಬರಲು ಆರಂಭಿಸಿದ್ದವು. ಆಗ ಪಕ್ಷಿಗಳಿಂದ ಮೀನುಗಳನ್ನು ಉಳಿಸಲು ಅವರು ಕನ್ನಡಿಗಳಿಂದ ಕೆಲವು ಬುಟ್ಟಿಗಳನ್ನು ಸಹ ಮಾಡಿದರು. ಇದೀಗ ಬಿಸಿಲು ನಾಡಿನಲ್ಲೂ ಮೀನುಗಾರಿಕೆ ಸಾಧ್ಯವೆಂದು ಮಾಡಿ ತೋರಿಸಿದ್ದಾರೆ.
ಪ್ರಯಾಗ್ ರಾಜ್ ತಲಪುವ ವೇಳೆ ಆಗುತ್ತಿರುವ ಸಂತಸದ ಬಗ್ಗೆ ಸುರೇಶ್ಚಂದ್ರ ಅವರು ಬರೆದಿದ್ದಾರೆ…
ಶಿಕ್ಷಣವೆಂದರೆ ಅದು ಹಣ ಕೊಟ್ಟು ಪಡೆಯುವ ವಸ್ತುವಿನಂತೆ ಬಿಕರಿಯಾಗುತ್ತಿದೆ. ಈ ದೃಷ್ಠಿಯಿಂದ ಶಿಕ್ಷಣ…
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…