ಗದಗ ಜಿಲ್ಲೆಯ ಮುಂಡರಗಿಯ ಬಸಾಪುರದಲ್ಲಿ ರೈತರೊಬ್ಬರು ತಮ್ಮ ಬಂಜರು ಭೂಮಿಯನ್ನು ಕೆರೆಯನ್ನಾಗಿಸಿ ಮೀನುಗಾರಿಕೆಗೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಮುಂಡರಗಿ ತಾಲೂಕಿನಲ್ಲಿ ಕಲ್ಲು ಪುಡಿ ಮಾಡಿ ಐದು ಸಣ್ಣ ಕೆರೆಗಳನ್ನಾಗಿ ಮಾಡಲಾಗಿದ್ದು, ಅಲ್ಲಿ 25 ಲಕ್ಷ ಸಣ್ಣ ಮೀನುಗಳ ಸಾಕಾಣಿಕೆಯನ್ನು ಮಾಡಿದ್ದಾರೆ.
ಜಮೀನು ಫಲವತ್ತಾಗಿಲ್ಲ ಎಂಬ ಕಾರಣದಿಂದಾಗಿ 57 ವರ್ಷದ ಹನುಮಂತಪ್ಪ ಆ ಭೂಮಿಯನ್ನು ಸುಮ್ಮನೆ ಬಿಡಲಿಲ್ಲ, ತಜ್ಞರನ್ನು ಭೇಟಿ ಮಾಡಿ ಏನಾದರೂ ಮಾಡಲು ನಿರ್ಧರಿಸಿದರು. ಮೀನುಗಾರಿಕೆ ಇಲಾಖೆ ಸಿಬ್ಬಂದಿ ಹನುಮಂಪ್ಪ ಅವರಿಗೆ ಈಗ ಮಾರ್ಗದರ್ಶನ ನೀಡುತ್ತಿದ್ದಾರೆ.
ಬೋರ್ವೇಲ್ ಅಳವಡಿಸಿ ನೀರಿನ ಮೂಲ ಮಾಡಿಕೊಂಡು ಮೀನು ಸಾಕಾಣಿಕೆ ಆರಂಭಿಸಿದೆ. ಈ ವೇಳೆ ಮೀನುಗಳನ್ನು ತಿನ್ನಲು ಪಕ್ಷಿಗಳು ಬರಲು ಆರಂಭಿಸಿದ್ದವು. ಆಗ ಪಕ್ಷಿಗಳಿಂದ ಮೀನುಗಳನ್ನು ಉಳಿಸಲು ಅವರು ಕನ್ನಡಿಗಳಿಂದ ಕೆಲವು ಬುಟ್ಟಿಗಳನ್ನು ಸಹ ಮಾಡಿದರು. ಇದೀಗ ಬಿಸಿಲು ನಾಡಿನಲ್ಲೂ ಮೀನುಗಾರಿಕೆ ಸಾಧ್ಯವೆಂದು ಮಾಡಿ ತೋರಿಸಿದ್ದಾರೆ.
ರಾಜಸ್ಥಾನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೀಟನಾಶಕ ಬಳಕೆಯಿಂದ 535 ರೈತರು ಮೃತಪಟ್ಟಿರುವುದು ಬಹಿರಂಗವಾಗಿದೆ.…
ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ಆಚರಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವಿವಾದ ಹುಟ್ಟಿಕೊಂಡಿದೆ.…
ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆಗಳು ಜೂ. 8ರಿಂದ ಮತ್ತಷ್ಟು ಚುರುಕುಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು, ಕರಾವಳಿ…
ಜೋಯಿಡಾದಲ್ಲಿ ನಡೆದ ಹಲಸು ಉತ್ಸವದಲ್ಲಿ 50ಕ್ಕೂ ಹೆಚ್ಚು ಮೌಲ್ಯವರ್ಧಿತ ಹಲಸಿನ ಉತ್ಪನ್ನಗಳು ಪ್ರದರ್ಶನಗೊಂಡು…
ಕ್ಯಾಂಪ್ಕೋ ಸಂಸ್ಥಾಪಕ ವಾರಣಾಶಿ ಸುಬ್ರಾಯ ಭಟ್ ಅವರ ಜನ್ಮಕ್ಕೆ 99 ವರ್ಷಗಳು ಪೂರ್ಣಗೊಂಡಿದ್ದು,…
ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದರೂ ಅದರ ಬಲ ಇನ್ನೂ ದುರ್ಬಲವಾಗಿದೆ. ಕರಾವಳಿಯಲ್ಲಿ ಜೂನ್ 8ರಿಂದ…