ಗದಗ ಜಿಲ್ಲೆಯ ಮುಂಡರಗಿಯ ಬಸಾಪುರದಲ್ಲಿ ರೈತರೊಬ್ಬರು ತಮ್ಮ ಬಂಜರು ಭೂಮಿಯನ್ನು ಕೆರೆಯನ್ನಾಗಿಸಿ ಮೀನುಗಾರಿಕೆಗೆ ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಮುಂಡರಗಿ ತಾಲೂಕಿನಲ್ಲಿ ಕಲ್ಲು ಪುಡಿ ಮಾಡಿ ಐದು ಸಣ್ಣ ಕೆರೆಗಳನ್ನಾಗಿ ಮಾಡಲಾಗಿದ್ದು, ಅಲ್ಲಿ 25 ಲಕ್ಷ ಸಣ್ಣ ಮೀನುಗಳ ಸಾಕಾಣಿಕೆಯನ್ನು ಮಾಡಿದ್ದಾರೆ.
ಜಮೀನು ಫಲವತ್ತಾಗಿಲ್ಲ ಎಂಬ ಕಾರಣದಿಂದಾಗಿ 57 ವರ್ಷದ ಹನುಮಂತಪ್ಪ ಆ ಭೂಮಿಯನ್ನು ಸುಮ್ಮನೆ ಬಿಡಲಿಲ್ಲ, ತಜ್ಞರನ್ನು ಭೇಟಿ ಮಾಡಿ ಏನಾದರೂ ಮಾಡಲು ನಿರ್ಧರಿಸಿದರು. ಮೀನುಗಾರಿಕೆ ಇಲಾಖೆ ಸಿಬ್ಬಂದಿ ಹನುಮಂಪ್ಪ ಅವರಿಗೆ ಈಗ ಮಾರ್ಗದರ್ಶನ ನೀಡುತ್ತಿದ್ದಾರೆ.
ಬೋರ್ವೇಲ್ ಅಳವಡಿಸಿ ನೀರಿನ ಮೂಲ ಮಾಡಿಕೊಂಡು ಮೀನು ಸಾಕಾಣಿಕೆ ಆರಂಭಿಸಿದೆ. ಈ ವೇಳೆ ಮೀನುಗಳನ್ನು ತಿನ್ನಲು ಪಕ್ಷಿಗಳು ಬರಲು ಆರಂಭಿಸಿದ್ದವು. ಆಗ ಪಕ್ಷಿಗಳಿಂದ ಮೀನುಗಳನ್ನು ಉಳಿಸಲು ಅವರು ಕನ್ನಡಿಗಳಿಂದ ಕೆಲವು ಬುಟ್ಟಿಗಳನ್ನು ಸಹ ಮಾಡಿದರು. ಇದೀಗ ಬಿಸಿಲು ನಾಡಿನಲ್ಲೂ ಮೀನುಗಾರಿಕೆ ಸಾಧ್ಯವೆಂದು ಮಾಡಿ ತೋರಿಸಿದ್ದಾರೆ.
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…