ಭಾರತದ ಕೃಷಿಯಲ್ಲಿ ಮುಂದಿನ ದೊಡ್ಡ ಕ್ರಾಂತಿ ಕೃತಕ ಬುದ್ಧಿಮತ್ತೆ (Artificial Intelligence) AI)ಮೂಲಕ ಸಾಧ್ಯವಾಗಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ. ಮುಂಬೈನಲ್ಲಿ ನಡೆದ AI4Agri 2026 ಸಮಾವೇಶದಲ್ಲಿ ಅವರು ಮಾತನಾಡಿದರು.
ಎಐ ಬಳಕೆ ಮೂಲಕ ಹವಾಮಾನ ಅನಿಶ್ಚಿತತೆ, ಮಾಹಿತಿ ಕೊರತೆ ಮತ್ತು ಮಾರುಕಟ್ಟೆ ಸಮಸ್ಯೆಗಳಂತಹ ಕೃಷಿಯ ಮೂಲಭೂತ ಸವಾಲುಗಳಿಗೆ ಪರಿಹಾರ ದೊರೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ. ಇದರಿಂದ ಕೃಷಿ ಉತ್ಪಾದಕತೆ ಹೆಚ್ಚಿಸಿ ರೈತರ ಆದಾಯವನ್ನು ಹೆಚ್ಚಿಸಲು ಸಾಧ್ಯವಾಗಲಿದೆ.
ಭಾರತದ ಸುಮಾರು 14 ಕೋಟಿ ಕೃಷಿ ಹೋಲ್ಡಿಂಗ್ಗಳ ರೈತರಿಗೆ ಎಐ ಆಧಾರಿತ ಸಲಹೆಗಳು ನೀಡಿದರೆ, ಪ್ರತಿ ರೈತನಿಗೆ ವರ್ಷಕ್ಕೆ ಸರಾಸರಿ ₹5,000 ಉಳಿತಾಯ ಸಾಧ್ಯವಾಗುತ್ತದೆ. ಇದರಿಂದ ಒಟ್ಟಾರೆ ₹70,000 ಕೋಟಿ ಹೆಚ್ಚುವರಿ ಮೌಲ್ಯ ಸೃಷ್ಟಿಯಾಗಬಹುದು ಎಂದು ಸಚಿವರು ತಿಳಿಸಿದ್ದಾರೆ.
‘Agri Param’ ಎಂಬ AI ಮಾದರಿ ಈಗಾಗಲೇ 22 ಭಾರತೀಯ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ತಮ್ಮ ಭಾಷೆಯಲ್ಲೇ ಕೃಷಿ ಸಲಹೆಗಳನ್ನು ನೀಡುತ್ತಿದೆ. ಇದು ರೈತರಿಗೆ ಸುಲಭವಾಗಿ ತಂತ್ರಜ್ಞಾನ ಬಳಸಲು ಸಹಾಯ ಮಾಡಲಿದೆ. ಡ್ರೋನ್ ಮತ್ತು ಉಪಗ್ರಹ ತಂತ್ರಜ್ಞಾನ ಬಳಸಿ ಮಣ್ಣಿನ ಆರೋಗ್ಯ, ಭೂಮಿಯ ಮಾಹಿತಿ ಮತ್ತು ಬೆಳೆ ಪರಿಸ್ಥಿತಿಯನ್ನು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತಿದೆ. ಇದರಿಂದ ರೈತರು ಮುಂಚಿತವಾಗಿ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗಲಿದೆ.ಕೇಂದ್ರ ಸರ್ಕಾರ ರಾಷ್ಟ್ರೀಯ ಮಟ್ಟದಲ್ಲಿ Agri-AI Research Network ಹಾಗೂ Agri Data Commons ನಿರ್ಮಿಸಲು ಯೋಜನೆ ರೂಪಿಸಿದೆ. ಇದರಿಂದ ಕೃಷಿಗೆ ಸಂಬಂಧಿಸಿದ ಡೇಟಾ, ಸಂಶೋಧನೆ ಮತ್ತು AI ತಂತ್ರಜ್ಞಾನವನ್ನು ಒಂದೇ ವೇದಿಕೆಯಲ್ಲಿ ಒದಗಿಸಲು ಸಾಧ್ಯವಾಗಲಿದೆ ಎಂದರು.
ಈ ಕ್ರಮಗಳಿಂದ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿಸಿ, ರೈತರ ಆದಾಯ ಹೆಚ್ಚಿಸುವುದು ಹಾಗೂ ಕೃಷಿಯನ್ನು ಹೆಚ್ಚು ಲಾಭದಾಯಕ ಕ್ಷೇತ್ರವನ್ನಾಗಿ ರೂಪಿಸುವುದು ಸರ್ಕಾರದ ಗುರಿಯಾಗಿದೆ.
Union Minister Dr. Jitendra Singh said AI will drive India’s next agricultural revolution and could generate ₹70,000 crore in annual value for farmers. AI tools will help farmers improve productivity, predict pests, and access advisory services in local languages. The government is also planning a National Agri-AI Research Network and data framework to strengthen technology-driven farming.


