Advertisement
ಕೃಷಿಮಾತು

ಅಡಿಕೆ ಪರ್ಯಾಯ ಬಳಕೆ ವಿಚಾರಗೋಷ್ಠಿ | ಕೃಷಿಕ ಎ ಪಿ ಸದಾಶಿವ ಹೇಳಿದ್ದು… ಸೆಮಿನಾರ್ ಬಳಿಕ ನಾನು ವೀಳ್ಯದೆಲೆ ಬಳ್ಳಿ ನಾಟಿ ಮಾಡಿದೆ |

Share
ಈಚೆಗೆ ಅಡಿಕೆ ಹೊಸಬಳಕೆಯ ವಿಚಾರಗೋಷ್ಠಿ ಪುತ್ತೂರಿನಲ್ಲಿ  ನಡೆಯಿತು. ಅಡಿಕೆಯ ಪರ್ಯಾಯ ಬಳಕೆಯನ್ನು ಕೇಂದ್ರೀಕರಿಸಿ ಇದ್ದ ವಿಚಾರಗೋಷ್ಠಿಯಲ್ಲಿ ಅಡಿಕೆಯ ಬಳಕೆ, ಅಡಿಕೆಯ ಹಲವು ಉತ್ಪನ್ನಗಳ ಪರಿಚಯ ಮಾಡಲಾಯಿತು. ಡಿಕೆ ಉತ್ಪನ್ನ ತಯಾರು ಮಾಡಿದ ಹಲವು ಮಂದಿ ಇದ್ದರು. ಈ ಗೋಷ್ಠಿಯ ಬಳಿಕ ಕೃಷಿಕ ಎ ಪಿ ಸದಾಶಿವ ಅವರ ಅಭಿಪ್ರಾಯ ಹೀಗಿತ್ತು….

ಅಡಿಕೆ ಪರ್ಯಾಯ ಬಳಕೆಯ ಸೆಮಿನಾರ್‌ ನಲ್ಲಿ ಕುತೂಹಲಿಗನಾಗಿ ಭಾಗವಹಿಸಿದವರಲ್ಲಿ ನಾನೂ ಒಬ್ಬ. ತುಂಬಾ ದೀರ್ಘ ಅಂತ ಅನಿಸಿದರೂ, ಸಂಶೋಧಕರೆಲ್ಲರ ಸಂಶೋಧನೆ ಮತ್ತು ವಿವರಣೆ ತುಂಬಾ ಚೆನ್ನಾಗಿತ್ತು. ಅವರೆಲ್ಲರ ಸಾಧನೆಗೆ ಅಭಿನಂದನೆಗಳು. ಎಲ್ಲಾ ಸಂಶೋಧಕರಿಗೂ ಮೂಲ ಪ್ರೇರಣೆ ಬದನಾಜೆ ಶಂಕರ ಭಟ್ಟರೆ ಎಂಬುದು ಬಹಳ ಕುತೂಹಲದ ಮತ್ತು ಆಶ್ಚರ್ಯದ ಸಂಗತಿ. ಇದು ಶಂಕರ ಭಟ್ಟರ ಅಸಾಧಾರಣ ಸಂಶೋಧನಾ ಸಾಮರ್ಥ್ಯಕ್ಕೆ ನಿದರ್ಶನ.

Advertisement
Advertisement
Advertisement
Advertisement

ಹೆಚ್ಚಿನ ಉತ್ಪನ್ನಗಳು ಅಡಿಕೆಯ ಮಾರುಕಟ್ಟೆಯ ದೃಷ್ಟಿಯಿಂದ ತುಂಬಾ ಪ್ರಯೋಜನವಾಗಬಹುದು ಎಂದು ನನಗೆ ಅನ್ನಿಸಲಿಲ್ಲ. ಎಲ್ಲಾ ಉತ್ಪನ್ನಗಳು ಅಡಿಕೆಯ ಉಪ ಉತ್ಪನ್ನಗಳಿಂದ ತಯಾರು ಮಾಡಿದಂತವುಗಳು. ಅದು ಮಾರುಕಟ್ಟೆಗೆ ಪೂರಕವೇ ಹೊರತು ಅಡಿಕೆ ಮೂಲವಸ್ತುವಾಗಿ ಬಳಕೆಯಲ್ಲಿ ತುಂಬಾ ಪ್ರಯೋಜನಕಾರಿ ಆಗಲಾರದು ಎಂದು ನನ್ನ ಅನಿಸಿಕೆ.

Advertisement

ಶಂಕರ ಭಟ್ಟರು ತಮ್ಮೆಲ್ಲ ಉತ್ಪನ್ನಗಳ ಬಗ್ಗೆ ವಿವರಿಸುತ್ತಾ, 1450 ವರ್ಷಕ್ಕೂ ಹಿಂದೆ ಬರೆದಿಟ್ಟ ಶ್ಲೋಕ ಒಂದನ್ನು ಉದ್ಧರಿಸಿ ಅಡಿಕೆ ಮತ್ತು ವೀಳ್ಯದೆಲೆ ಎಂಬುದು ಸಂಸಾರದಲ್ಲಿ ಪತಿ ಪತ್ನಿ ಇದ್ದಂತೆ. ಎರಡೂ ಇದ್ದಾಗ ಬಲು ಆರೋಗ್ಯದಾಯಕ ಎಂಬ ಮಾತು ಬಲು ಕುತೂಹಲಕರ. ಅದಕ್ಕೆ ಪೂರಕವಾಗಿ ಅಡಿಕೆಯಿಂದ ಮಾಡಿದ ಔಷಧಿಗಳ ಧನಾತ್ಮಕ ಅಂಶಗಳನ್ನು ಡಾಕ್ಟರ್ ಗಳು ಪ್ರಸ್ತುತಪಡಿಸಿದ್ದರು. ಈ ಮೇಲಿನ ಪೂರಕ ಮಾತುಗಳನ್ನು ಪ್ರಚುರಪಡಿಸುತ್ತಾ ತಂಬಾಕು ರಹಿತ ವೀಳ್ಯದ ಬಳಕೆಗೆ ಒತ್ತುಕೊಟ್ಟಲ್ಲಿ ಅಡಿಕೆ ಮಾರುಕಟ್ಟೆಯ ಹಿತದೃಷ್ಟಿಯಿಂದ ಪ್ರಯೋಜನವಾಗಬಹುದು ಎಂದು ಅನಿಸಿತು.

ನಾವು ಗಮನಿಸಬೇಕಾದ ಅಂಶ, ಅಡಿಕೆ ಬಳಕೆಯಿಂದ ಕ್ಯಾನ್ಸರ್ ನಾಶವಾಗುತ್ತದೆ, ಗ್ಯಾಂಗ್ರಿನ್ ಗುಣವಾಗುತ್ತದೆ, ಮಲಬದ್ಧತೆಯ ಸಮಸ್ಯೆ ಪರಿಹಾರವಾಗುತ್ತದೆ ಎಂಬ ವಿಷಯಗಳನ್ನೆಲ್ಲ ಒಪ್ಪಿಕೊಂಡರೂ, ಅದನ್ನು ಸಂಶೋಧಿಸಿದವರಿಂದ ಹಿಡಿದು ನನ್ನವರೆಗೆ ಅಲ್ಲಿ ಯಾರೂ ಅಡಿಕೆ ಬಳಸುವವರು ಇರಲಿಲ್ಲ.

Advertisement
ಇಲ್ಲಿಯವರೆಗೆ ತಾಂಬೂಲವನ್ನು ಬಳಸದ ನಾನು, ಬಳಸುವಲ್ಲಿ ಆರಂಭ ನನ್ನಿಂದಲೇ ಸುರುವಾಗಲಿ ಎಂಬ ದೃಷ್ಟಿಯಿಂದ ವೀಳ್ಯದೆಲೆ ಬಳ್ಳಿಯ ತುಂಡೊಂದನ್ನು ಅಡಿಕೆ ಮರಕ್ಕೆ ನೆಟ್ಟು ಉದ್ಘಾಟನೆ ಮಾಡಿಕೊಂಡೆ.
ಬರಹ :
ಎ ಪಿ ಸದಾಶಿವ , ಮರಿಕೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಎ ಪಿ ಸದಾಶಿವ ಮರಿಕೆ

ಸಾವಯವ ಕೃಷಿಕರು, ಪುತ್ತೂರು ಕಳೆದ ಹಲವಾರು ವರ್ಷಗಳಿಂದ ಸಾವಯವ ಕೃಷಿ, ಗೋಆಧಾರಿತ ಕೃಷಿಯ ಮೂಲಕ ಗಮನ ಸೆಳೆದ ಕೃಷಿಕ ಇವರು.

Published by
ಎ ಪಿ ಸದಾಶಿವ ಮರಿಕೆ

Recent Posts

“ನದಿ ಮತ್ತು ಪರಿಸರ” ಶುದ್ಧತೆ ಉಳಿಸಿಕೊಳ್ಳಬೇಕಾದರೆ ಭಾವನಾತ್ಮಕವಾಗಿ ಅಷ್ಟೇ ಕನೆಕ್ಟ್‌ ಆಗಬೇಕಾದ್ದಲ್ಲ…

ಮಹಾಕುಂಭ ಮೇಳದ ಮೂಲಕ ಹೊಸದೊಂದು ಸಂಕಲ್ಪವನ್ನು ಜನರು ಮಾಡಬೇಕು. ಈ ಬಾರಿ ಕುಂಭಮೇಳದಲ್ಲಿ…

12 hours ago

ದೇಶದ ಆರ್ಥಿಕತೆಗೆ ಕೃಷಿ ಕ್ಷೇತ್ರದ ಕೊಡುಗೆ ಅಪಾರ | ಸರ್ವೇ ಪ್ರಕಾರ ಜಿಡಿಪಿ ದರಕ್ಕೆ ಕೃಷಿ ಕ್ಷೇತ್ರದ ಕೊಡುಗೆ ಶೇ.16 |

ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಸೃಷ್ಠಿಸಲು ಹಾಗೂ ಗ್ರಾಮೀಣ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು…

13 hours ago

ಕಾಡಾನೆ ಹಾವಳಿ ನಿಯಂತ್ರಿಸಲು ಸರ್ಕಾರ 22 ಕೋಟಿ ರೂಪಾಯಿ ಬಿಡುಗಡೆ | ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಚಾಲನೆ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿವಿಧ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿಯನ್ನು ನಿಯಂತ್ರಿಸಲು ಸರ್ಕಾರ…

13 hours ago

ಮಹಾಕುಂಭಮೇಳ ಸಂಪನ್ನ | ಮಹಾಶಿವರಾತ್ರಿಯಂದು ಕೊನೆಯ ಪುಣ್ಯಸ್ನಾನ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭಮೇಳ ಶಿವರಾತ್ರಿಯಂದು(ಇಂದು) ಸಂಪನ್ನಗೊಳ್ಳಲಿದೆ.ಈ ಹಿನ್ನೆಲೆಯಲ್ಲಿ ದೇಶ-ವಿದೇಶಗಳಿಂದ ಲಕ್ಷಾಂತರ ಮಂದಿ…

13 hours ago

ಮಹಿಳಾ ಸ್ವಾವಲಂಬನೆಗೆ ಆದ್ಯತೆ | ಶಿವಮೊಗ್ಗದಲ್ಲಿ ‘ಅವ್ವ ಸಂತೆ’ ಆಯೋಜನೆ

ಶಿವಮೊಗ್ಗ ಜಿಲ್ಲೆಯ ಸಾಗರದ  ಜೀವನ್ಮುಖಿ ಸಂಘಟನೆ ಹಾಗೂ ಭೀಮನಕೋಟೆಯ ಚರಕ ಮಹಿಳಾ  ವಿವಿಧೋದ್ದೇಶ…

13 hours ago

ಕೇರಳದ ಕೆಲವು ಕಡೆ ತಾಪಮಾನ ಏರಿಕೆಯ ಎಚ್ಚರಿಕೆ | 3 ಡಿಗ್ರಿ ಏರಿಕೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ |

ಕೇರಳದ ಕೆಲವು ಪ್ರದೇಶಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ಮುಂದಿನ…

22 hours ago