Advertisement
MIRROR FOCUS

#AgriTourism | ಕೃಷಿ ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಕೃಷಿ ಆಶ್ರಮದ ಮತ್ತೊಂದು ಕಾರ್ಯಕ್ರಮ | ಕೃಷಿಯ ಆಸಕ್ತರಿಗಾಗಿ ವಿಶೇಷ ಕಾರ್ಯಗಾರ |

Share

ಮಹಾರಾಷ್ಟ್ರದಲ್ಲಿ ಈಗಾಗಲೇ ಪ್ರಸಿದ್ಧಿಯಾಗಿರುವ ಅಗ್ರಿ ಟೂರಿಸಂ (Agri Tourism)  ಅನ್ನು ಕರ್ನಾಟಕದಲ್ಲಿಯೂ ಬೆಳೆಸುವ ಇಚ್ಛೆ ಇದೆ. ಕೃಷಿ ಪ್ರವಾಸೋದ್ಯಮ, (ಹಳ್ಳಿ ಪ್ರವಾಸ, ಆಶ್ರಮ) ಕೃಷಿ ಆಶ್ರಮದ ಮೊಗದೊಂದು ಕಾರ್ಯಕ್ರಮ, ಅಕ್ಟೋಬರ್ 1 (ಭಾನುವಾರ) ಹಾಗೂ 2 (ಸೋಮವಾರ) ರಂದು ಸಾಗರದ ಬಳಿ ಆಯೋಜಿಸಲಾಗಿದೆ.

ಸಾವಯವ ಕೃಷಿಕರಿಗಾಗಿ ಮತ್ತು ಸಾವಯವ ಕೃಷಿಯ ಆಸಕ್ತರಿಗಾಗಿ ಕಾರ್ಯಕ್ರಮ ನಡೆಯುವ ಸ್ಥಳಗಳು: 01.10.2023: ಸಾರ ಸಂಸ್ಥೆ. ಬಟ್ಟೆಮಲ್ಲಪ್ಪ. ಹೊಸನಗರ ತಾ. ಶಿವಮೊಗ್ಗ ಜಿಲ್ಲೆ.

02.10.2023 ರಂದು ಸಾಗರ ಬಳಿಯ ಪ್ರಕಾಶ ಮಂಚಾಲೆ ಅವರ ಔಷಧೀಯ ಸಸ್ಯಗಳ ತೋಟದಲ್ಲಿ ಗೆಳೆಯರೇ “ಕೃಷಿ ಆಶ್ರಮ” ಎಂದರೆ ಅಗ್ರಿ ಟೂರಿಸಂ. ಈ ಯೋಜನೆಯ ಉದ್ದೇಶ ಜನರು ಮತ್ತೆ ಪಟ್ಟಣಗಳಿಂದ ಹಳ್ಳಿಗಳತ್ತ ಮುಖ ಮಾಡಬೇಕು ಹಳ್ಳಿಗಳು ಉಳಿಯಬೇಕು, ಹಳ್ಳಿಗಳ ಆರ್ಥಿಕತೆ ಸದೃಢವಾಗಬೇಕು. ಕೃಷಿಕ ಮತ್ತು ಕೃಷಿ ಮತ್ತೆ ಚಿಗುರಬೇಕು. ಭಾರತ ಮತ್ತೆ ಕೃಷಿ ಪ್ರಧಾನ ದೇಶವಾಗಬೇಕು. ಇಲ್ಲಿನ ಜನರು ಹೆಚ್ಚು ಆರೋಗ್ಯವಂತರು, ಸಂಸ್ಕೃತಿವಂತರಾಗಬೇಕು. ಈ ಉದ್ದೇಶದಿಂದ ಈ ಎರಡು ದಿನಗಳ “ಕೃಷಿ ಆಶ್ರಮ ತರಬೇತಿ ಶಿಬಿರ” ಆಯೋಜಿಸಲಾಗಿದೆ.

ಕಾರ್ಯಕ್ರಮದ ವಿವರ:
ಕೃಷಿ ಆಶ್ರಮಕ್ಕೆ ಭವಿಷ್ಯವಿದೆಯೇ? ಅಲ್ಲಿ ಇರಬೇಕಾದ ವಸ್ತುಗಳೇನು? ಇರಬಾರದ ವಸ್ತುಗಳಾವುವು? ಕೃಷಿ ಆಶ್ರಮ ಎಂದರೇನು?  ಕೃಷಿ ಆಶ್ರಮ ಪರಿಕಲ್ಪನೆ, ಉದ್ದೇಶ ಮತ್ತು ಅಗತ್ಯಗಳೇನು?  ಅದರ ಸ್ಥಾಪನೆಗೆ ಸಿದ್ಧತೆ ಹೇಗೆ?  ಆಶ್ರಮ ತೆರೆಯಲು ಎಷ್ಟು ವೆಚ್ಚ ಬಂದೀತು ?  ಅಲ್ಲಿ ಯಾವ ಯಾವ ಚಟುವಟಿಕೆಗಳು ನಡೆಯಬೇಕು?  ನಿಬಂಧನೆಗಳು ಯಾವುವು?  ಕೃಷಿ ಆಶ್ರಮದ ಲಾಭಗಳೇನು?

“ಹಳ್ಳಿಯ ಸಂಪನ್ಮೂಲಗಳಿಂದ ಮೌಲ್ಯವರ್ಧನೆಯ ಸಾಧ್ಯತೆಗಳು”, ” ಕೃಷಿ ಆಶ್ರಮದಲ್ಲಿ ಆರೋಗ್ಯಕರ ದಿನಚರಿ ಹೇಗೆ ಇರಬೇಕು ಮತ್ತು ಯಾಕೆ?” , ಸಣ್ಣ ರೈತರು ಕೃಷಿಯಲ್ಲಿ ಹೇಗೆ ಬದುಕನ್ನು ಕಟ್ಟಿಕೊಳ್ಳಬಹುದು? , ಸಣ್ಣ ಜಾಗದಲ್ಲಿ ವಾರ್ಷಿಕ ದ್ವಿವಾರ್ಷಿಕ, ತ್ರಿವಾರ್ಷಿಕ & ಬಹುವಾರ್ಷಿಕ ಬೆಳೆಗಳನ್ನು ಜೋಡಿಸುವ ಕ್ರಮವನ್ನು ವೀಕ್ಷಿಸುವುದು , ಶತಮೂಲಿಕ ವನ ನಿರ್ಮಾಣದ ಬಗ್ಗೆ ತಿಳಿಯುವುದು , ಕಾಡು ಮಾದರಿಯ ತೋಟದ ನಿರ್ಮಾಣದ ಬಗ್ಗೆ ವಿವರವಾದ ನೋಟ , ನೀರಿಲ್ಲದೆ, ಸ್ವಲ್ಪ ನೀರಿದ್ದಾಗ ಮತ್ತು ನೀರು ಅವಲಂಬಿತ ಕೃಷಿ ಹೇಗೆ ಮಾಡುವುದು ಎಂದು ತಿಳಿಯಲು , ದೀರ್ಘಾವಧಿ ಬೆಳೆಗಳ ಮಧ್ಯದಲ್ಲಿ ಆಯುರ್ವೇದ ಅಥವಾ ಔಷಧೀಯ ಸಸ್ಯಗಳ ಸಂಯೋಜನೆ , ಔಷಧೀಯ ಸಸ್ಯಗಳ ಬಳಕೆ ಮತ್ತು ಉತ್ಪನ್ನಗಳ ತಯಾರಿಕೆ , ಮಣ್ಣು ಹವಾಮಾನ ತಾಪಮಾನದ ಅನುಗುಣವಾಗಿ ಕೃಷಿ ವಿಧಾನಗಳು ಇತ್ಯಾದಿ ಸಂಗತಿಗಳ ಬಗ್ಗೆ ಮಾತುಕತೆ ನಡೆಯಲಿದೆ.

ಆಸಕ್ತರು ಮತ್ತು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಫೋನ್ ನಂಬರ್ ಗೆ ಸಂಪರ್ಕಿಸಿ ನೊಂದಣಿ ಮಾಡಿಸಿಕೊಳ್ಳಿ . ಕೇವಲ 50 ಮಂದಿಗೆ ಮಾತ್ರ ಅವಕಾಶ (ಇಷ್ಟು ಮಂದಿಗೆ ರಾತ್ರಿ ತಂಗಲು ವ್ಯವಸ್ಥೆ ಇದೆ). ಮೊದಲು ಪ್ರತಿಕ್ರಿಯೆ ನೀಡಿದವರಿಗೆ ಆದ್ಯತೆ. ನೊಂದಾಯಿತರಿಗೆ ಮಾತ್ರ ಅವಕಾಶ ಶುಲ್ಕ: 900/- 2 ದಿನಗಳಿಗೆ ವಸತಿ ಸಹಿತ 7259588743 ಫೋನ್ ಪೇ / ಗೂಗಲ್ ಪೇ ಸಂಪರ್ಕಿಸಿ: 7259588743 9916030272 .

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?

ಭಾರತದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಅಳೆಯಲಾಗಿದ್ದರೂ, 2021ರ ಮೌಲ್ಯಮಾಪನದಲ್ಲಿ ರಾಷ್ಟ್ರೀಯ…

2 hours ago

ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು

ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್‌ನಿಂದ 2025-26ರಲ್ಲಿ…

8 hours ago

ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!

ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…

9 hours ago

ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳಿಗಾಗಿ 3 ಹೊಸ ಕಾರಿಡಾರ್‌

ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಆನೆಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ತಮಿಳುನಾಡು ಮೂರು ಹೊಸ ಆನೆ…

19 hours ago

ಹವಾಮಾನ ವರದಿ | 29-08-2026 | ಕರ್ನಾಟಕದಲ್ಲಿ ಸೆಪ್ಟೆಂಬರ್‌ ಆರಂಭದಲ್ಲಿ ಮಳೆ ಚುರುಕಾಗುವ ಲಕ್ಷಣ…?

ಬಂಗಾಳಕೊಲ್ಲಿಯ ಬಾಂಗ್ಲಾದೇಶ ಕರಾವಳಿ ಭಾಗದಲ್ಲಿ ಮಧ್ಯಮ ಸ್ತರದ ತಿರುವಿಕೆ ಉಂಟಾಗಿದ್ದು, ಇದರ ಪ್ರಭಾವದಿಂದ…

20 hours ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ: ಪಶ್ಚಿಮಘಟ್ಟದ 1,449 ಗ್ರಾಮಗಳ ಬಗ್ಗೆ ಆತಂಕ ಬೇಡ ಎಂದ ಪರಮೇಶ್ವರ್

ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ…

2 days ago