Advertisement
ಸುದ್ದಿಗಳು

ಬಾಳೆ, ತೆಂಗು, ಬಿದಿರು, ಅನಾನಸ್ ಗಿಡದ ನಾರಿನ ಸೀರೆ | ಬಳಸಿ ಬೆಂಬಲಿಸಿ..! |

Share

ಕಳೆದ 15 ವರ್ಷಗಳಿಂದ ನೈಸರ್ಗಿಕ ನಾರಿನ ನೇಯ್ಗೆ ಉದ್ಯಮದಲ್ಲಿ  ಅನಕಪುತ್ತರ್ ನೇಕಾರರು ಕ್ರಾಂತಿಯನ್ನೇ ಉಂಟು ಮಾಡುತ್ತಿದ್ದಾರೆ.ತಮಿಳುನಾಡಿನಲ್ಲಿ ಬೆಳೆದಿರುವ ಈ ಉದ್ಯಮ ಇದೀಗ ನಶಿಸುತ್ತಿರುವ ಕೈಮಗ್ಗ ಉದ್ಯಮವಾಗಿದೆ. ಇದೀಗ ಈ ಉದ್ಯಮ ಉಳಿಸಲು ಸರ್ಕಾರಗಳು ಸಹಾಯ ಹಸ್ತ ನೀಡಬೇಕು, ಅದರ ಜೊತೆಗೇ ಗ್ರಾಹಕರು ಹೆಚ್ಚಿನ ಆಸಕ್ತಿ ವಹಿಸಬೇಕಿದೆ. ಈ ಉದ್ಯಮ ಬೆಳೆಯುವುದರಿಂದ ದೇಶೀಯತೆ ಹಾಗೂ ಕೃಷಿ ಕ್ಷೇತ್ರಕ್ಕೂ, ಗ್ರಾಮೀಣ ಅಭಿವೃದ್ಧಿಗೂ ನೆರವಾಗಲಿದೆ.

ಕಳೆದ 15 ವರ್ಷಗಳಿಂದ ನೈಸರ್ಗಿಕ ನಾರಿನ ನೇಯ್ಗೆ ಉದ್ಯಮದಲ್ಲಿ ತಮಿಳುನಾಡಿನ  ಅನಕಪುತ್ತರ್ ನೇಕಾರರು ಕ್ರಾಂತಿಯನ್ನೇ ಉಂಟು ಮಾಡುತ್ತಿದ್ದಾರೆ. 25 ರೀತಿಯ ನೈಸರ್ಗಿಕ ನಾರುಗಳಲ್ಲಿ ಅನೇಕ ರೀತಿಯ ಉಡುಪುಗಳನ್ನು ಇವರು ತಯಾರಿಸಿದ್ದಾರೆ. ಇವರು ಕೇವಲ ತಮಿಳುನಾಡಿನಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವ್ಯಾಪಾರವನ್ನು ವಿಸ್ತರಿಸಿದ್ದಾರೆ.

ವೆಟಿವರ್‌ನಿಂದ ತಯಾರಿಸಿದ ಸೀರೆಯ ಜನಪ್ರಿಯತೆಯು ಥೈಲ್ಯಾಂಡ್‌ಗೆ ಹರಡುತ್ತಿದ್ದಂತೆ, ನೇಕಾರರು ತಮ್ಮ ವ್ಯಾಪಾರ ಮತ್ತು ಜೀವನೋಪಾಯವನ್ನು ಸುಧಾರಿಸಲು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಕಾರದ ಕೊರತೆಯಿಂದ ಇದನ್ನು ದೊಡ್ಡ ಮಟ್ಟದ ಉದ್ಯಮವನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೇಕಾರರು ಬೇಸರ ವ್ಯಕ್ತಪಡಿಸಿದ್ದಾರೆ. ಅನಕಪುತ್ತರ್  ಮುನ್ಸಿಪಲ್ ಕಾರ್ಪೊರೇಷನ್ ಪ್ರದೇಶವು ಸಾಂಪ್ರದಾಯಿಕ ಕೈಮಗ್ಗ ನೇಯ್ಗೆಗೆ ಹೆಸರುವಾಸಿಯಾದ ಪಟ್ಟಣವಾಗಿದ್ದು, ನೂರಕ್ಕೂ ಹೆಚ್ಚು ನೇಕಾರ ಕುಟುಂಬಗಳನ್ನು ಹೊಂದಿದೆ. ಆದರೆ ಇತ್ತೀಚೆಗೆ ಕೈಮಗ್ಗ ಉದ್ಯಮ ನಶಿಸುತ್ತಿದ್ದು, 5000 ಮಗ್ಗಗಳಿದ್ದ ಕಡೆ ಈಗ ಕೆಲವೇ ಕೆಲವು ಮಗ್ಗಗಳಿವೆ ಎಂದು ನೇಕಾರರು ಬೇಸರವನ್ನು ತೋರ್ಪಡಿಸಿದ್ದಾರೆ.

ಇಲ್ಲಿನ ಕೈಮಗ್ಗದ ಸಂಘದ ಶೇಖರ್ ಕೇವಲ ಹತ್ತಕ್ಕಿಂತ ಕಡಿಮೆ ಜನರಿರುವ ಪುಟ್ಟ ಮನೆಯಲ್ಲಿ ಇಟ್ಟುಕೊಂಡು ಬಾಳೆ ನಾರಿನಿಂದ ಸೀರೆ ತಯಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಳೆ ನಾರಿನಿಂದ ಆರಂಭಿಸಿದ ಈ ಉದ್ಯಮವನ್ನು ಇಂದು ಇವರು ತೆಂಗಿನ ನಾರಿನ ಸೀರೆ, ಬಿದಿರು ನಾರಿನ ಸೀರೆ, ಅಕ್ಕಿ ಕಳ್ಳಿ ಸೀರೆ, ಅನಾನಸ್ ಗಿಡದ ಸೀರೆ, ಕೊಂಗೂರ ಸೀರೆ ನೇಯಲು ಆರಂಭಿಸಿದ್ದಾರೆ.  ಕಾಟನ್ ನೂಲಿನಿಂದ ಮಾಡಿದ ಕಾಟನ್ ಸೀರೆಗಿಂತ ಬಾಳೆ ನಾರಿನ ಕಾಟನ್ ಸೀರೆ ಹೆಚ್ಚು ಬಳಕೆಯಾಗುತ್ತಿದೆಯಂತೆ. ಏಕೆಂದರೆ ಇದು ದೇಹಕ್ಕೆ ಹೆಚ್ಚು ತಂಪು ಸಹ ನೀಡುತ್ತದೆ.

ಈ ಬಗ್ಗೆ ಮಾಹಿತಿ ನೀಡುವ ಶೇಖರ್‌,  ನಮ್ಮ ಉದ್ಯಮಗಳಿಗೆ ಸಾಕಷ್ಟು ಜಾಗ ಮಂಜೂರು ಮಾಡುವಂತೆ ಎಂಟು ವರ್ಷಗಳಿಂದ ಕೇಂದ್ರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ ಇದುವರೆಗೂ ನೀಡಿಲ್ಲ. ಇದು ಬೆಳವಣಿಗೆಯಾದರೆ ನೇಕಾರರಿಗೆ ಸಾಕಷ್ಟು ಆದಾಯ ಸಿಗಲಿದ್ದು, ಯುವಕರಿಗೆ ಸಹ ಉದ್ಯೋಗ ಸಿಗಲಿದೆ ಎಂದು ಹೇಳುತ್ತಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

7 hours ago

ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…

12 hours ago

ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು

2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…

17 hours ago

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?

ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…

1 day ago

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?

ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…

2 days ago

ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ

ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್‌ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್‌ ಪೂರೈಕೆಯ…

2 days ago