Advertisement
MIRROR FOCUS

ಮೂರು ವರ್ಷದ ಬಾಲಕ ಈಗ ಅತ್ಯಂತ ಕಿರಿಯ ಫಿಡೆ ರೇಟೆಡ್‌ ಚೆಸ್‌ ಆಟಗಾರ..!

Share

ಮೂರು ವರ್ಷ, ಎಂಟು ತಿಂಗಳ ಕೋಲ್ಕತ್ತಾದ ಅನೀಶ್ ಸರ್ಕಾರ್  ಇತಿಹಾಸದಲ್ಲಿ ಅತ್ಯಂತ ಕಿರಿಯ ಪಿಡೇ ರೇಟೆಡ್  ಚೆಸ್ ಆಟಗಾರ ಎಂದು ದಾಖಲಿಸಿಕೊಂಡಿದ್ದಾರೆ. ಇದೀಗ ಅನೀಶ್, 1555ನೇ ಫಿಡೆ ರೇಟಿಂಗ್ ಪಡೆದಿದ್ದಾರೆ. 5ನೇ ವಯಸ್ಸಿನ ತೇಜಸ್ ತಿವಾರಿ ಈ ಹಿಂದಿನ ಅತಿ ಕಿರಿಯ ರೇಟೆಡ್ ಆಟಗಾರ ಎನಿಸಿಕೊಂಡಿದ್ದರು.…..ಮುಂದೆ ಓದಿ….

ಜನವರಿ 26, 2021 ರಂದು ಜನಿಸಿದ ಅನೀಶ್ ಸರ್ಕಾರ್ ಅವರು ಕಳೆದ ತಿಂಗಳು ಪಶ್ಚಿಮ ಬಂಗಾಳದ 9 ವಯೋಮಿತಿ ಮುಕ್ತ ಚೆಸ್ ಟೂರ್ನಿಯಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಚೆಸ್ ಆಟಕ್ಕೆ ಪ್ರವೇಶ ಪಡೆದಿದ್ದರು. ಇಬ್ಬರು ರೇಟೆಡ್ ಆಟಗಾರರನ್ನು ಸೋಲಿಸುವ ಮೂಲಕ, ಅವರು 8 ರಲ್ಲಿ 5.5 ಅಂಕಗಳನ್ನು ಗಳಿಸಿ 24 ನೇ ಸ್ಥಾನ ಪಡೆದರು. ಪ್ರದರ್ಶನ ಪಂದ್ಯದಲ್ಲಿ, ಅವರು ಭಾರತದ ನಂ. 1 ಮತ್ತು ವಿಶ್ವದ ನಂ. 4 ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸ್ ವಿರುದ್ಧ ಆಡುವ ಅವಕಾಶವನ್ನು ಕೂಡಾ ಪಡೆದರು. ಒಂದು ವಾರದ ನಂತರ, ಅನೀಶ್ ಸರ್ಕಾರ್ ಅವರು ವೆಸ್ಟ್ ಬೆಂಗಾಲ್ ಸ್ಟೇಟ್ ಅಂಡರ್-13 ಓಪನ್‌ನಲ್ಲಿ ಸ್ಪರ್ಧಿಸಿದರು, ಈ ಪಂದ್ಯಾವಳಿಯಲ್ಲಿ ಅವರು ಐದು ರೇಟಿಂಗ್ ಆಟಗಾರರನ್ನು ಎದುರಿಸಿದರು. ಅಂತಿಮವಾಗಿ ಅವರಿಗೆ ಆರಂಭಿಕ ಫಿಡೇ ರೇಟಿಂಗ್ 1555 ಗಳಿಸಿತು. ಗುರುವಾರ ಈ ರೇಟಿಂಗ್‌ಗಳು ಅಪ್ಡೇಟ್‌ ಆಗಿದೆ.

ಅನೀಶ್‌ ಸರ್ಕಾರ ಅವರ ತಾಯಿ ರೇಷ್ಮಾ ಪಿಟಿಐ ಜೊತೆ ಮಾತನಾಡುತ್ತಾ, ನಮಗೆ ಚದುರಂಗದಲ್ಲಿ ಅಷ್ಟೊಂದು ಜ್ಞಾನ ಇಲ್ಲ. ನಾವು ಪೆಪ್ಪಾ ಪಿಗ್‌ ಕಾರ್ಟೂನ್‌ ಹಾಗೂ ಯೂಟ್ಯೂಬ್‌  ಚಾನೆಲ್‌ಗಳನ್ನು ಪರಿಚಯಿಸಿದ್ದೆವು. ಆದರೆ ಅನೀಶ್‌ ಚೆಸ್‌ ವಿಡಿಯೋಗಳನ್ನು ನೋಡುವುದು ಗಮನಿಸಿ ತರಬೇತಿಗೆ ಕಳುಹಿಸಿದೆವು ಎನ್ನುತ್ತಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದಿಲ್ಲ

ಮೈಸೂರು ಜಿಲ್ಲೆಯ ಮೇಲ್ಸೇತುವೆ ಕಾಮಗಾರಿಗಳ ವೇಳೆ ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂದು ಸಂಸದ…

8 hours ago

ರಾಜ್ಯದ ಹಲವೆಡೆ ಮಳೆ; ಕುಕನೂರಿನಲ್ಲಿ 7 ಸೆಂ.ಮೀ ಮಳೆ

ರಾಜ್ಯದ ಒಳನಾಡಿನ ಕೆಲವೆಡೆ ಮಳೆಯಾಗಿದ್ದು, ಕುಕನೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ 41…

8 hours ago

ಹವಾಮಾನ ವರದಿ | 07-05-2026 | ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು : ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ,

08.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದ ಹಲವು…

1 day ago

ಕೆಲವು ರಾಜ್ಯಗಳಲ್ಲಿ ಸುಡುವ ಬಿಸಿಲು, ಇನ್ನೂ ಕೆಲವು ಕಡೆ ಮಳೆ – ದೇಶಾದ್ಯಂತ ಹವಾಮಾನ ವೈಪರೀತ್ಯ

ದೇಶದ ಹಲವೆಡೆ ಬಿಸಿಗಾಳಿ ತೀವ್ರವಾಗಿದ್ದು, ಕೆಲ ರಾಜ್ಯಗಳಲ್ಲಿ ಮಳೆ ಹಾಗೂ ಮೋಡ ಕವಿದ…

1 day ago

ಪರಿಸರ ಸಂರಕ್ಷಣೆಯಿಂದ ಮಾತ್ರ ಸುಸ್ಥಿರ ಆರೋಗ್ಯ ಸಾಧ್ಯ

ಪರಿಸರ ಮಾಲಿನ್ಯ ಮತ್ತು ಹಸಿರು ಹೊದಿಕೆ ನಾಶದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪ್ರಕೃತಿ…

1 day ago

ಸ್ಥಳೀಯ ಸಂಸ್ಥೆ ಚುನಾವಣೆ ಶೀಘ್ರ – ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಲು ಸರ್ಕಾರ ಸಿದ್ಧವಿದೆ…

1 day ago