Advertisement
MIRROR FOCUS

ಮೂರು ವರ್ಷದ ಬಾಲಕ ಈಗ ಅತ್ಯಂತ ಕಿರಿಯ ಫಿಡೆ ರೇಟೆಡ್‌ ಚೆಸ್‌ ಆಟಗಾರ..!

Share

ಮೂರು ವರ್ಷ, ಎಂಟು ತಿಂಗಳ ಕೋಲ್ಕತ್ತಾದ ಅನೀಶ್ ಸರ್ಕಾರ್  ಇತಿಹಾಸದಲ್ಲಿ ಅತ್ಯಂತ ಕಿರಿಯ ಪಿಡೇ ರೇಟೆಡ್  ಚೆಸ್ ಆಟಗಾರ ಎಂದು ದಾಖಲಿಸಿಕೊಂಡಿದ್ದಾರೆ. ಇದೀಗ ಅನೀಶ್, 1555ನೇ ಫಿಡೆ ರೇಟಿಂಗ್ ಪಡೆದಿದ್ದಾರೆ. 5ನೇ ವಯಸ್ಸಿನ ತೇಜಸ್ ತಿವಾರಿ ಈ ಹಿಂದಿನ ಅತಿ ಕಿರಿಯ ರೇಟೆಡ್ ಆಟಗಾರ ಎನಿಸಿಕೊಂಡಿದ್ದರು.…..ಮುಂದೆ ಓದಿ….

ಜನವರಿ 26, 2021 ರಂದು ಜನಿಸಿದ ಅನೀಶ್ ಸರ್ಕಾರ್ ಅವರು ಕಳೆದ ತಿಂಗಳು ಪಶ್ಚಿಮ ಬಂಗಾಳದ 9 ವಯೋಮಿತಿ ಮುಕ್ತ ಚೆಸ್ ಟೂರ್ನಿಯಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಚೆಸ್ ಆಟಕ್ಕೆ ಪ್ರವೇಶ ಪಡೆದಿದ್ದರು. ಇಬ್ಬರು ರೇಟೆಡ್ ಆಟಗಾರರನ್ನು ಸೋಲಿಸುವ ಮೂಲಕ, ಅವರು 8 ರಲ್ಲಿ 5.5 ಅಂಕಗಳನ್ನು ಗಳಿಸಿ 24 ನೇ ಸ್ಥಾನ ಪಡೆದರು. ಪ್ರದರ್ಶನ ಪಂದ್ಯದಲ್ಲಿ, ಅವರು ಭಾರತದ ನಂ. 1 ಮತ್ತು ವಿಶ್ವದ ನಂ. 4 ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸ್ ವಿರುದ್ಧ ಆಡುವ ಅವಕಾಶವನ್ನು ಕೂಡಾ ಪಡೆದರು. ಒಂದು ವಾರದ ನಂತರ, ಅನೀಶ್ ಸರ್ಕಾರ್ ಅವರು ವೆಸ್ಟ್ ಬೆಂಗಾಲ್ ಸ್ಟೇಟ್ ಅಂಡರ್-13 ಓಪನ್‌ನಲ್ಲಿ ಸ್ಪರ್ಧಿಸಿದರು, ಈ ಪಂದ್ಯಾವಳಿಯಲ್ಲಿ ಅವರು ಐದು ರೇಟಿಂಗ್ ಆಟಗಾರರನ್ನು ಎದುರಿಸಿದರು. ಅಂತಿಮವಾಗಿ ಅವರಿಗೆ ಆರಂಭಿಕ ಫಿಡೇ ರೇಟಿಂಗ್ 1555 ಗಳಿಸಿತು. ಗುರುವಾರ ಈ ರೇಟಿಂಗ್‌ಗಳು ಅಪ್ಡೇಟ್‌ ಆಗಿದೆ.

ಅನೀಶ್‌ ಸರ್ಕಾರ ಅವರ ತಾಯಿ ರೇಷ್ಮಾ ಪಿಟಿಐ ಜೊತೆ ಮಾತನಾಡುತ್ತಾ, ನಮಗೆ ಚದುರಂಗದಲ್ಲಿ ಅಷ್ಟೊಂದು ಜ್ಞಾನ ಇಲ್ಲ. ನಾವು ಪೆಪ್ಪಾ ಪಿಗ್‌ ಕಾರ್ಟೂನ್‌ ಹಾಗೂ ಯೂಟ್ಯೂಬ್‌  ಚಾನೆಲ್‌ಗಳನ್ನು ಪರಿಚಯಿಸಿದ್ದೆವು. ಆದರೆ ಅನೀಶ್‌ ಚೆಸ್‌ ವಿಡಿಯೋಗಳನ್ನು ನೋಡುವುದು ಗಮನಿಸಿ ತರಬೇತಿಗೆ ಕಳುಹಿಸಿದೆವು ಎನ್ನುತ್ತಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಾರೀ ಮಳೆ ಹಿನ್ನೆಲೆ – ಆಗಸ್ಟ್‌ 1ರಂದು ದಕ್ಷಿಣ ಕನ್ನಡದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಶಾಲೆ, ಪಿಯು, ಐಟಿಐ…

9 minutes ago

ಹವಾಮಾನ ವರದಿ | 31-06-2026 | ಆಗಸ್ಟ್ 4ಕ್ಕೆ ಇನ್ನೊಂದು ವಾಯುಭಾರ ಕುಸಿತ ಸಾಧ್ಯತೆ..?

ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 1ರವರೆಗೆ ಬಿಟ್ಟು ಬಿಟ್ಟು ಉತ್ತಮ ಮಳೆಯ ಮುನ್ಸೂಚನೆ…

2 hours ago

ಸುಳ್ಯ ಸುತ್ತಮುತ್ತ ಭಾರೀ ಮಳೆ – ಬಾಳುಗೋಡಿನಲ್ಲಿ ಈ ವರ್ಷದ ಮೊದಲ ಸೇತುವೆ ಮುಳುಗಡೆ, ಹೊಳೆ-ತೋಡುಗಳು ತುಂಬಿ ಹರಿವು

ಸುಳ್ಯ ತಾಲೂಕಿನ ಬಾಳುಗೋಡು, ಹರಿಹರ, ಬಳ್ಪ, ಗುತ್ತಿಗಾರು, ಸುಬ್ರಹ್ಮಣ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ…

3 hours ago

ಹಲಸಿನ ಬೀಜದಿಂದ ಖನಿಜಾಂಶ ಸಮೃದ್ಧ ಆಹಾರ – ಬಾಂಗ್ಲಾದೇಶದ ವಿಜ್ಞಾನಿಗಳಿಂದ ಹೊಸ ತಂತ್ರಜ್ಞಾನಕ್ಕೆ ಪೇಟೆಂಟ್

ಬಾಂಗ್ಲಾದೇಶದ ವಿಜ್ಞಾನಿಗಳು ಹಲಸಿನ ಬೀಜದಿಂದ ಖನಿಜಾಂಶ ಸಮೃದ್ಧ ಆಹಾರ ತಯಾರಿಸುವ ತಂತ್ರಜ್ಞಾನಕ್ಕೆ ಪೇಟೆಂಟ್…

10 hours ago

ಹೊಂಬಾಳೆ ಕಳ್ಳರ ಹಾವಳಿ : ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದ ಕಳ್ಳತನ

ದೊಡ್ಡಬಳ್ಳಾಪುರ ಭಾಗದಲ್ಲಿ ಅಡಿಕೆ ಹೊಂಬಾಳೆಗಳನ್ನು ಕಳ್ಳರು ಕದ್ದೊಯ್ಯುತ್ತಿರುವ ಘಟನೆಗಳು ಹೆಚ್ಚಾಗಿವೆ. ಇದರಿಂದ ರೈತರು…

11 hours ago