Opinion

ಅನ್ನ ಬ್ರಹ್ಮ ಸ್ವರೂಪಿ | ಯಾವ ಕಾರಣಕ್ಕೂ ಭಗವಂತನಿಗೆ ಅವಮಾನಿಸಬೇಡಿ…!

Share

ಒಬ್ಬರೇ ಊಟ ಮಾಡಬಾರದು. ತಾಯಿ, ಪತ್ನಿ ಅಥವಾ ಮಕ್ಕಳು ಊಟವನ್ನು ಬಡಿಸಬೇಕು. ತಡರಾತ್ರಿ ಊಟ ಮಾಡಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಮಧ್ಯರಾತ್ರಿಯ ಊಟವನ್ನು ರಾಕ್ಷಸ ಭೋಜನ ಎಂದು ಹೇಳಲಾಗುತ್ತದೆ. ಊಟ ಮಾಡುವಾಗ ಬೇಕಿರುವಷ್ಟನ್ನೇ ಹಾಕಿಸಿಕೊಳ್ಳಬೇಕು. ಗಬಗಬನೆ ತಿನ್ನುವುದು, ಅತಿ ನಿಧಾನವಾಗಿ ಊಟ ಮಾಡುವುದು; ಇವರೆಡೂ ಸರಿಯಲ್ಲ. ಊಟಕ್ಕೆ ಕುಳಿತವರು ಬಡಿಸಿದ ಎಲ್ಲವನ್ನೂ ತಿನ್ನಬೇಕು. ಏಕೆಂದರೆ ಅನ್ನ ಎಂದರೆ ಪರಬ್ರಹ್ಮ ಸ್ವರೂಪ,

Advertisement

ಬೇಕಿರುವಷ್ಟನ್ನೇ ಹಾಕಿಸಿಕೊಳ್ಳಬೇಕು. ನಾವು ಅನ್ನಕ್ಕಾಗಿ ಕಾಯಬೇಕೇ ಹೊರತು ಅನ್ನ ನಮಗಾಗಿ ಕಾಯಬಾರದು. ಬಡಿಸಿದ ಎಲೆಯನ್ನು ಎಂದಿಗೂ ಖಾಲಿಬಿಡಬೇಡಿ. ನೀವು ಹಾಗೆ ಮಾಡಿದರೆ ಭವಿಷ್ಯದಲ್ಲಿ ಬಡತನವನ್ನು ಎದುರಿಸುವ ಅವಕಾಶ ಇರುತ್ತದೆ.

ನಮ್ಮ ಊಟ ಹೀಗಿರಲಿ:

*ತಟ್ಟೆಯಲ್ಲಿ ಅನ್ನ ಬಡಿಸಿದ ತಕ್ಷಣ ಊಟ ಪ್ರಾರಂಭಿಸಿ.
*ಯಾವುದೇ ಕಾರಣಕ್ಕೂ ಊಟವನ್ನು ಕಾಯಿಸಬೇಡಿ
*ಊಟಕ್ಕಾಗಿ ನೀವು ಕಾಯ್ದರೆ ಪರವಾಗಿಲ್ಲ.
*ಊಟಕ್ಕೆ ಕುಳಿತಾಗ ಎಂದಿಗೂ ಎಡಗೈಯನ್ನು ನೆಲಕ್ಕೆ ಊರ ಬೇಡಿರಿ.
*ನಿಮಗೆ ಎಷ್ಟು ಅವಶ್ಯಕವೋ ಅಷ್ಟನ್ನೇ ಹಾಕಿಸಿಕೊಳ್ಳಿ.
*ತಟ್ಟೆಯಲ್ಲಿ ಎಂದಿಗೂ ಅನ್ನವನ್ನು ಚೆಲ್ಲಬೇಡಿ.
*ಊಟ ಮಾಡುವಾಗ ಊಟದ ಕೈಯನ್ನು ಜಾಡಿಸಬೇಡಿರಿ.
*ಊಟ ಮಾಡುವಾಗ ಮಾತನಾಡಬೇಡಿ. ಮಾತನಾಡುವ ಅವಶ್ಯಕತೆಯಿದ್ದರೆ ಅವಶ್ಯಕತೆ ಇದ್ದಷ್ಟೇ ಮಾತನಾಡಿ.
*ನಡುನಡುವೆ ನೀರು ಕುಡಿಯಿರಿ. ಇದು ಆಹಾರದ ಪಚನ ಕ್ರಿಯೆಗೆ ಸಹಕಾರಿ.
*ಅಡುಗೆಯನ್ನು ಮನೆಯವರು – ಅಮ್ಮ-ಅಕ್ಕ-ಹೆಂಡತಿ ಬಹಳಷ್ಟು ಇಷ್ಟಪಟ್ಟು ಶ್ರಮ ವಹಿಸಿ ತಯಾರಿಸಿರುತ್ತಾರೆ ಎಂಬುದನ್ನು ಎಂದಿಗೂ ಮರೆಯಬೇಡಿ. ಅವರಿಗೆ ಅವಮಾನವಾಗುವಂತೆ ಅಡುಗೆಯ ಬಗ್ಗೆ ವಿಮರ್ಶೆ ಮಾಡಬೇಡಿ.
*ಉಣ್ಣುವಾಗ ತಟ್ಟೆಯ ಕೆಳಗೆ ಅನ್ನವನ್ನು ಚೆಲ್ಲಿಕೊಂಡು ಉಣ್ಣಬೇಡಿ.
*ಆಕಸ್ಮಾತಾಗಿ ತುತ್ತು ಕೆಳಕ್ಕೆ ಬಿದ್ದರೆ ಯಾವುದೇ ಸಂಕೋಚವಿಲ್ಲದೆ ಎತ್ತಿಕೊಂಡು, ಕಣ್ಣಿಗೆ ಒತ್ತಿಕೊಂಡು ಬಾಯಿಗೆ ಹಾಕಿಕೊಳ್ಳಿ.
*ತುತ್ತಿನ ಬಗ್ಗೆ ಅಲಕ್ಷ್ಯ, ತಾತ್ಸಾರ ಮಾಡಿದರೆ ಮುಂದೊಂದು ದಿನ ಒಂದೊಂದು ತುತ್ತಿಗೂ ಪರದಾಡಬೇಕಾದೀತು.
*ಉಣ್ಣುವಾಗ ನಿಮ್ಮ ಎಂಜಿಲನ್ನು ಪಕ್ಕದ ತಟ್ಟೆಗೆ ಹಾಕುವುದು ಅಥವಾ ಅವರಿಂದ ನೀವು ತೆಗೆದುಕೊಳ್ಳುವುದನ್ನು ಮಾಡಬೇಡಿ.
*ಅನ್ನ ಬ್ರಹ್ಮ ಸ್ವರೂಪಿ. ಯಾವ ಕಾರಣಕ್ಕೂ ಭಗವಂತನಿಗೆ ಅವಮಾನಿಸಬೇಡಿ.

(Social Media)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ

ಅಕ್ರಮವಾಗಿ ಸುಮಾರು 68 ಟನ್‌ ಅಡಿಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಅಸ್ಸಾಂ ಪೊಲೀಸರು…

13 hours ago

ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!

ಬದುಕಿನ ಒಂದೊಂದು ಅಂಗವೂ ‘ಕಲಾತ್ಮಕ’. ಒದಗುವ ಸುಭಗತನವು ಅನುಭವವೇದ್ಯ. ಅಡುಗೆ ಮನೆಯು ಬರೇ…

13 hours ago

2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜೋತಿಷಿಗಳನ್ನು ಸಂಪರ್ಕಿಸಿ 9535156490

14 hours ago

ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |

ಬೇಸಿಗೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ಪ್ರಾಣಿಗಳು ಸುಡುಬಿಸಿಲಿಗೆ ಕಂಗಾಲಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ…

23 hours ago

ತೊಗರಿ ಉತ್ಪನ್ನ ಖರೀದಿ ಅವಧಿ ಎ.25 ರವರೆಗೆ ವಿಸ್ತರಣೆ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಖರೀದಿಸುವ…

24 hours ago

ತಾಂತ್ರಿಕ ಸಮಸ್ಯೆ | ದೇಶಾದ್ಯಂತ ಯುಪಿಐ, ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ

ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಏಕೀಕೃತ ಪಾವತಿ ಇಂಟರ್ ಫೇಸ್ - ಯುಪಿಐ ಸೇವೆಯ…

24 hours ago