MIRROR FOCUS

ಅನ್ನಭಾಗ್ಯ ಯೋಜನೆಯಡಿ 8,433 ಕೋಟಿ ರೂಪಾಯಿ ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅನ್ನಭಾಗ್ಯ ಯೋಜನೆಯಡಿ ಕಳೆದ  ವರ್ಷದ ಜುಲೈ ನಿಂದ ಈ ವರ್ಷದ ಜುಲೈ ಅಂತ್ಯದವರೆಗೂ 8 ಸಾವಿರದ 433.11 ಕೋಟಿ ರೂಪಾಯಿ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ ಎಂದು  ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ  ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ  ತಿಳಿಸಿದ್ದಾರೆ.

Advertisement

ಪ್ರತಿ ಕೆಜಿ  ಅಕ್ಕಿಗೆ  34 ರೂಪಾಯಿಯಂತೆ  5 ಕೆಜಿ ಅಕ್ಕಿಗೆ  ಪ್ರತಿ ಸದಸ್ಯರಿಗೆ  170 ರೂಪಾಯಿಯಂತೆ ಕುಟುಂಬದ ಮುಖ್ಯಸ್ಥರ  ಬ್ಯಾಂಕ್ ಖಾತೆ ಹಣ ವರ್ಗಾವಣೆ ಮಾಡಲಾಗುತ್ತದೆ. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ನೀಡಬೇಕಾಗಿರುವ ಅಕ್ಕಿ ಬದಲಾಗಿ ನೇರ  ನಗದು ಬದಲಾವಣೆ ಮುಂದುವರೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕಳೆದ ಆರು ತಿಂಗಳಿನಿಂದ  ಪಡಿತರ ಪಡೆಯದೇ ಇರುವುದು, ಒಂದು ವರ್ಷದಿಂದ ನೇರ ನಗದು ಸ್ವೀಕರಿಸದೇ ಇರುವುದು, ಆದಾಯ ತೆರಿಗೆ ಪಾವತಿ ಮಾಡುತ್ತಿರುವ  ವಾರ್ಷಿಕ ವರಮಾನ ಹೆಚ್ಚುತ್ತಿರುವುದು  ಸೇರಿದಂತೆ  ವಿವಿಧ ಕಾರಣಗಳಿಂದ  ಸುಮಾರು  20 ಲಕ್ಷಕ್ಕೂ ಹೆಚ್ಚು  ಅನರ್ಹ ಪಡಿತರ ಕಾರ್ಡ್ ಗಳಿದ್ದು ಅವುಗಳಲ್ಲಿ  ಕನಿಷ್ಠ 10ರಿಂದ  12 ಲಕ್ಷ ಅನರ್ಹ  ಪಡಿತರ ಚೀಟಿಗಳು  ಪತ್ತೆಯಾಗಬಹುದು. ಅದಕ್ಕೆ  ಅನುಗುಣವಾಗಿ  ಅರ್ಜಿ ಆಹ್ವಾನಿಸಿ  ಹೊಸ ಪಡಿತರ ಚೀಟಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ಆಹಾರ ವ್ಯರ್ಥ  ತಡೆಯುವ ಉದ್ದೇಶದಿಂದ  ಅಂತಾರಾಷ್ಟ್ರೀಯ ಮಟ್ಟದ  ಸಮ್ಮೇಳನವನ್ನು ಆಯೋಜಿಸಲು  ಸರ್ಕಾರ ಉದ್ದೇಶಿಸಿದೆ. ಈ ಸಮ್ಮೇಳನದಲ್ಲಿ ಕೃಷಿ, ಆರೋಗ್ಯ, ಆಹಾರ ತಜ್ಞರು  ಹಾಗೂ  ಆಹಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಎನ್ ಜಿಒಗಳನ್ನು ಆಹ್ವಾನಿಸಲಾಗುವುದು.  ‘ಎಲ್ಲರಿಗೂ ಆಹಾರ  ಹಾಗೂ ಉತ್ತಮ ಜೀವನ ಮತ್ತು  ಉತ್ತಮ ಭವಿಷ್ಯಕ್ಕಾಗಿ  ಆಹಾರದ ಹಕ್ಕು’ ಘೋಷ ವಾಕ್ಯದಲ್ಲಿ  ಸಮ್ಮೇಳನ ಆಯೋಜಿಸಲು  ನಿರ್ಧರಿಸಲಾಗಿದೆ ಎಂದು ತಿಳಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಇಳಿಮುಖ

ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ಹಲವೆಡೆ ಅಬ್ಬರಿಸಿದ್ದ ಮಳೆ ಇಂದು ಇಳಿಮುಖವಾಗಿದೆ. ಕರಾವಳಿ…

7 hours ago

ವಿದ್ಯಾರ್ಥಿಗಳ ಓದಿನ ವಿಷಯದ ಆಯ್ಕೆ ಹೇಗಿರಬೇಕು..?

ಹಲವಾರು ವಿದ್ಯಾರ್ಥಿಗಳಿಗೆ, ಪೋಷಕರಿಗೆ ತಮ್ಮ ಮಕ್ಕಳು ಎಸ್‌ಎಸ್‌ ಎಲ್‌ಸಿ , ಪಿಯುಸಿ ಆದ…

7 hours ago

ರೈತರು ಗಮನಿಸಿ | ಭತ್ತದ ಬೆಳೆಗೆ ಫಸಲ್‌ ಭಿಮಾ ಯೋಜನೆ ವಿಮಾ ಪ್ರೀಮಿಯಂ ಪಾವತಿ ಪ್ರಾರಂಭ

ಭತ್ತದ ಬೆಳೆ ಬೆಳೆಯುವ ರೈತರಿಗೆ ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆಯ ವಿಮಾ ಪ್ರೀಮಿಯಂ…

7 hours ago

ಕೇರಳದ ವಯನಾಡಿನಲ್ಲಿ ಧಾರಾಕಾರ ಮಳೆ | ಕಬಿನಿ ಜಲಾಶಯದ ಒಳಹರಿವಿನಲ್ಲಿ ಏರಿಕೆ

ಕೇರಳದ ವಯನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ  ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ…

8 hours ago

ಪ್ಲೈಓವರ್‌ ನಿರ್ಮಾಣದ ಬಳಿಕ ಹೇಗಿದೆ ಕಲ್ಲಡ್ಕ..?

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ಪ್ಲೈಓವರ್‌ ಮೂಲಕ ವಾಹನ ಓಡಾಟ ಆರಂಭವಾಗಿದೆ. ಹೀಗಾಗಿ…

8 hours ago

ಗೇರು ವಾಣಿಜ್ಯ ಬೆಳೆ ಗ್ರಾಮೀಣ ಭಾಗದ ರೈತರ ಮೂಲಸಂಪತ್ತು

‌ ಗೇರು ಒಂದು ವಾಣಿಜ್ಯ ಬೆಳೆಯಾಗಿದ್ದು ಇದು ಗ್ರಾಮೀಣ ಭಾಗದ ರೈತರ ಮೂಲಸಂಪತ್ತು.…

8 hours ago