Advertisement
MIRROR FOCUS

ಅನಂತಪುರ ಕ್ಷೇತ್ರ ಸರೋವರದಲ್ಲಿ ದಿಢೀರ್ ಪ್ರತ್ಯಕ್ಷಗೊಂಡಿದೆ ಮತ್ತೊಂದು ಮರಿ ಮೊಸಳೆ..!

Share

ಯಾರೇನೇ ಅನ್ನಲಿ..? ಇದು ಕಲಿಗಾಲದಲ್ಲೂ ಆವರ್ತಿಸಿದ ಪವಾಡವಲ್ಲದೇ ಮತ್ತೇನು…??? ನಮ್ಮೂರಿನ ಸರೋವರ ಕ್ಷೇತ್ರ ಅನಂತಪುರದಲ್ಲಿ ಭಕ್ತರ ಕರೆಗೆ ಓಗೊಡುತ್ತಿದ್ದ, ಕಣ್ಕಂಡ ದೈವಸದೃಶವಾಗಿದ್ದ ಸಸ್ಯಾಹಾರಿ ಮೊಸಳೆ ಬಬಿಯ ಬ್ರಹ್ಮೈಕ್ಯವಾಗಿ ಭರ್ತಿ ಒಂದು ವರ್ಷಾಂತಿಕ ದಾಟಿದ ಬೆನ್ನಲ್ಲೇ ಬರಿದಾಗಿದ್ದ ಕ್ಷೇತ್ರ ಸರೋವರದಲ್ಲಿ ಮತ್ತೊಂದು ಮರಿ ಮೊಸಳೆ ಕಂಡುಬಂದಿದೆ..!

Advertisement

ಇದು ಪ್ರಪ್ರಥಮ ಕಾಣಸಿಕ್ಕುದಿದೇ ಕಾಞಂಗಾಡಿನಿಂದ ಬಂದ ಭಕ್ತ ಕುಟುಂಬಕ್ಕೆ. ಇತ್ತೀಚಿಗೆ ಅವರು ಕ್ಷೇತ್ರಕ್ಕೆ ಬಂದಿದ್ದರು. ಇವರ ಜತೆಗಿದ್ದ ಮಗುವೊಂದು “ನನಗೆ ಮೊಸಳೆ ನೋಡಬೇಕೆಂದು” ರಚ್ಚೆ ಹಿಡಿಯಿತು. “ಮೊಸಳೆ ಇಲ್ಲ ಮಗಾ… ” ಅಮ್ಮ ಎಷ್ಟೇ ಸತಾಯಿಸಿದರೂ ಮಗು ಕೇಳಲಿಲ್ಲ.. ಇದೇ ಸಂದರ್ಭಕ್ಕೆ ಕ್ಷೇತ್ರದ ಗುಹೆಯಿಂದ ಮೊಸಳೆ ಹೊರಬರಬೇಕೇ…???!

ಅವರದನ್ನು ಮೊಬೈಲಿನಲ್ಲಿ ಚಿತ್ರಿಸಿದರು. ಕ್ಷೇತ್ರದ ಸಂಬಂಧಪಟ್ಟವರಿಗೆಲ್ಲ ತಿಳಿಸಿದ್ದರು. ಆದರೆ ಕ್ಷೇತ್ರದ ಸಿಬಂದಿಗಳಿಗೋ, ಭಕ್ತರಿಗೋ ಅದು ದರ್ಶನ ನೀಡಿರಲೇ ಇಲ್ಲ..! ಈ ಕಾರಣದಿಂದಲೇ ಇದು ಜಿಜ್ಞಾಸೆಗೂ ಒಳಗಾಯಿತು. ಮೊಸಳೆಯೇ ಹೌದೋ.. ಎಂದು ಸಂದೇಹವೂ ಹುಟ್ಟಿತು. ವದಂತಿಗಳೂ ಹರಡಿತು. ಈ ಕಾರಣದಿಂದಲೇ.. ಮೊಸಳೆಯನ್ನು ಮೊದಲ ಬಾರಿಗೆ ಕಂಡ ಕಾಞಂಗಾಡಿನ ಕುಟುಂಬ ಮತ್ತೆ ಅನಂತಪುರ ಕ್ಷೇತ್ರಕ್ಕೆ ಬಂದರು. ಎರಡನೇ ಬಾರಿಗೂ ಅವರಿಗೆ ದರ್ಶನ ನೀಡುವುದರೊಂದಿಗೆ ಕ್ಷೇತ್ರದ ಅರ್ಚಕ, ಪರಿವಾರಕ್ಕೆಲ್ಲ ಮೊಸಳೆಯ ಮರಿ ಸ್ಪಷ್ಟವಾಗಿ ಕಾಣಸಿಕ್ಕಿದೆ.

ಇದರೊಂದಿಗೆ 75ವರ್ಷಗಳ ಕಾಲ ನಿರುಪದ್ರವಿಯಾಗಿ ಬದುಕಿದ್ದ “ಬಬಿಯ”ನ ಜಾಗಕ್ಕೆ ಮತ್ತೊಂದು ಮರಿ ಮೊಸಳೆ ತಾನಾಗಿಯೇ ಬಂದಂತಾಗಿದೆ! ಹಿಂದೆ ಕೆರೆಯಲ್ಲಿದ್ದ ಮೊಸಳೆಯನ್ನು ಬ್ರಿಟೀಷರು ಗುಂಡಿಟ್ಟು ಕೊಂದಿದ್ದರಂತೆ. ತದನಂತರ ತಾನಾಗಿಯೇ ಮತ್ತೊಂದು ಮೊಸಳೆ ಇಲ್ಲಿ ಪ್ರತ್ಯಕ್ಷಗೊಂಡಿತ್ತು. ಆತನೇ ಇತ್ತೀಚಿಗೆ ಅಗಲಿದ ಬಬಿಯ. ಅದಗಲಿ ವರ್ಷವೊಂದು ಪೂರೈಸಿದಾಗಲೇ ಮರಿ ಮೊಸಳೆ ಗೋಚರವಾಗಿದೆ. ಕ್ಷೇತ್ರದ ಸಾನ್ನಿಧ್ಯವನ್ನು ಮತ್ತೆ ಎತ್ತಿ ಹಿಡಿದಿದೆ.. ಇದಲ್ಲವೇ ಈ ದೀಪಾವಳಿಯ ಸಂಭ್ರಮ??

ಹಾಗೆಂದು ಈ ಮರಿ ಮೊಸಳೆಗೆ ಜನರೊಂದಿಗೆ ಬೆಸೆದು, ಬೆರೆತು ಅಭ್ಯಾಸ ಆಗಿಲ್ಲ. ಇದು ಜನರ ಸದ್ದು ಕೇಳಿದರೆ ಪೊಟರೆಯೊಳಗೆ ಜಾರುತ್ತದೆ. ಯಾರಿಲ್ಲದಿದ್ದಾಗ ಅದೃಷ್ಟಶಾಲಿಯ ಕಣ್ಣಿಗೆ ಬೀಳುತ್ತದೆ. ಆತ ಅದೃಷ್ಟಶಾಲಿ.. ಒಟ್ಟಂದದಲ್ಲಿ ಬಬಿಯ ನ ಪುನರಾಗಮನದ ಪವಾಡ ಸದೃಶ ಘಟನೆಯಿಂದ ಭಕ್ತ ಮನಸುಗಳೆಲ್ಲ ಆನಂದ ತುಂದಿಲವಾಗಿದೆ..

– ಎಂ. ನಾ. ಚಂಬಲ್ತಿಮಾರ್, 9895508277

It seems that another baby crocodile came to the place of "Babiya" who lived harmlessly for 75 years! Like the British shot and killed the crocodile in the lake earlier. Then another crocodile appeared here by itself. He is the recently departed Babiya. The baby crocodile is visible only when it is one year old.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 19-02-2026 | ಕರಾವಳಿ–ಮಲೆನಾಡಿನಲ್ಲಿ ಫೆ.21 ರಿಂದ ಮಳೆ ಸಾಧ್ಯತೆ ಹೆಚ್ಚಳ

ಬಂಗಾಳಕೊಲ್ಲಿಯಲ್ಲಿ ಉಂಟಾಗುವ ತಿರುವಿಕೆಯ ಪರಿಣಾಮವಾಗಿ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ…

7 hours ago

ಬೆಂಗಳೂರು ಕಸ ವಿಲೇವಾರಿ ತಡೆದರೆ ಕಠಿಣ ಕ್ರಮ : ಎಸ್ಮಾ ಕಾಯ್ದೆ ಜಾರಿ ಎಚ್ಚರಿಕೆ

ಬೆಂಗಳೂರು ಕಸ ವಿಲೇವಾರಿಗೆ ಅಡ್ಡಿಪಡಿಸುವವರ ವಿರುದ್ಧ ಎಸ್ಮಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಡಿ.ಕೆ.…

12 hours ago

ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ – WHOಗೆ ಅಧಿಕೃತ ಮನವಿ ಮಾಡಿದ ಉತ್ತರ ಕನ್ನಡ ಸಂಸದ

ಅಡಿಕೆಯನ್ನು Group-1 ಕ್ಯಾನ್ಸರ್ ಕಾರಕ ಪಟ್ಟಿಯಿಂದ ಮರುಪರಿಶೀಲನೆ ಮಾಡಲು WHO ಮತ್ತು IARCಗೆ…

13 hours ago

ಕ್ಯಾಂಪ್ಕೊಗೆ ಸಂಸದ ಬ್ರಿಜೇಶ್ ಚೌಟ ಭೇಟಿ, ಅಡಿಕೆ ಸಮಸ್ಯೆಗಳ ಕುರಿತು ಚರ್ಚೆ

ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಸಂಸದ ಬ್ರಿಜೇಶ್ ಚೌಟರೊಂದಿಗೆ ಅಡಿಕೆ ಬೆಳೆಗಾರರ ಸಮಸ್ಯೆಗಳು,…

13 hours ago

ಹವಾಮಾನ ವರದಿ | 18-02-2026 | ಕರ್ನಾಟಕದಲ್ಲಿ ಬಿಸಿಲಿನ ನಡುವೆ ತುಂತುರು ಮಳೆ ಸಾಧ್ಯತೆ

19.02.2026 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

21 hours ago

ಅಡಿಕೆ ವೈಜ್ಞಾನಿಕ ವಿಶ್ಲೇಷಣೆಯ ಪುಸ್ತಕ “ARECANUT” ಬಿಡುಗಡೆ

 ಮಂಗಳೂರು ಕ್ಯಾಂಪ್ಕೊ ಕೇಂದ್ರ ಕಚೇರಿಯಲ್ಲಿ ಅಡಿಕೆ ಕುರಿತಾದ ವೈಜ್ಞಾನಿಕ ಸಂಶೋಧನಾ ಪುಸ್ತಕ"ARECANUT" ಬಿಡುಗಡೆ…

21 hours ago