Advertisement
MIRROR FOCUS

ಅನಂತಪುರ ಕ್ಷೇತ್ರ ಸರೋವರದಲ್ಲಿ ದಿಢೀರ್ ಪ್ರತ್ಯಕ್ಷಗೊಂಡಿದೆ ಮತ್ತೊಂದು ಮರಿ ಮೊಸಳೆ..!

Share

ಯಾರೇನೇ ಅನ್ನಲಿ..? ಇದು ಕಲಿಗಾಲದಲ್ಲೂ ಆವರ್ತಿಸಿದ ಪವಾಡವಲ್ಲದೇ ಮತ್ತೇನು…??? ನಮ್ಮೂರಿನ ಸರೋವರ ಕ್ಷೇತ್ರ ಅನಂತಪುರದಲ್ಲಿ ಭಕ್ತರ ಕರೆಗೆ ಓಗೊಡುತ್ತಿದ್ದ, ಕಣ್ಕಂಡ ದೈವಸದೃಶವಾಗಿದ್ದ ಸಸ್ಯಾಹಾರಿ ಮೊಸಳೆ ಬಬಿಯ ಬ್ರಹ್ಮೈಕ್ಯವಾಗಿ ಭರ್ತಿ ಒಂದು ವರ್ಷಾಂತಿಕ ದಾಟಿದ ಬೆನ್ನಲ್ಲೇ ಬರಿದಾಗಿದ್ದ ಕ್ಷೇತ್ರ ಸರೋವರದಲ್ಲಿ ಮತ್ತೊಂದು ಮರಿ ಮೊಸಳೆ ಕಂಡುಬಂದಿದೆ..!

ಇದು ಪ್ರಪ್ರಥಮ ಕಾಣಸಿಕ್ಕುದಿದೇ ಕಾಞಂಗಾಡಿನಿಂದ ಬಂದ ಭಕ್ತ ಕುಟುಂಬಕ್ಕೆ. ಇತ್ತೀಚಿಗೆ ಅವರು ಕ್ಷೇತ್ರಕ್ಕೆ ಬಂದಿದ್ದರು. ಇವರ ಜತೆಗಿದ್ದ ಮಗುವೊಂದು “ನನಗೆ ಮೊಸಳೆ ನೋಡಬೇಕೆಂದು” ರಚ್ಚೆ ಹಿಡಿಯಿತು. “ಮೊಸಳೆ ಇಲ್ಲ ಮಗಾ… ” ಅಮ್ಮ ಎಷ್ಟೇ ಸತಾಯಿಸಿದರೂ ಮಗು ಕೇಳಲಿಲ್ಲ.. ಇದೇ ಸಂದರ್ಭಕ್ಕೆ ಕ್ಷೇತ್ರದ ಗುಹೆಯಿಂದ ಮೊಸಳೆ ಹೊರಬರಬೇಕೇ…???!

ಅವರದನ್ನು ಮೊಬೈಲಿನಲ್ಲಿ ಚಿತ್ರಿಸಿದರು. ಕ್ಷೇತ್ರದ ಸಂಬಂಧಪಟ್ಟವರಿಗೆಲ್ಲ ತಿಳಿಸಿದ್ದರು. ಆದರೆ ಕ್ಷೇತ್ರದ ಸಿಬಂದಿಗಳಿಗೋ, ಭಕ್ತರಿಗೋ ಅದು ದರ್ಶನ ನೀಡಿರಲೇ ಇಲ್ಲ..! ಈ ಕಾರಣದಿಂದಲೇ ಇದು ಜಿಜ್ಞಾಸೆಗೂ ಒಳಗಾಯಿತು. ಮೊಸಳೆಯೇ ಹೌದೋ.. ಎಂದು ಸಂದೇಹವೂ ಹುಟ್ಟಿತು. ವದಂತಿಗಳೂ ಹರಡಿತು. ಈ ಕಾರಣದಿಂದಲೇ.. ಮೊಸಳೆಯನ್ನು ಮೊದಲ ಬಾರಿಗೆ ಕಂಡ ಕಾಞಂಗಾಡಿನ ಕುಟುಂಬ ಮತ್ತೆ ಅನಂತಪುರ ಕ್ಷೇತ್ರಕ್ಕೆ ಬಂದರು. ಎರಡನೇ ಬಾರಿಗೂ ಅವರಿಗೆ ದರ್ಶನ ನೀಡುವುದರೊಂದಿಗೆ ಕ್ಷೇತ್ರದ ಅರ್ಚಕ, ಪರಿವಾರಕ್ಕೆಲ್ಲ ಮೊಸಳೆಯ ಮರಿ ಸ್ಪಷ್ಟವಾಗಿ ಕಾಣಸಿಕ್ಕಿದೆ.

ಇದರೊಂದಿಗೆ 75ವರ್ಷಗಳ ಕಾಲ ನಿರುಪದ್ರವಿಯಾಗಿ ಬದುಕಿದ್ದ “ಬಬಿಯ”ನ ಜಾಗಕ್ಕೆ ಮತ್ತೊಂದು ಮರಿ ಮೊಸಳೆ ತಾನಾಗಿಯೇ ಬಂದಂತಾಗಿದೆ! ಹಿಂದೆ ಕೆರೆಯಲ್ಲಿದ್ದ ಮೊಸಳೆಯನ್ನು ಬ್ರಿಟೀಷರು ಗುಂಡಿಟ್ಟು ಕೊಂದಿದ್ದರಂತೆ. ತದನಂತರ ತಾನಾಗಿಯೇ ಮತ್ತೊಂದು ಮೊಸಳೆ ಇಲ್ಲಿ ಪ್ರತ್ಯಕ್ಷಗೊಂಡಿತ್ತು. ಆತನೇ ಇತ್ತೀಚಿಗೆ ಅಗಲಿದ ಬಬಿಯ. ಅದಗಲಿ ವರ್ಷವೊಂದು ಪೂರೈಸಿದಾಗಲೇ ಮರಿ ಮೊಸಳೆ ಗೋಚರವಾಗಿದೆ. ಕ್ಷೇತ್ರದ ಸಾನ್ನಿಧ್ಯವನ್ನು ಮತ್ತೆ ಎತ್ತಿ ಹಿಡಿದಿದೆ.. ಇದಲ್ಲವೇ ಈ ದೀಪಾವಳಿಯ ಸಂಭ್ರಮ??

ಹಾಗೆಂದು ಈ ಮರಿ ಮೊಸಳೆಗೆ ಜನರೊಂದಿಗೆ ಬೆಸೆದು, ಬೆರೆತು ಅಭ್ಯಾಸ ಆಗಿಲ್ಲ. ಇದು ಜನರ ಸದ್ದು ಕೇಳಿದರೆ ಪೊಟರೆಯೊಳಗೆ ಜಾರುತ್ತದೆ. ಯಾರಿಲ್ಲದಿದ್ದಾಗ ಅದೃಷ್ಟಶಾಲಿಯ ಕಣ್ಣಿಗೆ ಬೀಳುತ್ತದೆ. ಆತ ಅದೃಷ್ಟಶಾಲಿ.. ಒಟ್ಟಂದದಲ್ಲಿ ಬಬಿಯ ನ ಪುನರಾಗಮನದ ಪವಾಡ ಸದೃಶ ಘಟನೆಯಿಂದ ಭಕ್ತ ಮನಸುಗಳೆಲ್ಲ ಆನಂದ ತುಂದಿಲವಾಗಿದೆ..

– ಎಂ. ನಾ. ಚಂಬಲ್ತಿಮಾರ್, 9895508277

It seems that another baby crocodile came to the place of "Babiya" who lived harmlessly for 75 years! Like the British shot and killed the crocodile in the lake earlier. Then another crocodile appeared here by itself. He is the recently departed Babiya. The baby crocodile is visible only when it is one year old.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?

ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯ ತೀವ್ರತೆ ಇಳಿಮುಖವಾಗಲಿದ್ದು, ಆಗಸ್ಟ್‌ 3ರಿಂದ ತೋಟದ…

9 minutes ago

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…

12 hours ago

ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ

ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…

12 hours ago

ರಾಜ್ಯಾದ್ಯಂತ ಆರ್ಭಟಿಸುತ್ತಿರುವ ವರುಣ – ಭದ್ರಾ-ನೇತ್ರಾವತಿ ಅಪಾಯದ ಮಟ್ಟ ಮೀರಿ ಪ್ರವಾಹ

ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭದ್ರಾ ಹಾಗೂ ನೇತ್ರಾವತಿ, ಕುಮಾರಧಾರಾ…

12 hours ago

ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ರೈಲು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿ

ಶಿರಾಡಿ ಘಾಟ್‌ನ ಎಡಕುಮರಿ–ಶಿರಿಬಾಗಿಲು ನಡುವೆ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪರಿಹಾರ…

13 hours ago

ಮೊಬೈಲ್ ನೋಡುತ್ತಾ ಊಟ ಮಾಡಬೇಡಿ, ಶಿಸ್ತಿನ ಜೀವನವೇ ಆರೋಗ್ಯದ ರಹಸ್ಯ – ರಾಘವೇಶ್ವರ ಶ್ರೀ

ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ಹಾಗೂ ಆಧ್ಯಾತ್ಮಿಕ ಪ್ರಗತಿ…

23 hours ago