MIRROR FOCUS

ಅಡಿಕೆಗೆ ಕಾಟ ನೀಡಲು ಇನ್ನೊಂದು ಕೀಟ – “ಥ್ರಿಪ್ಸ್‌” | ಅಡಿಕೆ ಬೆಳೆಗಾರರಿಗೆ ಆತಂಕ ಬೇಡ ಎಚ್ಚರ ಇರಲಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಈಚೆಗೆ ಕೆಲವು ಸಮಯಗಳಿಂದ ಅಡಿಕೆ ಬೆಳೆಯ ಮೇಲೆ ಕೀಟಗಳ ಹಾವಳಿ, ರೋಗಗಳ ಹಾವಳಿ ಹೆಚ್ಚುತ್ತಿದೆ. ಎಲ್ಲದಕ್ಕೂ ಪ್ರಮುಖವಾದ ಕಾರಣ ಹವಾಮಾನ. ಇದೀಗ ಇನ್ನೊಂದು ಕೀಟವು ಅಡಿಕೆಗೆ ಹಾವಳಿ ನೀಡಲು ಆರಂಭವಾಗಿದೆ. ಥ್ರಿಪ್ಸ್‌(Thrips) ಎಂದು ಕರೆಯಲ್ಪಡುವ ಕೀಟವು ಇದೀಗ ಅಡಿಕೆಯ ಮೇಲೆ ಕಾಟ ನೀಡಲು ಆರಂಭಿಸಿದೆ. ದಾವಣಗೆರೆಯಲ್ಲಿ  ಥ್ರಿಪ್ಸ್‌ ಹುಳದ ಬಾಧೆ ಆರಂಭವಾಗಿದೆ.…..ಮುಂದೆ ಓದಿ….

Advertisement

ಕಳೆದ ಕೆಲವು ಸಮಯಗಳಿಂದ ಅಡಿಕೆಗೆ ಎಲೆಚುಕ್ಕಿ ರೋಗವು ತೀವ್ರವಾಗು ಬಾಧಿಸುತ್ತಿದೆ. ಈ ಬಾರಿಯೂ ಕೂಡಾ ಸೆಪ್ಟಂಬರ್‌ ತಿಂಗಳ ಅಂತ್ಯದವರೆಗೂ ಕಾಣಿಸದ ಎಲೆಚುಕ್ಕಿ ರೋಗ ಈಚೆಗೆ 10 ದಿನಗಳಿಂದ ಅಲ್ಲಲ್ಲಿ ತೀವ್ರವಾಗಿ ಕಾಣಿಸಿದೆ. ಅದರ ನಡುವೆ ರಿಂಗ್‌ಸ್ಫಾಟ್‌ ವೈರಸ್‌ ಕೂಡಾ ಶಿರಸಿ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಬಾಧಿಸುತ್ತಿದೆ. ಇದೀಗ ದಾವಣಗೆರೆಯಲ್ಲಿ ಥ್ರಿಪ್ಸ್‌(Thrips) ಎಂದು ಕರೆಯಲ್ಪಡುವ ಕೀಟವು ಕಂಡುಬಂದಿದೆ. ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಥ್ರಿಪ್ಸ್ ಹುಳದ ಬಾಧೆಯನ್ನು ಮೊದಲು ಗುರುತಿಸಿದ್ದು, ಬೆಂಗಳೂರಿನ ಐ.ಸಿ. ಎ.ಆರ್ – ಎನ್.ಬಿ.ಎ.ಐ.ಆರ್ ಸಂಸ್ಥೆಯ ಕೃಷಿ ವಿಜ್ಞಾನಿಗಳ ಸಹಾಯದಿಂದ ಕೀಟವನ್ನು Grape Vine Thrips  ಎಂದು ಗುರುತಿಸಲಾಗಿದೆ.

1956 ರಲ್ಲಿ ಕರ್ನಾಟಕ ಮತ್ತು 1959 ರಲ್ಲಿ ಕೇರಳ ರಾಜ್ಯದ ಕೆಲವು ಅಡಿಕೆ ಬೆಳೆಯುವ ಪ್ರದೇಶದಲ್ಲಿ ಈ ಮೊದಲು ಥ್ರಿಪ್ಸ್ ಕೀಟದ ಬಾಧೆಯನ್ನು ವರದಿ ಮಾಡಲಾಗಿದ್ದು, ಹಲವು ದಶಕಗಳ ನಂತರ ಮತ್ತೊಮ್ಮೆ ಈ ರಸ ಹೀರುವ ಕೀಟವನ್ನು ಅಡಿಕೆ ಸಸಿಗಳ ಸೋಗೆಯಲ್ಲಿ ಗಮನಿಸಲಾಗಿದೆ. ದ್ರಾಕ್ಷಿ, ದಾಳಿಂಬೆ, ಕ್ರೋಟನ್, ಗುಲಾಬಿ, ಮೆಣಸು, ಗೇರು ಸೇರಿದಂತೆ ಇನ್ನಿತರ ಹಲವು ಬೆಳೆಗಳಿಗೂ ಈ ಕೀಟವು ಬಾಧಿಸುತ್ತದೆ. 11 ರಿಂದ 33 ದಿನಗಳ ಜೀವನ ಚಕ್ರ ಇರುವ ಈ ಕೀಟವು, ಅಡಿಕೆ ಎಲೆಯ ಅಡಿಭಾಗದಿಂದ ರಸಹೀರಿದಾಗ, ಎಲೆ ಬಿಳುಚಾಗುವುದನ್ನು (silvery blotches) ಕಾಣಬಹುದು. ನಂತರ ಎಲೆಯು ಹಳದಿ ಮಿಶ್ರಿತ ಕಂದು ಬಣ್ಣಕ್ಕೆ ತಿರುಗಿ, ಒಣಗುತ್ತವೆ. ಇದರಿಂದ ಎಲೆಗಳು ಸುಕ್ಕುಗಟ್ಟಲು ಕಾರಣವಾಗುತ್ತದೆ. ಅಥವಾ  ಎಲೆಯು ತೆಳು ಕಂದು ಬಣ್ಣಕ್ಕೆ ತಿರುಗಬಹುದು ಮತ್ತು ಅಕಾಲಿಕವಾಗಿ ಉದುರಿಹೋಗಬಹುದು. ಮುಂದುವರಿದು ಇದು ಅಡಿಕೆ ಹೂವುಗಳು ಒಣಗಲು ಕೂಡಾ ಕಾರಣವಾಗಬಹುದು. ಎಲೆಗಳ ಮೇಲೆ ಪರಿಣಾಮ ಬೀರುವುದರಿಂದ  ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಎಂದು ಈಗಾಗಲೇ ಅಧ್ಯಯನಗಳಿಂದ ತಿಳಿದಿದೆ. ಬೇಸಿಗೆಯ ಸಮಯದಲ್ಲಿ ಈ ಕೀಟದ ಹಾವಳಿ ಹೆಚ್ಚು ಎಂದು ವರದಿಗಳಿರುವ ಹಿನ್ನಲೆಯಲ್ಲಿ, ಈಗಲೇ ಈ ಕೀಟವು ತನ್ನ ಕಾರ್ಯಚಟುವಟಿಕೆಯನ್ನು ಹೆಚ್ಚಿಕೊಂಡಿರುವ ಕಾರಣದಿಂದ ಈ ಕೀಟದ ಕುರಿತು ಗಮನ ಇಡುವುದು ಮುಖ್ಯವಾಗಿದೆ.

ದಾವಣಗೆರೆಯ ಪ್ರದೇಶದ ಕೆಲವು ಕಡೆ ಈಗಾಗಲೇ ಮೈಟ್‌ ಹಾವಳಿಯು ಅಡಿಕೆಗೆ ಕಾಣಿಸಿಕೊಂಡಿತ್ತು, ಇದರ ನಡುವೆಯೇ ಈಗ ಥ್ರಿಪ್ಸ್‌ ಕಾಣಿಸಿಕೊಂಡಿದೆ.  ಹೀಗಾಗಿ ಅಡಿಕೆ ಬೆಳೆಗಾರರು ಎಚ್ಚರ ವಹಿಸಬೇಕಿದೆ. ಇದಕ್ಕೆ ಸೂಕ್ತ ಔಷಧಿ ಸಿಂಪಡಣೆಯ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ.

The Arecanut crop has been experiencing a rise in pests and diseases due to changing weather patterns. Recently, a new pest called Thrips has emerged as a threat to the Arecanut crop in Davangere. This infestation of thrips is a concerning development for Arecanut farmers in the area.

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಬಂಡಿಪುರ ಅರಣ್ಯದಲ್ಲಿ ವಾಹನಗಳ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ಚರ್ಚಿಸಿ ನಿರ್ಧಾರ | ಅರಣ್ಯ ಸಚಿವ ಈಶ್ವರ್ ಖಂಡ್ರೆ

ಬಂಡಿಪುರ ರಕ್ಷಿತಾರಣ್ಯದಲ್ಲಿ ವಾಹನಗಳ ರಾತ್ರಿ ಸಂಚಾರ ನಿರ್ಬಂಧ ತೆರವು ಕುರಿತು ಮುಖ್ಯಮಂತ್ರಿ ಹಾಗೂ…

3 hours ago

ಬೇಸಿಗೆ ಹಿನ್ನೆಲೆ | ರಾಜ್ಯದ ಜಲಾಶಯಗಳಿಂದ ಕುಡಿಯುವ ನೀರು ಬಿಡುಗಡೆ ಕುರಿತು ಚರ್ಚೆ

ರಾಜ್ಯದಲ್ಲಿ ಬಿರು ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ರಾಜ್ಯದ ಜಲಾಶಯಗಳಿಂದ ನೀರು…

3 hours ago

ವಿಶೇಷ ಕಾಫಿ ಉತ್ಪನ್ನಗಳ ಬಿಡುಗಡೆ | ಡಿಪ್ ಕಾಫಿ ಬ್ಯಾಗ್ ಗಳನ್ನು ಪರಿಚಯಿಸಿದ ಕಾಫಿ ಬೋರ್ಡ್

ಭಾರತೀಯ ಕಾಫಿ ಮಂಡಳಿ ತಯಾರಿಸಿದ ಜಿಐ-ಟ್ಯಾಗ್ ಮಾಡಿದ  ವಿಶೇಷ ಡಿಪ್ ಕಾಫಿ ಬ್ಯಾಗ್…

4 hours ago

ರಸಗೊಬ್ಬರಗಳ ಬೆಲೆ ಸ್ಥಿರವಾಗಿರಿಸಲು ಕ್ರಮ | 45 ಕೆ.ಜಿ. ಯೂರಿಯಾ ಬೆಲೆ 242 ರೂ.ಗೆ ನಿಗದಿ

ದೇಶದಲ್ಲಿ  ರಸಗೊಬ್ಬರಗಳ ಬೆಲೆ ಇಳಿಕೆ   ಕುರಿತಂತೆ  ಸದಸ್ಯರು ಕೇಳಿದ ಪ್ರಶ್ನೆಗೆ  ಉತ್ತರಿಸಿದ ಕೇಂದ್ರ…

4 hours ago

ಹುಲಿ ಸಮೀಕ್ಷೆ-2024 ವರದಿ ಬಿಡುಗಡೆ | ಕಳೆದ ವರ್ಷಕ್ಕಿಂತ ಈ ಬಾರಿ ಹುಲಿಗಳ ಸಂಖ್ಯೆ ಇಳಿಮುಖ

ರಾಜ್ಯದಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿನ ಹುಲಿಗಳ ಗಣತಿ  ಕಾರ್ಯವನ್ನು ನಡೆಸಿದ್ದು,  ಕಳೆದ ವರ್ಷಕ್ಕೆ…

4 hours ago

ಹೊಸರುಚಿ | ಗುಜ್ಜೆ ಪಲಾವ್

ಗುಜ್ಜೆ ಪಲಾವ್ ಗೆ ಬೇಕಾಗುವ ಸಾಮಗ್ರಿಗಳು : ಗುಜ್ಜೆ 3/4 ಕಪ್, ಅಕ್ಕಿ…

5 hours ago