ಕವನ | ಮನದ ಮಿಡಿತ

October 9, 2021
8:48 AM

ರೆಯಬೇಕೆನ್ನಿಸುವುದು,
ಸೂರ್ಯಕಿರಣಗಳು ಭುವಿಯ ಸ್ಪರ್ಶಿಸಿದಾಗ
ಚಂದ್ರನ ಬೆಳದಿಂಗಳಲ್ಲಿ ನಕ್ಷತ್ರಗಳ ಎಣಿಸುವಾಗ
ಬರೆದರೆ ಓದುವರಾರು…?

ನಾನೇನು ಖ್ಯಾತನಾಮನಲ್ಲ, ಕವಿತೆ ಗೀಚಿ ಗೊತ್ತಿಲ್ಲ.
ಬರೆಯಬೇಕೆನ್ನಿಸುವುದು,
ಮಳೆಯಲ್ಲಿ ಮೈ ಮರೆತು ನರ್ತಿಸುವ ನವಿಲಂತೆ
ಒಮ್ಮೊಮ್ಮೆ ನಾನು ಮೈಮರೆತು ಗೀಚುತ್ತೇನೆ
ಓದುವರರಾದರೂ ಸಿಗಬಹುದೆಂಬ ಹಂಬಲದಲ್ಲಿ
ಓದಿ ಮೆಚ್ಚುವರೆಂಬ ಹುಚ್ಚು ನಂಬಿಕೆಯಲ್ಲಿ

ಬರೆಯಬೇಕೆನ್ನಿಸುವುದು,
ಕುಳಿತಲ್ಲಿ , ನಿಂತಲ್ಲಿ ಶಬ್ದಗಳ ಹುಡುಕಾಟ
ಪೆನ್ನು ಹಿಡಿದರೆ ,ಮನದ ಭಾವಗಳ ತಾಕಲಾಟ
ಮನದ ಭಾವಗಳಿಗೆ ದೊರಕದಿದ್ದರೆ ಪ್ರತಿರೂಪ
ಮತ್ತದೇ ನಿರರ್ಥಕ ಭಾವ…..

ಕಠಿಣ ಕಾರ್ಯವೇನಲ್ಲ, ಈ ಬರವಣಿಗೆ
ಸುತ್ತಣದ ವಿಷಯಗಳಿಗೆ ಮನ ಮಿಡಿದಾಗ
ಅಗೋಚರ ಶಕ್ತಿಯೊಂದು ದಾರಿ ತೋರುವುದು
ಕವನಗಳ ಗೀಚಲು ಕವಿ ನಾನಾಗದಿದ್ದರೂ
ಗೀಚಿದ್ದು ಕವಿತೆಯಾದರೆ ಕವಿಯೇ ನಾನಾದೆನಲ್ಲಾ…

# ಅಪೂರ್ವ ಚೇತನ್ ಪೆರಂದೋಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಹೊಸರುಚಿ | ಎಳೆಯ ಹಲಸಿನ ಕಾಯಿ ರೋಲ್ – ಕ್ರಿಸ್ಪಿ ಟೀ ಟೈಮ್ ಸ್ನ್ಯಾಕ್
March 21, 2026
5:00 PM
by: ದಿವ್ಯ ಮಹೇಶ್
ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆ : ಯುವಜನತೆಗೆ ಕಾಲದ ಕರೆಯೇ?
March 20, 2026
8:07 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹೊಸರುಚಿ | ಹಲಸಿನ ಹಣ್ಣಿನಿಂದ ಇಷ್ಟು ರುಚಿ ಸಿಗುತ್ತದಾ…? ಈ ಕಸ್ಟರ್ಡ್ ಮಿಸ್ ಮಾಡ್ಬೇಡಿ…!
March 14, 2026
8:05 PM
by: ದ ರೂರಲ್ ಮಿರರ್.ಕಾಂ
ಯುವಶಕ್ತಿ ದಿಕ್ಕುತಪ್ಪದಿರಲು ಹಿರಿಯರ ಮಾರ್ಗದರ್ಶನವೇ ದೀಪಸ್ತಂಭ
March 13, 2026
7:02 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror