ಬರೆಯಬೇಕೆನ್ನಿಸುವುದು,
ಸೂರ್ಯಕಿರಣಗಳು ಭುವಿಯ ಸ್ಪರ್ಶಿಸಿದಾಗ
ಚಂದ್ರನ ಬೆಳದಿಂಗಳಲ್ಲಿ ನಕ್ಷತ್ರಗಳ ಎಣಿಸುವಾಗ
ಬರೆದರೆ ಓದುವರಾರು…?
ನಾನೇನು ಖ್ಯಾತನಾಮನಲ್ಲ, ಕವಿತೆ ಗೀಚಿ ಗೊತ್ತಿಲ್ಲ.
ಬರೆಯಬೇಕೆನ್ನಿಸುವುದು,
ಮಳೆಯಲ್ಲಿ ಮೈ ಮರೆತು ನರ್ತಿಸುವ ನವಿಲಂತೆ
ಒಮ್ಮೊಮ್ಮೆ ನಾನು ಮೈಮರೆತು ಗೀಚುತ್ತೇನೆ
ಓದುವರರಾದರೂ ಸಿಗಬಹುದೆಂಬ ಹಂಬಲದಲ್ಲಿ
ಓದಿ ಮೆಚ್ಚುವರೆಂಬ ಹುಚ್ಚು ನಂಬಿಕೆಯಲ್ಲಿ
ಬರೆಯಬೇಕೆನ್ನಿಸುವುದು,
ಕುಳಿತಲ್ಲಿ , ನಿಂತಲ್ಲಿ ಶಬ್ದಗಳ ಹುಡುಕಾಟ
ಪೆನ್ನು ಹಿಡಿದರೆ ,ಮನದ ಭಾವಗಳ ತಾಕಲಾಟ
ಮನದ ಭಾವಗಳಿಗೆ ದೊರಕದಿದ್ದರೆ ಪ್ರತಿರೂಪ
ಮತ್ತದೇ ನಿರರ್ಥಕ ಭಾವ…..
ಕಠಿಣ ಕಾರ್ಯವೇನಲ್ಲ, ಈ ಬರವಣಿಗೆ
ಸುತ್ತಣದ ವಿಷಯಗಳಿಗೆ ಮನ ಮಿಡಿದಾಗ
ಅಗೋಚರ ಶಕ್ತಿಯೊಂದು ದಾರಿ ತೋರುವುದು
ಕವನಗಳ ಗೀಚಲು ಕವಿ ನಾನಾಗದಿದ್ದರೂ
ಗೀಚಿದ್ದು ಕವಿತೆಯಾದರೆ ಕವಿಯೇ ನಾನಾದೆನಲ್ಲಾ…
# ಅಪೂರ್ವ ಚೇತನ್ ಪೆರಂದೋಡಿ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel