ಅಡಿಕೆ ಹಳದಿಎಲೆ ರೋಗ ನಿರೋಧಕ ತಳಿ ಅಭಿವೃದ್ಧಿ | ಸಿಪಿಸಿಆರ್‌ಐ ವತಿಯಿಂದ ಟಿಶ್ಯು ಕಲ್ಚರ್‌ ಗಿಡಕ್ಕಾಗಿ ಹಿಂಗಾರ ಸಂಗ್ರಹ |

November 5, 2021
3:14 PM

ಅಡಿಕೆ ಹಳದಿಎಲೆ ರೋಗ ನಿರೋಧಕ ತಳಿ ಅಭಿವೃದ್ಧಿಯ ಮೊದಲ ಹೆಜ್ಜೆ ಯಶಸ್ವಿಯಾಗಿ ಪೂರೈಸಿದೆ. ಶುಕ್ರವಾರ ಸಿಪಿಸಿಐಆರ್‌ ವಿಜ್ಞಾನಿಗಳು ರೋಗಣು ನಿರೋಧಕ ಅಡಿಕೆ ಮರದಿಂದ ಹಿಂಗಾರ ಸಂಗ್ರಹ ಮಾಡಿದ್ದಾರೆ. ಈ ಹಿಂಗಾರದಲ್ಲಿ ಟಿಶ್ಯು ಕಲ್ಚರ್‌ ಗಿಡಗಳ ಅಭಿವೃದ್ಧಿಯನ್ನು ಮುಂದೆ ಕಾಸರಗೋಡು ಸಿಪಿಸಿಐಆರ್‌ ನಲ್ಲಿ ನಡೆಸಲಾಗುತ್ತದೆ.

 

 

ಅಡಿಕೆ ಹಳದಿ ಎಲೆರೋಗ ನಿರೋಧಕ ತಳಿ ಅಭಿವೃದ್ಧಿ ಬಗ್ಗೆ ಕಳೆದ ಕೆಲವು ಸಮಯಗಳಿಂದ ಅಧ್ಯಯನ ನಡೆಯುತ್ತಿತ್ತು. ಇದೀಗ ಹಳದಿ ಎಲೆರೋಗ ಹಾಟ್‌ಸ್ಫಾಟ್‌ ಪ್ರದೇಶದಲ್ಲಿರುವ ರೋಗಣು ರಹಿತವಾದ ಮರದಿಂದ ಟಿಶ್ಯೂ ಕಲ್ಚರ್‌ ಹಾಗೂ ಕೃತಕ ಪರಾಗಸ್ಪರ್ಶದ ಮೂಲಕ ಗಿಡ ಅಭಿವೃದ್ಧಿ ಮಾಡುವ ಯೋಜನೆಗೆ ಈಗ ಚಾಲನೆ ದೊರೆತಿದೆ. ಶುಕ್ರವಾರ ಸಂಪಾಜೆ ಹಾಗೂ ಚೆಂಬು ಪ್ರದೇಶದಿಂದ ಸಿಪಿಸಿಐಆರ್‌ ನಿರ್ದೇಶಕಿ ಡಾ.ಅನಿತಾ ಕರುಣ್‌ ನಿರ್ದೇಶನದಲ್ಲಿ ರೋಗಣು ರಹಿತ ಅಡಿಕೆ ಮರದಿಂದ ಹಿಂಗಾರ ಸಂಗ್ರಹಿಸುವ ಕಾರ್ಯ ನಡೆಯಿತು. ಈ ಹಿಂಗಾರದ ಮೂಲಕ ಟಿಶ್ಯೂ ಕಲ್ಚರ್‌  ಅಡಿಕೆ ಗಿಡ ಅಭಿವೃದ್ಧಿ ಮಾಡುವ ಕಾರ್ಯ ನಡೆಯಲಿದೆ.

 

ಈ ಹಿಂದೆ ವಿಜ್ಞಾನಿ ಡಾ.ಭವಿಷ್ ಅವರ ನೇತೃತ್ವದಲ್ಲಿ ಸಂಪಾಜೆ ಹಾಗೂ ಚೆಂಬು ಪ್ರದೇಶದಲ್ಲಿ ಅಡಿಕೆ ಹಳದಿಎಲೆ ರೋಗ ಪೀಡಿತ ತೋಟಗಳಲ್ಲಿರುವ ರೋಗ ಲಕ್ಷಣಗಳು ಇಲ್ಲದ  ಮರಗಳ ಗುರುತಿಸುವಿಕೆ ಕಾರ್ಯ ನಡೆದಿತ್ತು. ಅದಾದ ಬಳಿಕ ಅವುಗಳು ಸ್ಯಾಂಪಲ್‌ ತೆಗೆದು ಕಯಂಗುಲಂ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಹಳದಿಎಲೆ ರೋಗಣು ರಹಿತ ಮರ ಎಂದು ಖಚಿತವಾದ ಬಳಿಕ ಅಂತಹ ಮರಗಳಿಂದ ಹಿಂಗಾರ ತೆಗೆಯಲಾಯಿತು.

ಸಂಪಾಜೆ ಹಾಗೂ ಚೆಂಬು ಪ್ರದೇಶದಲ್ಲಿ  ಗುರುತಿಸಿದ  5  ರೋಗಲಕ್ಷಣ ಇಲ್ಲದ ಅಡಿಕೆ ಮರಗಳಿಂದ ವಾರದ ಹಿಂದೆ  ಸ್ಯಾಂಪಲ್‌ ತೆಗೆದು ಕುಯ್ಯಂಕುಳಂಗೆ ಕಳುಹಿಸಲಾಗಿತ್ತು. ಅವುಗಳಲ್ಲಿ 3 ಅಡಿಕೆ  ಮರಗಳಲ್ಲಿಮಾತ್ರಾ ರೋಗ ರಹಿತವಾದ  ವರದಿ ಪ್ರಯೋಗಾಲಯದಿಂದ ಗುರುವಾರ ಸಂಜೆ ಲಭ್ಯವಾಗಿತ್ತು. ಶುಕ್ರವಾರ ಸಿಪಿಸಿಐಆರ್‌ ಕಾಸರಗೋಡಿನ ಹಿರಿಯ ತಾಂತ್ರಿಕ ಸಹಾಯಕ ಡಾ.ಮುರಳಿಕೃಷ್ಣ ಹಾಗೂ ತಂಡ ಆಗಮಿಸಿ ಕೃಷಿಕ ಭವ್ಯಾನಂದ ಕುಯಿಂತೋಡಿ ಸಹಕಾರದೊಂದಿಗೆ  ಸಂಪಾಜೆ ಹಾಗೂ ಚೆಂಬು ಭಾಗದ 3 ಅಡಿಕೆ  ಮರಗಳಿಂದಲೂ ಹಿಂಗಾರ ತೆಗೆದು ಟಿಶ್ಯು ಕಲ್ಚರ್‌ ಗಿಡ ಅಭಿವೃದ್ಧಿಗೆ ಕಾಸರಗೋಡು ಪ್ರಯೋಗಾಲಯಕ್ಕೆ ಕೊಂಡೊಯ್ದಿದ್ದಾರೆ. 

ಸಂಪಾಜೆಯ ಕೃಷಿಕ ಲೈನ್ಕಜೆ ಪ್ರಭಾಕರ ಹಾಗೂ ಚೆಂಬು ಭಾಗದ ಕೃಷಿಕ ಮಾಧವ ನಡುಬೆಟ್ಟ ಅವರ ತೋಟದಿಂದ ಈ ಮರಗಳ ಆಯ್ಕೆ ನಡೆದಿದೆ. ವಾರದ ಹಿಂದೆ ವಿಜ್ಞಾನಿ ಡಾ.ಭವಿಷ್‌ ಹಾಗೂ ತಂಡ ಅಡಿಕೆ ಹಳದಿಎಲೆ ರೋಗ ಪೀಡಿತ ತೋಟಗಳಲ್ಲಿರುವ ರೋಗ ಲಕ್ಷಣಗಳು ಇಲ್ಲದ  ಮರಗಳ ಗುರುತಿಸಿ ಆ ಮರದ ಕುಬೆಯ ಸುಳಿಯ ಭಾಗದಿಂದ ಸ್ಯಾಂಪಲ್‌ ಸಂಗ್ರಹಿಸಿ ಐಸ್‌ ಪ್ಯಾಕ್‌ ಮೂಲಕ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಮುಂದೆ ಹಳದಿ ರೋಗನಿರೋಧಕ ಅಡಿಕೆ ಮರಗಳ ನಡುವೆ ಕೃತಕ ಪರಾಸ್ಪರ್ಶ ನಡೆಸುವ ಕಾರ್ಯ ನಡೆಯಲಿದೆ. ಈ ಮೂಲಕ ಅಡಿಕೆ ರೋಗನಿರೋಧಕ ಅಡಿಕೆ ಗಿಡಗಳ ಅಭಿವೃದ್ಧಿ ನಡೆಯಲಿದೆ.

 

 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ
September 13, 2026
9:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?
September 13, 2026
12:16 PM
by: ಸಾಯಿಶೇಖರ್ ಕರಿಕಳ
ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು
September 13, 2026
8:13 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror