ಮ್ಯಾನ್ಮಾರ್ನಿಂದ ಇಂಡೋ-ಮ್ಯಾನ್ಮಾರ್ ಗಡಿಯ ಮೂಲಕ ಮಿಜೋರಾಂ ಗೆ ಕಳ್ಳಸಾಗಣೆ ಮಾಡಲಾದ ಅಡಿಕೆಯನ್ನು ಕಂಟೈನರ್ ಟ್ರಕ್ ಮೂಲಕ ಪಶ್ಚಿಮ ಬಂಗಾಳದ ವಿವಿದೆಡೆಗೆ ಅಡಿಕೆಯನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.ಮಿಜೋರಾಂ ಗೆ ಬಂದ ಅಡಿಕೆಯನ್ನು ಕಂಟೈನರ್ ಟ್ರಕ್ ಸಾಗಾಟ ಮಾಡುವ ವೇಳೆ ಅಸ್ಸಾಂನ ಗುವಾಹಟಿಯ ಖಾನಾಪುರದಲ್ಲಿ ಕಸ್ಟಮ್ಟ್ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಸುಮಾರು 2.55 ಕೋಟಿ ರೂ.ಮೌಲ್ಯದ ಅಡಿಕೆ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ 3 ಜನರನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.
ಅಡಿಕೆಗೆ ಕಳೆದ ಕೆಲವು ಸಮಯಗಳಿಂದ ಮತ್ತೆ ಬೇಡಿಕೆ ವ್ಯಕ್ತವಾಗಿತ್ತು. ಆದರೆ ಪೂರೈಕೆ ಸರಿಯಾಗದ ಕಾರಣದಿಂದ ವಿದೇಶಿ ಅಡಿಕೆಯನ್ನು ಕಳ್ಳದಾರಿಯ ಮೂಲಕ ಸಾಗಾಟ ಮಾಡಲು ಸತತ ಪ್ರಯತ್ನ ಮಾಡಲಾಗುತ್ತಿದೆ. ಈಗಲೂ ಉತ್ತಮ ಧಾರಣೆ ಅಡಿಕೆ ಲಭ್ಯವಾಗುತ್ತಿದೆ. ಇದೀಗ ಧಾರಣೆಯೂ ಏರಿಕೆಯಾಗಿದೆ. ಹೊಸ ಅಡಿಕೆ ಧಾರಣೆ 270 ರೂಪಾಯಿಗಿಂತ ಅಧಿಕವಾಗಿದ್ದು ನವರಾತ್ರಿವರೆಗೆ ಈ ಏರಿಕೆ ಇರಲಿದೆ. ನಂತರ 15 ದಿನಗಳ ವರೆಗೆ ಸ್ಥಿರತೆ ಇದ್ದು ಬಳಿಕ ಧಾರಣೆ ಏರಿಕೆಯಾಗಬಹುದು ಎಂಬುದು ಈಗಿನ ಮಾರುಕಟ್ಟೆ ನಿರೀಕ್ಷೆ.
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…
ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 3/4 ಕಪ್ ,ನೀರು…
2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ…