ಗುಜರಾತಿನ ಅಹಮದಾಬಾದ್ ಸಿಂಧುಭವನ್ ಪ್ರದೇಶದಲ್ಲಿ ನೀರವ್ ಭರತಭಾಯ್ ಪಟೇಲ್ ಎಂಬವರಿಗೆ ಅಡಿಕೆ ಖರೀದಿ ವ್ಯವಹಾರದಲ್ಲಿ ಸುಮಾರು 59 ಲಕ್ಷ ರೂಪಾಯಿ ವಂಚಿಸಿದ ಬಗ್ಗೆ ಅಹಮದಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಧವಪುರದಲ್ಲಿ ಸೌರಾಷ್ಟ್ರ ಟ್ರೇಡರ್ಸ್ ಮೂಲಕ ಅಡಿಕೆ ವ್ಯವಹಾರ ನಡೆಸುತ್ತಿರುವ ಮೆಹುಲ್ ಖೈರಯ್ಯ ಅವರು ವಂಚಿಸಿ ಮುಂಬಯಿಗೆ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಳೆದ 11 ತಿಂಗಳಿನಿಂದ ಅಡಿಕೆ ವ್ಯಾಪಾರ ಮಾಡುತ್ತಿದ್ದ ಮೆಹುಲ್ ಖೈರಯ್ಯ ಅವರು ಅಡಿಕೆ ಖರೀದಿಸಿ ಕೂಡಲೇ ಹಣ ನೀಡುತ್ತಿದ್ದರು. ಒಟ್ಟು ಸುಮಾರು 1.5 ಕೋಟಿ ಮೌಲ್ಯದ ಅಡಿಕೆ ಖರೀದಿಸಿದ ನಂತರ ಆಗಾಗ ಹಣ ಪಾವತಿ ಮಾಡುತ್ತಿದ್ದರು. ಈಚೆಗೆ ಅಡಿಕೆ ಖರೀದಿ ಮಾಡಿದ 59 ಲಕ್ಷ ವಂಚಿಸಿ ಮುಂಬಯಿಗೆ ಪರಾರಿಯಾಗಿದ್ದಾರೆ ಎಂದು ಭರತಭಾಯ್ ಪಟೇಲ್ ದೂರಿನಲ್ಲಿ ತಿಳಿಸಿದ್ದಾರೆ.
ಅಹಮದಾಬಾದ್ ನ ಸಿಂಧುಭವನ್ ಪ್ರದೇಶದಲ್ಲಿ ನೀರವ್ ಭರತಭಾಯ್ ಪಟೇಲ್ ಹಲವು ಸಮಯಗಳಿಂದ ಅಡಿಕೆ ವ್ಯಾಪಾರ ನಡೆಸುತ್ತಿದ್ದಾರೆ. ಈಚೆಗೆ ಸುಮಾರು 11 ತಿಂಗಳುಗಳ ಹಿಂದೆ ಮುಂಬಯಿ ಮೂಲದ ಮೆಹುಲ್ ರಮೇಶ್ ಭಾಯ್ ಖೈರಯ್ಯ ಅವರ ಪರಿಚಯವಾಗಿ ಅಡಿಕೆ ಮಾರಾಟದ ವ್ಯವಹಾರ ಮಾಡುತ್ತಿದ್ದರು. ಆರಂಭದಲ್ಲಿ ಅಡಿಕೆ ಸ್ಯಾಂಪಲ್ ಎಂದು ಖರೀದಿ ಮಾಡಿ ಉತ್ತಮ ರೇಟು ನೀಡಿದ್ದರು. ಇದೀಗ 6 ತಿಂಗಳಿನಿಂದ ವಂಚಿಸಿ ಪರಾರಿಯಾಗಿದ್ದಾರೆ, ಈ ಬಗ್ಗೆ ಹಣ ಪಾವತಿ ಮಾಡುವ ಭರವಸೆಯನ್ನು ಕಳೆದ ಎರಡು ತಿಂಗಳಿನಿಂದ ನೀಡಿ ಇದೀಗ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…
ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…
ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…
ಜಾಗತಿಕ ತಾಪಮಾನ ಪ್ರತಿ 1 ಡಿಗ್ರಿ ಏರಿದರೆ ಭಾರತದ ಭತ್ತದ ಇಳುವರಿ ಶೇ.6.6ರಷ್ಟು…
ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…