ಗುಜರಾತಿನ ಅಹಮದಾಬಾದ್ ಸಿಂಧುಭವನ್ ಪ್ರದೇಶದಲ್ಲಿ ನೀರವ್ ಭರತಭಾಯ್ ಪಟೇಲ್ ಎಂಬವರಿಗೆ ಅಡಿಕೆ ಖರೀದಿ ವ್ಯವಹಾರದಲ್ಲಿ ಸುಮಾರು 59 ಲಕ್ಷ ರೂಪಾಯಿ ವಂಚಿಸಿದ ಬಗ್ಗೆ ಅಹಮದಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಧವಪುರದಲ್ಲಿ ಸೌರಾಷ್ಟ್ರ ಟ್ರೇಡರ್ಸ್ ಮೂಲಕ ಅಡಿಕೆ ವ್ಯವಹಾರ ನಡೆಸುತ್ತಿರುವ ಮೆಹುಲ್ ಖೈರಯ್ಯ ಅವರು ವಂಚಿಸಿ ಮುಂಬಯಿಗೆ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಳೆದ 11 ತಿಂಗಳಿನಿಂದ ಅಡಿಕೆ ವ್ಯಾಪಾರ ಮಾಡುತ್ತಿದ್ದ ಮೆಹುಲ್ ಖೈರಯ್ಯ ಅವರು ಅಡಿಕೆ ಖರೀದಿಸಿ ಕೂಡಲೇ ಹಣ ನೀಡುತ್ತಿದ್ದರು. ಒಟ್ಟು ಸುಮಾರು 1.5 ಕೋಟಿ ಮೌಲ್ಯದ ಅಡಿಕೆ ಖರೀದಿಸಿದ ನಂತರ ಆಗಾಗ ಹಣ ಪಾವತಿ ಮಾಡುತ್ತಿದ್ದರು. ಈಚೆಗೆ ಅಡಿಕೆ ಖರೀದಿ ಮಾಡಿದ 59 ಲಕ್ಷ ವಂಚಿಸಿ ಮುಂಬಯಿಗೆ ಪರಾರಿಯಾಗಿದ್ದಾರೆ ಎಂದು ಭರತಭಾಯ್ ಪಟೇಲ್ ದೂರಿನಲ್ಲಿ ತಿಳಿಸಿದ್ದಾರೆ.
ಅಹಮದಾಬಾದ್ ನ ಸಿಂಧುಭವನ್ ಪ್ರದೇಶದಲ್ಲಿ ನೀರವ್ ಭರತಭಾಯ್ ಪಟೇಲ್ ಹಲವು ಸಮಯಗಳಿಂದ ಅಡಿಕೆ ವ್ಯಾಪಾರ ನಡೆಸುತ್ತಿದ್ದಾರೆ. ಈಚೆಗೆ ಸುಮಾರು 11 ತಿಂಗಳುಗಳ ಹಿಂದೆ ಮುಂಬಯಿ ಮೂಲದ ಮೆಹುಲ್ ರಮೇಶ್ ಭಾಯ್ ಖೈರಯ್ಯ ಅವರ ಪರಿಚಯವಾಗಿ ಅಡಿಕೆ ಮಾರಾಟದ ವ್ಯವಹಾರ ಮಾಡುತ್ತಿದ್ದರು. ಆರಂಭದಲ್ಲಿ ಅಡಿಕೆ ಸ್ಯಾಂಪಲ್ ಎಂದು ಖರೀದಿ ಮಾಡಿ ಉತ್ತಮ ರೇಟು ನೀಡಿದ್ದರು. ಇದೀಗ 6 ತಿಂಗಳಿನಿಂದ ವಂಚಿಸಿ ಪರಾರಿಯಾಗಿದ್ದಾರೆ, ಈ ಬಗ್ಗೆ ಹಣ ಪಾವತಿ ಮಾಡುವ ಭರವಸೆಯನ್ನು ಕಳೆದ ಎರಡು ತಿಂಗಳಿನಿಂದ ನೀಡಿ ಇದೀಗ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್ನಲ್ಲಿ…
ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…
ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…
ಇಂಪೀರಿಯಲ್ ಕಾಲೇಜ್ ಲಂಡನ್ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…
ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…