ಗುಜರಾತಿನ ಅಹಮದಾಬಾದ್ ಸಿಂಧುಭವನ್ ಪ್ರದೇಶದಲ್ಲಿ ನೀರವ್ ಭರತಭಾಯ್ ಪಟೇಲ್ ಎಂಬವರಿಗೆ ಅಡಿಕೆ ಖರೀದಿ ವ್ಯವಹಾರದಲ್ಲಿ ಸುಮಾರು 59 ಲಕ್ಷ ರೂಪಾಯಿ ವಂಚಿಸಿದ ಬಗ್ಗೆ ಅಹಮದಾಬಾದ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮಾಧವಪುರದಲ್ಲಿ ಸೌರಾಷ್ಟ್ರ ಟ್ರೇಡರ್ಸ್ ಮೂಲಕ ಅಡಿಕೆ ವ್ಯವಹಾರ ನಡೆಸುತ್ತಿರುವ ಮೆಹುಲ್ ಖೈರಯ್ಯ ಅವರು ವಂಚಿಸಿ ಮುಂಬಯಿಗೆ ತೆರಳಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಳೆದ 11 ತಿಂಗಳಿನಿಂದ ಅಡಿಕೆ ವ್ಯಾಪಾರ ಮಾಡುತ್ತಿದ್ದ ಮೆಹುಲ್ ಖೈರಯ್ಯ ಅವರು ಅಡಿಕೆ ಖರೀದಿಸಿ ಕೂಡಲೇ ಹಣ ನೀಡುತ್ತಿದ್ದರು. ಒಟ್ಟು ಸುಮಾರು 1.5 ಕೋಟಿ ಮೌಲ್ಯದ ಅಡಿಕೆ ಖರೀದಿಸಿದ ನಂತರ ಆಗಾಗ ಹಣ ಪಾವತಿ ಮಾಡುತ್ತಿದ್ದರು. ಈಚೆಗೆ ಅಡಿಕೆ ಖರೀದಿ ಮಾಡಿದ 59 ಲಕ್ಷ ವಂಚಿಸಿ ಮುಂಬಯಿಗೆ ಪರಾರಿಯಾಗಿದ್ದಾರೆ ಎಂದು ಭರತಭಾಯ್ ಪಟೇಲ್ ದೂರಿನಲ್ಲಿ ತಿಳಿಸಿದ್ದಾರೆ.
ಅಹಮದಾಬಾದ್ ನ ಸಿಂಧುಭವನ್ ಪ್ರದೇಶದಲ್ಲಿ ನೀರವ್ ಭರತಭಾಯ್ ಪಟೇಲ್ ಹಲವು ಸಮಯಗಳಿಂದ ಅಡಿಕೆ ವ್ಯಾಪಾರ ನಡೆಸುತ್ತಿದ್ದಾರೆ. ಈಚೆಗೆ ಸುಮಾರು 11 ತಿಂಗಳುಗಳ ಹಿಂದೆ ಮುಂಬಯಿ ಮೂಲದ ಮೆಹುಲ್ ರಮೇಶ್ ಭಾಯ್ ಖೈರಯ್ಯ ಅವರ ಪರಿಚಯವಾಗಿ ಅಡಿಕೆ ಮಾರಾಟದ ವ್ಯವಹಾರ ಮಾಡುತ್ತಿದ್ದರು. ಆರಂಭದಲ್ಲಿ ಅಡಿಕೆ ಸ್ಯಾಂಪಲ್ ಎಂದು ಖರೀದಿ ಮಾಡಿ ಉತ್ತಮ ರೇಟು ನೀಡಿದ್ದರು. ಇದೀಗ 6 ತಿಂಗಳಿನಿಂದ ವಂಚಿಸಿ ಪರಾರಿಯಾಗಿದ್ದಾರೆ, ಈ ಬಗ್ಗೆ ಹಣ ಪಾವತಿ ಮಾಡುವ ಭರವಸೆಯನ್ನು ಕಳೆದ ಎರಡು ತಿಂಗಳಿನಿಂದ ನೀಡಿ ಇದೀಗ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ICAR 16 ಹೊಸ ಜಾನುವಾರು ಮತ್ತು ನಾಯಿ ತಳಿಗಳಿಗೆ ರಾಷ್ಟ್ರೀಯ ನೋಂದಣಿ ನೀಡಿದ್ದು,…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…
ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…
ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…
ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…
ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…