Advertisement
ಸುದ್ದಿಗಳು

ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಸುದ್ದಿ ಮಾಡಿದ ಅಡಿಕೆ | ಅಡಿಕೆ ಜಾಹೀರಾತು ನಿಷೇಧ ಹೇರಿದ ಚೀನಾ |

Share

ಅಡಿಕೆ ಎಂದಾಕ್ಷಣ ಅದು ಸೀಮಿತ ಪ್ರದೇಶದ ಬೆಳೆಯಲ್ಲ. ಬಹುಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ, ಈಗಲೂ ವ್ಯಾಪಿಸುತ್ತಿದೆ.  ಅಂತರಾಷ್ಟ್ರೀಯ ಮಟ್ಟದಲ್ಲಿ ನಿಗದಿತ ದರ ಇಲ್ಲದೇ ಇದ್ದರೂ ಈಗ ಅಡಿಕೆ ಅಂತರಾಷ್ಟ್ರೀಯ ಮಟ್ಟದ  ವಿಷಯ. ಅಂತರಾಷ್ಟ್ರೀಯ ಮಟ್ಟದಲ್ಲಿ  ಚರ್ಚೆಯಾಗುತ್ತಲೇ ಇರುತ್ತದೆ. ಈಗಲೂ ಮತ್ತೆ ಚರ್ಚೆ ಶುರುವಾಗಿದೆ. ಪ್ರತೀ ಬಾರಿಯೂ ಅಡಿಕೆ ಧಾರಣೆ ಏರಿಕೆಯಾದಾಗಲೂ ಇಂತಹದ್ದೇ ಚರ್ಚೆಯಾಗಿದೆ. ಈಗಲೂ ಚರ್ಚೆ ಆರಂಭವಾಗಿದೆ. ಅದರ ಮೊದಲ ಹಂತವೇ ಚೀನಾದಲ್ಲಿ ಅಡಿಕೆ ಜಾಹೀರಾತು ನಿಷೇಧ….!.

Advertisement
Advertisement
Advertisement
Advertisement

ಚೀನಾದ ಹುನಾನ್ ಪ್ರಾಂತ್ಯವು ಅಡಿಕೆ ಬಳಕೆಯ ಅತಿದೊಡ್ಡ ಪ್ರದೇಶ.  ಚೀನಾ ಬಿಸಿನೆಸ್ ಟೈಮ್ಸ್‌ನ ವರದಿಯ ಪ್ರಕಾರ, ಹುನಾನ್‌ನಲ್ಲಿ ಅಡಿಕೆ ಉತ್ಪಾದನೆಯ ಮೌಲ್ಯವನ್ನು 30 ಬಿಲಿಯನ್ ಯುವಾನ್ ಎಂದು ಅಂದಾಜಿಸಲಾಗಿದೆ.

Advertisement

ಅಂತರಾಷ್ಟ್ರೀಯ ಮಟ್ಟದಲ್ಲಿ  ಈಗ ಅಡಿಕೆ ಮತ್ತೆ ಸುದ್ದಿ ಮಾಡಿರುವುದು  ಪ್ರತೀ ಬಾರಿಯಂತೆಯೇ ಕ್ಯಾನ್ಸರ್‌ ಕಾರಕದ ಸುದ್ದಿ. ಚೀನಾ ಸರಕಾರದ ಸಂಸ್ಥೆಯಾದ “ನ್ಯಾಷನಲ್ ರೇಡಿಯೋ ಮತ್ತು ಟೆಲಿವಿಷನ್ ಅಡ್ಮಿನಿಸ್ಟ್ರೇಷನ್”  ಸೆಪ್ಟೆಂಬರ್‌ನಲ್ಲಿ ಅಡಿಕೆ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ರೇಡಿಯೋ, ಟೆಲಿವಿಷನ್ ಅಥವಾ ಆನ್‌ಲೈನ್ ಶೋಗಳಲ್ಲಿ ಅಡಿಕೆಯ ಎಲ್ಲಾ ಜಾಹೀರಾತುಗಳನ್ನು ನಿಷೇಧಿಸಿತು. ಅಲ್ಲಿಗೇ ಆ ಸಂಗತಿ ಚರ್ಚೆಯಾಗಿ ನಿಂತಿತ್ತು. ಈಗ ಮತ್ತೆ ಮುಂದುವರಿದು ಅಡಿಕೆ ಹಾನಿಕಾರಕ ಎಂದು ಹೇಳಲಾಗಿದೆ. ವರದಿಯೊಂದರಲ್ಲಿ  ಅಡಿಕೆಯನ್ನು ಮಾತ್ರಾ ಜಗಿಯುವುದು  ಹಾನಿಕಾರಕ ಎಂದು ಹೇಳಲಾಗಿದೆ. ಅಡಿಕೆಯನ್ನು  ಜಗಿಯುವವರ ಬಾಯಲ್ಲಿ ಕೆಂಪು ಕಲೆಗಳು ಉಳಿಯುತ್ತವೆ ಅದು ಆರೋಗ್ಯದ ಮೇಲೆ ಹಾನಿಕಾರಕ ಎಂದು ಹೇಳಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಾಯೋಜಿತವಾದ ಅಂತರಾಷ್ಟ್ರೀಯ ಸಂಶೋಧನಾ ಸಂಸ್ಥೆ, ಅಡಿಕೆ ಮತ್ತು ವೀಳ್ಯದ ಎಲೆಗಳನ್ನು ಕಾರ್ಸಿನೋಜೆನ್ ಅಥವಾ ಕ್ಯಾನ್ಸರ್ ಉಂಟುಮಾಡುವ ಏಜೆಂಟ್ ಎಂದು ಪಟ್ಟಿ ಮಾಡಿದೆ. ದೀರ್ಘಾವಧಿಯ ಬಳಕೆಯಿಂದ ಹಲ್ಲಿನ ಹುಣ್ಣುಗಳು, ಗಮ್ ಡಿಜೆನರೇಶನ್ ಮತ್ತು ಬಾಯಿ ಮತ್ತು ಅನ್ನನಾಳದ ಕ್ಯಾನ್ಸರ್ ಉಂಟಾಗಬಹುದು ಎಂದು ಅದು ಹೇಳಿದೆ. ಈಗ ಇದೇ ವರದಿಯನ್ನು ಇರಿಸಿ ವಿವಿಧ ದೇಶಗಳಲ್ಲಿ ವರದಿ ಮಾಡಲಾಗುತ್ತಿದೆ.

Advertisement
ಅಡಿಕೆ ಹಾನಿಕಾರಕ ಅಲ್ಲ :

ಈಗಾಗಲೇ ಭಾರತದಲ್ಲಿ  ಅಡಿಕೆ ಹಾನಿಕಾರಕ ಅಲ್ಲ ಎಂಬ ಬಗ್ಗೆ ವಿವಿಧ ಅಧ್ಯಯನಗಳು ನಡೆದಿವೆ. ಅಡಿಕೆ ಚಹಾ, ಅಡಿಕೆ ಪೇಯ, ಐಸ್‌ ಕ್ರೀಂ ಮೊದಲಾದವುಗಳನ್ನು ತಯಾರಿಸಲಾಗಿದೆ. ಅನೇಕ ವರ್ಷಗಳಿಂದ ಅಡಿಕೆ ಜಗಿಯುವ, ಎಲೆ ಅಡಿಕೆ ತಿನ್ನುವ ಮಂದಿಯ ಅಧ್ಯಯನವನ್ನೂ ನಡೆಸಿದ ವರದಿಯಲ್ಲಿ ಹಾನಿಕಾರಕವಲ್ಲ ಎಂಬ ಅಂಶ ಬಯಲಾಗಿದೆ. ಆದರೆ ಅಧಿಕೃತ ಮಾನ್ಯತೆಗಾಗಿ ವಿವಿಧ ಸಂಸ್ಥೆಗಳು ಪ್ರಯತ್ನ ಮಾಡುತ್ತಿವೆ, ಇನ್ನಷ್ಟು ಅಧ್ಯಯನ ನಡೆಸುತ್ತಿವೆ. ಹೀಗಾಗಿ ಈ ಬಾರಿಯೂ ಅಡಿಕೆ ಧಾರಣೆ ಏರಿಕೆಯ ಜೊತೆಗೇ ಅಡಿಕೆಯ ಬಗ್ಗೆ ಅಪಪ್ರಚಾರವೂ ಹೆಚ್ಚಾಗುತ್ತಿದೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಕೇರಳದ ಕೆಲವು ಕಡೆ ತಾಪಮಾನ ಏರಿಕೆಯ ಎಚ್ಚರಿಕೆ | 3 ಡಿಗ್ರಿ ಏರಿಕೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ |

ಕೇರಳದ ಕೆಲವು ಪ್ರದೇಶಗಳಲ್ಲಿ ತಾಪಮಾನದಲ್ಲಿ ಗಣನೀಯ ಏರಿಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ಮುಂದಿನ…

14 mins ago

ನಾಳೆ ಶಿವರಾತ್ರಿ | ಎಲ್ಲೆಲ್ಲೂ “ಶಿವೋಹಂ…ಶಿವೋಹಂ..” |

ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ, ಶಿವ ಭಕ್ತರ ಪಾಲಿಗೆ…

44 mins ago

ಧರ್ಮಸ್ಥಳದಲ್ಲಿ ಪಾದಯಾತ್ರಿಗಳಿಗೆ ಸನ್ಮಾನ | ಪರಿಶುದ್ಧ ಭಕ್ತಿ ಮತ್ತು ದೃಢನಂಬಿಕೆಯಿಂದ ದೇವರ ಅನುಗ್ರಹ ಪ್ರಾಪ್ತಿ: ಡಿ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ “ಮಾತು ಬಿಡ ಮಂಜುನಾಥ” ಎಂಬ ಮಾತು ಎಲ್ಲರಿಗೂ ಚಿರಪರಿಚಿತವಾಗಿದೆ. ಮಾತೇ…

1 hour ago

ತುಂಬೆಯಲ್ಲಿ ನೇತ್ರಾವತಿ ನದಿಗೆ ಗಂಗಾಪೂಜೆ | ಅಣೆಕಟ್ಟಿನಲ್ಲಿ 6 ಮೀ ಆಳದವರೆಗೆ  ನೀರು ಸಂಗ್ರಹ |

ಮಂಗಳೂರು ಮಹಾನಗರಪಾಲಿಕೆ ವತಿಯಿಂದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ…

2 hours ago

ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು ಅಧಿಕ

ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ  2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…

15 hours ago

ಸರ್ಕಾರಿ ಬಸ್ ನಿರ್ವಾಹಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…

15 hours ago