Advertisement
ಅನುಕ್ರಮ

ಚಿಲಿಪಿಲಿ | ಹೊನ್ನ ಹಣೆಯ ಎಲೆಹಕ್ಕಿ

Share

ಹೊನ್ನ ಹಣೆಯ ಎಲೆಹಕ್ಕಿ(golden fronted leaf bird ) ( Gold Fronted Chloropsis)
ಈ ಎಲೆಹಕ್ಕಿಯ ಗಾತ್ರ( 19 cm) ಬುಲ್ ಬುಲ್ ಹಕ್ಕಿಯಷ್ಟಿರುತ್ತದೆ. ‌ಸಂಸ್ಕೃತದಲ್ಲಿ ಪಕ್ಷಗುಪ್ತ ,ಪತ್ರಗುಪ್ತ, ಎಂದೂ, ಹಸಿರು ಪಿಕಳಾರ ಎಂದು ಸ್ಥಳೀಯವಾಗಿ ಕರೆಯುತ್ತಾರೆ.

ತಲೆ, ಬೆನ್ನು , ಬಾಲ, ರೆಕ್ಕೆಗಳೆಲ್ಲವೂ ಎಲೆ ಹಸಿರು ಹಸಿರು ಇರುವುದರಿಂದ ಹಸಿರು ಹಕ್ಕಿ ಎಂಬುದು ರೂಡಿಯಲ್ಲಿರುವ ಹೆಸರು.‌
ಕೊಕ್ಕು, ಕುತ್ತಿಗೆ , ಕೆನ್ನೆ ಕಪ್ಪು ಬಣ್ಣದಲ್ಲಿದ್ದು, ಹಣೆಯ ಮದ್ಯದಲ್ಲಿ ಹೊಂಬಣ್ಣವಿದೆ . ಆದುದರಿಂದ ಹೊನ್ನ ಹಣೆಯ ಹಕ್ಕಿ ಎಂಬ ಹೆಸರಿದೆ. ರೆಕ್ಕೆಯ ಬುಡ, ಕೊಕ್ಕಿನ ಬುಡ ನೀಲಿಮಚ್ಚೆ ಇದ್ದು ನೋಡಲು ಆಕರ್ಷಕವಾಗಿ ಕಾಣುತ್ತದೆ.
ಜೋಡಿಯಾಗಿ ಇರುತ್ತವೆ, ಗುಂಪಿನಲ್ಲಿಯೂ ಇರುತ್ತವೆ. ಹೂ ಹಣ್ಣಿನ ಮರಗಳು ನೆಚ್ಚಿನ ತಾಣ. ಕಾಡುಗಳಲ್ಲಿ, ಉದ್ಯಾನವನ ಪ್ರದೇಶಗಳನ್ನು ಹೆಚ್ಚಾಗಿ ಇಷ್ಟ ಪಡುತ್ತವೆ.ಹೂವಿನ ಮಕರಂದ, ಹಣ್ಣುಗಳು, ಕೀಟಗಳು ಇವುಗಳ ಆಹಾರ.

ಭಾರತ, ಬಾಂಗ್ಲಾ, ದೇಶ, ಮಾಯನ್ಮಾರ್, ಶ್ರೀ ಲಂಕಾ ಮೊದಲಾದೆಡೆಗಳಲ್ಲಿ ಕಂಡು ಬರುತ್ತದೆ. ವಲಸೆ ಹಕ್ಕಿಯಾಗಿದೆ.
ತನ್ನ ಆಕರ್ಷಕ ಬಣ್ಣ, ಮಧುರ ಧ್ವನಿಯಿಂದಾಗಿ ಮನುಷ್ಯನ ಇಷ್ಟದ ಹಕ್ಕಿಯಾಗಿದೆ. ಈ ಹಕ್ಕಿಯ ವಿಭಿನ್ನ , ವಿಶಿಷ್ಟ ಚರ್ಯೆಯಿಂದಾಗಿ ಜನರು ಪಂಜರದಲ್ಲಿಟ್ಟು ಸಾಕುತ್ತಾರೆ. ಇದು ಬಹು ಬೇಡಿಕೆಯಲ್ಲಿರುವ ಹಕ್ಕಿಯಾಗಿದೆ.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ: ಪಿ.ಜಿ.ಕೃಷ್ಣಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

6 hours ago

E20 ಎಫೆಕ್ಟ್‌ – ಪಶು ಆಹಾರದ ಬೆಲೆ ಏರಿಕೆ, ಹೈನುಗಾರರ ಲೆಕ್ಕಾಚಾರವೇ ಬದಲು..!

E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…

15 hours ago

ಬರದ ನಡುವೆ ರೈತರ ಜಮೀನಿಗೆ ಸಿಎಂ ಭೇಟಿ – ಬೆಳೆ ಹಾನಿ ಪರಿಶೀಲನೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…

22 hours ago

ಹವಾಮಾನ ವರದಿ | 01-09-2026 | ಯಾವ ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸಾಧ್ಯತೆ…?

ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…

22 hours ago

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ

ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…

1 day ago

‘ಅರ್ಥ’ ಮತ್ತು ‘ಅಪಾರ್ಥ’ದ ನಡುವೆ ಇರುವ ‘ಪಾ’ ಯಾವುದು?

ಅಪಾರ್ಥವಾಗುವುದು ಮಾನವ ಸಹಜ; ಆದರೆ ಅಪಾರ್ಥವಾಯಿತೆಂಬ ಅರಿವು ಬಂದ ನಂತರ ಮತ್ತೆ ‘ಅರ್ಥ’ದೆಡೆಗೆ…

1 day ago