Advertisement
ಸುದ್ದಿಗಳು

ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಸುದ್ದಿ ಮಾಡಿದ ಅಡಿಕೆ | ಅಡಿಕೆ ಜಾಹೀರಾತು ನಿಷೇಧ ಹೇರಿದ ಚೀನಾ |

Share

ಅಡಿಕೆ ಎಂದಾಕ್ಷಣ ಅದು ಸೀಮಿತ ಪ್ರದೇಶದ ಬೆಳೆಯಲ್ಲ. ಬಹುಪ್ರದೇಶದಲ್ಲಿ ವ್ಯಾಪಿಸಿಕೊಂಡಿದೆ, ಈಗಲೂ ವ್ಯಾಪಿಸುತ್ತಿದೆ.  ಅಂತರಾಷ್ಟ್ರೀಯ ಮಟ್ಟದಲ್ಲಿ ನಿಗದಿತ ದರ ಇಲ್ಲದೇ ಇದ್ದರೂ ಈಗ ಅಡಿಕೆ ಅಂತರಾಷ್ಟ್ರೀಯ ಮಟ್ಟದ  ವಿಷಯ. ಅಂತರಾಷ್ಟ್ರೀಯ ಮಟ್ಟದಲ್ಲಿ  ಚರ್ಚೆಯಾಗುತ್ತಲೇ ಇರುತ್ತದೆ. ಈಗಲೂ ಮತ್ತೆ ಚರ್ಚೆ ಶುರುವಾಗಿದೆ. ಪ್ರತೀ ಬಾರಿಯೂ ಅಡಿಕೆ ಧಾರಣೆ ಏರಿಕೆಯಾದಾಗಲೂ ಇಂತಹದ್ದೇ ಚರ್ಚೆಯಾಗಿದೆ. ಈಗಲೂ ಚರ್ಚೆ ಆರಂಭವಾಗಿದೆ. ಅದರ ಮೊದಲ ಹಂತವೇ ಚೀನಾದಲ್ಲಿ ಅಡಿಕೆ ಜಾಹೀರಾತು ನಿಷೇಧ….!.

ಚೀನಾದ ಹುನಾನ್ ಪ್ರಾಂತ್ಯವು ಅಡಿಕೆ ಬಳಕೆಯ ಅತಿದೊಡ್ಡ ಪ್ರದೇಶ.  ಚೀನಾ ಬಿಸಿನೆಸ್ ಟೈಮ್ಸ್‌ನ ವರದಿಯ ಪ್ರಕಾರ, ಹುನಾನ್‌ನಲ್ಲಿ ಅಡಿಕೆ ಉತ್ಪಾದನೆಯ ಮೌಲ್ಯವನ್ನು 30 ಬಿಲಿಯನ್ ಯುವಾನ್ ಎಂದು ಅಂದಾಜಿಸಲಾಗಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ  ಈಗ ಅಡಿಕೆ ಮತ್ತೆ ಸುದ್ದಿ ಮಾಡಿರುವುದು  ಪ್ರತೀ ಬಾರಿಯಂತೆಯೇ ಕ್ಯಾನ್ಸರ್‌ ಕಾರಕದ ಸುದ್ದಿ. ಚೀನಾ ಸರಕಾರದ ಸಂಸ್ಥೆಯಾದ “ನ್ಯಾಷನಲ್ ರೇಡಿಯೋ ಮತ್ತು ಟೆಲಿವಿಷನ್ ಅಡ್ಮಿನಿಸ್ಟ್ರೇಷನ್”  ಸೆಪ್ಟೆಂಬರ್‌ನಲ್ಲಿ ಅಡಿಕೆ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ರೇಡಿಯೋ, ಟೆಲಿವಿಷನ್ ಅಥವಾ ಆನ್‌ಲೈನ್ ಶೋಗಳಲ್ಲಿ ಅಡಿಕೆಯ ಎಲ್ಲಾ ಜಾಹೀರಾತುಗಳನ್ನು ನಿಷೇಧಿಸಿತು. ಅಲ್ಲಿಗೇ ಆ ಸಂಗತಿ ಚರ್ಚೆಯಾಗಿ ನಿಂತಿತ್ತು. ಈಗ ಮತ್ತೆ ಮುಂದುವರಿದು ಅಡಿಕೆ ಹಾನಿಕಾರಕ ಎಂದು ಹೇಳಲಾಗಿದೆ. ವರದಿಯೊಂದರಲ್ಲಿ  ಅಡಿಕೆಯನ್ನು ಮಾತ್ರಾ ಜಗಿಯುವುದು  ಹಾನಿಕಾರಕ ಎಂದು ಹೇಳಲಾಗಿದೆ. ಅಡಿಕೆಯನ್ನು  ಜಗಿಯುವವರ ಬಾಯಲ್ಲಿ ಕೆಂಪು ಕಲೆಗಳು ಉಳಿಯುತ್ತವೆ ಅದು ಆರೋಗ್ಯದ ಮೇಲೆ ಹಾನಿಕಾರಕ ಎಂದು ಹೇಳಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಾಯೋಜಿತವಾದ ಅಂತರಾಷ್ಟ್ರೀಯ ಸಂಶೋಧನಾ ಸಂಸ್ಥೆ, ಅಡಿಕೆ ಮತ್ತು ವೀಳ್ಯದ ಎಲೆಗಳನ್ನು ಕಾರ್ಸಿನೋಜೆನ್ ಅಥವಾ ಕ್ಯಾನ್ಸರ್ ಉಂಟುಮಾಡುವ ಏಜೆಂಟ್ ಎಂದು ಪಟ್ಟಿ ಮಾಡಿದೆ. ದೀರ್ಘಾವಧಿಯ ಬಳಕೆಯಿಂದ ಹಲ್ಲಿನ ಹುಣ್ಣುಗಳು, ಗಮ್ ಡಿಜೆನರೇಶನ್ ಮತ್ತು ಬಾಯಿ ಮತ್ತು ಅನ್ನನಾಳದ ಕ್ಯಾನ್ಸರ್ ಉಂಟಾಗಬಹುದು ಎಂದು ಅದು ಹೇಳಿದೆ. ಈಗ ಇದೇ ವರದಿಯನ್ನು ಇರಿಸಿ ವಿವಿಧ ದೇಶಗಳಲ್ಲಿ ವರದಿ ಮಾಡಲಾಗುತ್ತಿದೆ.

ಅಡಿಕೆ ಹಾನಿಕಾರಕ ಅಲ್ಲ :

ಈಗಾಗಲೇ ಭಾರತದಲ್ಲಿ  ಅಡಿಕೆ ಹಾನಿಕಾರಕ ಅಲ್ಲ ಎಂಬ ಬಗ್ಗೆ ವಿವಿಧ ಅಧ್ಯಯನಗಳು ನಡೆದಿವೆ. ಅಡಿಕೆ ಚಹಾ, ಅಡಿಕೆ ಪೇಯ, ಐಸ್‌ ಕ್ರೀಂ ಮೊದಲಾದವುಗಳನ್ನು ತಯಾರಿಸಲಾಗಿದೆ. ಅನೇಕ ವರ್ಷಗಳಿಂದ ಅಡಿಕೆ ಜಗಿಯುವ, ಎಲೆ ಅಡಿಕೆ ತಿನ್ನುವ ಮಂದಿಯ ಅಧ್ಯಯನವನ್ನೂ ನಡೆಸಿದ ವರದಿಯಲ್ಲಿ ಹಾನಿಕಾರಕವಲ್ಲ ಎಂಬ ಅಂಶ ಬಯಲಾಗಿದೆ. ಆದರೆ ಅಧಿಕೃತ ಮಾನ್ಯತೆಗಾಗಿ ವಿವಿಧ ಸಂಸ್ಥೆಗಳು ಪ್ರಯತ್ನ ಮಾಡುತ್ತಿವೆ, ಇನ್ನಷ್ಟು ಅಧ್ಯಯನ ನಡೆಸುತ್ತಿವೆ. ಹೀಗಾಗಿ ಈ ಬಾರಿಯೂ ಅಡಿಕೆ ಧಾರಣೆ ಏರಿಕೆಯ ಜೊತೆಗೇ ಅಡಿಕೆಯ ಬಗ್ಗೆ ಅಪಪ್ರಚಾರವೂ ಹೆಚ್ಚಾಗುತ್ತಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

4 hours ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

4 hours ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

4 hours ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

15 hours ago

ಗುಟ್ಕಾ ನಿಷೇಧದ ಹೆಸರಿನಲ್ಲಿ ಅಡಿಕೆ ಬೆಳೆಗಾರರಿಗೆ ತೊಂದರೆ ಆಗದಂತೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ನೀಡಲಿ

ಗುಟ್ಕಾ ಮತ್ತು ಪಾನ್‌ಮಸಾಲಾ ನಿಷೇಧವನ್ನು ಅಡಿಕೆ ನಿಷೇಧದೊಂದಿಗೆ ಸಂಬಂಧಿಸಬಾರದು, ಅಡಿಕೆ ಬೆಳೆಗಾರರು ಗಾಬರಿಯಾಗಬಾರದು…

15 hours ago

ತಂಬಾಕು ನಿಷೇಧ ಜಾರಿ: ಅಡಿಕೆ ಬೆಳೆಗಾರರ ಹಿತ ಕಾಪಾಡಲು ಸ್ಪಷ್ಟ ಚೌಕಟ್ಟು ರೂಪಿಸಿ – ಕ್ಯಾಂಪ್ಕೊ

ತಂಬಾಕು ಮತ್ತು ನಿಕೋಟಿನ್ ಅಂಶವುಳ್ಳ ಉತ್ಪನ್ನಗಳ ನಿಷೇಧ ಜಾರಿಯಲ್ಲಿ ಅಡಿಕೆ ಬೆಳೆಗಾರರು ಹಾಗೂ…

15 hours ago