Advertisement
ಅನುಕ್ರಮ

ಕವನ | ಮನದ ಮಿಡಿತ

Share

ರೆಯಬೇಕೆನ್ನಿಸುವುದು,
ಸೂರ್ಯಕಿರಣಗಳು ಭುವಿಯ ಸ್ಪರ್ಶಿಸಿದಾಗ
ಚಂದ್ರನ ಬೆಳದಿಂಗಳಲ್ಲಿ ನಕ್ಷತ್ರಗಳ ಎಣಿಸುವಾಗ
ಬರೆದರೆ ಓದುವರಾರು…?

ನಾನೇನು ಖ್ಯಾತನಾಮನಲ್ಲ, ಕವಿತೆ ಗೀಚಿ ಗೊತ್ತಿಲ್ಲ.
ಬರೆಯಬೇಕೆನ್ನಿಸುವುದು,
ಮಳೆಯಲ್ಲಿ ಮೈ ಮರೆತು ನರ್ತಿಸುವ ನವಿಲಂತೆ
ಒಮ್ಮೊಮ್ಮೆ ನಾನು ಮೈಮರೆತು ಗೀಚುತ್ತೇನೆ
ಓದುವರರಾದರೂ ಸಿಗಬಹುದೆಂಬ ಹಂಬಲದಲ್ಲಿ
ಓದಿ ಮೆಚ್ಚುವರೆಂಬ ಹುಚ್ಚು ನಂಬಿಕೆಯಲ್ಲಿ

ಬರೆಯಬೇಕೆನ್ನಿಸುವುದು,
ಕುಳಿತಲ್ಲಿ , ನಿಂತಲ್ಲಿ ಶಬ್ದಗಳ ಹುಡುಕಾಟ
ಪೆನ್ನು ಹಿಡಿದರೆ ,ಮನದ ಭಾವಗಳ ತಾಕಲಾಟ
ಮನದ ಭಾವಗಳಿಗೆ ದೊರಕದಿದ್ದರೆ ಪ್ರತಿರೂಪ
ಮತ್ತದೇ ನಿರರ್ಥಕ ಭಾವ…..

ಕಠಿಣ ಕಾರ್ಯವೇನಲ್ಲ, ಈ ಬರವಣಿಗೆ
ಸುತ್ತಣದ ವಿಷಯಗಳಿಗೆ ಮನ ಮಿಡಿದಾಗ
ಅಗೋಚರ ಶಕ್ತಿಯೊಂದು ದಾರಿ ತೋರುವುದು
ಕವನಗಳ ಗೀಚಲು ಕವಿ ನಾನಾಗದಿದ್ದರೂ
ಗೀಚಿದ್ದು ಕವಿತೆಯಾದರೆ ಕವಿಯೇ ನಾನಾದೆನಲ್ಲಾ…

# ಅಪೂರ್ವ ಚೇತನ್ ಪೆರಂದೋಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಹವಾಮಾನ ವರದಿ | 03-06-2026 | ಕರಾವಳಿಯಲ್ಲಿ ಮುಂಗಾರು ಚುರುಕು – ಜೂನ್ 8 ರಿಂದ ರಾಜ್ಯಾದ್ಯಂತ ಮಳೆಯ ಅಬ್ಬರ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆ ಚುರುಕುಗೊಳ್ಳುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಆರಂಭವಾಗಿದೆ. ಜೂನ್…

13 hours ago

ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ ಸಾಧ್ಯತೆ – ಕರಾವಳಿ, ಉತ್ತರ ಒಳನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ

ಗುರುವಾರದ ವೇಳೆಗೆ ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ…

20 hours ago

ಮಿಜೋರಾಂನಲ್ಲಿ ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ | ₹24 ಕೋಟಿ ಮೌಲ್ಯದ ಅಡಿಕೆ ವಶ, 468 ಪ್ರಕರಣ ದಾಖಲು, 292 ಮಂದಿ ಬಂಧನ

ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಸಾಗಾಟವಾಗುತ್ತಿದ್ದ ₹24 ಕೋಟಿ ಮೌಲ್ಯದ ಅಡಿಕೆಯನ್ನು ಮಿಜೋರಾಂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.…

20 hours ago

ಮಳೆ ಆರಂಭವಾಗುತ್ತಿದ್ದಂತೆಯೇ ಗಿಡಗಳ ನಾಟಿಗೆ ಸಿದ್ಧತೆ – ಅಡಿಕೆ ಗಿಡಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ…!

ರಾಜ್ಯಾದ್ಯಂತ ಅಡಿಕೆ ಗಿಡಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು,ಕೆಲವು ಕಡೆ ಸಸಿಯ ಬೆಲೆ ₹100ಕ್ಕೆ…

1 day ago

ಕೇಂದ್ರ ಸರ್ಕಾರದ ಸೌಲಭ್ಯಗಳಿಗೆ ‘ಕೇಂದ್ರ ರೈತ ಐಡಿ’ ಕಡ್ಡಾಯ – ಮಂಗಳೂರು ತಾಲೂಕಿನ 14,520 ರೈತರು ಇನ್ನೂ ನೋಂದಣಿ ಬಾಕಿ

ಕೇಂದ್ರ ಸರ್ಕಾರದ ವಿವಿಧ ಕೃಷಿ ಸೌಲಭ್ಯಗಳನ್ನು ಪಡೆಯಲು ‘ಕೇಂದ್ರ ರೈತ ಐಡಿ’ ಕಡ್ಡಾಯವಾಗುತ್ತಿದೆ.…

1 day ago

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆ | ಮತ್ತೆ ಚೇತರಿಕೆಯ ಸಂಕೇತ ನೀಡಿದ ಅಡಿಕೆ ಧಾರಣೆ

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಜಿಗೆ ₹5 ಏರಿಕೆ ದಾಖಲಾಗಿದ್ದು, ಹೊಸ ಅಡಿಕೆ…

2 days ago