ಕವನ | ಮನದ ಮಿಡಿತ

October 9, 2021
8:48 AM

ರೆಯಬೇಕೆನ್ನಿಸುವುದು,
ಸೂರ್ಯಕಿರಣಗಳು ಭುವಿಯ ಸ್ಪರ್ಶಿಸಿದಾಗ
ಚಂದ್ರನ ಬೆಳದಿಂಗಳಲ್ಲಿ ನಕ್ಷತ್ರಗಳ ಎಣಿಸುವಾಗ
ಬರೆದರೆ ಓದುವರಾರು…?

ನಾನೇನು ಖ್ಯಾತನಾಮನಲ್ಲ, ಕವಿತೆ ಗೀಚಿ ಗೊತ್ತಿಲ್ಲ.
ಬರೆಯಬೇಕೆನ್ನಿಸುವುದು,
ಮಳೆಯಲ್ಲಿ ಮೈ ಮರೆತು ನರ್ತಿಸುವ ನವಿಲಂತೆ
ಒಮ್ಮೊಮ್ಮೆ ನಾನು ಮೈಮರೆತು ಗೀಚುತ್ತೇನೆ
ಓದುವರರಾದರೂ ಸಿಗಬಹುದೆಂಬ ಹಂಬಲದಲ್ಲಿ
ಓದಿ ಮೆಚ್ಚುವರೆಂಬ ಹುಚ್ಚು ನಂಬಿಕೆಯಲ್ಲಿ

ಬರೆಯಬೇಕೆನ್ನಿಸುವುದು,
ಕುಳಿತಲ್ಲಿ , ನಿಂತಲ್ಲಿ ಶಬ್ದಗಳ ಹುಡುಕಾಟ
ಪೆನ್ನು ಹಿಡಿದರೆ ,ಮನದ ಭಾವಗಳ ತಾಕಲಾಟ
ಮನದ ಭಾವಗಳಿಗೆ ದೊರಕದಿದ್ದರೆ ಪ್ರತಿರೂಪ
ಮತ್ತದೇ ನಿರರ್ಥಕ ಭಾವ…..

ಕಠಿಣ ಕಾರ್ಯವೇನಲ್ಲ, ಈ ಬರವಣಿಗೆ
ಸುತ್ತಣದ ವಿಷಯಗಳಿಗೆ ಮನ ಮಿಡಿದಾಗ
ಅಗೋಚರ ಶಕ್ತಿಯೊಂದು ದಾರಿ ತೋರುವುದು
ಕವನಗಳ ಗೀಚಲು ಕವಿ ನಾನಾಗದಿದ್ದರೂ
ಗೀಚಿದ್ದು ಕವಿತೆಯಾದರೆ ಕವಿಯೇ ನಾನಾದೆನಲ್ಲಾ…

# ಅಪೂರ್ವ ಚೇತನ್ ಪೆರಂದೋಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಆಕೆ ಏಕೆ ತನ್ನ ನೋವನ್ನು ಯಾರಿಗೂ ಹೇಳುವುದಿಲ್ಲ..?
August 3, 2026
3:37 PM
by: ಮಹೇಶ್ ಪುಚ್ಚಪ್ಪಾಡಿ
ಅಪ್ಪ ಯಾಕೆ ವಿಚಿತ್ರವಾಗಿ ಕಾಣುತ್ತಾನೆ?
July 19, 2026
7:52 AM
by: ಮಹೇಶ್ ಪುಚ್ಚಪ್ಪಾಡಿ
ಆರೋಪದ ಆಚೆ ನಿಂತು ಒಮ್ಮೆ ಯೋಚಿಸಿದ್ದೀರಾ..?
July 12, 2026
11:57 AM
by: ಮಹೇಶ್ ಪುಚ್ಚಪ್ಪಾಡಿ
E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?
July 8, 2026
12:42 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror