MIRROR FOCUS

ಪುತ್ತೂರು ಮುತ್ತು ಹೆಸರಲ್ಲಿ ಅಡಿಕೆ ಬ್ರಾಂಡಿಂಗ್‌ ಚಿಂತನೆ | ಅಡಿಕೆ ಕಲಬೆರಕೆ ತಡೆಯಲು ಹೊಸ ಪ್ಲಾನ್‌ | ಅಡಿಕೆ ಬೆಳಗಾರರಿಂದ ನಡೆಯುತ್ತಿದೆ ಚಿಂತನೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಡಿಕೆಗೆ ಬೆಲೆ(Arecanut price) ಏನೋ ಇದೆ. ಆದರೆ ಅದು ಅತಂತ್ರದ್ದು.ಅಡಿಕೆ ಕಳ್ಳ ಸಾಗಾಣಿಕೆ(Arecanut smuggling) ಮಲೆನಾಡು(Malenadu) ಹಾಗೂ ಕರಾವಳಿ(Coastal) ರೈತರ(Farmer) ಮೇಲೆ ದೊಡ್ಡ ಹೊಡೆತ ಕೊಟ್ಟಿದೆ. ವಿದೇಶದಿಂದ(Foreign) ಬರುವ ಅಕ್ರಮ ಅಡಿಕೆಗಳಿಂದ(Illegal Arecanut) ಇಲ್ಲಿನ ಅಡಿಕೆ ಬೆಲೆ ಕಳೆದುಕೊಳ್ಳುವ ಭೀತಿ ಸದಾ ಬೆಳೆಗಾರರಿಗೆ ಎದುರಾಗುತ್ತಲೇ ಇದೆ.ಅಲ್ಲದೆ ಕರ್ನಾಟಕದಲ್ಲಿ(Karnataka) ಬೆಳೆಯುವ ಉತ್ತಮ ಗುಣಮಟ್ಟದ ಅಡಿಕೆಗೆ ಕಲಬೆರಕೆಯ(mixing) ಸಮಸ್ಯೆ ಎದುರಾಗುತ್ತಿದೆ.ಇದನ್ನು ತಡೆಯಲು ದಕ್ಷಿಣ ಕನ್ನಡದ (Dakshina Kannada) ಪುತ್ತೂರು(Puttur) ಭಾಗದಲ್ಲಿ ಹೊಸ ಯೋಜನೆ ರೂಪಿಸುತ್ತಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳೆಯುವ ಅಡಿಕೆಗೆ ಕಲಬೆರಕೆಯ ಮಾಡುವುದನ್ನು ತಡೆಯಲು ವಿಟ್ಲ, ಪುತ್ತೂರು ಹಾಗೂ ಇತರ ಭಾಗದಲ್ಲಿ ಬೆಳೆಯುವ ಉತ್ತಮ ಗುಣಮಟ್ಟದ ಅಡಿಕೆಯನ್ನು ಪುತ್ತೂರು ಮುತ್ತು ಎಂಬ ಹೆಸರಲ್ಲಿ ಬ್ರಾಂಡಿಂಗ್ ಮಾಡಲು ಚಿಂತನೆ ನಡೆಸಲಾಗಿದೆ.

ದಕ್ಷಿಣ ಕನ್ನಡದ ಅಡಿಕೆಗೆ ಉತ್ತರ ಭಾರತದಲ್ಲಿ ಬೇಡಿಕೆ  : ವಿದೇಶ ಹಾಗೂ ದೇಶದ ಇತರ ಭಾಗದಲ್ಲಿ ಬೆಳೆಯುವ ಅಡಿಕೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಂಪ್ ಮಾಡಲಾಗುತ್ತಿದೆ. ಇದರ ಪ್ರಯೋಜನವನ್ನು ಪಡೆದು ಕಳಪೆ ಗುಣಮಟ್ಟದ ಅಡಿಕೆಯನ್ನು ಜಿಲ್ಲೆಯ ಅಡಿಕೆಯಲ್ಲಿ ಕೆಲವರು ಬೆರಕೆ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ ಅತೀ ಹೆಚ್ಚು ಬೇಡಿಕೆ ಪಡೆದು ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಕಾಯ್ದುಕೊಂಡಿರುವ ದಕ್ಷಿಣ ಕನ್ನಡದ ಅಡಿಕೆ ಕಳಪೆ ಗುಣಮಟ್ಟದ ಅಡಿಕೆ ಮಿಶ್ರಣದಿಂದ ಗುಣಮಟ್ಟ ಕುಸಿಯುವ ಭೀತಿ ಎದುರಿಸುತ್ತಿದೆ.

ಪುತ್ತೂರು ಮುತ್ತು ಹೆಸರಲ್ಲಿ ಬ್ರಾಂಡ್  : ಹೀಗಾಗಿ ಅಡಿಕೆಯ ಗುಣಮಟ್ಟ ಕಾಯ್ದುಕೊಳ್ಳಲು ರೈತ ಸಂಘಟನೆಗಳ ಒಕ್ಕೂಟ ಮಾಸ್ಟರ್‌ಪ್ಲಾನ್ ಮಾಡಲು ತೀರ್ಮಾನಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆಯನ್ನು ಪುತ್ತೂರು ಮುತ್ತು ಎನ್ನುವ ಹೆಸರಿನಲ್ಲಿ‌ ಬ್ರಾಂಡ್‌ ಮಾಡಲು ಉದ್ದೇಶಿಸಲಾಗಿದೆ.

ಟೀ, ಮಾವಿಗಿದೆ, ಅಡಿಕೆಗೆ ಏಕಿಲ್ಲ? :ಈಗಾಗಲೇ ಈ ವಿಚಾರವನ್ನು ಅಡಿಕೆ ಬೆಳೆಗಾರರ ಹಿತ‌ ಕಾಯುವ ಕ್ಯಾಂಪ್ಕೋ ಗಮನಕ್ಕೆ‌ ಬೆಳೆಗಾರರು ತಂದಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಕ್ಯಾಂಪ್ಕೋ ಜೊತೆಗೆ ಚರ್ಚೆ ನಡೆಸಿ, ಒಂದು ವೇಳೆ ಕ್ಯಾಂಪ್ಕೋ ಈ ವಿಚಾರದಲ್ಲಿ ಅನಾಸಕ್ತಿ ವಹಿಸಿದರೆ ರೈತ ಒಕ್ಕೂಟದಿಂದಲೇ ಬ್ರಾಂಡ್ ಮಾಡಲು ಉದ್ದೇಶಿಸಲಾಗಿದೆ. ಟೀ, ಮಾವು ಹಾಗೂ ಇತರ ಉತ್ಪನ್ನಗಳಿಗಿರುವಂತೆ ಅಡಿಕೆಗೂ ಬ್ರಾಂಡ್ ಮಾಡುವ ಮೂಲಕ ಅಡಿಕೆ ಬೆಳೆಗಾರರ ಹಿತ ಕಾಯುವ ಯೋಜನೆ ಇದೀಗ ಬಲಗೊಳ್ಳುತ್ತಿದೆ ಎನ್ನುತ್ತಾರೆ ರೈತ ಸಂಘ ಸಂಘಟನೆಗಳು ತಿಳಿಸಿವೆ.

– ಅಂತರ್ಜಾಲ ಮಾಹಿತಿ

It has been decided to brand the high quality arecanuts grown in Vitla, Puttur and other parts under the name Puttur Muthu to prevent adulteration of the arecanuts grown in Dakshina Kannada district.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ

ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

5 hours ago

ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ

ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…

13 hours ago

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |

ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…

15 hours ago

ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

19 hours ago

ಕದನ ವಿರಾಮ ಬಳಿಕ ಪರಿಸ್ಧಿತಿ ಸಾಮಾನ್ಯ ಸ್ಧಿತಿಗೆ | ಶಾಂತಿ ಸ್ಧಾಪನೆಯ ಉದ್ದೇಶಕ್ಕೆ ಪೂರಕ ವಾತಾವರಣ

ಕದನ ವಿರಾಮ ಘೋಷಣೆ ಬಳಿಕ ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳ ಪರಿಸ್ಧಿತಿ ಸಾಮಾನ್ಯ…

1 day ago

ಮುಳಿಯ ಕೃಷಿಗೋಷ್ಟಿ | ಕೃಷಿಕರೇ ಕೃಷಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಹೇಗೆ..?

ಕೃಷಿಯಷ್ಟೇ ಅಲ್ಲ ಕೃಷಿ ವಸ್ತುಗಳ ಮಾರುಕಟ್ಟೆ ಹಾಗೂ ಕೃಷಿ ಬೆಳವಣಿಗೆಯ  ಬಗ್ಗೆ ಪುತ್ತೂರಿನ…

1 day ago