MIRROR FOCUS

ಶ್ರೀಲಂಕಾ ಅಡಿಕೆ ಆಮದು ಗೊಂದಲ | ಅಡಿಕೆ ಆಮದು ಸಾಧ್ಯವಿಲ್ಲ- ಇದು ಸುಳ್ಳು ಮಾಹಿತಿ | ಅಡಿಕೆ ಬೆಳೆಗಾರರಿಗೆ ಧೈರ್ಯ ತುಂಬಿದ ಕ್ಯಾಂಪ್ಕೋ ಹಾಗೂ ಕೃಷಿ ಸಚಿವೆ | ಅಡಿಕೆ ಧಾರಣೆ 5 ರೂಪಾಯಿ ಏರಿಕೆ ಮಾಡಿದ ಕ್ಯಾಂಪ್ಕೋ |

Share

ಕಳೆದ ಎರಡು ದಿನಗಳಿಂದ ಶ್ರೀಲಂಕಾದಿಂದ 5 ಲಕ್ಷ ಟನ್‌  ಅಡಿಕೆ ಆಮದು ಮಾಡಿಕೊಳ್ಳುವ ಎರಡು ಕಂಪನಿಗಳ ಒಪ್ಪಂದವು ಚರ್ಚೆಯಾಗುತ್ತಿದೆ. ಈ ನಡುವೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು  ಅಡಿಕೆ ಬೆಳೆಗಾರರಿಗೆ ಧೈರ್ಯ ತುಂಬಿದ್ದಾರೆ. ಅಡಿಕೆ ಆಮದು ಆಗುವುದಿಲ್ಲ, ಇದೆಲ್ಲಾ ಸುಳ್ಳು ಸುದ್ದಿಗಳು ಎಂದು ಹೇಳಿದ್ದಾರೆ.

ಬಿಳಿನೆಲೆ ಬಳಿಯ ಸಿಪಿಸಿಆರ್‌ಐ ಕಿದುವಿನಲ್ಲಿ ನಡೆದ ಕೃಷಿಕರ ಸಮಾವೇಶದಲ್ಲಿ ಮಾತನಾಡಿದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ, ಈ ಬಾರಿ ಅಡಿಕೆ ಆಮದು ಆಗಿದೆ. ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಕಳ್ಳದಾರಿಯ ಮೂಲಕವೇ ಆಗಿದೆ. ಆದರೆ ಕಾನೂನು ಮಾರ್ಗದಲ್ಲಿಯೇ ಅಡಿಕೆ ಆಮದು ಆದರೆ ಜಿಎಸ್ಟಿ ಸಹಿತ ಆಮದಾಗುತ್ತದೆ, ಆಗ ಆಮದು ದರ ನಿಗದಿಯಾದ  351 ದರಕ್ಕಿಂತ ಹೆಚ್ಚಿನ ದರದಲ್ಲಿ ಆಮದಾಗುವ ಕಾರಣದಿಂದ ಇಲ್ಲಿನ ಮಾರುಕಟ್ಟೆ ಮೇಲೆ ಪರಿಣಾಮವಾಗದು. ಜಿಎಸ್ಟಿ ಇಲ್ಲದೆ ನಡೆಯುವ ಅಡಿಕೆ ವ್ಯವಹಾರದಿಂದ ಸಹಕಾರಿ ಸಂಸ್ಥೆಗಳಿಗೆ ಸಂಕಷ್ಟವಾಗುತ್ತದೆ, ಈ ಬಗ್ಗೆ ಪ್ರಧಾನಿಗಳ ಗಮನಕ್ಕೂ ಮಾಹಿತಿಯನ್ನು ಕ್ಯಾಂಪ್ಕೋ ತಲಪಿಸಿದೆಎಂದ ಕಿಶೋರ್‌ ಕುಮಾರ್ ಕೊಡ್ಗಿ,ಶ್ರೀಲಂಕಾದಿಂದ 5 ಲಕ್ಷ ಟನ್‌ ಅಡಿಕೆ ಆಮದು ಎಂಬ ಸುದ್ದಿಯಾಗಿದೆ. ಇದು ಸ್ವಲ್ಪ ಗೊಂದಲವೂ ಆಗಿದೆ. ಆದರೆ ಇದು ಸುಳ್ಳಾಗಿದೆ. ಈ ಸುದ್ದಿಗಳ ನಡುವೆಯೇ ಕ್ಯಾಂಪ್ಕೋ 5 ರೂಪಾಯಿ ಧಾರಣೆಯನ್ನು ಏರಿಕೆ ಮಾಡಿದೆ. ಆಮದು ಸಂಕಷ್ಟ ಇದ್ದರೆ ಏರಿಕೆ ಹೇಗೆ ಸಾಧ್ಯ ಎನ್ನುವುದು ಪ್ರಶ್ನೆಯಾಗಿದೆ. ಯಾವುದೇ ಕಾರಣಕ್ಕೂ ಬೆಳೆಗಾರರು ಭಯಗೊಳ್ಳಬೇಡಿ ಎಂದರು. ರೈತರಿಗೆ ಗೊಂದಲ ಬೇಡ ಎಂದರು. ಮಾರುಕಟ್ಟೆ ದರ ಹಿತವಾಗಿರುವ ಬೆಳೆಗಾರರ ನೆರವೂ ಅಗತ್ಯವಾಗಿದೆ. ಅಡಿಕೆಯನ್ನು ಒಮ್ಮೆಲೇ ಮಾರುಕಟ್ಟೆಗೆ ಬಿಡಬೇಡಿ, ಅಗತ್ಯಕ್ಕೆ ತಕ್ಕಂತೆ ಮಾತ್ರವೇ ಮಾರಾಟ ಮಾಡುವ ಮೂಲಕ ಅಡಿಕೆ ಮಾರುಕಟ್ಟೆಯನ್ನೂ ಸ್ಥಿರಗೊಳಿಸಲು ಸಾಧ್ಯ ಎಂದರು.ದರದ ಸ್ಥಿರತೆ ವ್ಯತ್ಯಾಸ ಇರುತ್ತದೆ. ಇದು ಮಾರುಕಟ್ಟೆ ಸಹಜ ಪ್ರಕ್ರಿಯೆ.

ಇಂದು  ತಮಿಳುನಾಡು, ಆಂಧ್ರಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಬಯಲು ಸೀಮೆಗೂ ಅಡಿಕೆ ವಿಸ್ತರಣೆಯಾಗಿದೆ. ನೂರಾರು ಅಡಿಕೆ ಕೊಳವೆ ಬಾವಿ ಕೊರೆದು ಅಡಿಕೆ ಬೆಳೆಸಲಾಗುತ್ತದೆ. ಇದು ದುರಂತಕ್ಕೆ ಸಾಕ್ಷಿಯಾಗಿದೆ. ಭತ್ತ, ಕಬ್ಬು ಪ್ರದೇಶದಲ್ಲೂ ಅಡಿಕೆಯಾಗುತ್ತಿದೆ. ಕುಡಿಯಲು ನೀರಿಲ್ಲದೇ ಇರುವ ಜಾಗದಲ್ಲೂ ಟ್ಯಾಂಕರ್‌  ನೀರು ತಂದು ಅಡಿಕೆ ಬೆಳೆಯಲಾಗುತ್ತದೆ. ಅಡಿಕೆ ಬೆಳೆ ಧಾರಣೆ ಕಡಿಮೆಯಾಗುತ್ತದೆ ಎನ್ನುವ ಗೊಂದಲದ ನಡುವೆ ಪರ್ಯಾಯ ಬೆಳೆಯತ್ತಲೂ ಕೃಷಿಕರು ಮನಸ್ಸು ಮಾಡಬೇಕು. ಅಡಿಕೆಯಲ್ಲಿ ಮಿಶ್ರ ಬೆಳೆಯೂ ಅಗತ್ಯ ಎಂದು ಕಿಶೋರ್‌ ಕುಮಾರ್‌ ಕೊಡ್ಗಿ ಎಚ್ಚರಿಸಿದರು.

ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅಡಿಕೆ ಧಾರಣೆ ಇಳಿಕೆಯಾಗದಂತೆ ಸರ್ಕಾರ ಎಚ್ಚರ ವಹಿಸಿದೆ. ಅಡಿಕೆ ಆಮದು ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಈಗ ಬೇರೆ ದೇಶದಿಂದ ಅಡಿಕೆ ಆಮದಾಗಲು ಸಾಧ್ಯವೇ ಇಲ್ಲ.‌ ಭೂತಾನ್‌ನಿಂದ ಅಡಿಕೆ ಆಮದು ಮಾಡಲು ಅಂದು ಒಪ್ಪಿತ್ತು. ಭೂತಾನ್ ದೇಶ ಸಂಕಷ್ಟದಲ್ಲಿದೆ ಎಂದು ಅಲ್ಲಿನ ಸರ್ಕಾರ ಮನವಿ ಮಾಡಿತ್ತು, ಹೀಗಾಗಿ ಒಂದು ವರ್ಷಕ್ಕೆ ಸೀಮಿತವಾಗಿ ಆಮದಾಗಿತ್ತು. ಈ ದೇಶಕ್ಕೆ ಹೋಲಿಸಿದರೆ ಅತೀ ಕಡಿಮೆ ಹಸಿ ಅಡಿಕೆ  ಆಮದಾಗಿತ್ತು. ಈ ವರ್ಷ ಮತ್ತೆ ಬೇಡಿಕೆ ಇಟ್ಟಾಗ ತಿರಸ್ಕರಿಸಲಾಗಿತ್ತು. ಈಗ ಭೂತಾನ್‌ ಅಡಿಕೆ ಆಮದು ಮಾಡಲಾಗುತ್ತಿಲ್ಲ.  ಶ್ರೀಲಂಕಾದಿಂದ ಕೂಡಾ ಅಡಿಕೆ ಆಮದು ಆಗುವುದು ಇಲ್ಲ. ಈಗ ಈ ಸುದ್ದಿ ಹರಡಿರುವುದು ಯಾವುದೇ ವ್ಯಾಪಾರಿಗಳ ತಂತ್ರವಾಗಿದೆ. ಆಮದು ಸುದ್ದಿ ಹರಡಿಸಿ ಧಾರಣೆ ಕುಸಿತ ಮಾಡಿ ಅಡಿಕೆ ಖರೀದಿ ಮಾಡುವ ತಂತ್ರವಾಗಿದೆ.ಅನಾವಶ್ಯಕವಾದ ಗೊಂದಲ ಉಂಟಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

CAMPCO President Kishore Kumar Kodgi and Union Minister Shobha Karandlaje said that Arecanut cannot be imported, this is all false information.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 13-03-2025 | ಕೆಲವು ಕಡೆ ತುಂತುರು- ಸಾಮಾನ್ಯ ಮಳೆ ಸಾಧ್ಯತೆ |

ಲಾ ನಿನಾ ಪ್ರಭಾವ ಇರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಒಳನಾಡು,…

26 minutes ago

ಸೂಚನೆಯೇ ಇಲ್ಲದೆ ನಿನ್ನೆಯ ಮಳೆ ಸುರಿದದ್ದು ಹೇಗೆ..? | ಕರಾವಳಿ ಜಿಲ್ಲೆಯಲ್ಲಿ ಸುರಿದ ಬೇಸಿಗೆ ಮಳೆ ಎಷ್ಟು…? | ಮೊದಲ ಮಳೆ 100 ಮಿಮೀ ದಾಟಿತ್ತು…! |

ಅಷ್ಟೊಂದು ಪ್ರಮಾಣದ ಮಳೆಯು ಯಾವ ಮುನ್ಸೂಚನೆಯಲ್ಲೂ ಇರಲಿಲ್ಲ. ನಿರೀಕ್ಷೆಯೂ ಇರಲಿಲ್ಲ. ಬೆಳಿಗ್ಗೆ ಚಳಿ,…

2 hours ago

ಇಂದೂ ಕರಾವಳಿ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ | ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ…

3 hours ago

ಏಪ್ರಿಲ್‌ನಲ್ಲಿ ಶನಿ ನಕ್ಷತ್ರ ಪ್ರವೇಶದಿಂದ 5 ರಾಶಿಗಳ ಲೈಫ್ ಚೇಂಜ್ ಆಗುವ ಸಾಧ್ಯತೆ‌ |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

7 hours ago

ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನ | ಆತಂಕಪಡುವ ಅಗತ್ಯವಿಲ್ಲ | ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಸ್ಪಷ್ಟನೆ

ಕೊಡಗು ಜಿಲ್ಲೆಯ ಕೆಲವೆಡೆ ಲಘು ಭೂಕಂಪನವಾಗಿದ್ದು ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 1.6…

16 hours ago

ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆ ಗುಡುಗು ಸಹಿತ ಗಾಳಿ-ಮಳೆ | ಎರಡನೇ ಬಾರಿ ಸುರಿದ ಧಾರಾಕಾರ ಮಳೆ |

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ತಾಲೂಕುಗಳ ಹಲವು ಕಡೆ ಸಂಜೆ ಉತ್ತಮ ಮಳೆಯಾಗಿದೆ.…

16 hours ago