Opinion

ಕರಾವಳಿಯ ವಾಣಿಜ್ಯ ಬೆಳೆ ಅಡಿಕೆ, ಕೊಕೋ, ರಬ್ಬರ್‌, ಕರಿಮೆಣಸು ಮಾತುಕತೆ | ಈಗ ಯಾವುದಕ್ಕೆ ಎಷ್ಟು ಬೆಲೆ ಇದೆ..?

Share

ರಬ್ಬರ್(rubber),  ಕೊಕ್ಕೋ(cocoa) ಇವರುಗಳ ಮಧ್ಯೆ ಜಂಭದಲ್ಲಿ ಚರ್ಚೆ ನಡೆಯುತ್ತಿದೆ. ಏಕೆಂದರೆ ಹಳ್ಳಿ(village), ಪಟ್ಟಣಗಳ(city) ಮಾರುಕಟ್ಟೆಯಲ್ಲಿ(market) ಈಗ ಇವರದ್ದೇ ದರ್ಬಾರ್. ಕೊಕ್ಕೋ ರಬ್ಬರ್ ನ್ನು ಅಪಹಾಸ್ಯ ಮಾಡುತಿತ್ತು ಹೀಗೆ, ನಾನು ನಿನ್ನ ಬೆಲೆಯಲ್ಲಿ(price hike) ಹಿಂದಿಕ್ಕದೆ ‘ನಾ ನಿನ್ನ ಬೆನ್ನಟ್ಟದೆ ಬಿಡಲಾರೆ’ ಎಂದಿತ್ತು, ಕೊಕ್ಕೋದ ಮಾತು ಕೇಳಿ ರೋಸಿ ಹೋದ ರಬ್ಬರ್ ಎಂದಿತ್ತು ಹೀಗೆ, ‘ನೀ ನನ್ನ ಅಟ್ಟಿಸಿಕೊಂಡು ಬಂದರೂ ನೀ ನನ್ನ ಗೆಲ್ಲಲಾರೆ ‘ಎಂದಿತ್ತು.ಈಗ ಕೊಕ್ಕೋ ಬೆಲೆ 160, ರಬ್ಬರ್ ಬೆಲೆ 175, ಕಾಳುಮೆಣಸು 500, ಅಡಿಕೆ 350…!

Advertisement

ಇವರುಗಳ ಒಣ ಜಂಬ ಕೇಳಿಸಿಕೊಂಡ ಕರಿಮೆಣಸು(pepper) ಮತ್ತು ಅಡಿಕೆ(arecanut) ಇವರುಗಳ ಗತ್ತು ಅಹಂಕಾರವನ್ನು ಸಾಕಷ್ಟು ಬಾರಿ ಅನುಭವಿಸಿದವರು ಒಬ್ಬರೊಂದಿಗೆ ಒಬ್ಬರು ಪರಸ್ಪರ ಹೀಗೆ ಮಾತನಾಡಿಕೊಳ್ಳುತ್ತಿದ್ದರು. ಅವರುಗಳ ಈಗಿನ ಗತ್ತು ದೌಲತ್ತು ನೋಡು ಎಂದು ಕರಿಮೆಣಸು ಅಡಿಕೆಯಲ್ಲಿ ಹೇಳಿತ್ತು ಹೀಗೆ ಬೆಲೆ ಸ್ಪರ್ಧೆಯಲ್ಲಿ ನಾನು 800 ಮೈಲ್ ಓಡಿದವನು ನಾನು, ಈಗ ನೋಡು ನನಗೆ 500 ಮೈಲ್ ಓಡಲು ಸಹ ಬಿಡುವುದಿಲ್ಲ ಈಗಿನ ಬೆಲೆ ಇಲಾಖೆ ಎಂದು ದುಃಖದಿಂದ ತನ್ನ ಅಳಲು ತೋಡಿಕೊಂಡಿತ್ತು.

ಕರಿಮೆಣಸಿನ ಮಾತು ಆಲಿಸಿದ ಅಡಕೆ ಅಯ್ಯೋ ನನ್ನ ಪರಿಸ್ಥಿತಿ ಕೇಳು. ನಾನು ನಿನ್ನಷ್ಟು ಎತ್ತರಕ್ಕೆ ಏರದಿದ್ದರೂ 550 ರಷ್ಟು ಮೈಲ್ ಓಡಿದ್ದೇನೆ. ಒಂದೆರಡು ವರ್ಷ ಭಾರತ, ವಿದೇಶದಲ್ಲಿ ನನ್ನದೇ ಹವಾ, ಈಗ ನೋಡು ಇಲ್ಲಿನ ಕ್ರೀಡಾ ಇಲಾಖೆ ಗಟ್ಟಿ ಮುಟ್ಟಾಗಿದ್ದ ನನ್ನನ್ನು ದೂರ ತಳ್ಳಿ ವಿದೇಶದಿಂದ ಎರವಲು ತಂದು ನನ್ನನ್ನು ಮೂಲೆಗೆ ಹಾಕುವ ಪ್ರಯತ್ನ ನಡೆಯುತ್ತಿದೆ. ಆದರೂ ನನ್ನ ಪ್ರತಿಭೆಗೆ ಕುಂದು ಬಂದಿಲ್ಲ. ಒಂದಲ್ಲ ಒಂದು ದಿನ ಈಗಿನ 350,430 ಮೈಲ್ ದಾಟಿ 500 ರ ಗಡಿ ತಲುಪುವ ವಿಶ್ವಾಸ ಇಟ್ಟು ಕೊಂಡಿರುವೆ.

ಕೊನೆಗೆ ಅಡಿಕೆ ಕರಿಮೆಣಸು ಇಬ್ಬರು ಒಂದು ಅಂದಾಜುಗೆ ಬಂದವರು ನೋಡುವ, ಕೊಕ್ಕೋ, ರಬ್ಬರ್ ಇವರ ದರ್ಬಾರ್ ಎಲ್ಲಿತನಕ ತಲುಪುತ್ತದೆ ಎಂದು ಕಾದು ನೋಡುವ. ನಾವಿಬ್ಬರು ಅವರ ಇಬ್ಬರ ಓಟದ ಬಗ್ಗೆ ನಂಜಿ ಕಕ್ಕುವುದು ಬೇಡ. ನಮ್ಮನ್ನು ಮೀರಿ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಓಡಿದರೂ ಹೊಟ್ಟೆಕಿಚ್ಚು ಪಡುವುದು ಬೇಡವೆಂದು ಪರಸ್ಪರ ಕೈ ಕುಲುಕಿ ಅಲ್ಲಿಂದ ತೆರಳಿದರು.

ಈ ನಾಲ್ಕು ಜನರ ಮಾತನ್ನು ಕೇಳಿಸಿಕೊಂಡ ಗೇರು ಬೀಜ ನಾಳೆ ನಾನು ನಿಮ್ಮ ಮುಂದೆ ಕಾಣಿಸಿಕೊಳ್ಳುವೆ ಎಂದು ಮರೆಯಲ್ಲಿ ಇತ್ತು. ನಾಳೆ ನೋಡುವ ಇವನ ವಿಚಾರ.ನಾಳೆ ನಮ್ಮ ಗುಡ್ಡೆಯಲ್ಲಿ ಕೆಂಪು, ಹಳದಿ ಲೈಟ್ ರೀತಿ ಕಾಣುವ ಇವನನ್ನು ಭೇಟಿ ಮಾಡುವ ಆಲೋಚನೆಯಲ್ಲಿ ಇದ್ದೇನೆ. ಇಂದು ಆ ಕಡೆ ಒಮ್ಮೆ ದೂರದಿಂದ ನೋಡಿದೆ ನಮ್ಮ ಪೂರ್ವಜರಾದ ಕೋತಿಗಳು ಮರವನ್ನು ಸುತ್ತುವರಿದು ಅಲುಗಾಡಿಸುತ್ತಿದ್ದರು.

ಬರಹ :
ಹರೀಶ್ ಪೆರಾಜೆ ಕೆ ಸಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೊಪ್ಪಳ | ಕುಡಿಯುವ ನೀರು  ಮತ್ತು ಮೇವಿನ ಸಮಸ್ಯೆ ಕುರಿತು  ಮುನ್ನೆಚ್ಚರಿಕಾ ಕ್ರಮ

ಕುಡಿಯುವ ನೀರು  ಮತ್ತು ಮೇವಿನ ಸಮಸ್ಯೆ ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು…

4 hours ago

ಹುರಿದ ಅಡಿಕೆ ಆಮದು ತಡೆಗೆ ಕ್ರಮ – ಕ್ಯಾಂಪ್ಕೋ ಶ್ಲಾಘನೆ

ಅಡಿಕೆ ಆಮದು ತಡೆಯ ನಿಟ್ಟಿನಲ್ಲಿ ಡಿಜಿಎಫ್‌ಟಿ(DGFT) ಹುರಿದ ಅಡಿಕೆಯ ನೆಪದಲ್ಲಿ ಬರುವ ಅನಿರ್ಬಂಧಿತ…

5 hours ago

ಪುತ್ತೂರು-ಸುಳ್ಯದ ಕೆಲವು ಕಡೆ ಭರ್ಜರಿ ಗಾಳಿ- ಮಳೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಸೇರಿದಂತೆ ಮಲೆನಾಡು ಭಾಗದ ಕೆಲವು ಕಡೆ…

9 hours ago

ಹವಾಮಾನ ವರದಿ | 05-04-2025 | ಇಂದೂ ಅಲ್ಲಲ್ಲಿ ಗುಡುಗು ಸಹಿತ ಮಳೆ | ಎ.7 ರಿಂದ ಮಳೆಯ ಪ್ರಮಾಣ ಕಡಿಮೆ ಸಾಧ್ಯತೆ |

ಈಗಿನಂತೆ ಎಪ್ರಿಲ್ 7 ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.

13 hours ago

ನಾರಾಯಣಪುರ ಜಲಾಶಯ ವ್ಯಾಪ್ತಿಯ ರೈತರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ | ಮಾಜಿ ಸಚಿವ ನರಸಿಂಹ ನಾಯಕ್

ಕಲಬುರಗಿ ಹೈಕೋರ್ಟ್ ಪೀಠವು ನಾರಾಯಣಪುರ ಜಲಾಶಯದಿಂದ ಕಾಲುವೆಗೆ ನೀರು ಹರಿಸುವಂತೆ ಆದೇಶ ನೀಡಿದರೂ…

14 hours ago

2025 ರಲ್ಲಿ ಲಕ್ಷ್ಮಿ ನಾರಾಯಣ ಯೋಗ | ಮಹಾಸಪ್ತಮಿ ದಿನದ ವಿಶೇಷ ಲಾಭ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

17 hours ago