ಸುದ್ದಿಗಳು

ಅಡಿಕೆ ಹಳದಿ ಎಲೆರೋಗ-ಎಲೆಚುಕ್ಕಿ ರೋಗ | ಕ್ಯಾಂಪ್ಕೋ ನೇತೃತ್ವದಲ್ಲಿ ಸಭೆ | ಕೃಷಿ ಪ್ರಮುಖರಿಂದ ಹಾಗೂ ವಿಜ್ಞಾನಿಗಳಿಂದ ಅಭಿಪ್ರಾಯ ಮಂಡನೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅಡಿಕೆ ಹಳದಿ ಎಲೆರೋಗ ಹಾಗೂ ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿದಂತೆ ಕ್ಯಾಂಪ್ಕೋ ನೇತೃತ್ವದಲ್ಲಿ‌ ಎಆರ್‌ಡಿಎಫ್‌ ಸಹಯೋಗದೊಂದಿಗೆ ಮಂಗಳೂರಿನಲ್ಲಿ ಕೃಷಿ ಪ್ರಮುಖರು ಹಾಗೂ ವಿಜ್ಞಾನಿಗಳ ಸಭೆ ಶುಕ್ರವಾರ ನಡೆಯಿತು. ಸಭೆಯಲ್ಲಿ ವಿಜ್ಞಾನಿಗಳು ಹಾಗೂ ಕೃಷಿ ಪ್ರಮುಖರು ವಿಷಯ ಮಂಡಿಸಿದರು.

Advertisement

ಅಡಿಕೆ ಮತ್ತು ಸಾಂಬಾರ ಮಂಡಳಿಯ ನಿರ್ದೇಶಕ ಡಾ.ಹೋಮಿ ಚೆರಿಯನ್‌ ಪ್ರಸ್ತಾವನೆಗೈದರು. ಬಳಿಕ ಅಡಿಕೆ ಹಳದಿ ಎಲೆರೋಗದ ಹಾಗೂ ಎಲೆಚುಕ್ಕಿ ರೋಗದ ಬಗ್ಗೆ ಸಿಪಿಸಿಆರ್‌ ಐ ವಿಜ್ಞಾನಿ ಡಾ. ವಿನಾಯಕ ಹೆಗಡೆ, ಎಆರ್‌ಡಿಎಫ್ ವಿಜ್ಞಾನಿ ಡಾ.ಕೇಶವ ಭಟ್‌, ISIRI ಯ ಡಾ.ನಂದಿನಿ ಎಂ ಘಂಟೆ, ಶಿವಮೊಗ್ಗ ವಿವಿಯ ಡಾ.ಗಂಗಾಧರ ನಾಯಕ್‌, ನಿಟ್ಟೆಯ ಇಂದ್ರಾಣಿ ಕರುಣಾಸಾಗರ್‌,  ವಿಷಯ ಮಂಡಿಸಿದರು. ಕೃಷಿಕರ ಪರವಾಗಿ ಬದನಾಜೆ ಶಂಕರ ಭಟ್‌, ಶೃಂಗೇರಿಯ  ಬಾಲಕೃಷ್ಣ ಅವರು ಮಾಹಿತಿ ಹಂಚಿಕೊಂಡರು. FSSAI ಯ ಡಾ ಐ ಕರುಣಾಸಾಗರ್‌ ಇದ್ದರು.

ವಿಜ್ಞಾನಿಗಳು ಅಡಿಕೆ ಹಳದಿ ಎಲೆರೋಗಕ್ಕೆ ಪೈಟೋಪ್ಲಾಸ್ಮಾ ಕಾರಣವಾಗಿದ್ದು ಇದಕ್ಕೆ ಸೂಕ್ತವಾದ ಔಷಧಿ ಇದುವರೆಗೂ ಪತ್ತೆಯಾಗಿಲ್ಲ. ಹೀಗಾಗಿ ರೋಗ ನಿರೋಧಕ ತಳಿ ಹಾಗೂ ಕೃಷಿ ನಿರ್ವಹಣೆಯೇ ಹೆಚ್ಚಿನ ಪರಿಹಾರ ನೀಡಬಲ್ಲುದು ಎಂದರು.

ಆದರೆ ISIRI ಯ ಡಾ.ನಂದಿನಿ ಎಂ ಘಂಟೆ ಅವರು ಫೈಟೋಪ್ಲಾಸ್ಮಾ ಮಾತ್ರಾ ಕಾರಣವಲ್ಲ ಎಂದರು. ಕೃಷಿಕರು ಹಾಗೂ ಇತರ ವಿಜ್ಞಾನಿಗಳು ರೋಗ ನಿಯಂತ್ರಣ ಹಾಗೂ ಹರಡುವಿಕೆ ಕಡಿಮೆ ಮಾಡಲು ಕೃಷಿ ನಿರ್ವಹಣೆ ಹಾಗೂ ಗೊಬ್ಬರ ನಿರ್ವಹಣೆಯೇ ಸೂಕ್ತ ಪರಿಹಾರ ಎಂದರು.

ಇಡೀ ಸಂವಾದವನ್ನು ಮುಕ್ತಾಯಗೊಳಿಸಿದ  ಅಡಿಕೆ ಮತ್ತು ಸಾಂಬಾರ ಮಂಡಳಿಯ ನಿರ್ದೇಶಕ ಡಾ.ಹೋಮಿ ಚೆರಿಯನ್‌ ಮಾತನಾಡಿ, ಅಡಿಕೆ ಹಳದಿ ಎಲೆರೋಗಕ್ಕೆ ರೋಗನಿರೋಧಕ ತಳಿಯೇ ಪರಿಹಾರವಾಗಿದೆ. ಅದು ಟಿಶ್ಯು ಕಲ್ಚರ್‌ ಮೂಲಕವೂ ಅಥವಾ ರೋಗನಿರೋಧಕ ತಳಿಗಳ ಅಭಿವೃದ್ಧಿಯ ಮೂಲಕವೂ ಆಗಬೇಕಿದೆ. ಇದಕ್ಕೆ ಅಗತ್ಯವಾದ ಕೆಲಸಗಳು ನಡೆಯುತ್ತದೆ. ಇದಕ್ಕಾಗಿ ಅಗತ್ಯ ನೆರವು ಸರ್ಕಾರ ಹಾಗೂ ಇತರೆಡೆಯಿಂದ ಲಭ್ಯವಾಗಲಿ, ವಿಜ್ಞಾನಿಗಳಿ ನಿರಂತರವಾಗಿ ಈ ಬಗ್ಗೆ ಕೆಲಸ ಮಾಡುತ್ತಾರೆ ಎಂದರು.

Advertisement

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಮಾತನಾಡಿ, ಅಡಿಕೆ ರೋಗ ನಿರ್ವಹಣೆಯ ಸಂದರ್ಭ ವಿಜ್ಞಾನಿಗಳ ನಡುವೆ ಸಂವಹನ ನಡೆಯಬೇಕಿದೆ,  ಸಮಯದ ಮಿತಿಯೊಳಗೆ ಕೆಲಸ ಮಾಡುವ ಅನಿವಾರ್ಯತೆ ಇದೆ ಎಲ್ಲರೂ ಜೊತೆಯಾಗಿ ಸಾಗಬೇಕಿದೆ ಎಂದರು. ಅಡಿಕೆ ಮಾರುಕಟ್ಟೆಗೆ ಸಂಬಂಧಿಸಿ ಕ್ಯಾಂಪ್ಕೋ ಕೆಲಸ ಮಾಡುತ್ತದೆ, ಅಡಿಕೆ ಹಳದಿ ಎಲೆರೋಗದ ವಿಷಯದಲ್ಲೂ ಕ್ಯಾಂಪ್ಕೋ ರೈತರ ಜೊತೆ ಇದೆ. ಆದರೆ ಅಡಿಕೆ ತೆರಿಗೆ ಸರ್ಕಾರಕ್ಕೆ ನೇರವಾಗಿ ಲಭ್ಯವಾಗುತ್ತದೆ, ಹೀಗಾಗಿ ಶೇ.2 ರಷ್ಟು ಅಡಿಕೆ ಸಂಶೋಧನೆಗೆ ಮೀಸಲು ಇಡಬೇಕು ಇದಕ್ಕೆ ಎಲ್ಲರೂ ಜೊತೆಯಾಗಿ ಕೆಲಸ ಮಾಡಬೇಕಿದೆ ಎಂದರು.

ಕ್ಯಾಂಪ್ಕೋ ಉಪಾಧ್ಯಕ್ಷ ಶಂ ನಾ ಖಂಡಿಗೆ, ಮಾಜಿ ಅಧ್ಯಕ್ಷರುಗಳಾದ ನಾಗರಾಜ ಶೆಟ್ಟಿ, ಪದ್ಮನಾಭ ಕೊಂಕೋಡಿ, ಎಸ್‌ ಆರ್‌ ಸತೀಶ್ಚಂದ್ರ, ಕ್ಯಾಂಪ್ಕೋ ನಿರ್ದೇಶಕರುಗಳು, ಟಿಎಸ್‌ಎಸ್‌, ಮ್ಯಾಂಮ್ಕೋಸ್‌ , ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಪ್ರತಿನಿಧಿಗಳು ಸೇರಿದಂತೆ ಪ್ರಮುಖ ಕೃಷಿಕರು ಭಾಗವಹಿಸಿದ್ದರು.

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹಂಸ ಮಹಾಪುರುಷ ರಾಜಯೋಗ | ಈ 3 ರಾಶಿಯವರಿಗೆ ಸಂಪತ್ತಿನ ಸುರಿಮಳೆ..!

2025 ರಲ್ಲಿ ಗುರು ಗ್ರಹವು ತನ್ನ ಸ್ವಂತ ರಾಶಿಯಾದ ಮೇಷದಲ್ಲಿ ಸಂಚರಿಸುತ್ತಿದ್ದಾಗ, ಶುಕ್ರ…

1 hour ago

ರಾಜ್ಯದ 6 ಕಡೆ ಕೌಶಲ್ಯ ಪ್ರಯೋಗಾಲಯ ನಿರ್ಮಿಸಲು ಸರ್ಕಾರ ನಿರ್ಧಾರ

ಮಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕಚೇರಿ ಕಟ್ಟಡ…

10 hours ago

ಕೋಲಾರದಲ್ಲಿ ಬಾಕಿ ಇರುವ 3610 ಜಮೀನಿನ ಸರ್ವೆ ಮುಂದಿನ ಎರಡು ತಿಂಗಳೊಳಗಾಗಿ ಪೂರ್ಣ

ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳಲ್ಲಿ ರೈತರಿಗೆ ಮಂಜೂರಾಗಿರುವ ಜಮೀನುಗಳಿಗೆ ಪೋಡಿ ದುರಸ್ತಿ ಮಾಡಲಾಗುತ್ತಿದೆ.…

10 hours ago

ಭಾರಿ ಮಳೆಗೆ ಮೂರು ಜನರು ಬಲಿ | ಕರಾವಳಿ ಜಿಲ್ಲೆಗಳಲ್ಲಿ ಜೂ.21 ರವರೆಗೆ ವ್ಯಾಪಕ ಮಳೆ |  ಹವಾಮಾನ ಇಲಾಖೆ ಮುನ್ಸೂಚನೆ

ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ.…

10 hours ago

ಎತ್ತಿನಹೊಳೆ ಯೋಜನೆಗಾಗಿ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಐಐಎನ್ ಪ್ಲಾಟಿನಂ 2025 ರಾಷ್ಟ್ರೀಯ ಪ್ರಶಸ್ತಿ

ಅಕ್ವಡಕ್ಟ್ ಇಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ಆರೋಗ್ಯ, ಸುರಕ್ಷತೆ, ಪರಿಸರ ಸ್ನೇಹಿ ಮಾದರಿಯಲ್ಲಿ ಎತ್ತಿನಹೊಳೆ…

10 hours ago

ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ ಜಾರಿಗೆ ತರಲು ಸರ್ಕಾರ ನಿರ್ಧಾರ

ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮವಾಗಬೇಕಿದ್ದು, ಇದು ಅತ್ಯಂತ ಅವಶ್ಯಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

11 hours ago