Advertisement
The Rural Mirror ಫಾಲೋಅಪ್

ಭೂತಾನ್‌ ದೇಶದ ಮೂಲಸೌಕರ್ಯ ಯೋಜನೆಗಳಿಗೆ ಭಾರತದಿಂದ 279.2 ಕೋಟಿ ನೆರವು | ಭಾರತವು ಭೂತಾನ್‌ ನೆರವಿಗೆ ನಿಲ್ಲುತ್ತಿರುವುದು ಏಕೆ?

Share
ಭೂತಾನ್‌ ಅಡಿಕೆ ಆಮದು ಬಗ್ಗೆ ಕಳೆದ ಹಲವು ದಿನಗಳಿಂದ ಭಾರತದ ಅದರಲ್ಲೂ ಕರ್ನಾಟಕದ ಗ್ರಾಮೀಣ ಭಾಗದಲ್ಲೂ ಚರ್ಚೆಯಾಗುತ್ತಿದೆ. ಹೀಗೆ ಅಡಿಕೆ ಆಮದು ಮಾಡಲೂ ಕಾರಣವಿದೆ. ಭೂತಾನ್‌ ಜೊತೆಗಿನ ಸ್ನೇಹವನ್ನು ಭಾರತ ಹೆಚ್ಚು ಬಯಸುತ್ತಿದೆ. ಭೂತಾನ್‌ ಕೂಡಾ ಭಾರತದ ಸ್ನೇಹವನ್ನು ನಿರೀಕ್ಷೆ ಮಾಡುತ್ತಿದೆ. ಇದರ ಹಿಂದೆ ಸೂಕ್ಷ್ಮ ನೋಟವೂ ಕಂಡುಬಂದಿದೆ. ಈ ನಡುವೆಯೇ ಭಾರತವು ಭೂತಾನ್‌ ದೇಶದ ಮೂಲಸೌಕರ್ಯಗಳಿಗೆ ನೆರವು ನೀಡುತ್ತಿದೆ.

ಭೂತಾನ್‌ನಲ್ಲಿನ ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಭಾರತವು 279.2 ಕೋಟಿ ರೂಪಾಯಿಗಳ ಅಭಿವೃದ್ಧಿ ಸಹಾಯವನ್ನು ಒದಗಿಸುತ್ತಿದೆ. ರಸ್ತೆ ಮೂಲಸೌಕರ್ಯ, ನಗರಾಭಿವೃದ್ಧಿ, ಕೃಷಿ, ಕೈಗಾರಿಕಾ ಅಭಿವೃದ್ಧಿ, ಆರೋಗ್ಯ ಮೂಲಸೌಕರ್ಯ, ಶಿಕ್ಷಣ ಮತ್ತು ಸಂಸ್ಕೃತಿ ಸಂರಕ್ಷಣೆಯಂತಹ ಕ್ಷೇತ್ರಗಳಲ್ಲಿ ಅನುಷ್ಟಾನ ಮಾಡಲಾಗುತ್ತದೆ  ಎಂದು ಭೂತಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

Advertisement
Advertisement

ಭೂತಾನ್‌ನಲ್ಲಿ ವ್ಯಾಪಾರ ಮೂಲಸೌಕರ್ಯ ಮತ್ತು ಆಡಳಿತ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಲು ಪರಿವರ್ತನಾ ವ್ಯಾಪಾರ ಬೆಂಬಲ ಸೌಲಭ್ಯಕ್ಕಾಗಿ ಕೂಡಾ ನೆರವು ನೀಡಲಾಗುತ್ತಿದೆ. ಭಾರತವು ಭೂತಾನ್‌ನಾದ್ಯಂತ ಹಲವಾರು  ಯೋಜನೆಗಳ ಅಭಿವೃದ್ಧಿಯನ್ನು ಬೆಂಬಲಿಸುತ್ತಿದೆ. ಭೂತಾನ್ ಭಾರತದ ಉತ್ತಮ ಸ್ನೇಹಿತ ದೇಶವಾಗಿ ಮುಂದುವರಿಯುತ್ತಿದೆ. ಭಾರತಕ್ಕೆ ಭೂತಾನ್‌ ದೇಶವು ವಿವಿಧ ಕಾರಣಗಳಿಗೆ ಹತ್ತಿರವಾಗಿದೆ. ಈಗ ಉಭಯ ದೇಶಗಳ ನಡುವಿನ ರಾಜಕೀಯ ಸಂಬಂಧಗಳು ಕೂಡ ಬಹಳ ಉತ್ತಮವಾಗಿವೆ. ಭೂತಾನ್ ಎಲ್ಲಾ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಭಾರತಕ್ಕೆ ಬೆಂಬಲವನ್ನು ನೀಡುತ್ತದೆ.

Advertisement

ಇದಕ್ಕೆ ಪ್ರಮುಖ ಕಾರಣ ಇದೆ. ಭೂತಾನ್ ಚೀನಾದೊಂದಿಗೆ ಈಚೆಗೆ ಸೀಮಿತ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದೆ. ಭೂತಾನ್ ಮೇಲೆ ಭಾರತದ ಒತ್ತಡವೇ ಕಾರಣ ಎಂದು ಚೀನಾ ಈಚೆಗೆ ಹೇಳಿದೆ. ಭೂತಾನ್ ದೇಶವು ಭಾರತ ಮತ್ತು ಚೀನಾ ನಡುವಿನ ಬಫರ್ ದೇಶವಾಗಿದೆ. ಹೀಗಾಗಿ ಈಗ ಭಾರತಕ್ಕೆ ಭೂತಾನ್‌ ದೇಶವು ಹೆಚ್ಚು ಆಪ್ತವಾಗಿದೆ. ಭೂತಾನ್‌ ಚೀತಾನದೊಂದಿಗೆ ಸೀಮಿತ ಸಂಬಂಧ ಹೊಂದಿದೆ. ಆದರೆ ಭಾರತವು ಈಗ ಭೂತಾನ್‌ಗೆ ಹೆಚ್ಚಿನ ಅನುದಾನದ ನೆರವು ಒದಗಿಸುವ ದೇಶವಾಗಿದೆ.

ಭಾರತವು ಈಗ ಭೂತಾನ್‌ನ ಅತಿದೊಡ್ಡ ವ್ಯಾಪಾರ ಪಾಲುದಾರ  ದೇಶವೂ ಆಗಿದೆ. ಇತ್ತೀಚೆಗೆ, ಭೂತಾನ್ ಸರ್ಕಾರದ ಕೋರಿಕೆಯ ಮೇರೆಗೆ ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಭಾರತವು ನಿಯಮಾವಳಿಗಳನ್ನು ಸಡಿಲಗೊಳಿಸಿದೆ. ಭಾರತ ಸರ್ಕಾರವು ಭೂತಾನ್‌ನಿಂದ ವಾರ್ಷಿಕವಾಗಿ 17,000 ಟನ್ ಹಸಿರು ಅಡಿಕೆಯನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ.‌ ಭೂತಾನ್‌ ದೇಶವು ಭಾರತದ ಅಡಿಕೆ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಕೂಡಾ ಸಿದ್ಧತೆ ಮಾಡಿಕೊಂಡಿದೆ.

Advertisement

ಹೀಗಾಗಿ ಸದ್ಯ ಭೂತಾನ್‌ ದೇಶದಿಂದ ಅಡಿಕೆ ಆಮದು ಸ್ಥಗಿತಗೊಳ್ಳುವುದು ಕಷ್ಟವಿದೆ. ಭಾರತಕ್ಕೆ ಅಂತರಾಷ್ಟ್ರೀಯ ಸಂಬಂಧ ಗಟ್ಟಿಯಾಗಲು ಹಾಗೂ ನೆರೆಯ ಚೀನಾ ದೇಶವನ್ನು ಬಗ್ಗು ಬಡಿಯಲು ಭೂತಾನ್‌ ನೆರವು ಅಗತ್ಯವಿದೆ. ಇದಕ್ಕಾಗಿ ಕೆಲವೊಂದು ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದೆ ಎನ್ನುವುದು ರಾಜಕೀಯ ವಿಶ್ಲೇಷಣೆಯ ವರದಿಯಾಗಿದೆ.

 

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

1 day ago

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |

ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.

1 day ago

ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುಳ್ಯ,ಕಡಬ ತಾಲೂಕಿನ  ಘಟ್ಟದ ತಪ್ಪಲಿನ ಪ್ರದೇಶದಲ್ಲಿ ಗುಡುಗು ಸಿಡಿಲು…

2 days ago

ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ

04.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…

2 days ago

ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |

03.05.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

3 days ago

ಬಿದಿರು ಕೃಷಿ | ತರಕಾರಿ ಕೃಷಿಯಾಗಿ ಬಿದಿರು

ಬಿದಿರು ಕೃಷಿಯ ಬಗ್ಗೆ ಈಗ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಈ ನಡುವೆ ಪುತ್ತೂರು…

3 days ago