Advertisement
MIRROR FOCUS

ಭೂತಾನ್‌ ಅಡಿಕೆ ಆಮದು | ಹಸಿ ಅಡಿಕೆ ಆಮದು ಬಿಗಿ ಕ್ರಮಕ್ಕೆ ಸೂಚನೆ |

Share

ಭೂತಾನ್‌ನಿಂದ ಅಡಿಕೆ(Arecanut) ಆಮದು ಮಾಡುವ ವೇಳೆ ಬಿಗಿಯಾದ ಕ್ರಮ ಕೈಗೊಳ್ಳಲು ಹಾಗೂ ಸರಿಯಾದ ಮಾರ್ಗಸೂಚಿ ಅನುಸರಿಸಲು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರೀಯ  ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ(CBIC) ಕೋಲ್ಕತ್ತಾ ಕಸ್ಟಮ್ಸ್ ವಲಯಕ್ಕೆ ನಿರ್ದೇಶನ ನೀಡಿದೆ.

Advertisement
Advertisement
Advertisement
Advertisement

ಆಮದು ನೀತಿಯ ಪ್ರಕಾರ ಇದುವರೆಗೆ ಹಸಿ ಅಡಿಕೆ ಆಮದು ಅವಕಾಶ ಇರಲಿಲ್ಲ. ಆದರೆ ವಿಶೇಷ ಸೂಚನೆಯಂತೆ ಈಗ ಹಸಿರು ಅಡಿಕೆಗೆ ಆಮದು ನೀತಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಕೆಲವು ನಿಯಮಗಳಲ್ಲಿ ಬದಲಾವಣೆ ಹಾಗೂ ಕಟ್ಟುನಿಟ್ಟಿನ  ಕೆಲವು  ಅಗತ್ಯ ಕ್ರಮಗಳು ಬೇಕಾಗಿದೆ ಎಂದು ಕೇಂದ್ರೀಯ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಹೇಳಿದೆ.

Advertisement
ಆದೇಶದ ಪ್ರತಿ

ಆಮದು ನೋಂದಣಿ ಪ್ರಮಾಣಪತ್ರಗಳ ನೋಂದಣಿ ಹಾಗೂ ಆಮದು ಮತ್ತು ರಫ್ತು ಪ್ರಮಾಣದ ಮಾನ್ಯತೆ , ಮೇಲ್ವಿಚಾರಣೆ ಮಾಡಲು ಸೂಕ್ತವಾದ ಕಾರ್ಯವಿಧಾನವೂ ಅಗತ್ಯವಿದೆ. ಇದರ ಜೊತೆಗೆ ಈ ವರ್ಷ ಕನಿಷ್ಟ ಆಮದು ಬೆಲೆ(MIP) 251 ರೂಪಾಯಿ  ಮಾನದಂಡ ಇಲ್ಲದೆಯೇ ಅಡಿಕೆ ಆಮದು ಆಗುತ್ತದೆ, ಆದರೆ ಇಲ್ಲಿ ಹಸಿ ಅಡಿಕೆ ಮಾತ್ರವೇ ಆಮದು ಆಗಬೇಕು. ಅದರ ಜೊತೆಗೆ ಭೂತಾನ್‌ ದೇಶದಿಂದ ಮಾತ್ರವೇ ಒಂದು ಬಂದರಿನ ಮೂಲಕವೇ 17000 ಟನ್‌ ಹಸಿಅಡಿಕೆ  ಆಮದು ಆಗಬೇಕು. 2022-23 ರಲ್ಲಿ 8500 ಟನ್‌ ಹಾಗೂ 2023-24 ರ ನಂತರ 17000 ಟನ್‌ ಆಮದು ಮಾಡಲು ಡಿಜಿಎಫ್‌ಟಿ ಅನುಮತಿ ನೀಡಿದೆ. ಹೀಗಾಗಿ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕು  ಎಂದು ಕೋಲ್ಕತ್ತಾ ಕಸ್ಟಮ್ಸ್‌ ವಲಯಕ್ಕೆ ಕೇಂದ್ರೀಯ  ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ನಿರ್ದೇಶನ ನೀಡಿದೆ.ಉಳಿದಂತೆ ಡಿಜಿಎಫ್‌ಟಿ ನಿಯಮಗಳು ಪಾಲನೆಯಾಗಬೇಕು ಎಂದು ಹೇಳಿದೆ.

ಈಗಿನ ಆಮದು ನೀತಿ ಪ್ರಕಾರ ಹಾಗೂ ಅಡಿಕೆ ಆಮದು ಶರ್ತಗಳ ಪ್ರಕಾರ ಹಸಿ ಅಡಿಕೆ ನಿಷೇಧಿತ ವಸ್ತುವಾಗಿದೆ ಎಂಬ ಅಂಶದ ಹಿನ್ನೆಲೆಯಲ್ಲಿ  ಪರಿಷ್ಕೃತ ನೀತಿ ನಿಬಂಧನೆಗಳ ಪರಿಣಾಮಕಾರಿ ಅನುಷ್ಠಾನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

Advertisement

 

Advertisement

ಸೆ.28 ರಂದು ಆಮದು ಅಧಿಸೂಚನೆ ಹೊರಡಿಸಲಾಗಿತ್ತು. ಕನಿಷ್ಟ ಆಮದು ಬೆಲೆ ಇಲ್ಲದೆಯೇ ಭೂತಾನ್‌ನಿಂದ 17000 ಟನ್‌ ಹಸಿ ಅಡಿಕೆ ಆಮದು ಮಾಡಿಕೊಳ್ಳಲು DGFT  ಅನುಮತಿ ನೀಡಿತ್ತು ಹಾಗೂ ಅದಕ್ಕೆ ಅಗತ್ಯವಾದ ಕಾರ್ಯಸೂಚಿ, ಅರ್ಜಿ, ನೋಂದಣಿ ಹಾಗೂ ಆಮದು ನಿಯಮಗಳ ಬಗ್ಗೆ ಹೇಳಿತ್ತು. ಆದರೆ ಹಸಿ ಅಡಿಕೆ ಆಮದಿಗೆ ಕೆಲವು ನೀತಿಗಳಲ್ಲಿ ಬದಲಾವಣೆ ಅಗತ್ಯವಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಯುವಕರಲ್ಲಿ ಹೆಚ್ಚುತ್ತಿರುವ ಸ್ಥೂಲ ಕಾಯ | ಮನ್ ಕಿ ಬಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳವಳ

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…

35 mins ago

ತುಮಕೂರು ಜಿಲ್ಲೆಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…

40 mins ago

ಹವಾಮಾನ ವರದಿ | 24-02-2023 | ಫೆ.28 ರಂದು ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ |

ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

45 mins ago

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |

ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…

1 day ago

ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |

ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…

3 days ago

ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!

ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.

4 days ago