ಅಡಿಕೆ ತೋಟಗಳಲ್ಲಿ ಇತ್ತೀಚೆಗೆ ಹರಡುತ್ತಿರುವ ಎಲೆ ಚುಕ್ಕೆ ರೋಗ ರೈತರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ರೋಗವು ಮುಖ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಗಾಳಿಯ ಮೂಲಕ ವೇಗವಾಗಿ ಹರಡುವುದರಿಂದ ಪ್ರಾಥಮಿಕ ಹಂತದಲ್ಲೇ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅಗತ್ಯವಾಗಿದೆ.
ಈ ಬಗ್ಗೆ ಸಿಪಿಸಿಆರ್ ಐ ಸಂಸ್ಥೆಯು ಕರ್ನಾಟಕದ ವಿವಿದ ಕಡೆಗಳಲ್ಲಿ ಪ್ರಾತ್ಯಕ್ಷಿಕೆ ತೋಟಗಳನ್ನು ಮಾಡಿದೆ. ಈ ಹಿನ್ನೆಲೆಯಲ್ಲಿ ಸುಳ್ಯದ ಗುತ್ತಿಗಾರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಿಪಿಸಿಆರ್ ಐ ವಿಜ್ಞಾನಿ ಡಾ.ವಿನಾಯಕ ಹೆಗ್ಡೆ ಅವರು ನೀಡಿದ ಮಾಹಿತಿ ಹೀಗಿದೆ…
ಈ ರೋಗವು ಭಾರತದ ಈಶಾನ್ಯ ರಾಜ್ಯ ತ್ರಿಪುರಾದ ಜಂಪುಯಿ ಹಿಲ್ಸ್ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ನಂತರ ಕರ್ನಾಟಕದ ಮಲೆನಾಡು ಭಾಗಗಳಿಗೆ ಹರಡಿದೆ. ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇದರ ಲಕ್ಷಣಗಳು ಕಂಡುಬಂದಿವೆ. ಕೇರಳ ಮತ್ತು ತಮಿಳುನಾಡು ಪ್ರದೇಶಗಳಿಗೂ ಈ ರೋಗ ಪಸರಿಸಿರುವುದು ಗಮನಾರ್ಹವಾಗಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ರೋಗ ಲಕ್ಷಣಗಳು : ಎಲೆಗಳ ಮೇಲೆ ಹಳದಿ ವಲಯದೊಳಗಿನ ಕಂದು ಬಣ್ಣದ ಸಣ್ಣ ಚುಕ್ಕೆಗಳು ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣವಾಗಿದೆ. ಕೆಲವೊಮ್ಮೆ ಕಪ್ಪು ಅಂಚು ಹೊಂದಿರುವ ಬೂದು ಬಣ್ಣದ ಚುಕ್ಕೆಗಳೂ ಕಾಣಬಹುದು. ಈ ಚುಕ್ಕೆಗಳು ದೊಡ್ಡದಾಗಿ ಒಂದಕ್ಕೊಂದು ಸೇರಿ ಎಲೆ ಒಣಗುವ ಸ್ಥಿತಿಗೆ ತಲುಪುತ್ತವೆ.
ಮೊದಲು ಕೆಳಭಾಗದ ಎಲೆಗಳಲ್ಲಿ ಲಕ್ಷಣಗಳು ಕಾಣಿಸಿಕೊಂಡು, ನಂತರ ಮೇಲಿನ ಎಲೆಗಳಿಗೆ ಹರಡುತ್ತದೆ. ಅಡಿಕೆ ಕಾಯಿ ಹಾಗೂ ಹಾಳೆಯ ಮೇಲೂ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ರೋಗಬಾಧಿತ ಕಾಯಿಗಳು ಪೂರ್ಣ ಬೆಳವಣಿಗೆಗೂ ಮುನ್ನವೇ ಹಳದಿಯಾಗಿ ಬಿದ್ದುಹೋಗುತ್ತವೆ. ಕಾಯಿಯ ಮೇಲಿನ ಚುಕ್ಕೆಗಳಿರುವ ಭಾಗ ಸೀಳಿ ಉದುರುವ ಸಾಧ್ಯತೆಯೂ ಇದೆ.
ರೋಗ ಹರಡುವಿಕೆ ಕಾರಣಗಳು: ಗಾಳಿಯ ಮೂಲಕ ವೇಗವಾಗಿ ಹರಡುವುದು, ಹೆಚ್ಚು ತೇವಾಂಶ ಮತ್ತು ಮಳೆಯ ಪರಿಸ್ಥಿತಿ, ತಾಪಮಾನ ಬದಲಾವಣೆ, ತೋಟಗಳ ಸ್ಥಿತಿ ಪ್ರಮುಖ ಕಾರಣ.
ಸಮಗ್ರ ನಿರ್ವಹಣಾ ಕ್ರಮಗಳು :
ಔಷಧಿ ಸಿಂಪಡಣೆ
ಬೋರ್ಡೋ ಮಿಶ್ರಣ
ಮಳೆಗಾಲದಲ್ಲಿ ಬೋರ್ಡೋ ಮಿಶ್ರಣವನ್ನು ಎಲೆಗಳಿಗೂ ಸಿಂಪಡಿಸುವುದು ಉತ್ತಮ ಫಲಿತಾಂಶ ನೀಡುತ್ತದೆ. Spreader cum sticker (1%) ಅನ್ನು 1 ಲೀಟರ್ ನೀರಿಗೆ 1 ಮಿ.ಲೀ ಪ್ರಮಾಣದಲ್ಲಿ ಸೇರಿಸಿ ಸಿಂಪಡಿಸಬೇಕು
ಗೊಬ್ಬರ ನಿರ್ವಹಣೆ : ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಗೊಬ್ಬರ ನೀಡುವುದು ಉತ್ತಮ
ಲಘೂ ಪೋಷಕಾಂಶಗಳು:
Arecanut leaf spot disease is spreading rapidly in Karnataka due to favorable climatic conditions. Experts recommend integrated disease management including removal of infected leaves, fungicide spraying (Propiconazole, Propineb, Tebuconazole), Bordeaux mixture application, and balanced nutrient management. Early intervention and community-level action are key to control the disease.
ಇಂಟರ್ನೆಟ್ ಸೇವೆ ವ್ಯತ್ಯಯಕ್ಕೆ ಸುಳ್ಯದ ಗ್ರಾಹಕನಿಗೆ ₹30,000 ಪರಿಹಾರ ನೀಡಲು ಆದೇಶ. ಬಿ…
ಮೇ 2ರಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕಡಿಮೆಯಾಗುವ ಸೂಚನೆಗಳು ಕಂಡುಬರುತ್ತಿವೆ. ಮೇ…
ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ಶೇಖರಿಸಿದ್ದ ಯೂರಿಯಾ ಗೊಬ್ಬರ ಜಪ್ತಿ ಮಾಡಲಾಗಿದೆ. 181 ಚೀಲಗಳು ಹಾಗೂ…
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲ ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ.…
NEET ಪರೀಕ್ಷೆಯ ಒತ್ತಡದಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ಒತ್ತಡರಹಿತ, ಅನುಭವಾಧಾರಿತ ಶಿಕ್ಷಣ…
ಮೇ ತಿಂಗಳಲ್ಲಿ ಅಡಿಕೆ ಮಾರುಕಟ್ಟೆ ಚೇತರಿಕೆ ಕಂಡುಬಂದಿದ್ದು, ಹಳೆ ಚಾಲಿಗೆ ಭಾರೀ ಬೇಡಿಕೆ…