Advertisement
ಸುದ್ದಿಗಳು

#arecanut | ಅಡಿಕೆ ಮಾರುಕಟ್ಟೆ | ಚೌತಿಯ ಸಮಯದಲ್ಲಿ ಅಡಿಕೆ ಧಾರಣೆ ಗರಿಷ್ಟ..? | ಬೆಳೆಗಾರರ ನಿಲುವು ಏನಿರಬೇಕು ? | ಏನಾಗಬಹುದು ಮಾರುಕಟ್ಟೆ.. ?

Share

ಕಳೆದ ಒಂದು ತಿಂಗಳಿನಿಂದ ಅಡಿಕೆ ಧಾರಣೆ ಏರಿಕೆಯ ಹಾದಿಯಲ್ಲಿದೆ. ಅಡಿಕೆಗೆ ಬೇಡಿಕೆ ಹೆಚ್ಚಿದಂತೆಯೇ ಧಾರಣೆ ಕೂಡಾ ಏರಿಕೆ ಕಾಣುವುದು ಸಹಜವೇ ಆಗಿದೆ. ಪ್ರತೀ ವರ್ಷದಂತೆಯೇ ಈ ಬಾರಿ ಕೂಡಾ ಗಣೇಶ ಚೌತಿಯ ಸಮಯದಲ್ಲಿ ಅಡಿಕೆಗೆ ಗರಿಷ್ಟ ಧಾರಣೆ ತಲುಪುತ್ತದೆ. ಈ ಬಾರಿ ಕೂಡಾ ಅಡಿಕೆ ಧಾರಣೆ ಗರಿಷ್ಟಕ್ಕೆ ತಲುಪುವ ನಿರೀಕ್ಷೆ ಇದೆ. ಆದರೆ ಅತಿಯಾದ ನಿರೀಕ್ಷೆ ಬೆಳೆಗಾರರನ್ನು ಸೋಲಿಸುತ್ತದೆ ಎನ್ನುವ ಎಚ್ಚರಿಕೆಯೂ  ಇರಲೇಬೇಕು  ಬೆಳೆಗಾರರಿಗೆ.

ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಅಡಿಕೆಗೆ ಬೇಡಿಕೆ ಹೆಚ್ಚಿದೆ. ಹೊಸ ಹಾಗೂ ಹಳೆ ಅಡಿಕೆ ಮಾತ್ರವಲ್ಲ ಈಗ ದ್ವಿತೀಯ ದರ್ಜೆಯ ಅಡಿಕೆ ಧಾರಣೆಯೂ ಮತ್ತೆ ಏರಿದೆ. ಹೀಗಾಗಿ ಪಠೋರ, ಕರಿಗೋಟು ಧಾರಣೆಯಲ್ಲೂ ಏರಿಕೆ ಕಂಡಿದೆ. ಕ್ಯಾಂಪ್ಕೋ ಪಠೋರ ದರದಲ್ಲಿ 5 ರೂಪಾಯಿ ಹಾಗೂ ಕರಿಗೋಟು ದರದಲ್ಲಿ 5 ರೂಪಾಯಿ ಏರಿಕೆ ಮಾಡಿದೆ. ಹೀಗಾಗಿ ಹೊಸ ಪಠೋರ 365 ರೂಪಾಯಿ ಹಾಗೂ ಕರಿಗೋಟು, ಉಳ್ಳಿಗಡ್ಡೆಯ ಧಾರಣೆ 285 ರೂಪಾಯಿಗೆ ಖರೀದಿ ಮಾಡುತ್ತಿದೆ. ಹಳೆ ಪಠೋರ ಈಗಲೂ 365 ರೂಪಾಯಿಗೆ ಖರೀದಿ ನಡೆಯುತ್ತಿದೆ. ಹೊಸ ಅಡಿಕೆ ಧಾರಣೆ 465 ರೂಪಾಯಿಗೆ ಹಾಗೂ  ಹಳೆ ಅಡಿಕೆ   560 ರೂಪಾಯಿಗೆ ಖರೀದಿ ನಡೆಯುತ್ತಿದೆ. ಖಾಸಗಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ ಮಾಡುತ್ತಿದೆ. 

ಇದೀಗ ಮತ್ತೆ ಹೊಸ ಅಡಿಕೆ ಧಾರಣೆ ಏರಿಕೆಯ ಲಕ್ಷಣಗಳು ಕಾಣಿಸುತ್ತಿವೆ. ಚೌತಿಯ ಬಳಿಕ ಹೊಸ ಅಡಿಕೆ ಅಂದರೆ ಈ ವರ್ಷದ ಅಡಿಕೆಯ ಧಾರಣೆ ನಿಗದಿಯಾಗುತ್ತದೆ. ಈಗಿನ ಹೊಸ ಅಡಿಕೆ ಹಳೆಯದಾಗುತ್ತದೆ. ಸದ್ಯ ಹೊಸ ಅಡಿಕೆ ಹಾಗೂ ಹಳೆಯ ಅಡಿಕೆಯ ಧಾರಣೆಯಲ್ಲಿ ಸುಮಾರು 100 ರೂಪಾಯಿ ವ್ಯತ್ಯಾಸ ಇದೆ. ಅನೇಕ ಸಮಯಗಳಿಂದ ಈ ವ್ಯತ್ಯಾಸವು 25 ರಿಂದ 30 ರೂಪಾಯಿ ಇರುತ್ತಿತ್ತು. ಆದರೆ ಕೊರೋನಾ ನಂತರ 50-70 ರೂಪಾಯಿ ವ್ಯತ್ಯಾಸದಲ್ಲಿ ಇರುತ್ತಿತ್ತು. ಇದೀಗ ಅದೇ ವ್ಯತ್ಯಾಸಕ್ಕೆ ನಿಲ್ಲುವ ಸಾಧ್ಯತೆ ಇದೆ. ಈ ಕಾರಣದಿಂದ ಹೊಸ ಅಡಿಕೆ ಧಾರಣೆ ಇನ್ನೂ 20-30 ರೂಪಾಯಿ ಏರಿಕೆ ಸಾಧ್ಯತೆ ಇದೆ. ಅಂದರೆ ಹೊಸ ಅಡಿಕೆ ಧಾರಣೆ ಕೂಡಾ 500 ರಿಂದ 510 ರೂಪಾಯಿ ತಲುಪಬಹುದು. ಈ ನಡುವೆ ಈಗ ಅಡಿಕೆ ದಾಸ್ತಾನು ಕೂಡಾ ಹೆಚ್ಚಾಗಿರುವುದರಿಂದ ಬೇಡಿಕೆ ಕೂಡಾ ಹೆಚ್ಚಿದೆ. ಈ ಬಾರಿ ಕೊಳೆರೋಗದ ಪರಿಣಾಮದಿಂದ ಮುಂದಿನ ವರ್ಷ ಅಡಿಕೆ ಫಸಲು ಕಡಿಮೆ ಇರಲಿದೆ. ಇದನ್ನು ಮನಗಂಡ ಕೆಲವು ವ್ಯಾಪಾರಿಗಳು ಅಡಿಕೆ ದಾಸ್ತಾನಿಗೂ ಮುಂದಾಗಿದ್ದಾರೆ. ಕಳೆದ ವರ್ಷ ಉತ್ತಮ ಧಾರಣೆಯ ಪರಿಣಾಮ ಹಲವು ಮಂದಿ ಅಡಿಕೆ ಮಾರಾಟ ಮಾಡಿದ್ದಾರೆ. ಈಗ ಅಡಿಕೆ ಆಮದು ಕೂಡಾ  ಬಿಗಿಯಾಗಿರುವುದು ಕೂಡಾ ಅಡಿಕೆ ಧಾರಣೆ ಮೇಲೆ ಪರಿಣಾಮ ಬೀರಿರುವುದು  ಕಂಡುಬಂದಿದೆ. ಸದ್ಯ ಧಾರಣೆ ಏರಿಕೆ ಹೆಚ್ಚಾಗುತ್ತಿದೆ. ಚೌತಿಯ ಬಳಿಕ ಸ್ಥಿರತೆಯ ಹಾದಿಯಲ್ಲಿ ಸಾಗುವ ನಿರೀಕ್ಷೆ ಇದೆ.

ಅಡಿಕೆ ಧಾರಣೆ ಏರಿಕೆಯ ಸಮಯದಲ್ಲಿ ಸುದ್ದಿಯಾಗುವ ಅಡಿಕೆ ಧಾರಣೆ ನಂತರ ಸದ್ದಿಲ್ಲದಾಗುತ್ತದೆ ಎಂದು ಈಚೆಗೆ ಬೆಳೆಗಾರರೊಬ್ಬರು ಪ್ರತಿಕ್ರಿಯಿಸಿದ್ದರು. ಅಡಿಕೆ ಬೆಳೆಗಾರರು ಯಾವತ್ತೂ ಅಡಿಕೆ ಧಾರಣೆಯನ್ನು ಗಮನಿಸುತ್ತಾ, ಸೂಕ್ತವಾದ ಧಾರಣೆ ಅನಿಸಿದ ತಕ್ಷಣವೇ ಎಲ್ಲಾ ಅಡಿಕೆ ಮಾರಾಟ ಮಾಡುವ ಬದಲಾಗಿ ಧಾರಣೆ ಏರಿಕೆ ಹಂತದಲ್ಲಿ ಅಡಿಕೆಯನ್ನು ಮಿತವಾಗಿ ಮಾರುಕಟ್ಟೆ ಬಿಟ್ಟಲ್ಲಿ ಧಾರಣೆಯೂ ಸ್ಥಿರತೆಯಾಗುತ್ತದೆ, ಬೆಳೆಗಾರನಿಗೆ ಸರಾಸರಿ ಉತ್ತಮ ಧಾರಣೆಯೂ ಸಿಗುತ್ತದೆ.ಈ ನಿಯಮವನ್ನು ಈಚೆಗೆ ಅನೇಕ ಬೆಳೆಗಾರರು ಅನುಸರಿಸುತ್ತಿದ್ದಾರೆ. ಈ ಕಾರಣದಿಂದ ಅಡಿಕೆ ಧಾರಣೆಯೂ ಸ್ಥಿರತೆ ಸಾಧಿಸಲು ಸಾಧ್ಯವೂ ಇದೆ.

ಕಳೆದ ಎರಡು ತಿಂಗಳಿನಿಂದ ರೂರಲ್‌ ಮಿರರ್‌ ಅಡಿಕೆ ಮಾರುಕಟ್ಟೆ, ಧಾರಣೆಯ ಬಗ್ಗೆ ವಿಶ್ಲೇಷಣೆ ಮಾಡಿರುವ ವರದಿಗಳು :

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!

ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…

2 days ago

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

2 days ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

3 days ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

4 days ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

4 days ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

4 days ago