ಅಡಿಕೆ ಮಾರುಕಟ್ಟೆ | ಚಾಲಿ ಅಡಿಕೆ ಧಾರಣೆ ಏರಿಕೆ | ಹೊಸ ಚಾಲಿ ಅಡಿಕೆ ಆರಂಭದ ದರ 380 ರೂಪಾಯಿ | ರಬ್ಬರ್‌ ಧಾರಣೆಯಲ್ಲೂ ಏರಿಕೆ |

October 3, 2022
11:05 AM

ಅಡಿಕೆ ಆಮದು ಚರ್ಚೆಯ ನಡುವೆಯೂ ಚಾಲಿ ಅಡಿಕೆ ಮಾರುಕಟ್ಟೆ ಧಾರಣೆ ಏರಿಕೆ ಕಂಡಿದೆ. ಭಾರತದ ಅಡಿಕೆ ಮಾರುಕಟ್ಟೆಯು ಆಮದು ಕಾರಣದಿಂದ ಧಾರಣೆಯಲ್ಲಿ ಸದ್ಯ ಯಾವುದೇ ಪರಿಣಾಮವಾಗದು ಎಂಬುದನ್ನು ಕ್ಯಾಂಪ್ಕೋ ಸಂಸ್ಥೆ ಧಾರಣೆ ಏರಿಕೆಯ ಮೂಲಕ ತಿಳಿಸಿದೆ. ಇದೇ ವೇಳೆ ಹೊಸ ಚಾಲಿ ಅಡಿಕೆ ಮಾರುಕಟ್ಟೆಗೆ ಬರಲು ಆರಂಭವಾಗಿದ್ದು ಅ.1 ರಿಂದ ಹೊಸ ಚಾಲಿ ಅಡಿಕೆ ಧಾರಣೆ ನಿಗದಿಯಾಗಿದೆ. ಆರಂಭದ ಧಾರಣೆ 380 ರೂಪಾಯಿ ನಿಗದಿಯಾಗಿದೆ. ಇದೇ ವೇಳೆ ರಬ್ಬರ್‌ ಧಾರಣೆಯಲ್ಲಿ ಸ್ವಲ್ಪ ಏರಿಕೆ ಕಂಡಿದೆ.

ಅಡಿಕೆ ಮಾರುಕಟ್ಟೆಯಲ್ಲಿ ಹೊಸದು – ಹಳೆಯದು ಕಾಲ ಆರಂಭವಾಗಿದೆ. ಪ್ರತೀ ವರ್ಷ ಚೌತಿಯ ಬಳಿಕ ಹೊಸ ಅಡಿಕೆ ಹಳೆಯದಾಗಿ ಈ ವರ್ಷದ ನೂತನ ಅಡಿಕೆ ಮಾರುಕಟ್ಟೆ ಪ್ರವೇಶವಾಗುತ್ತದೆ. ಸಂಪೂರ್ಣ ಒಣಗಿ ದಾಸ್ತಾನು ಇರಿಸಿರುವ ಚಾಲಿ ಅಡಿಕೆ ಸುಮಾರು 180 ದಿನಗಳ ಬಳಿಕ ಒಳಗಿನ ಬಣ್ಣ ಬದಲಾಗಿ ಅಂತಹ ಅಡಿಕೆ ಹಳೆ ಅಡಿಕೆ ಎಂದು ಪರಿಗಣನೆಯಾಗುತ್ತದೆ. ಅಂದರೆ ಸುಮಾರು ಗಣೇಶ ಚೌತಿಯ ಬಳಿಕ ಹಳೆ ಅಡಿಕೆ ಎನ್ನುವುದು ಹಿಂದಿನಿಂದಲೂ ವಾಡಿಕೆ. ವೈಜ್ಞಾನಿಕವಾಗಿಯೂ ಅಡಿಕೆಯೊಳಗಿನ ತೇವಾಂಶ  ಕಡಿಮೆಯಾಗುತ್ತಾ ಬಂದಂತೆ ಗುಣಮಟ್ಟವೂ ಏರಿಕೆಯಾಗುತ್ತದೆ. ಅಂತಹ ಅಡಿಕೆ ಹಳೆ ಅಡಿಕೆ ಎಂದು ಕರೆಯಲಾಗುತ್ತದೆ.  ಇದೀಗ ಅ.1 ರಿಂದ ಹೊಸ ಅಡಿಕೆ ಧಾರಣೆ ನಿಗದಿಯಾಗುವುದರ ಮೂಲಕ ಹೊಸ ಅಡಿಕೆ ಹಳೆಯ ಅಡಿಕೆಯಾಗಿ ಬದಲಾಗಿದೆ. ಅಂತಹ ಹೊಸ ಅಡಿಕೆ ಧಾರಣೆ 380 ರೂಪಾಯಿ ಕ್ಯಾಂಪ್ಕೋ ನಿಗದಿ ಮಾಡಿದೆ. ಖಾಸಗಿ ವಲಯದಲ್ಲಿ ಹೊಸ ಅಡಿಕೆ ಮಾರುಕಟ್ಟೆ ಇನ್ನಷ್ಟೇ ನಿಗದಿಯಾಗಬೇಕಿದೆ. ಆದರೆ 390 ರೂಪಾಯಿ ಸದ್ಯ ಖರೀದಿ ನಡೆಸುವ ಬಗ್ಗೆ ಅನಧಿಕೃತ ಮಾಹಿತಿ ಇದೆ.

ಇದೇ ವೇಳೆ ಹಳೆ ಚಾಲಿ ಅಡಿಕೆ ಧಾರಣೆಯನ್ನು ಕ್ಯಾಂಪ್ಕೋ 5 ರೂಪಾಯಿ ಏರಿಕೆ ಮಾಡಿ 480 ರೂಪಾಯಿಗೆ ಖರೀದಿ ಮಾಡುತ್ತಿದೆ. ಚೋಲ್‌ ಅಡಿಕೆ 560 ರೂಪಾಯಿಗೆ ಖರೀದಿ ಮಾಡಲಾಗುತ್ತಿದೆ. ಖಾಸಗಿ ವಲಯದಲ್ಲಿಅಡಿಕೆ ಧಾರಣೆ ಏರಿಕೆಯ ನಿರೀಕ್ಷೆಯಲ್ಲಿದೆ.

ರಬ್ಬರ್‌ ಧಾರಣೆಯಲ್ಲಿ ಸ್ವಲ್ಪ ಏರಿಕೆಯ ಲಕ್ಷಣ ಕಂಡಿದೆ. ಸದ್ಯ RSS4 ರಬ್ಬರ್‌ ಗೆ 146  ರೂಪಾಯಿ ಹಾಗೂ ಲಾಟ್‌ ರಬ್ಬರ್‌ ಗೆ 131 ರೂಪಾಯಿಗೆ ಖರೀದಿಯಾಗುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ
August 6, 2026
11:04 PM
by: ದ ರೂರಲ್ ಮಿರರ್.ಕಾಂ
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ
August 6, 2026
9:23 PM
by: ದ ರೂರಲ್ ಮಿರರ್.ಕಾಂ
ಕರ್ನಾಟಕದಲ್ಲಿ ಅತ್ಯಾಧುನಿಕ ‘ಸಂಯೋಜಿತ ಡಿಜಿಟಲ್ ಬೆಳೆ ಸಮೀಕ್ಷೆ’ | ಉಪಗ್ರಹ, ಡ್ರೋನ್‌, AI ತಂತ್ರಜ್ಞಾನ ಬಳಕೆಗೆ ಸರ್ಕಾರದ ಚಾಲನೆ
August 6, 2026
9:10 PM
by: ದ ರೂರಲ್ ಮಿರರ್.ಕಾಂ
ಬರ್ಮಾ ಅಡಿಕೆ ಕಳ್ಳಸಾಗಣೆ ವಿರುದ್ಧ ಇಡಿ ಬಿಗಿ ಕ್ರಮ – ಇಬ್ಬರು ಉದ್ಯಮಿಗಳ ಮನೆಗಳ ಮೇಲೆ ದಾಳಿ
August 6, 2026
8:22 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror