ಇಡೀ ದೇಶದಲ್ಲೀಗ ಅಡಿಕೆಯದ್ದೇ ಹವಾ | ಇಲ್ಲಿ ಅಡಿಕೆ ಧಾರಣೆ ದಾಖಲೆಯತ್ತ | ಅಲ್ಲಿ ಅಡಿಕೆ ಮೇಲೆ ತೆರಿಗೆ ಧಾಳಿ- ಆಮದು ತಡೆ |

September 16, 2021
3:22 PM
Advertisement

ಅಡಿಕೆ ಧಾರಣೆ ದಾಖಲೆಯತ್ತ ಸಾಗಿದೆ. 500 ರೂಪಾಯಿ ಧಾರಣೆ ಒಂದು ಕೆಜಿ ಅಡಿಕೆಗೆ. ಇನ್ನೂ ಏರಬಹುದಾ ? ವಿಶ್ಲೇಷಣೆಗಳು ಆರಂಭವಾಗಿದೆ. ಇಡೀ ದೇಶದಲ್ಲಿ ಈಗ ಅಡಿಕೆ ಹವಾ ಸೃಷ್ಟಿಯಾಗಿದೆ. ದೇಶದ ಎಲ್ಲಾ ಕೃಷಿಕರೂ ಅಡಿಕೆಯೇ ಲಾಭದಾಯಕ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆಯೇ ಅಡಿಕೆ ಮೇಲೆ ತೆರಿಗೆ ಧಾಳಿ ಹೆಚ್ಚಾಗಿದೆ. ದಾಖಲೆಗಳಿಲ್ಲದೆ 7 ಕೋಟಿ ರೂ ಮೌಲ್ಯದ ಅಡಿಕೆ ಸಾಗಾಟ ಮಾಡುತ್ತಿದ್ದ ಏಳು ವಾಹನಗಳನ್ನು ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದೇ ವೇಳೆ 1,70,44,800 ರೂಪಾಯಿ ಮೌಲ್ಯ ಅಡಿಕೆ ಆಮದನ್ನು ಕೂಡಾ ಅಧಿಕಾರಿಗಳು ತಡೆದಿದ್ದಾರೆ.

Advertisement
Advertisement
Advertisement

ಅಡಿಕೆ ಧಾರಣೆ ಗುರುವಾರ 500 ರೂಪಾಯಿ ತಲಪಿದೆ. ಅಡಿಕೆ ಮಾರುಕಟ್ಟೆಯ ಇತಿಹಾಸದಲ್ಲಿಯೇ ದಾಖಲೆಯ ಧಾರಣೆ ಇದಾಗಿದೆ. ಹಳೆ ಅಡಿಕೆ ಹಾಗೂ ಹೊಸ ಅಡಿಕೆ ಎರಡೂ ಧಾರಣೆ 500 ರೂಪಾಯಿಗಿಂತ ಹೆಚ್ಚಾಗಿರುವುದು  ದಾಖಲೆಯಾಗಿದೆ. ಈಗಿನ ಹೊಸ ಅಡಿಕೆ ಧಾರಣೆಯೂ ಸದ್ಯ ಉತ್ತಮವಾಗಿದೆ. ಹೀಗಾಗಿ ಅಡಿಕೆ ಬೆಳೆಗಾರರಿಗೆ ಸಹಜವಾಗಿಯೇ ಸಂತಸವಾಗಿದೆ. ಈಗ ಇನ್ನೂ ಧಾರಣೆ ಏರಿಕೆಯಾಗುವುದೇ ಎಂಬ ಪ್ರಶ್ನೆಗಳೂ ಸಹಜವಾಗಿಯೇ ಇದೆ. ಬೆಳೆ ಕಡಿಮೆಯಾಗಿರುವುದು , ಮಾರುಕಟ್ಟೆಗೆ ಅಡಿಕೆ ಬಾರದೇ ಇರುವುದು , ಕಳೆದ ವರ್ಷದ ಅಡಿಕೆ ಕೊರತೆ ಇನ್ನೂ ಭರ್ತಿಯಾಗದೇ ಇರುವುದು, ಅಡಿಕೆ ದಾಸ್ತಾನು ಮಾಡುವವರೂ ಕಳೆದ ಒಂದು ವರ್ಷದಿಂದ ಅಡಿಕೆ ದಾಸ್ತಾನು ಮಾಡದೇ ಇರುವುದು  , ಉತ್ತರ ಭಾರತದಲ್ಲಿ ಅಡಿಕೆ ಬಳಕೆಯ ಮಂದಿಯಲ್ಲಿ ಅಡಿಕೆ ಬಳಕೆ ಕಡಿಮೆಯಾಗದೇ ಇರುವುದೆ ಸೇರಿದಂತೆ ವಿವಿಧ ಅಂಶಗಳು ಅಡಿಕೆ ಮಾರುಕಟ್ಟೆ ಏರಿಕೆಗೆ ಕಾರಣವಾಗಿದೆ. ಈ ನಡುವೆಯೇ ಅಡಿಕೆ ಆಮದು ತಡೆಯೂ ಪ್ರಮುಖ ಕಾರಣವಾಗುತ್ತಿದೆ. ಹೀಗಾಗಿ ಅಡಿಕೆ ಧಾರಣೆ ನಿರೀಕ್ಷಿಸಿದಂತೆ  500 ರೂಪಾಯಿ ತಲುಪಿದೆ. ಉತ್ತಮ ಧಾರಣೆ ಲಭ್ಯವಾಗಿದೆ.

Advertisement

ಅಡಿಕೆ ಧಾರಣೆ ಏರಿಕೆ ಹಾಗೂ ವಿಪರೀತ ಧಾರಣೆಯ ಕಾರಣದಿಂದ ಇಡೀ ದೇಶದಲ್ಲಿ ಅಡಿಕೆ ಹವಾ ಎದ್ದಿದೆ. ಅನೇಕ  ಕೃಷಿಕರೂ ಅಡಿಕೆ ಬಗ್ಗೆ ಚರ್ಚೆ ನಡೆಸುವುದು  ಹಾಗೂ ಬೆಳೆಯ ಬಗ್ಗೆ ಮಾಹಿತಿ ಕಲೆ ಹಾಕುವುದು  ಆರಂಭವಾಗಿದೆ. ಅಡಿಕೆ ಬೆಳೆ ಲಾಭದಾಯಕ ಎಂಬ ಭಾವನೆಯೂ ಎಲ್ಲಾ ಕೃಷಿರಲ್ಲೂ ಮೂಡುತ್ತಿದೆ. ಅಡಿಕೆ ಬಳಕೆ ಏನು ಹಾಗೂ ಎಲ್ಲಿ  ಎಂಬ ಪ್ರಶ್ನೆಗಿಂತಲೂ ಅಡಿಕೆ ಬೆಳೆ ಲಾಭದಾಯಕ ಎನ್ನುವುದು ಮಾತ್ರವೇ ಸದ್ಯ ಚರ್ಚೆಯಾಗುವ ಸಂಗತಿ.

ಈ ನಡುವೆಯೇ ಸೆಂಟ್ರಲ್ ಜಿಎಸ್‌ಟಿ ಮತ್ತು ಸೆಂಟ್ರಲ್ ಅಬಕಾರಿ ಕಮಿಷನರೇಟ್, ಬೆಳಗಾವಿ ಅವರ ತಂಡ ಸರಿಯಾದ ಜಿಎಸ್‌ಟಿ ದಾಖಲೆಗಳಿಲ್ಲದೆ 7 ಕೋಟಿ ರೂ ಮೌಲ್ಯದ ಅಡಿಕೆ ಸಾಗಾಟ ಮಾಡುತ್ತಿದ್ದ ಏಳು ವಾಹನಗಳನ್ನು ಅಧಿಕಾರಿಗಳು ತಡೆದು ವಶಕ್ಕೆ ಪಡೆದಿದ್ದಾರೆ.

Advertisement

ಇದೇ ವೇಳೆ ಅಸ್ಸಾಂ ಮೂಲಕ ದೇಶದೊಳಕ್ಕೆ ಆಗಮಿಸುತ್ತಿದ್ದ ಸುಮಾರು 1.7  ಕೋಟಿ ರೂಪಾಯಿ ಮೌಲ್ಯದ  780  ಚೀಲ ಅಡಿಕೆಯನ್ನು ಅಸ್ಸಾಂ ಭದ್ರತಾ ಪಡೆ ವಶಕ್ಕೆ ತೆಗೆದುಕೊಂಡಿದ್ದಾರೆ. ನಿರಂತರವಾಗಿ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಯನ್ನು  ಗಡಿ ಭದ್ರತಾ ಪಡೆ ತಡೆಯುತ್ತಲೇ ಇದೆ. ಈಚೆಗೆ ವಿವಿಧ ದಾರಿಗಳ ಮೂಲಕ ಸತತ ಪ್ರಯತ್ನ ನಡೆಯುತ್ತಿದೆ.

Advertisement

 

 

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಾಮರಾಜನಗರ-ಹಾವೇರಿಯಲ್ಲಿ ಗಾಳಿಗೆ ಅಪಾರ ಕೃಷಿ ಹಾನಿ |
April 19, 2024
11:14 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆ | ಗಾಳಿಗೆ ಉರುಳಿದ ಮರ | ಸುಳ್ಯ- ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಡಿತ |
April 19, 2024
11:07 PM
by: ದ ರೂರಲ್ ಮಿರರ್.ಕಾಂ
ಬೇಸಿಗೆ ಜರ್ನಿಯ ಚಿಲಿಪಿಲಿ ಗೂಡು | ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ |
April 19, 2024
4:02 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 19-04-2024 | ಇಂದು ಉತ್ತಮ ಮಳೆಯ ಮುನ್ಸೂಚನೆ |
April 19, 2024
11:00 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror