ದಕ್ಷಿಣ ಕನ್ನಡ, ಮಲೆನಾಡು ಮತ್ತು ಕರಾವಳಿ ಭಾಗದ ಜೀವನಾಡಿಯಾಗಿರುವ ಅಡಿಕೆ ಬೆಳೆ ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಳಿತದ ಒತ್ತಡ ಎದುರಿಸುತ್ತಿದೆ. ಮಾರುಕಟ್ಟೆಯಲ್ಲಿ ಬೆಲೆ ಸ್ವಲ್ಪ ಇಳಿಕೆಯಾದ ತಕ್ಷಣ ಬೆಳೆಗಾರರಲ್ಲಿ ಆತಂಕ ಮನೆಮಾಡುತ್ತಿದೆ. ಈ ಆತಂಕವೇ ಮಾರುಕಟ್ಟೆಯಲ್ಲಿ ‘ಪ್ಯಾನಿಕ್ ಸೆಲ್ಲಿಂಗ್’ (Panic Selling) ಎಂಬ ಕೃತಕ ಪರಿಸ್ಥಿತಿಗೆ ನಾಂದಿ ಹಾಡುತ್ತಿದೆ. ಏನಿದು ಪ್ಯಾನಿಕ್ ಸೆಲ್ಲಿಂಗ್? ಇದರಿಂದ ಬೆಳೆಗಾರರಿಗೆ ಆಗುವ ನಷ್ಟವೇನು? ಎಂಬುದನ್ನು ಅರಿಯುವುದು ಇಂದಿನ ತುರ್ತು ಅಗತ್ಯ.
ಏನಿದು ಪ್ಯಾನಿಕ್ ಸೆಲ್ಲಿಂಗ್? : ಸರಳವಾಗಿ ಹೇಳುವುದಾದರೆ, ಅಡಿಕೆ ಬೆಲೆ ದಿಢೀರ್ ಕುಸಿಯಬಹುದು ಅಥವಾ ಭವಿಷ್ಯದಲ್ಲಿ ತೀರಾ ಕೆಳಮಟ್ಟಕ್ಕೆ ಹೋಗಬಹುದು ಎಂಬ ಭಯದಿಂದ, ಬೆಳೆಗಾರರು ಅಥವಾ ವರ್ತಕರು ತರಾತುರಿಯಲ್ಲಿ ತಮ್ಮಲ್ಲಿರುವ ದಾಸ್ತಾನನ್ನು ಮಾರುಕಟ್ಟೆಗೆ ಸುರಿಯುವುದೇ ಪ್ಯಾನಿಕ್ ಸೆಲ್ಲಿಂಗ್. ಇದು ಮಾರುಕಟ್ಟೆಯ ನೈಜ ಬೇಡಿಕೆ–ಪೂರೈಕೆಯ ಸ್ಥಿತಿಗಿಂತಲೂ ಹೆಚ್ಚಾಗಿ, ಜನರ ಮನೋವೈಜ್ಞಾನಿಕ ಭಯದಿಂದ ಸೃಷ್ಟಿಯಾಗುವಂತದ್ದು.
ಇದು ಹೇಗೆ ಸಂಭವಿಸುತ್ತದೆ? : ಮಾರುಕಟ್ಟೆಯಲ್ಲಿ ದರ ಕ್ವಿಂಟಾಲ್ಗೆ 100–500 ರೂ. ಇಳಿಕೆಯಾದ ಕೂಡಲೇ, “ಇನ್ನೂ ಬೆಲೆ ಬಿದ್ದರೆ ದೊಡ್ಡ ನಷ್ಟವಾಗಬಹುದು” ಎಂಬ ಆತಂಕ ಸಣ್ಣ ಮತ್ತು ಮಧ್ಯಮ ಬೆಳೆಗಾರರಲ್ಲಿ ಆರಂಭವಾಗುತ್ತದೆ. ಆಗ ಅನೇಕರು ಏಕಕಾಲಕ್ಕೆ ಅಡಿಕೆಯನ್ನು ಮಾರಾಟಕ್ಕೆ ತರುತ್ತಾರೆ. ಈ ಒಟ್ಟೂ ಅವಸರವೇ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಪ್ಯಾನಿಕ್ ಸೆಲ್ಲಿಂಗ್ನ ಭೀಕರ ಪರಿಣಾಮಗಳು :
ಆತಂಕಕ್ಕೆ ಪ್ರಮುಖ ಕಾರಣಗಳು :
ಅಧಿಕೃತ ಮಾಹಿತಿ ನಂಬಿ, ವದಂತಿಗಳಿಗೆ ಕಿವಿಗೊಡಬೇಡಿ. ಅಧಿಕೃತ ಮಾಹಿತಿಯನ್ನು ಆಧರಿಸಿ ನಿರ್ಧಾರ ಕೈಗೊಳ್ಳಿ. ಗಾಬರಿಯಿಂದ ಮಾಡಿದ ಮಾರಾಟವೇ ನಷ್ಟಕ್ಕೆ ಮೂಲ ದಾರಿ. ಸರಿಯಾದ ಮಾಹಿತಿ, ಸಹನೆ ಮತ್ತು ಒಗ್ಗಟ್ಟೇ ಅಡಿಕೆ ಬೆಳೆಗಾರರ ನಿಜವಾದ ಶಕ್ತಿ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ದೆಹಲಿಯಲ್ಲಿ ಪೂಸಾ ಕೃಷಿ ವಿಜ್ಞಾನ ಮೇಳ ಉದ್ಘಾಟಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್…
27.02.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ ಜಿಲ್ಲೆಗಳು…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಾಣಿಯೂರು, ಬೆಳ್ಳಾರೆ, ಪಂಜ ಸೇರಿದಂತೆ ಹಲವೆಡೆ…
ಕರ್ನಾಟಕದ ಕರಾವಳಿ, ಮಲೆನಾಡು ಮತ್ತು ಒಳನಾಡು ಜಿಲ್ಲೆಗಳಲ್ಲಿ ತುಂತುರು ಮಳೆ ಮತ್ತು ಮೋಡದ…
ಕರ್ನಾಟಕದ ವಿವಿಧ ಭಾಗಗಳಲ್ಲಿ ಫೆಬ್ರುವರಿ 25ರ ಬೆಳಿಗ್ಗೆ 8 ಗಂಟೆವರೆಗೆ ತುಂತುರು ಮಳೆ,…
ಕಡಬ ತಾಲೂಕಿನ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಭಜನಾ ಮಂಡಳಿ ಉದ್ಘಾಟನೆ…