Advertisement
ಸುದ್ದಿಗಳು

ಅಡಿಕೆ ದರ ನಿರ್ಧಾರ | ಸಹಕಾರಿ ಸಂಸ್ಥೆಯ ದೃಷ್ಟಿಕೋನದಲ್ಲಿ ತಕ್ಷಣಗೊಳ್ಳಬೇಕಾದ ಧನಾತ್ಮಕ ಕ್ರಮಗಳು

Share

ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋಗೆ ದರ ನಿರ್ಧಾರವೆಂದರೆ ಕೇವಲ ವಾಣಿಜ್ಯ ಲೆಕ್ಕಾಚಾರವಲ್ಲ; ಅದು ಬೆಳೆಗಾರ ಮತ್ತು ಸಂಸ್ಥೆ ನಡುವಿನ ವಿಶ್ವಾಸದ ಪ್ರತಿಫಲ. ಈ ಹಿನ್ನಲೆಯಲ್ಲಿ, ಹಳೆ ಅಡಿಕೆ ಸಂಬಂಧಿತ ಸವಾಲುಗಳಿಗೆ ಕೆಳಗಿನ ಕ್ರಮಗಳನ್ನು ತಕ್ಷಣ, ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ಕೈಗೊಳ್ಳುವುದು ಅಗತ್ಯ.

1.ದರ ಸ್ಥಿರೀಕರಣಕ್ಕೆ ತಾತ್ಕಾಲಿಕ ರಕ್ಷಣಾತ್ಮಕ ಕ್ರಮ ,ತಾತ್ಕಾಲಿಕ ದರ ಸ್ಥಗಿತ (Price Hold Mechanism) : ಹೊರ ಮಾರುಕಟ್ಟೆಗಳಲ್ಲಿ ದರ ಕುಸಿತವಾಗಿಲ್ಲದ ಸಂದರ್ಭದಲ್ಲಿ ದರ ಇಳಿಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ. ಇದು ಮಾರುಕಟ್ಟೆಗೆ ತಪ್ಪು ಸಂದೇಶ ಹೋಗುವುದನ್ನು ತಡೆಯುತ್ತದೆ ಮತ್ತು ಖಾಸಗಿ ವ್ಯಾಪಾರಿಗಳ ಅತಿರೇಕ ದರ ಕಡಿತಕ್ಕೂ ತಡೆ. ಇದರಿಂದಲಾಗಿ  ಸಂಸ್ಥೆಗೆ ಲಾಭ ಮತ್ತು  ಮಾರುಕಟ್ಟೆ ನಾಯಕತ್ವ ಉಳಿಯುತ್ತದೆ ಹಾಗೂ ಬೆಳೆಗಾರರಿಗೆ ವಿಶ್ವಾಸ ಹೆಚ್ಚುತ್ತದೆ ಮತ್ತು  ತಕ್ಷಣದ ಆದಾಯ ಹೊಡೆತ ತಪ್ಪುತ್ತದೆ.

2 .ಹಳೆ ಅಡಿಕೆ ನಿರ್ವಹಣೆಗೆ ವಿಭಜಿತ ದರ್ಜೆ ವ್ಯವಸ್ಥೆ :  ಈಗಾಗಲೇ ಈ ಕ್ರಮಗಳನ್ನು ಸಂಸ್ಥೆ ಅಳವಡಿಸಿಕೊಂಡಿರಬಹುದು  ಆದರೂ ಮರು ನೆನಪಿಗಾಗಿ -ಹಳೆ ಅಡಿಕೆಗಾಗಿ ಪ್ರತ್ಯೇಕ ಗುಣಮಟ್ಟ–ಮೌಲ್ಯ ಮಾದರಿ .ಸಂಗ್ರಹ ಅವಧಿ, ತೇವಾಂಶ, ಬಳಕೆ ಉದ್ದೇಶದ ಆಧಾರದಲ್ಲಿ

Grade–I (Premium Use)

Grade–II (General Market)

Grade–III (Industrial / Processing Use)

ಇದರಿಂದ ಒಂದೇ ದರದ ಮೂಲಕ ಒತ್ತಡ ಹಾಕುವ ವಿಧಾನಕ್ಕೆ ಅಂತ್ಯ ಹಾಡಬಹುದು. ಈ ವ್ಯವಸ್ಥೆಯಿಂದ  ಸಂಸ್ಥೆಗೆ ಲಾಭ ವಾಗುತ್ತದೆ .ನಷ್ಟ ನಿಯಂತ್ರಣ, ಸರಿಯಾದ ಮಾರುಕಟ್ಟೆ ಹೊಂದಾಣಿಕೆಯಾಗುತ್ತದೆ. ಬೆಳೆಗಾರರಿಗೆ  ಅಸಮಚಿತ ದರ ಕಡಿತದಿಂದ ರಕ್ಷಣೆ ಸಿಗುತ್ತದೆ.

3.ಸಂಗ್ರಹ ಭಾರ ಕಡಿತಕ್ಕೆ ಹೊರ ಮಾರುಕಟ್ಟೆ ಕೇಂದ್ರೀಕೃತ ಮಾರಾಟ :  Bulk & Forward Sales Strategy, ಸಂಸ್ಥೆಯು ದೇಶೀಯ ದೊಡ್ಡ ಖರೀದಿದಾರರು ಮತ್ತು ರಫ್ತು ಮಾರುಕಟ್ಟೆಗಳೊಂದಿಗೆ ಮುಂಗಡ ಒಪ್ಪಂದಗಳ ನ್ನು ಮಾಡಿಕೊಳ್ಳಬೇಕು. ದೊಡ್ಡ ಪ್ರಮಾಣದ ಒಟ್ಟುಗೂಡಿದ ಮಾರಾಟ ಮತ್ತು ಹಳೆ ಅಡಿಕೆಗೆ ಗುರಿ ನಿಗದಿಗೊಂಡ  ವಹಿವಾಟು ನಡೆಸಬೇಕು. ಇದರಿಂದ  ಸಂಸ್ಥೆಗೆ ಸಂಗ್ರಹ ವೆಚ್ಚ ಕಡಿಮೆ, ಹಣದ ಹರಿವು ಸುಧಾರಣೆ . ಬೆಳೆಗಾರರಿಗೆ ದರ ಸ್ಥಿರತೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

4 .ಹಣಕಾಸು ಒತ್ತಡಕ್ಕೆ ಒಳಗೊಳ್ಳದ ಪರ್ಯಾಯ ಮಾರ್ಗಗಳು : ಆಂತರಿಕ ನಿಧಿಗಳ ಸಕ್ರಿಯ ಬಳಕೆ. ( ಇಂತಹ ವ್ಯವಸ್ಥೆ ಇದೆಯೇ ಎಂಬ ಬಗ್ಗೆ ನನ್ನಲ್ಲಿ ಮಾಹಿತಿ ಇಲ್ಲ. )ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು.ಲಾಭದ ವರ್ಷಗಳಲ್ಲಿ ರೂಪಿಸಿದ ನಿಧಿಯನ್ನು  ಅಡಿಕೆ ದರ ಸ್ಥಿರೀಕರಣಕ್ಕೆ  ಬಳಸಿಕೊಳ್ಳಬೇಕು .ಇದರಿಂದ ದರ ಇಳಿಕೆ ತಪ್ಪಿಸಬಹುದು. ಇದು ಸಹಕಾರದ ನಿಜಾರ್ಥದ  ಮೂಲ ಉಪಕರಣ.ಇದು ರೈತನ ಮೇಲೆ ನೇರ ದರ ಕಡಿತದ ಒತ್ತಡ ತಪ್ಪಿಸುತ್ತದೆ. ಇದರಿಂದ  ಸಂಸ್ಥೆಗೆ  ದೀರ್ಘಾವಧಿಯಲ್ಲಿ ವಿಶ್ವಾಸ ಬಂಡವಾಳ ವೃದ್ಧಿ ಮತ್ತು  ಬೆಳೆಗಾರರಿಗೆ  ಆದಾಯದ ಸ್ಥಿರತೆ

5 .ಪಾರದರ್ಶಕ ಸಂವಹನ – ವಿಶ್ವಾಸದ ಮೂಲಾಧಾರ:ಬಹುಶ ಇತ್ತೀಚೆಗಿನ ದಿನಗಳಲ್ಲಿ ರೈತರಿಗೆ ಸ್ಪಷ್ಟ ಮಾಹಿತಿ ಹಂಚಿಕೆ ಕಡಿಮೆಯಾಗಿದೆ ಮತ್ತು ಸ್ಪಷ್ಟತೆ ಇಲ್ಲ. ಹಳೆ ಅಡಿಕೆಯ ಪ್ರಮಾಣ ಎಂದರೆ ಒಳ ಹರಿವು , ಮಾರುಕಟ್ಟೆ ಒತ್ತಡ ,ಮಾರಾಟ ವಿಳಂಬದ ನೈಜ ಕಾರಣಸಂಸ್ಥೆ ಎದುರಿಸುತ್ತಿರುವ ನಿರ್ವಹಣಾತ್ಮಕ ಸವಾಲುಗಳು , ಕೈಗೊಳ್ಳುತ್ತಿರುವ ಪರಿಹಾರ ಕ್ರಮಗಳು ಇವುಗಳ ಬಗ್ಗೆ ಬೆಳೆಗಾರರಿಗೆ ಪಾರದರ್ಶಕ ಮಾಹಿತಿ ಬೇಕು .ಹಾಗಾದಾಗ  ಸಂಸ್ಥೆಗೆಯಾ ಬಗ್ಗೆ  ವದಂತಿ, ಅನುಮಾನ ಕಡಿತವಾಗುತ್ತದೆ ಮತ್ತು  ಬೆಳೆಗಾರರಿಗೆ  ಪಾಲುದಾರತ್ವದ ಭಾವನೆ ಬರುತ್ತದೆ.

6 .ದರ ನಿರ್ಧಾರದಲ್ಲಿ ರೈತ ಪ್ರತಿನಿಧಿಗಳ ಭಾಗವಹಿಕೆ : ದರ ಸಲಹಾ ಸಮಿತಿ (Price Advisory Committee) ರೂಪಿಸಬೇಕು .ಇದರಲ್ಲಿ ಬೆಳೆಗಾರ ಪ್ರತಿನಿಧಿಗಳು,ಮಾರುಕಟ್ಟೆ ತಜ್ಞರು ಸಂಸ್ಥೆಯ ನಿರ್ವಹಣಾ ಪ್ರತಿನಿಧಿಗಳು ಇರಬೇಕು .ಇದು  ಸಂಸ್ಥೆಯ  ನಿರ್ಧಾರಗಳಿಗೆ ನೈತಿಕ ಬಲವನ್ನು ಕೊಡುತ್ತದೆ ಮತ್ತು ಬೆಳೆಗಾರರಿಗೆ  ತಮ್ಮ ಧ್ವನಿಗೆ ಗೌರವ ಸಿಕ್ಕಿದೆ ಎಂಬ ಭ್ರಾಕ್ಸೇ ಮೂಡುತ್ತದೆ.

7 ಸಾರ್ವಜನಿಕ ನಿಲುವು ಸ್ಪಷ್ಟೀಕರಣ :   ಸಹಕಾರಿ ಧರ್ಮದ ಪುನರ್‌ಘೋಷಣೆ “ನಾವು ಮಾರುಕಟ್ಟೆ ಅನುಸರಿಸುವುದಲ್ಲ, ಮಾರುಕಟ್ಟೆಗೆ ದಿಕ್ಕು ತೋರಿಸುವ ಸಹಕಾರಿ ಸಂಸ್ಥೆ” ಎಂಬ ನಿಲುವಿನ ಅಧಿಕೃತ ಪ್ರಕಟಣೆ. ಸಂಸ್ಥೆಯ  ಸಹಕಾರಿ ಗುರುತು ಬಲಪಡಿಸುವಿಕೆ ಪರಿಣಾಮದಲ್ಲಿ  ಬೆಳೆಗಾರರ ವಿಶ್ವಾಸ ಪುನರ್ ಸ್ಥಾಪನೆ. ಅಡಿಕೆ ದರ ಸಮಸ್ಯೆ ಆರ್ಥಿಕ ಮಾತ್ರವಲ್ಲ, ಅದು ನೈತಿಕ ಮತ್ತು ಸಹಕಾರಿ ವಿಶ್ವಾಸದ ವಿಷಯ. ದರ ಕಡಿತ ಸುಲಭ ಪರಿಹಾರವಾಗಬಹುದು; ಆದರೆ ವಿಶ್ವಾಸ ಕಳೆದುಹೋದರೆ, ಅದನ್ನು ಮರಳಿ ಗಳಿಸುವುದು ದುಬಾರಿ.

ಸಹಕಾರಿ ಸಂಸ್ಥೆಯ ಶಕ್ತಿ ಮಾರುಕಟ್ಟೆ ಲೆಕ್ಕಾಚಾರದಲ್ಲಿಲ್ಲ, ಸದಸ್ಯರ ನಂಬಿಕೆಯಲ್ಲಿ ಇದೆ. ಈ ನಿಟ್ಟಿನಲ್ಲಿ ಸಂಸ್ಥೆಗಳು ತಕ್ಷಣ ಕೈಗೊಳ್ಳುವ ಕ್ರಮಗಳು ಸಂಸ್ಥೆಯ ಭವಿಷ್ಯಕ್ಕೂ – ಬೆಳೆಗಾರರ ಬದುಕಿಗೂ ಒಂದೇ ಸಮಯದಲ್ಲಿ ಭದ್ರತೆ ನೀಡುವಂತಾಗಬೇಕು.  ಸಂಸ್ಥೆ ಬೆಳೆಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ ಎಂದು ಆಶಿಸೋಣ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ಹವಾಮಾನ ವರದಿ |13-07-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ – ಮುಂದಿನ 10 ದಿನ ಜೋರು ಮಳೆ ಇಲ್ಲ

ರಾಜ್ಯದಲ್ಲಿ ಮುಂದಿನ 10 ದಿನಗಳವರೆಗೆ ಜೋರು ಮಳೆಯ ಸಾಧ್ಯತೆಗಳು ಕಾಣುತ್ತಿಲ್ಲ. ಕರಾವಳಿಯಲ್ಲಿ ಜುಲೈ…

6 hours ago

ಅಮರನಾಥದ ಹಿಮ ಶಿವಲಿಂಗ 90% ಕರಗಿತು…! ಹವಾಮಾನ ಬದಲಾವಣೆಯೇ ಕಾರಣವೇ?

ಅಮರನಾಥ ಯಾತ್ರೆ ಆರಂಭವಾದ ಕೆಲವೇ ದಿನಗಳಲ್ಲಿ ಹಿಮ ಶಿವಲಿಂಗವು 90%ಕ್ಕೂ ಹೆಚ್ಚು ಕರಗಿರುವುದಾಗಿ…

13 hours ago

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿರ್ಬಂಧ – ಆಸ್ಟ್ರೇಲಿಯಾದ ಕ್ರಮಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ ವಿಧಿಸಿರುವ ಆಸ್ಟ್ರೇಲಿಯಾದ ಕ್ರಮವನ್ನು ಪ್ರಧಾನಿ…

23 hours ago

ಎಲ್‌ ನಿನೊ ಎಫೆಕ್ಟ್‌ – ಮುಂದಿನ ವರ್ಷ ಮತ್ಸ್ಯೋದ್ಯಮಕ್ಕೆ ಸಂಕಷ್ಟ?

ಎಲ್‌ ನಿನೊ ಪರಿಣಾಮದಿಂದ 2027ರಲ್ಲಿ ಎಣ್ಣೆ ಸಾರ್ಡಿನ್ ಮೀನುಗಳ ಉತ್ಪಾದನೆ ಕುಸಿಯುವ ಸಾಧ್ಯತೆ…

24 hours ago

ಮುಂಗಾರು ಇದ್ದಕ್ಕಿದ್ದಂತೆ ದುರ್ಬಲವಾಗಿದ್ದೇಕೆ..? ಇಲ್ಲಿದೆ ವೈಜ್ಞಾನಿಕ ಕಾರಣ

ದೇಶದ ಬಹುತೇಕ ಭಾಗಗಳಿಂದ ಮಳೆ ಮೋಡಗಳು ಕಡಿಮೆಯಾಗಲು ಪಶ್ಚಿಮ ಪೆಸಿಫಿಕ್‌ನ ಪ್ರಬಲ ಚಂಡಮಾರುತ…

1 day ago

ಮತ್ತೆ ಹೆಚ್ಚಿದ ದೇಶದ ಮಳೆ ಕೊರತೆ – ಜುಲೈ ಆರಂಭದ ಚೇತರಿಕೆ ಕುಂಠಿತ, ಮುಂಗಾರು ಮತ್ತೆ ದುರ್ಬಲ

ಜುಲೈ ಮೊದಲ ವಾರದ ಚೇತರಿಕೆಯ ಬಳಿಕ ದೇಶದ ಮುಂಗಾರು ಮತ್ತೆ ದುರ್ಬಲಗೊಂಡಿದ್ದು, ಮಳೆ…

1 day ago