ಅಡಿಕೆ ಬೆಳೆ ವಿಸ್ತರಣೆಯ ಆತಂಕದ ಬದಲು ಮುಂಜಾಗ್ರತೆ ವಹಿಸಬೇಕು | ಕ್ಯಾಂಪ್ಕೋ ಮಾಜಿ ಆಡಳಿತ ನಿರ್ದೇಶಕರ ಸಲಹೆ ಏನು ?

January 2, 2023
9:08 PM
ಅಡಿಕೆ ಬೆಳೆ ವಿಸ್ತರಣೆ ಹಾಗೂ ಅಡಿಕೆ ಮಾರುಕಟ್ಟೆಯ ಬಗ್ಗೆ  ಅಡಿಕೆ ಬೆಳೆಯುವ ಪ್ರದೇಶದ ಕೃಷಿಕರಲ್ಲಿ ಆತಂಕ ಇದೆ. ಈ ನಡುವೆಯೇ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ವಾಸ್ತವದಲ್ಲಿ ಅಡಿಕೆ ಮಾರುಕಟ್ಟೆ ಹೇಗಿದೆ ? ಮುಂದೆ ಏನಾಗಬಹುದು ? ಈ ಬಗ್ಗೆ ಕ್ಯಾಂಪ್ಕೋ ಆರಂಭ ಕಾಲದಿಂದಲೂ ಕೆಲಸ ಮಾಡುತ್ತಿದ್ದು,ಅಡಿಕೆ ಬೆಳೆಯುವ ಪ್ರದೇಶ ಹಾಗೂ ಅಡಿಕೆ ಬಳಕೆಯ ಪ್ರದೇಶ, ಬೇಡಿಕೆಯ ಪ್ರದೇಶಗಳಿಗೆ ಭೇಟಿ ನೀಡಿ ಅನುಭವ ಹೊಂದಿರುವ ಕ್ಯಾಂಪ್ಕೋ ಆಡಳಿತ ನಿರ್ದೇಶಕರಾಗಿ ನಿವೃತ್ತರಾಗಿರುವ  ಎ ಎಸ್‌ ಭಟ್‌ ಅವರ ಜೊತೆ ಬೆಳೆಗಾರರ ಹಿತದೃಷ್ಟಿಯಿಂದ ನಡೆಸಿದ ಮಾತುಕತೆ ಇಲ್ಲಿದೆ.

ಅಡಿಕೆ ಮಾರುಕಟ್ಟೆ ಸ್ಥಿರೀಕರಣ ಹಾಗೂ ಬೆಳೆಗಾರರ ಹಿತದೃಷ್ಟಿಯಿಂದ ಕ್ಯಾಂಪ್ಕೋ ಸ್ಥಾಪನೆಯಾಗುವ ಸಂದರ್ಭ ಮಾಡಿದ ಸರ್ವೆ ಪ್ರಕಾರ 1.4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 1.5 ಲಕ್ಷ ಟನ್‌ ಅಡಿಕೆ 1972 ರಲ್ಲಿ ಉತ್ಪಾದನೆಯಾಗುತ್ತಿತ್ತು. ಆ ಕಾಲದಲ್ಲಿ ಅಡಿಕೆ ಧಾರಣೆಯು 1974 ರಲ್ಲಿ ಬಿಳಿ ಅಡಿಕೆಗೆ 3-‌4 ರೂಪಾಯಿ, ಕೆಂಪಡಿಕೆಗೆ  3 -4 ರೂಪಾಯಿ ಹಾಗೂ ಶಿವಮೊಗ್ಗದ ಹಸಕ್ಕೆ ಮಾತ್ರಾ 5-6  ರೂಪಾಯಿ ಇತ್ತು. 1964 ರಿಂದ ಅಡಿಕೆ ಆಮದು ಕೂಡಾ ಇರಲಿಲ್ಲ. 

ಎ ಎಸ್‌ ಭಟ್

ಕ್ಯಾಂಪ್ಕೋ ಸ್ಥಾಪನೆ ಬಳಿಕ ಧಾರಣೆ ಏರಿಕೆಯಾಯಿತು, ಬಳಿಕ ಅಡಿಕೆ ಬೆಳೆ ವಿಸ್ತರಣೆಯೂ ಆಯಿತು. 1990 ರಲ್ಲಿ ಹೊತ್ತಿಗೆ ಅಡಿಕೆ ಧಾರಣೆ 45 ರೂಪಾಯಿ ಆಸುಪಾಸಿಗೆ ಬಂದಿತು. ಆ ಬಳಿಕವೂ ಅಡಿಕೆ ವಿಸ್ತರಣೆ ಮುಂದುವರಿಯಿತು. ಇದೇ ವೇಳೆ ಅಡಿಕೆ ಬಳಕೆಯೂ ದೇಶದಲ್ಲಿ ಹೆಚ್ಚಾಯಿತು. ಇಲ್ಲಿಯ ಉತ್ಪಾದನೆ ಸಾಕಾಗದೆ ಆಮದು ಕೂಡಾ ನಡೆಯುತ್ತಿತ್ತು. ಈಚೆಗೂ ಅಡಿಕೆ ಆಮದು ನಡೆಯುತ್ತಿತ್ತು. ಅಂದರೆ ಅಡಿಕೆ ಮಾರುಕಟ್ಟೆ ಇದೆ, ಬೇಡಿಕೆಯೂ ಇದೆ. ಅಂದರೆ  ಕಳೆದ ಎರಡು ವರ್ಷದವರೆಗೆ ಇಲ್ಲಿನ ಅಡಿಕೆಯ ಉತ್ಪಾದನೆ ಬಳಕೆ ಆಗುತ್ತಿದೆ. ಆದರೆ ಈಗ ಅಡಿಕೆ ಧಾರಣೆ ವಿಪರೀತ ಏರಿಕೆಯ ಬಳಿಕ ಆತಂಕ ಇದೆ. ಈ ಎಲ್ಲಾ ಬೇಡಿಕೆ ಪೂರೈಕೆಯಾದರೆ ಏನು ಎಂಬ ಚಿಂತನೆ ನಡೆಸಬೇಕಿದೆ. ಹೀಗಾಗಿ ಅಡಿಕೆ ಬೆಳೆ ವಿಸ್ತರಣೆಯಲ್ಲಿ ಎಚ್ಚರಿಕೆ ಇರಲೇಬೇಕು. ಈ ಬಗ್ಗೆ  ಬೆಳೆಗಾರರಿಗೆ ಜಾಗೃತೆ ಬೇಕು, ಬೆಳೆಗಾರನೇ ಈ ಬಗ್ಗೆ ಯೋಚಿಸಬೇಕು. ಯಾವತ್ತೂ ಬೆಳೆ ವಿಸ್ತರಣೆ, ಬೆಳೆ ಬೆಳೆದರೆ ಸಾಲದು ಮಾರುಕಟ್ಟೆಯನ್ನೂ ಗಮನಿಸಬೇಕು. ಬೇಕಾಬಿಟ್ಟಿಯಾಗಿ ಈ ಧಾರಣೆ ಇದೆ ಎಂದು ಬೆಳೆದರೆ ಸಂಕಷ್ಟ ನಿಶ್ಚಿತವೇ ಆಗಿದೆ. ಇದಕ್ಕಾಗಿ ಅಡಿಕೆ ಬೆಳೆಯ ಸರ್ವೆ ಹಾಗೂ ಬಳಕೆಯ ಬಗ್ಗೆ ಸರ್ವೆ ಆಗಬೇಕು. ಈ ಮೂಲಕ ಬೆಳೆಯ ಬಗ್ಗೆ ನಿಯಂತ್ರಣವೂ ಇರಬೇಕು.

ಅಡಿಕೆ ಸದ್ಯ ಬ್ಯಾನ್‌ ಆಗಲು ಸಾಧ್ಯವಿಲ್ಲ. ಈ ಆತಂಕ ಇರಬೇಕಾಗಿಲ್ಲ. ಹೀಗಾಗಿ ಅಡಿಕೆ ಭವಿಷ್ಯವೇ ಇಲ್ಲ ಎಂದು ಯಾವ ಬೆಳೆಗಾರರೂ ಚಿಂತಿಸಬೇಕಿಲ್ಲ. ಅಡಿಕೆ ಬ್ಯಾನ್‌ ಆಗದೇ ಇರಲು ಹಲವು ಕಾರಣಗಳು ಇವೆ. ದೇಶಗಳ ನಡುವೆ ಒಪ್ಪಂದ ಸೇರಿದಂತೆ ವಿವಿಧ ಕಾರಣಗಳು ಇರುತ್ತವೆ. ಹೀಗಾಗಿ ಏಕಾಏಕಿ ನಿಷೇಧ ಸಾಧ್ಯವಿಲ್ಲ. ಆದರೆ ಬೆಳೆ ವಿಸ್ತರಣೆ, ಧಾರಣೆ ಸ್ಥಿರತೆ, ಭವಿಷ್ಯದ ಕೃಷಿ ಇತ್ಯಾದಿಗಳ ಬಗ್ಗೆ ಬೆಳೆಗಾರ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಈ ನಡುವೆಯೇ ಪರ್ಯಾಯ ಬೆಳೆ, ಮಿಶ್ರ ಬೆಳೆಗಳ ಕಡೆಗೂ ಕೃಷಿಕ ಯೋಚಿಸಬೇಕು. ಸರ್ಕಾರ ಪರ್ಯಾಯ ಬೆಳೆಯ ಬಗ್ಗೆ ಸರಿಯಾದ ಮಾಹಿತಿಯನ್ನೂ ನೀಡಬೇಕು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ
ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ
August 13, 2026
6:59 AM
by: ದ ರೂರಲ್ ಮಿರರ್.ಕಾಂ
ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?
August 13, 2026
6:50 AM
by: ಮಹೇಶ್ ಪುಚ್ಚಪ್ಪಾಡಿ
ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ
August 13, 2026
6:35 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror