Advertisement
MIRROR FOCUS

ಅಡಿಕೆ ಬೆಳೆಗೆ ಉತ್ತಮ ಧಾರಣೆಯ ಸಂತಸದಲ್ಲಿ ಚಾಮರಾಜನಗರ ರೈತರು | ಚಾಲಿ ಅಡಿಕೆ ಧಾರಣೆ ಏರಿಕೆಯ ನಿರೀಕ್ಷೆಯಲ್ಲಿ ಮಲೆನಾಡು ಭಾಗದ ಬೆಳೆಗಾರರು | ಧಾರಣೆ ಏರಿಕೆಯ ಬಗ್ಗೆ ತಜ್ಞರ ಅಭಿಪ್ರಾಯ |

Share

ಮಲೆನಾಡು, ಕರಾವಳಿ ಭಾಗದಲ್ಲಿ ಮಾತ್ರವೇ ಇದ್ದ ಅಡಿಕೆ ಬೆಳೆ ಈಗ ವಿಸ್ತರಣೆಯಾಗಿದೆ. ಮಲೆನಾಡಿನಲ್ಲಿ ಈ ಬಾರಿ ಹವಾಮಾನದ ಕಾರಣದಿಂದ  ಅಡಿಕೆ ಬೆಳೆ ಕುಸಿತವಾಗಿತ್ತು. ಚಾಲಿ ಅಡಿಕೆ ಧಾರಣೆಯೂ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಇದೀಗ ಏರಿಕೆ ಕಾಣುತ್ತಿದೆ. ಈ ನಡುವೆ ಚಾಮರಾಜ ನಗರದಲ್ಲಿ ಅಡಿಕೆ ಬೆಳೆಗೆ ಉತ್ತಮ ಧಾರಣೆ ಲಭಿಸಿದ ಸಂತಸದಲ್ಲಿ ಬೆಳೆಗಾರರು ಇದ್ದಾರೆ.…..ಮುಂದೆ ಓದಿ….

ಕೃಷಿ ಸಂಬಂಧಿತ ಸುದ್ದಿಗಳಿಗಾಗಿ “ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

ರಾಜ್ಯದಲ್ಲಿ ಈ ಬಾರಿ ಅಡಿಕೆ ಬೆಳೆಗೆ ಉತ್ತಮ ಧಾರಣೆ  ಲಭಿಸುವ ನಿರೀಕ್ಷೆ ಇದೆ. ಬೆಳೆ ಕಡಿಮೆ ಇದೆ. ಆದರೆ ಚಾಲಿ ಅಡಿಕೆ ಹೊರತುಪಡಿಸಿ ಕೆಂಪಡಿಕೆ ಉತ್ತಮ ಫಸಲು ಕಂಡಿದೆ. ಇದರ ಜೊತೆಗೆ ಉತ್ತಮ ಧಾರಣೆಯೂ ಲಭಿಸಿದೆ ಎಂದು  ಚಾಮರಾಜನಗರ ಜಿಲ್ಲೆಯ ಬೂದಿತಿಟ್ಟು ಗ್ರಾಮದ ರೈತ ಕೃಪಾನಿಧಿ ಸಂತಸ ವ್ಯಕ್ತಪಡಿಸುತ್ತಾರೆ. ಐದು ಎಕರೆ ಜಮೀನಿನಲ್ಲಿ 2500 ಅಡಿಕೆ ಸಸಿಗಳನ್ನ ಅವರು ಬೆಳೆಸಿದ್ದು, ವರ್ಷಕ್ಕೆ 10 ರಿಂದ 12 ಲಕ್ಷ ರೂಪಾಯಿವರೆಗೂ ಆದಾಯ ಪಡೆಯುತ್ತೇನೆ ಎನ್ನುತ್ತಾರೆ.  ಏಳು ಎಕರೆ ಜಮೀನಿನಲ್ಲಿ ಅಡಿಕೆ ಬೆಳೆದಿದ್ದು, ಪ್ರತಿ ಎಕರೆಗೆ ಪ್ರತಿ ವರ್ಷ ಮೂರರಿಂದ ನಾಲ್ಕು ಲಕ್ಷ ರೂಪಾಯಿಗಳ ಲಾಭ ಪಡೆಯುತ್ತಿದ್ದೇವೆ ಎಂದು  ರೈತ ಮದಲಿಂಗ ಅವರು ಹೇಳುತ್ತಾರೆ.

ಕೃಷಿ ಸಂಬಂಧಿತ ಸುದ್ದಿಗಳಿಗಾಗಿ “ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

ಇದು ಚಾಮರಾಜನಗರ ಜಿಲ್ಲೆಯ ಅಡಿಕೆ ಬೆಳೆಗಾರರ ಕತೆಯಾದರೆ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಕಳೆದ ವರ್ಷದ ಹವಾಮಾನ ವೈಪರೀತ್ಯದ ಕಾರಣದಿಂದ ಇಳುವರಿಯಲ್ಲಿ ಕೊರತೆ ಕಂಡಿದೆ. ಹೀಗಾಗಿ ಉತ್ತಮ ಧಾರಣೆಯ ನಿರೀಕ್ಷೆ ಇದೆ. ಚಾಲಿ ಅಡಿಕೆಯಲ್ಲಿ ಶೇ.50 ರಷ್ಟು ಕುಸಿತವಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಮುಂದಿನ ವರ್ಷ ಉತ್ತಮ ಇಳುವರಿಯ ನಿರೀಕ್ಷೆ ಇದೆ. ಸದ್ಯ ಅಡಿಕೆ ಕೊರತೆ ಹಿನ್ನೆಲೆಯಲ್ಲಿ ಚಾಲಿ ಅಡಿಕೆ ಧಾರಣೆಯ ಏರಿಕೆ ನೀರೀಕ್ಷೆ ಇದೆ.

ಕೃಷಿ ಸಂಬಂಧಿತ ಸುದ್ದಿಗಳಿಗಾಗಿ “ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

ಡಾ.ವಿಘ್ನೇಶ್ವರ ಭಟ್‌ ವರ್ಮುಡಿ

ಅಡಿಕೆ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ಭಟ್‌ ವರ್ಮುಡಿ ಅವರ ಪ್ರಕಾರ, ಅಡಿಕೆ ಧಾರಣೆ ಏರಿಕೆಯಾಗಲು ಹಲವು ಕಾರಣಗಳನ್ನು ನೀಡಿದ್ದಾರೆ. ಈಗಾಗಲೇ ಮ್ಯಾನ್ಮಾರ್‌  ಮತ್ತು ಬಾಂಗ್ಲಾ ಗಡಿ ಬಂದ್ ಮತ್ತು ತೀವ್ರ ನಿಗಾದಿಂದಾಗಿ ಕಳ್ಳದಾರಿಯ ಮೂಲಕ ಅಡಿಕೆ ಆಮದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಿಲ್ಲುವ ಸಾಧ್ಯತೆ ಇದೆ. ಇದೇ ರೀತಿಯ ಬಂದ್ ಕೊರೊನಾ ಸಂದರ್ಭದಲ್ಲಿ ಆದಾಗ ಆಮದು ನಿಂತು ಹೋಗಿ ಆಂತರಿಕವಾಗಿ ಧಾರಣೆ ಏರಿಕೆ ಕಂಡು ಬಂದಿತ್ತು. ಇದೇ ಸ್ಥಿತಿ ಯುದ್ಧ ಮತ್ತು ಗಡಿ ಬಂದ್ ಆದಾಗ ಈ ಮೊದಲು ಆಗಿತ್ತು. ಗಡಿ ಬಂದಿನಿಂದಾಗಿ ಕಳಪೆ ಗುಣಮಟ್ಟದ ಅಡಿಕೆ ಆಮದಿಗೆ ಕಡಿವಾಣ ಬಿದ್ದು ಪಟೋರಾ ಉಳ್ಳಿ ಕರಿಗೋಟ್ ಮತ್ತು ಉತ್ತಮ ದರ್ಜೆಯ ಅಡಿಕೆಗೆ ಆಂತರಿಕವಾಗಿ ಬೇಡಿಕೆ ಹೆಚ್ಚಾಗಬಹುದು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೃಷಿ ಸಂಬಂಧಿತ ಸುದ್ದಿಗಳಿಗಾಗಿ “ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

ಇದಲ್ಲದೆ, ಯುದ್ಧದ ಕಾರ್ಮೋಡ ಕವಿಯುತ್ತಿರುವ ಕಾರಣ ಅಡಿಕೆಗೆ ಹಣಕಾಸಿನ ಲಭ್ಯತೆ ಆಧಾರದಲ್ಲಿ ಬೇಡಿಕೆ ಹೆಚ್ಚಾಗಿ ಧಾರಣೆ ಏರಿಕೆಗೆ ಅವಕಾಶ ಆಗಬಹುದು. ಅಡಿಕೆಯನ್ನು ಒಂದು ಚಟವಾಗಿ ಬಳಸುತ್ತಿರುವ ಕಾರಣ ಯುದ್ಧದ ಕಾರ್ಮೋಡ ಮತ್ತು ಬೀತಿಯಿಂದ ಬರುವಂತಹ ಒತ್ತಡದಿಂದಾಗಿ ಈ ಚಟ ಹೆಚ್ಚಾಗಿ ಅಡಿಕೆ ಬಳಕೆ ಏರಿ ಬೇಡಿಕೆ ಹೆಚ್ಚಾಗಲು ಸಾಧ್ಯ. ಇವೆಲ್ಲಾ ಅಡಿಕೆ ಬೆಳೆಗಾರರಿಗೆ ಸಿಹಿಯನ್ನು ಕೊಡಲು ಸಾಧ್ಯವಾಗಿರುವುದು ಇನ್ನೊಂದು ಕಾರಣ.

ಇನ್ನೊಂದು ಕಡೆ ಅಡಿಕೆಯ ಮೌಲ್ಯ ವರ್ಧಿತ ಉತ್ಪನ್ನಗಳೂ ಭಾರತದಿಂದ ಬಾಂಗ್ಲಾ  ಮ್ಯಾನ್ಮಾರ್‌ ಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಲ್ಪ ಪ್ರಮಾಣದಲ್ಲಿ ರಫ್ತು ಆಗುತ್ತಿದ್ದು ಇದು ಇನ್ನು ಮುಂದೆ ನಿಂತರೂ ಅದರಿಂದ ಆಂತರಿಕವಾಗಿ ಯಾವುದೇ ಸಮಸ್ಯೆ ಉಂಟಾಗದು. ಹೀಗಾಗಿ ನಮ್ಮ ಮಾರುಕಟ್ಟೆಯಲ್ಲಿ ಸ್ವಾಭಾವಿಕವಾಗಿ ಅಡಿಕೆಯನ್ನು ದಾಸ್ತಾನು ಮಾಡುವ ಪ್ರವೃತ್ತಿ ಹೆಚ್ಚಾಗಲು ಸಾಧ್ಯ. ಇದೇ ಇಂದು ಆಗುತ್ತಿದೆ.ಪರಿಣಾಮವಾಗಿ ಧಾರಣೆ ಹೆಚ್ಚಳಕ್ಕೆ ವಿಪುಲ ಅವಕಾಶಗಳಿವೆ ಎನ್ನುತ್ತಾರೆ ಡಾ.ವಿಘ್ನೇಶ್ವರ ಭಟ್.

ಕೃಷಿ ಸಂಬಂಧಿತ ಸುದ್ದಿಗಳಿಗಾಗಿ “ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

ಕೃಷಿ ಸಂಬಂಧಿತ ಸುದ್ದಿಗಳಿಗಾಗಿ “ದ ರೂರಲ್‌ ಮಿರರ್.ಕಾಂ” ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಿ | ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ…

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 28-04-2026 | ಎಪ್ರಿಲ್ 29ರಿಂದ ಕರ್ನಾಟಕದಲ್ಲಿ ಮಳೆ ಚುರುಕು! ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ

29.04.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ತಾಪಮಾನ…

13 hours ago

ಹೆಸರಘಟ್ಟ ಹಕ್ಕಿಜ್ವರ ನಿಯಂತ್ರಣದಲ್ಲಿ | ಜನರಿಗೆ ಯಾವುದೇ ಆತಂಕ ಬೇಡ ಎಂದ ಆರೋಗ್ಯ ಇಲಾಖೆ

ಹೆಸರಘಟ್ಟದಲ್ಲಿ ಕಂಡುಬಂದ ಹಕ್ಕಿಜ್ವರವನ್ನು ಆರೋಗ್ಯ ಇಲಾಖೆ ಸಂಪೂರ್ಣ ನಿಯಂತ್ರಣಕ್ಕೆ ತಂದಿದೆ. ಮಾನವ ಸೋಂಕಿನ…

2 days ago

ಬಿಸಿಲಿನ ಬೇಗೆಯಲ್ಲಿ ಕಾಡಿಗೆ ಜೀವಜಲ..! ವನ್ಯಜೀವಿಗಳಿಗಾಗಿ ಕೃತಕ ನೀರಿನ ತೊಟ್ಟಿಗಳ ಮಹಾಯೋಜನೆ

ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆಯನ್ನು ತಡೆಯಲು ಅರಣ್ಯ ಇಲಾಖೆ ಕೃತಕ ನೀರಿನ ತೊಟ್ಟಿಗಳನ್ನು…

2 days ago

ಹವಾಮಾನ ವರದಿ | 26-04-2026 | ಸದ್ಯ ಸೆಖೆಯ ಉಗ್ರ ರೂಪ…! ಏಪ್ರಿಲ್ 28 ರಿಂದ ರಾಜ್ಯಾದ್ಯಂತ ಮಳೆ ಸಾಧ್ಯತೆ

ರಾಜ್ಯದಲ್ಲಿ ಭಾರಿ ಬಿಸಿಲು ಮುಂದುವರಿದಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯ ಲಕ್ಷಣಗಳಿವೆ. ಏಪ್ರಿಲ್…

3 days ago

ಅಡಿಕೆ ಎಲೆಚುಕ್ಕೆರೋಗ – ಸಿಪಿಸಿಆರ್‌ಐ ನೇತೃತ್ವದಲ್ಲಿ ಸುಳ್ಯದ ಗುತ್ತಿಗಾರಿನಲ್ಲಿ ಸಂವಾದ

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಮೂಹ ಕ್ರಮಗಳು ಫಲ ನೀಡುತ್ತಿವೆ. ಗುತ್ತಿಗಾರಿನಲ್ಲಿ ಸಂವಾದ…

3 days ago

2026 ಎಲ್ ನಿನೊ ಎಚ್ಚರಿಕೆ..! ಭಾರತ ಸೇರಿ ಏಷ್ಯಾದಲ್ಲಿ ಬರ-ಬಿಸಿಲಿನ ಡಬಲ್ ಶಾಕ್

2026ರಲ್ಲಿ ಎಲ್ ನಿನೊ ಪರಿಣಾಮದಿಂದ ಭಾರತ ಸೇರಿ ಏಷ್ಯಾದಲ್ಲಿ ಕಡಿಮೆ ಮಳೆ ಮತ್ತು…

3 days ago