ಮೂರು ವರ್ಷಗಳಲ್ಲಿ 27% ಏರಿದ ಅಡಿಕೆ ಉತ್ಪಾದನಾ ವೆಚ್ಚ – ರೈತರಿಗೆ ಲಾಭ ಸಿಗಬೇಕಾದರೆ ಕನಿಷ್ಠ ಬೆಲೆ ಎಷ್ಟು ಇರಬೇಕು?

June 10, 2026
10:30 PM
2023ರಿಂದ 2026ರವರೆಗೆ ಅಡಿಕೆ ಉತ್ಪಾದನಾ ವೆಚ್ಚ ಸುಮಾರು 27% ಏರಿಕೆಯಾಗಿದೆ. ಈ ಲೆಕ್ಕಾಚಾರದ ಪ್ರಕಾರ 2023ರ ₹351 ದರಕ್ಕೆ ಸಮಾನವಾದ ಮೌಲ್ಯ 2026ರಲ್ಲಿ ಸುಮಾರು ₹446 ಆಗಿದ್ದು, ರೈತರಿಗೆ ಲಾಭ ಸಿಗಬೇಕಾದರೆ ಇನ್ನೂ ಹೆಚ್ಚಿನ ದರ ಅಗತ್ಯವಿದೆ.

ಅಡಿಕೆ ಕೃಷಿ ಇಂದು ರೈತರಿಗೆ ಲಾಭದಾಯಕ ಬೆಳೆ ಎನ್ನುವ ಭಾವನೆ ಇದ್ದರೂ, ಅದರ ಹಿಂದಿನ ವಾಸ್ತವ ಚಿತ್ರಣ ಬೇರೆ ಇದೆ. ಕಳೆದ ಮೂರು ವರ್ಷಗಳಲ್ಲಿ ಅಡಿಕೆ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದ್ದು, ಬೆಳೆಗಾರರ ಆದಾಯದ ಮೇಲೆ ತೀರಾ ಹೊಡೆತ ನೀಡುತ್ತಿದೆ.

ಲಭ್ಯವಿರುವ ಲೆಕ್ಕಾಚಾರಗಳ ಪ್ರಕಾರ, 2023ರಲ್ಲಿ ಅಡಿಕೆ ಉತ್ಪಾದನೆಗೆ ಎಕ್ರೆಗೆ ಸುಮಾರು ₹5,090 ವೆಚ್ಚವಾಗುತ್ತಿತ್ತು. ಆದರೆ 2026 ಕ್ಕೆ ಇದೇ ವೆಚ್ಚ ₹6,440ಕ್ಕೆ ಏರಿಕೆಯಾಗಿದೆ. ಅಂದರೆ ಕೇವಲ ಮೂರು ವರ್ಷಗಳಲ್ಲಿ ₹1,350 ಹೆಚ್ಚುವರಿ ವೆಚ್ಚ ಸೇರಿದ್ದು, ಇದು ಶೇಕಡಾ 26.52ರಷ್ಟು ಏರಿಕೆಯನ್ನು ಸೂಚಿಸುತ್ತದೆ.

ಯಾವ ವೆಚ್ಚ ಹೆಚ್ಚು ಏರಿಕೆಯಾಗಿದೆ?:  ವೆಚ್ಚಗಳನ್ನು ಗಮನಿಸಿದಾಗ ಅತ್ಯಂತ ಹೆಚ್ಚು ಏರಿಕೆ ಕಂಡಿರುವುದು ಮೈಲುತುತ್ತ  ಮತ್ತು ಕಾರ್ಮಿಕ ವೆಚ್ಚಗಳಲ್ಲಿ. ಆಳು ಸಂಬಳ (ಕಾರ್ಮಿಕ ವೆಚ್ಚ) – 50% ಏರಿಕೆಯಾಗಿದೆ,  ಸ್ಪ್ರೇ ಸಂಬಳ – 25% ಏರಿಕೆಯಾದರೆ, ರಸಗೊಬ್ಬರ ವೆಚ್ಚ – 14.89% ಏರಿಕೆ ಕಂಡುಬಂದಿದೆ. ಮೈಲುತುತ್ತ ಮತ್ತು ಇತರ ನಿರ್ವಹಣಾ ವೆಚ್ಚ – 104.17% ಏರಿಕೆಯಾಗಿದೆ. ಇದರಿಂದ ಅಡಿಕೆ ಕೃಷಿಯಲ್ಲಿ ಕೇವಲ ಗೊಬ್ಬರ ಅಥವಾ ಔಷಧಿ ವೆಚ್ಚ ಮಾತ್ರವಲ್ಲ, ಮಾನವ ಶ್ರಮದ ವೆಚ್ಚವೂ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಅಡಿಕೆಯ ದರ ಎಷ್ಟು ಇರಬೇಕು? : 2023 ರಲ್ಲಿ ಅಡಿಕೆಯ ಉತ್ಪಾದನಾ ವೆಚ್ಚವನ್ನು ಆಧರಿಸಿ ರೈತರಿಗೆ ನ್ಯಾಯಸಮ್ಮತ ಬೆಲೆ ₹351 ಎಂದು ಪರಿಗಣಿಸಿದ್ದರೆ, ಈಗ ಅದೇ ವೆಚ್ಚದ ಏರಿಕೆಯನ್ನು 2026ಕ್ಕೆ ಅನ್ವಯಿಸಿದಾಗ ಅಡಿಕೆಯ ಕನಿಷ್ಠ ನ್ಯಾಯಯುತ ದರ ₹445.77 ಆಗುತ್ತದೆ. ಅಂದರೆ ಕಳೆದ ವರ್ಷದವರೆಗಿನ ದರ : ₹351,  ವೆಚ್ಚ ಏರಿಕೆ : 27% , ಹೆಚ್ಚಳ ಮೊತ್ತ : ₹94.77 ಹೀಗಾಗಿ ಪರಿಷ್ಕೃತ ದರ : ₹445.77.  ಅಂದರೆ ಇಂದಿನ ಉತ್ಪಾದನಾ ವೆಚ್ಚವನ್ನು ಗಮನಿಸಿದರೆ ರೈತರಿಗೆ ಕನಿಷ್ಠ ₹446 ದರ ಸಿಕ್ಕಾಗ ಮಾತ್ರ ಅಡಿಕೆ ಲಾಭದಾಯಕವಾಗಿ ಬೆಳೆಗಾರರಿಗೆ ಲಭ್ಯವಾಗುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ವಾಸ್ತವದಲ್ಲಿ ರೈತರಿಗೆ ಲಾಭ ಎಷ್ಟು? :ಅಂದರೆ ಇಲ್ಲಿ ₹446 ಎನ್ನುವುದು ಎಲ್ಲವೂ ಲಾಭದಾಯಕ ದರವಲ್ಲ. ಇದು ಕೇವಲ ಉತ್ಪಾದನಾ ವೆಚ್ಚದ ಏರಿಕೆಯನ್ನು ಸರಿದೂಗಿಸುವ ದರ ಮಾತ್ರ. ರೈತನ ಕುಟುಂಬ ನಿರ್ವಹಣೆ, ಶಿಕ್ಷಣ, ಆರೋಗ್ಯ, ಸಾಲ ಮರುಪಾವತಿ, ತೋಟದ ಪುನರ್‌ನಿರ್ಮಾಣ, ಯಂತ್ರೋಪಕರಣ ಹೂಡಿಕೆ ಮತ್ತು ಅನಿರೀಕ್ಷಿತ ಪ್ರಕೃತಿ ವಿಕೋಪಗಳ ಅಪಾಯಗಳನ್ನು ಪರಿಗಣಿಸಿದರೆ ಉತ್ಪಾದನಾ ವೆಚ್ಚದ ಮೇಲೆ ಕನಿಷ್ಠ 30 ರಿಂದ 50 ಶೇಕಡಾ ಲಾಭಾಂಶ ಅಗತ್ಯವಾಗುತ್ತದೆ.

ಮುಂದಿನ ದಿನಗಳ ಸವಾಲು : ಇತ್ತೀಚಿನ ವರ್ಷಗಳಲ್ಲಿ ಎಲೆಚುಕ್ಕೆ ರೋಗ, ಹವಾಮಾನ ವೈಪರೀತ್ಯ, ಕಾರ್ಮಿಕರ ಕೊರತೆ ಹಾಗೂ ಉತ್ಪಾದನಾ ವೆಚ್ಚದ ನಿರಂತರ ಏರಿಕೆ ಅಡಿಕೆ ಕೃಷಿಗೆ ಸವಾಲಾಗಿ ಪರಿಣಮಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಮಾರುಕಟ್ಟೆ ದರವನ್ನು ಕೇವಲ ಬೇಡಿಕೆ-ಪೂರೈಕೆಯ ದೃಷ್ಟಿಯಿಂದ ನೋಡದೆ, ಉತ್ಪಾದನಾ ವೆಚ್ಚ ಆಧಾರಿತ ನ್ಯಾಯಸಮ್ಮತ ಬೆಲೆ ವ್ಯವಸ್ಥೆಯ ಬಗ್ಗೆ ಸರ್ಕಾರ ಮತ್ತು ಸಹಕಾರ ಸಂಸ್ಥೆಗಳು ಚಿಂತನೆ ನಡೆಸಬೇಕಾಗಿದೆ.

ಅಡಿಕೆ ಬೆಳೆಗಾರರ ಬದುಕು ಉಳಿಯಬೇಕಾದರೆ ಇಂದಿನ ವೆಚ್ಚಕ್ಕೆ ತಕ್ಕ ದರ ಮಾತ್ರವಲ್ಲ, ನಾಳೆಯ ಖರ್ಚು-ವೆಚ್ಚಗಳ ಕಡೆಗೂ ಇಂದು ಗಮನಿಸಬೇಕಾದ ಅಗತ್ಯ ಇದೆ ಎಂಬುದು ರೈತ ಸಮುದಾಯದ ಪ್ರಮುಖ ಬೇಡಿಕೆಯಾಗಿದೆ.

ಈ ಎಲ್ಲದರ ನಡುವೆ ಇಂದು 380-400 ರೂಪಾಯಿಗೆ ವಿವಿಧ ದೇಶಗಳಿಂದ ಭಾರತಕ್ಕೆ ಅಗ್ಗದ ದರದಲ್ಲಿ ಅಡಿಕೆ ಆಮದು ಆಗುತ್ತಿರುವ ಅಡಿಕೆ ಬೆಳೆಗಾರರ ಮೇಲೆ ನೇರ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಅಗ್ಗದ ಆಮದು ಅಡಿಕೆ ದೇಶೀಯ ಮಾರುಕಟ್ಟೆಗೆ ಪ್ರವೇಶಿಸುವುದರಿಂದ ರೈತರಿಗೆ ಸಮರ್ಪಕ ಬೆಲೆ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ.

ಅಡಿಕೆ ಬೆಳೆಗಾರರ ಸಂಘಟನೆಗಳು ಮತ್ತು ರೈತ ಮುಖಂಡರು ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಆಮದು ನೀತಿಯನ್ನು ಮರುಪರಿಶೀಲಿಸುವಂತೆ ಆಗ್ರಹಿಸಿದ್ದಾರೆ. ಅಡಿಕೆಯನ್ನು ಕೃಷಿ ಉತ್ಪನ್ನವಾಗಿ ಪರಿಗಣಿಸಿ ಬೆಳೆಗಾರರ ಹಿತಾಸಕ್ತಿಗೆ ಅನುಗುಣವಾದ ನೀತಿಗಳನ್ನು ಜಾರಿಗೊಳಿಸಬೇಕು ಎಂದು ಈ ಹಿಂದೆಯೂ ಒತ್ತಾಯಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಕೃಷಿ ತಜ್ಞರ ಅಭಿಪ್ರಾಯದ ಪ್ರಕಾರ,  ಅಗ್ಗದ ಆಮದು ಅಡಿಕೆ ದೇಶೀಯ ಉತ್ಪಾದನೆಗೆ ನೇರ ಹೊಡೆತ ನೀಡುತ್ತಿದೆ. ಉತ್ಪಾದನಾ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಕಡಿಮೆ ಬೆಲೆಯ ಆಮದು ಅಡಿಕೆ ಮಾರುಕಟ್ಟೆಯನ್ನು ಆವರಿಸುವುದು ರೈತರ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ. ಕೇಂದ್ರ ಸರ್ಕಾರ ರೈತರ ಹಿತದೃಷ್ಟಿಯಿಂದ ಆಮದು ನೀತಿಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Arecanut production costs have increased by about 27% between 2023 and 2026. Based on cost escalation, a fair compensation price of ₹351 in 2023 would need to be around ₹446 in 2026 just to maintain the same economic value. For sustainable profitability, farmers may require prices in the range of ₹580–₹670 per unit depending on desired profit margins.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

ಎಲ್ ನೀನೋ, ಲಾ ನೀನಾ ಮತ್ತು ಮಳೆ ಅನಿಶ್ಚಿತತೆ – ಮುಂದಿನ ಪೀಳಿಗೆಗಾಗಿ ಮಳೆನೀರು ಉಳಿಸುವುದು ಈಗಲೇ ಅನಿವಾರ್ಯ..!
June 10, 2026
9:08 PM
by: ಮಿರರ್‌ ಡೆಸ್ಕ್
ರಸ್ತೆ ಬದಿ ತ್ಯಾಜ್ಯ ಎಸೆದರೆ ಎಚ್ಚರ – ದಂಡ ಖಚಿತ | ಬೆಂಗಮಲೆಯಲ್ಲಿ ತ್ಯಾಜ್ಯ ಎಸೆದವರಿಗೆ ₹5,000 ದಂಡ
June 10, 2026
8:37 PM
by: ದ ರೂರಲ್ ಮಿರರ್.ಕಾಂ
ಕೇಂದ್ರ ಕೃಷಿ ಸಚಿವರನ್ನು ಭೇಟಿಯಾದ ಕ್ಯಾಂಪ್ಕೋ ನಿಯೋಗ – ಅಡಿಕೆ ಹಾನಿಕಾರಕ ಕುರಿತ ಸಂಶೋಧನೆ, ಎಲೆಚುಕ್ಕೆ ರೋಗ ನಿಯಂತ್ರಣ ಕುರಿತು ಚರ್ಚೆ
June 10, 2026
2:56 PM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 10-06-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ – ಮುಂದಿನ 10 ದಿನ ಭಾರೀ ಮಳೆ ಸಾಧ್ಯತೆ ಕಡಿಮೆ, ಅಲ್ಲಲ್ಲಿ ಮಾತ್ರ ಮಳೆ
June 10, 2026
2:46 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror