Advertisement
Opinion

ಅಡಿಕೆ ‘Group 1’ ವಿಶ್ವ ಆರೋಗ್ಯ ಸಂಸ್ಥೆಯ ವರ್ಗೀಕರಣದ ಅರ್ಥವೇನು?

Share

ಅಡಿಕೆ (Arecanut) ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾದ International Agency for Research on Cancer (IARC) ನ Group 1 ವರ್ಗೀಕರಣ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.  ಸಾಮಾನ್ಯವಾಗಿ ಸಾರ್ವಜನಿಕ ವಲಯದಲ್ಲಿ “Group 1 ಎಂದರೆ ಅತ್ಯಂತ ವಿಷಕಾರಿ ಅಥವಾ ತಕ್ಷಣ ಕ್ಯಾನ್ಸರ್ ಉಂಟುಮಾಡುವ ಪದಾರ್ಥ” ಎಂಬ ತಪ್ಪು ಕಲ್ಪನೆ ಕಂಡುಬರುತ್ತಿದೆ. ಆದರೆ ವಿಜ್ಞಾನಾತ್ಮಕವಾಗಿ IARC ವರ್ಗೀಕರಣವು ಅಪಾಯದ ಪ್ರಮಾಣದ ಮೇಲೆ ಅಲ್ಲ, ಬದಲಾಗಿ ಸಾಕ್ಷ್ಯದ ದೃಢತೆಯ ಮೇಲೆ ಆಧಾರಿತವಾಗಿದೆ.

Advertisement
Advertisement

Group 1 ಎಂದರೆ ಏನು?  : IARC ಒಂದು ಪದಾರ್ಥವನ್ನು ವರ್ಗೀಕರಿಸುವಾಗ ಮುಖ್ಯವಾಗಿ ಕೇಳುವ ಪ್ರಶ್ನೆ, “ಇದು ಎಷ್ಟು ಅಪಾಯಕಾರಿ?”  ಯಲ್ಲ;
“ಮಾನವನಲ್ಲಿ ಕ್ಯಾನ್ಸರ್ ಉಂಟುಮಾಡುತ್ತದೆ ಎಂಬುದು ಎಷ್ಟು ದೃಢವಾಗಿದೆ?”  ಅಂದರೆ, ಸಾಕ್ಷ್ಯ ದೃಢವಾಗಿದ್ದರೆ ಅದು Group 1 ಆಗುತ್ತದೆ.

Group 1 ಎಂದರೆ:

  • Carcinogenic to humans

  • ಮಾನವನಲ್ಲಿ ಕ್ಯಾನ್ಸರ್ ಉಂಟುಮಾಡುತ್ತದೆ ಎಂಬುದಕ್ಕೆ ಸ್ಪಷ್ಟ ಸಾಕ್ಷ್ಯ ಇದೆ

ಇದು “ಅತ್ಯಂತ ವಿಷಕಾರಿ” ಎಂಬ ಅರ್ಥವಲ್ಲ; “ಮಾನವ ಅಧ್ಯಯನಗಳಲ್ಲಿ ಕ್ಯಾನ್ಸರ್ ಸಂಬಂಧ ಸಾಬೀತಾಗಿದೆ” ಎಂಬುದೇ ಮುಖ್ಯ ಅಂಶ.

Group 2A ಮತ್ತು Group 2B ಎಂದರೆ? :  IARC ಯ ಇನ್ನೊಂದು ಪ್ರಮುಖ ವರ್ಗೀಕರಣಗಳು:

  • Group 2A – Probably carcinogenic – ಮಾನವನಲ್ಲಿ ಸೀಮಿತ ಸಾಕ್ಷ್ಯ, ಆದರೆ ಪ್ರಾಣಿ ಅಧ್ಯಯನಗಳಲ್ಲಿ ಬಲವಾದ ಸಾಕ್ಷ್ಯ.

  • Group 2B – Possibly carcinogenic – ಮಾನವನಲ್ಲೂ ಪ್ರಾಣಿಗಳಲ್ಲೂ ಸಾಕ್ಷ್ಯ ದುರ್ಬಲ ಅಥವಾ ಅಪೂರ್ಣವಾಗಿರುವುದು.

ಅಡಿಕೆಯನ್ನು ಏಕೆ Group 1 ಕ್ಕೆ ಸೇರಿಸಿದ್ದಾರೆ? :  IARC ನಿರ್ಧಾರವು “ಅಡಿಕೆ ಮಾತ್ರ” ಆಧಾರಿತವಾಗಿಲ್ಲ. ಇದು ಹಲವು ದಶಕಗಳ ವೈಜ್ಞಾನಿಕ ಸಂಶೋಧನೆಯ ಒಟ್ಟಾರೆ ಫಲಿತಾಂಶವಾಗಿದೆ. ಪ್ರಮುಖ ಕಾರಣಗಳು:

  1. Oral Submucous Fibrosis (OSF) : ಅಡಿಕೆ ಸೇವನೆಯಿಂದ ಉಂಟಾಗುವ Oral Submucous Fibrosis (OSF) ಎಂಬುದು ಒಂದು ಪೂರ್ವ-ಕ್ಯಾನ್ಸರ್ ಸ್ಥಿತಿ. OSF ಇರುವವರಲ್ಲಿ Oral Cancer ಗೆ ಮಾರ್ಪಡುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳು ಸೂಚಿಸುತ್ತವೆ.
  2. Arecoline ಮತ್ತು Alkaloids ಪರಿಣಾಮ : ಅಡಿಕೆಯಲ್ಲಿರುವ Arecoline ಹಾಗೂ ಇತರ ಅಲ್ಕಲಾಯ್ಡ್ಸ್  : DNA ಹಾನಿ (Genotoxicity), Fibroblast overstimulation ,Nitrosamine formation ಇವು ಕ್ಯಾನ್ಸರ್ ಉಂಟುಮಾಡುವ ಜೈವಿಕ ಯಾಂತ್ರಿಕತೆಯನ್ನು ಬಲಪಡಿಸುವ ಕಾರಣಗಳಾಗಿವೆ.
  3. ಮಾನವ ಅಧ್ಯಯನಗಳ ದೃಢತೆ : ಭಾರತ, ತೈವಾನ್, ಶ್ರೀಲಂಕಾ ಮುಂತಾದ ರಾಷ್ಟ್ರಗಳಲ್ಲಿ ನಡೆದ ಅಧ್ಯಯನಗಳಲ್ಲಿ:  ಅಡಿಕೆ ಸೇವನೆ ಮತ್ತು ಬಾಯಿಯ ಕ್ಯಾನ್ಸರ್ ನಡುವೆ,  ಪುನಃಪುನಃ ದೃಢವಾದ ಸಂಬಂಧ (epidemiological association) ಕಂಡುಬಂದಿದೆ.  ತಂಬಾಕು ಇಲ್ಲದಿದ್ದರೂ ಸಹ ಕೆಲ ಸಂದರ್ಭಗಳಲ್ಲಿ Oral Cancer ಪ್ರಕರಣಗಳು ವರದಿಯಾಗಿವೆ ಎಂದು IARC ಉಲ್ಲೇಖಿಸಿದೆ.

Group 1 ಸ್ಥಾನದಿಂದ ಅಡಿಕೆ ಹೊರಬರಬಹುದೇ? :  ಪ್ರಧಾನ ಚರ್ಚೆಯ ವಿಷಯವೇ ಇದಾಗಿದೆ:
ಅಡಿಕೆಯನ್ನು Group 2 ಗೆ ಮರುವರ್ಗೀಕರಿಸಬಹುದೇ? :  ಸಿದ್ಧಾಂತವಾಗಿ ಸಾಧ್ಯವಾದರೂ, ಪ್ರಾಯೋಗಿಕವಾಗಿ ಇದು ಅತ್ಯಂತ ಕಠಿಣ. ಕಾರಣ:

  • ಈಗಿರುವ ಮಾನವ ಅಧ್ಯಯನಗಳ ಸಾಕ್ಷ್ಯವನ್ನು ತಪ್ಪು ಎಂದು ನಿರೂಪಿಸಬೇಕು ಅಥವಾ

  • ಮೂಲ ಕಾರಣ ಅಡಿಕೆ ಅಲ್ಲ ಎಂದು ತೋರಿಸಬೇಕು

ಮರುವರ್ಗೀಕರಣಕ್ಕೆ ಬೇಕಾದ ವೈಜ್ಞಾನಿಕ ದಾರಿಗಳು : ಪರಿವರ್ತನೆಗಾಗಿ ಅಗತ್ಯವಿರುವುದು:

  • 10–20 ವರ್ಷಗಳ ದೊಡ್ಡ cohort ಅಧ್ಯಯನಗಳು

  • ಸುಣ್ಣ, ತಂಬಾಕು ಸಂಪೂರ್ಣ ಹೊರತುಪಡಿಸಿದ ಡೇಟಾ

  • Arecoline carcinogenic ಅಲ್ಲ ಎಂಬ ಪ್ರಯೋಗಾಲಯದ ನಿರೂಪಣೆ

ಆದರೆ ಈಗಿನ ಸಾಕ್ಷ್ಯಗಳು ಈ ಸಾಧ್ಯತೆಗೆ ವಿರುದ್ಧವಾಗಿವೆ.

ಮುಂದಿನ ವಾಸ್ತವಿಕ ಮಾರ್ಗ : ವಿಜ್ಞಾನಾತ್ಮಕವಾಗಿ ಒಂದು ವಾಸ್ತವಿಕ ದಾರಿ ಎಂದರೆ:

  • ಶುದ್ಧ ಅಡಿಕೆ ಅಲ್ಲ, ಅದರ ಸೇವನೆಯ ರೂಪ (lime, frequency, processing) ಅಪಾಯ ಹೆಚ್ಚಿಸಬಹುದು ಎಂಬ ನಿಖರ ಅಧ್ಯಯನ.  ಅಡಿಕೆಯ “dose-response relationship” ಮತ್ತು safer alternatives ಕುರಿತ ಸಂಶೋಧನೆ ಮುಂದುವರಿಯಬೇಕಾಗಿದೆ.

WHO/IARC ಪ್ರಕಾರ ಅಡಿಕೆ Group 1 ವರ್ಗದಲ್ಲಿರುವುದಕ್ಕೆ ಈಗ ಬಲವಾದ ಮಾನವ ಸಾಕ್ಷ್ಯಗಳಿವೆ. Group 1 ಎಂದರೆ “ಅತ್ಯಂತ ವಿಷ” ಅಲ್ಲ, ಮಾನವನಲ್ಲಿ ಕ್ಯಾನ್ಸರ್ ಸಂಬಂಧ ಸಾಬೀತಾಗಿದೆ” ಎಂಬ ವೈಜ್ಞಾನಿಕ ಅರ್ಥ ಮಾತ್ರ. ಮರುವರ್ಗೀಕರಣ ಸಾಧ್ಯತೆ ವಿಜ್ಞಾನಾತ್ಮಕವಾಗಿ ಅತ್ಯಂತ ಕಠಿಣವಾದ ಪ್ರಕ್ರಿಯೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…

4 hours ago

ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!

ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…

10 hours ago

ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ

ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…

11 hours ago

ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ

ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…

11 hours ago

ಶುದ್ಧ ಹಿಮಾಲಯವೂ ಸುರಕ್ಷಿತವಲ್ಲ..! ಮರುಭೂಮಿ ಧೂಳಿನೊಂದಿಗೆ ಹರಡುವ ರೋಗಕಾರಕಗಳು

ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…

11 hours ago

ಕೃಷಿ ಆಧಾರಿತ ಕೈಗಾರಿಕೆ ಉತ್ತೇಜನದಿಂದ ರೈತರ ಭವಿಷ್ಯ ರೂಪಾಂತರ

ರಾಜಸ್ಥಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ರೈತರ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು…

11 hours ago