ಕಾಸರಗೋಡಿಗೂ ಕಾಲಿಟ್ಟಿತೇ ಅಡಿಕೆ ಹಳದಿ ಎಲೆರೋಗ ? |

September 9, 2022
2:33 PM
Advertisement

ರಾಜ್ಯದ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಹಳದಿ ಎಲೆ ರೋಗವು ಈಗ ನೆರೆಯ ಕಾಸರಗೋಡು ಜಿಲ್ಲೆಯಲ್ಲೂ ಕಾಣಿಸಿಕೊಂಡಿದೆಯೇ ಎಂಬ ಆತಂಕ ಅಲ್ಲಿನ ಕೃಷಿಕರನ್ನು ಕಾಡುತ್ತಿದೆ. ಕುಂಬಳೆ ಸಮೀಪದ ಕೃಷಿಕರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

Advertisement
Advertisement
Advertisement

ಸುಳ್ಯ ,ಪುತ್ತೂರು ತಾಲೂಕಿನ ಅಡಿಕೆ ತೋಟಗಳನ್ನು ಆಕ್ರಮಿಸಿಕೊಂಡ ಅಡಿಕೆಯ ಹಳದಿ ಎಲೆ ರೋಗ ಇದೀಗ ಕಾಸರಗೋಡು ತಾಲೂಕಿನ ತೋಟಗಳಿಗೂ ವ್ಯಾಪಿಸಿದೆಯೇ ಎಂಬ ಸಂದೇಹ ಉಂಟಾಗಿದೆ.ಕಾಸರಗೋಡು ತಾಲೂಕಿನ ಅಡೂರು,ಕುಂಬಳೆ ,ಮಧೂರು ಪ್ರದೇಶಗಳ ಕೆಲವು ತೋಟಗಳಲ್ಲಿ ಅಡಿಕೆ ಸೋಗೆ ಹಳದಿಯಾಗಿರುವುದನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು  ಕೃಷಿಕರು ಆತಂಕ ಪಡುತ್ತಿದ್ದಾರೆ.

Advertisement

ಕುಂಬಳೆ ಸಮೀಪದ ಎಡನಾಡು ಬಳಿಯ ಕೃಷಿಕರೊಬ್ಬರ ತೋಟದಲ್ಲಿ ಕಳೆದ ಕೆಲವು ಸಮಯಗಳಿಂದ ಅಡಿಕೆ ಮರದ ಸೋಗೆ ಹಳದಿಯಾಗಿತ್ತು. ಇದಕ್ಕೆ ವಿಜ್ಞಾನಿಗಳ ಸಲಹೆ ಪಡೆದು ಸೂಕ್ಷ್ಮಪೋಷಕಾಂಶಗಳನ್ನು ಬಳಕೆ ಮಾಡಿದ್ದಾರೆ. ಅದರ ಜೊತೆಗೆ ಮೆಗ್ನೀಷಿಯಂ ಸಲ್ಫೇಟ್ ಮತ್ತು ಡೊಲೋಮೈಟ್ ಕೂಡಾ ಬಳಕೆ ಮಾಡಿದ್ದಾರೆ. ಅದಾದ ಬಳಿಕ ಅಡಿಕೆ ಮರದ ಸೋಗೆ ಹಸಿರಾದರೂ ಇದೀಗ ಮತ್ತೆ ಹಳದಿ ಆಗುವುದಕ್ಕೆ ಕಾರಣವೇನು ಎಂದು ತಿಳಿದಿಲ್ಲ ಎನ್ನುತ್ತಾರೆ ಸ್ಥಳೀಯ ಕೃಷಿಕರು. ಕೆಲವು ಬಾರಿ ಅಡಿಕೆ ಮರದ ಸೋಗೆ ಹಳದಿಯಾಗುವುದಕ್ಕೆ ಹಳದಿ ಎಲೆರೋಗವೇ ಕಾರಣ ಆಗಿರುವುದಿಲ್ಲ. ಪೋಷಕಾಂಶಗಳ ಕೊರತೆಯೂ ಕಾರಣವಾಗಿರುತ್ತದೆ.ಮೆಗ್ನೀಷಿಯಂ ಕೊರತೆ ಲಕ್ಷಣವೂ ಹಳದಿ ಎಲೆರೋಗದ ಲಕ್ಷಣಗಳೂ ಹೆಚ್ಚೂ ಕಡಿಮೆ ಒಂದೇ ರೀತಿ ಇರುತ್ತದೆ. ಹೀಗಾಗಿ ಸೋಗೆ ಹಳದಿಯಾದ ತಕ್ಷಣವೇ ಹಳದಿ ಎಲೆರೋಗ ಎಂದು ಕೃಷಿಕರು ಭಾವಿಸಬೇಕಾಗಿಲ್ಲ ಎಂದು ಈ ಹಿಂದೆ ವಿಜ್ಞಾನಿಗಳು ಹೇಳಿದ್ದರು. ಆದರೆ ಕಾಸರಗೋಡಿನ ಕುಂಬಳೆಯ  ಎಡನಾಡಿನ ಈ ಪ್ರದೇಶದಲ್ಲಿ ಮತ್ತೆ ಹಳದಿಯಾಗಿರುವುದು  ಈಗ ಕೃಷಿಕರ ಆತಂಕಕ್ಕೆ ಕಾರಣ.

ಅಡಿಕೆ ಹಳದಿ ಎಲೆರೋಗವು ದ ಕ ಜಿಲ್ಲೆ ಮಾತ್ರವಲ್ಲ ಶೃಂಗೇರಿ, ಕೊಪ್ಪ ಮೊದಲಾದ ಕಡೆಗಳಲ್ಲಿ ಕಂಡುಬಂದಿತ್ತು. ಕೇರಳದಲ್ಲಿ ಆರಂಭವಾದ ಈ ರೋಗವು ವ್ಯಾಪಕವಾಗಿತ್ತು. ಈಗ ಸಂಪಾಜೆ ಸೇರಿದಂತೆ ದ ಕ ಜಿಲ್ಲೆಯ ಹಲವು ಕಡೆ ವ್ಯಾಪಿಸಿದೆ. ಕಾಸರಗೋಡು ಜಿಲ್ಲೆಯ ಕುಂಬಳೆ ಪ್ರದೇಶದಲ್ಲಿ ಅಡಿಕೆ ಸೋಗೆ ಏಕೆ  ಹಳದಿಯಾಗುತ್ತಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುವುದು  ಅಗತ್ಯವಿದೆ.
ರಮೇಶ್‌ ದೇಲಂಪಾಡಿ, ಕೃಷಿಕರು, ಮರ್ಕಂಜ, ಸುಳ್ಯ

Advertisement

 

 

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

ಚಾಮರಾಜನಗರ-ಹಾವೇರಿಯಲ್ಲಿ ಗಾಳಿಗೆ ಅಪಾರ ಕೃಷಿ ಹಾನಿ |
April 19, 2024
11:14 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆ | ಗಾಳಿಗೆ ಉರುಳಿದ ಮರ | ಸುಳ್ಯ- ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಡಿತ |
April 19, 2024
11:07 PM
by: ದ ರೂರಲ್ ಮಿರರ್.ಕಾಂ
ಬೇಸಿಗೆ ಜರ್ನಿಯ ಚಿಲಿಪಿಲಿ ಗೂಡು | ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ |
April 19, 2024
4:02 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 19-04-2024 | ಇಂದು ಉತ್ತಮ ಮಳೆಯ ಮುನ್ಸೂಚನೆ |
April 19, 2024
11:00 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror