ಅನುಕ್ರಮ

ನಾಗಪ್ಪ…., ಏನು ಮಾಡಬೇಡಪ್ಪಾ….!!!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನಾಗರಪಂಚಮಿ ಸಹಿತ ಇತರ ಹಬ್ಬಗಳು ಎಂದಿನಂತೆ   ಸಂಭ್ರಮ ಸಡಗರದಿಂದ ಕೂಡಿರ ಲಿಲ್ಲ. ಕೊರೊನಾ ವೈರಾಣುವಿನ  ಕಾರಣದಿಂದ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧವಿದೆ. ಹಾಗಾಗಿ ಏನು ಧಾರ್ಮಿಕ ಕಾರ್ಯಕ್ರಮಗಳಾಗ ಬೇಕೋ ಅದು ಮಾತ್ರ ನಡೆದಿದೆ. ಗೌಜಿ ಗದ್ಧಲಗಳಿಗೆ ವಿರಾಮ ಹಾಕಿ ಅನಿವಾರ್ಯತೆಗೆ ಪ್ರಾಮುಖ್ಯತೆ. 

Advertisement
ಕರಾವಳಿ ಪ್ರದೇಶದಲ್ಲಿ ನಾಗಾರಾಧನೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತದೆ. ಪ್ರಕೃತಿಯ ಆರಾಧನೆಯನ್ನೇ  ಬಹುವಾಗಿ ಅಳವಡಿಸಿಕೊಂಡಿರುವ  ಕರಾವಳಿಗರು  ಋತುವಿಗನುಗುಣವಾಗಿ ಒಂದೊಂದು ಹಬ್ಬಗಳನ್ನು ಆಚರಿಸುತ್ತಾರೆ. ಪ್ರತಿಯೊಂದು ಹಬ್ಬವೂ ಪ್ರಕೃತಿಯಲ್ಲಿ ಸಮ್ಮಿಲಿತವಾಗಿದೆ.  ನಾಗಗಳ ಬಗ್ಗೆ ಸ್ವಲ್ಪ ಜಾಸ್ತಿಯೇ ಭಯ ಭಕ್ತಿ ನಮ್ಮ ಕರಾವಳಿ  ಪ್ರದೇಶದಲ್ಲಿ.  ಅಲ್ಲಲ್ಲಿ ನಾಗಬನಗಳನ್ನು  ಕಾಣಬಹುದು . ನಾಗರಪಂಚಮಿಯ ದಿನ ನಾಗನಕಲ್ಲುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ.
ಶ್ರದ್ಧಾ ಭಕ್ತಿಗಳಿಂದ ಪೂಜಿಸಲ್ಪಡುವ ನಾಗ ಇಂದು ಮನರಂಜನೆಯ ಕೇಂದ್ರಬಿಂದುವಾಗಿ ದೆ. ಟಿ.ವಿ. ವೀಕ್ಷಕರಿಗೆ ಇಂದು ಪ್ರತಿಯೊಂದು ಚಾನೆಲ್ ಗಳಲ್ಲೂ ನಾಗಗಳದ್ದೇ ಅಬ್ಬರ ಕಾಣಸಿಗುತ್ತದೆ. ಹೆಚ್ಚು ಕಮ್ಮಿ ಯಾವ ಚಾನೆಲ್ ನೋಡಿದರೂ ಸೇಡಿನಿಂದ ಬುಸುಗುಟ್ಟುವ ಹಾವುಗಳೇ ಪ್ರತ್ಯಕ್ಷ.  ಕೆಲವೊಂದರಲ್ಲಿ ಒಂದು ಹಾವಾದರೆ ಇನ್ನೂ ಕೆಲವು ಕಥೆಗಳಲ್ಲಿ ಇಡೀ ಕುಟುಂಬವೇ ಹಾವುಗಳು. ಯಾರ ಕಥೆ,  ಏನು ಕಥೆ ಎಂದು ಅರ್ಥೈಸುವುದರಲ್ಲಿ , ಪುರಾಣದಲ್ಲಿ ಕಂಡು ಕೇಳರಿಯದ ಪಾತ್ರಗಳು ಜೀವ ತಳೆಯುತ್ತಾ ಗೊಂದಲ ಸೃಷ್ಟಿಯಾಗುತ್ತಿವೆ.  ಒಬ್ಬರಿಗಿಂತ‌ ಒಬ್ಬರು ಸುಂದರಿಯರೇ.  ಒಂದು ಕಾಲದಲ್ಲಿ ನಾಗಿಣಿ ಪಾತ್ರಗಳಿಗೆ ಜೀವ ತುಂಬಿದವರು ದಿವಂಗತ ನಟಿ    ಶ್ರೀದೇವಿ.  ಅವರ ನಟನೆ ಎಷ್ಟು ಸಹಜವೆನಿಸುತ್ತಿತ್ತೆಂದರೆ  ನಾಗದೇವತೆ ಎಂದರೆ ಶ್ರೀದೇವಿಯೇ ಕಣ್ಣ ಮುಂದೆ ಬರುತ್ತಿದ್ದುದು.  ಈಗಂತೂ ಟಿ.ವಿ. ಯ ಯಾವ ಚಾನೆಲ್ ನೋಡಿದರೂ ನಮೂನೆವಾರು ನಾಗಿಣೆ , ನಾಗಗಳು. ಒಂದಕ್ಕಿಂತ ಒಂದು ಚೆಂದ.  ಸಿಟ್ಟಿನ ನಾಗಿಣಿ, ಬೇಜಾರದ ನಾಗಿಣಿ, ಖುಷಿಯ ನಾಗಿಣಿ, ದ್ವೇಷದ ನಾಗಿಣಿ, ಪ್ರೀತಿಯ ನಾಗಿಣಿ, ನವರಸಗಳನ್ನೂ ಬಿಂಬಿಸುವ ನಾಗಲೋಕ.  ದೇವತೆಗಳು, ರಕ್ಕಸರು, ಭೂತ ಪ್ರೇತಗಳು, ಮಾಂತ್ರಿಕರು, ಡಾಕಿಣಿ,  ಸರ್ಪಣಿಕಾ, ಮೋಹಿನಿಗಳು  ಇಂತಹುಗಳಿಂದಲೇ ಟಿ.ವಿ‌.ಪರದೆ ಭರ್ತಿ. ಸದ್ಯ ಡ್ರಗ್ಗಿಣಿಯರ  ಸಾಹಸಗಾತೆಯೇ ಕಾಡುತ್ತಿದೆ. ಮಾಡುವುದು , ಮಾಡುತ್ತಿರುವುದು
ದೇಶದ್ರೋಹದ ಕೆಲಸವಾದರೂ ಮಾರ್ಯಾದೆ ಬೇರೆ ಕೇಡು.   ಓಹ್ , ಲಾಕ್ ಡೌನ್ ನ ಪರಿಣಾಮ ಹಿಂದಿ ಧಾರಾವಾಹಿಗಳ ಡಬ್ಬಿಂಗ್. ಎಲ್ಲಾ ಕಥೆಗಳು ಆಡಂಬರದ ಪರಾಕಾಷ್ಠೆಯೇ.  ಪುರಾಣ ಕಥೆಗಳೆಲ್ಲವೂ ಟಿ.ವಿ ಪರದೆಯ ಮೇಲೆ ಪ್ರತ್ಯಕ್ಷ. ಎಲ್ಲಿ ಬೇಕಾದರೂ , ಯಾವಾಗ ಬೇಕಾದರೂ ನಿಮ್ಮ ನೆಚ್ಚಿನ ಧಾರಾವಾಹಿಯನ್ನು ನೋಡಿ  ಎಂಬ ಜಾಹೀರಾತಿನಂತೆ  ಟಿ.ವಿ ಯಲ್ಲೂ , ಮೊಬೈಲ್ ನಲ್ಲೂ ಎಲ್ಲಿ ಬೇಕೆಂದರಲ್ಲಿ ಹಾಜರಾಗುವ ಧಾರಾವಾಹಿಗಳು. ಮರೆಯಬೇಕೆಂದರೂ ಮರೆಯಲು ಬಿಡದೆ ಕಾಡುವ ಕಥೆಗಳು. ಬಂಡಲ್ , ಹಳಿಯಿಲ್ಲದ ಕಿರಿಕ್ ಧಾರಾವಾಹಿಗಳೆಂದರೂ, ಮತ್ತೆ ಮತ್ತೆ  ನೋಡುವುದು  ಅದೇ ಕಥೆಗಳನ್ನು. ‌ಅದರಲ್ಲೂ ನಾಗಿಣಿಗಳು, ನನ್ನನ್ನು ಬೆಂಬಿಡದೆ ಕಾಡುತ್ತವೆ. ತೋಟ, ಗುಡ್ಡೆ ,ಮನೆ ಹೊರಗೆ, ಮನೆಯೊಳಗೆ   ಎಲ್ಲಿ ಹೋದರೂ ಬುಸ್ ಎಂಬ ದನಿಯೇ ಕಾಡುತ್ತದೆ.  ಅದರಲ್ಲೂ ನಿತ್ಯ ಮಾಡುವ ಯೋಗಾಸನದ ಅಂತ್ಯದಲ್ಲಿನ  ಶವಾಸನದ ಹೊತ್ತಿಗೆ ಪಕ್ಕದಲ್ಲೇ ಬುಸ್ ಬುಸ್ ಎಂದು ಬಿಡುತ್ತೇನೋ ಅನಿಸುತ್ತದೆ. ನಾಗಪ್ಪ‌ ಏನು  ಮಾಡಬೇಡಪ್ಪಾ ಅನ್ನುತ್ತಲೇ ಕಣ್ಣು ಬಿಟ್ಟು ಸುತ್ತಲೆಲ್ಲಾ ನೋಡಿ  ಉಸ್ಸಪ್ಪಾ ಅನ್ನುತ್ತೇನೆ.
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹಕ್ಕಿಗಳಿಗೆ ಗೂಡುಕಟ್ಟುವ ಪರಿಸರ ಪ್ರೇಮಿ..

ಹಕ್ಕಿಗಳಿಗೆ ಗೂಡುಕಟ್ಟುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಟ್ಟಿರುವ ದಂಪತಿಗಳು ಬಂಟ್ವಾಳ ತಾಲೂಕಿನಲ್ಲಿದ್ದಾರೆ. ಇವರ…

2 hours ago

ಭಾರತದಿಂದ ಅಡಿಕೆಯ ರಫ್ತು ಎಷ್ಟಾಗುತ್ತದೆ…? ಹೇಗಾಗುತ್ತದೆ…?

ಜಾಗತಿಕ ಮಟ್ಟದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.ಇನ್ನು…

5 hours ago

ಮಹಾರಾಷ್ಟ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ 25,000 ಕೋಟಿ ರೂ. ಹೂಡಿಕೆ ಮಾಡಲಿದೆ

ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ  ರಾಜ್ಯ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ಕೃಷಿ…

5 hours ago

ಆಶ್ಲೇಷ ನಕ್ಷತ್ರದಲ್ಲಿ ಬುಧ: ಈ 4 ರಾಶಿಗೆ ಹೆಜ್ಜೆ ಹೆಜ್ಜೆಗೂ ಕಂಟಕ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

5 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದರ್ಶಿತ್‌ ಕೆ ಎಸ್

ದರ್ಶಿತ್‌ ಕೆ ಎಸ್‌, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್‌ ಸ್ಕೂಲ್‌, ಬೆಳ್ಳಾರೆದರ್ಶಿತ್‌…

13 hours ago

ಕೋವಿಡ್ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ | ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…

15 hours ago