ಮಳೆಗಾಲ ಅಂತಾ ಹೇಳ್ದು ಒಂದು ಖುಷಿಯ ಪದ ಯಾಕೆಂತಾ ಹೇಳಿರೆ ಜೂನ್ ತಿಂಗಳಿಂದ ಸುಮಾರ್ ಸೆಪ್ಟೆಂಬರ್, ಅಕ್ಟೋಬರ್ ವರೆಗೆ ಇದ್ದದೆ ಅಂತಾ ಹೇಳಕ್. ಮಳೆಗಾಲ ಅಂತಾ ಹೇಳ್ದು ಸಣ್ಣ ಸಣ್ಣ ಮಕ್ಕಳಿಗೆ ತುಂಬಾ ಖುಷಿಕೊಡುವಂತದ್. ಜೂನ್ ಲಿ ಶಾಲೆಗ ಸುರು ಆಗುವ ಹೊತ್ತು ಬೆಳಿಗ್ಗೆನೆ ಮಳೆ ಬಂದರೆ ಚಂಡಿ ಆಕಂಡ್ ಹೋಕೆ ಆದೆ ಅಂತಾ ಒಂದು ಮತ್ತೊಂದು ಹೇಳಕ್ಎಲ್ಲಾ ಕಡೆಗಲ್ಲಿ ಮಳೆ ಇದ್ದದೆ ಸಣ್ಣ ಸಣ್ಣ ಹಳ್ಳಗ ಎಲ್ಲಾ ಮುಳ್ಗಿದೆ ಹಂಗೆ ಶಾಲೆಗೆ ರಜೆನು ಸಿಕ್ಕಿದೆ ಅಂತಾ ತುಂಬಾ ಖುಷಿಪಟ್ಟವೆ. ಮಳೆಗಾಲ ಅಂತಾ ಹೇಳಿರೆ ಈಗದ ಮಕ್ಕಳಿಗೆ ರಜೆದೆ ನೆಂಪು ಬಾದು ಮನೆಲೇ ಕುದ್ ಕಂಡ್ ಬೀಜದ ಬೆಂಡ್ ಗಳ ತಿಂಬೊದು, ಕಣಿಗಲ್ಲಿ ಮೀನ್ ಹಿಡೆಕೆ ಆದೆ. ಎಸ್ಂಡ್ಗಳ ಹಿಡ್ದ್ ಕಿಚ್ಚಿ ಹಾಕಿ ತಿಂಬೊದು ಎಲ್ಲಾ ಮಕ್ಕಳಿಗೆ ಬಾರಿ ಖುಷಿ ಕೊಟ್ಟದೆ.
ವಿವರಣೆ : ಮಳೆಗಾಲಂತ ಹೇಳ್ದು ನಮ್ಮ ತುಳುನಾಡಿನವುಕ್ಕೆ ಹಬ್ಬ ಇದ್ದಂಗೆ ಯಾಕೆಂತಾ ಗೊತ್ತುಟ ಮಳೆಗಾಲಲಿ ಹಲ್ಸಿನ ಹಿಟ್ಟ್ಂತನೇ ಹೇಳುವೆ.ಅದ್ರಲ್ಲಿ ಮೂಡ್ ಹಿಟ್ಟ್ ಹಂಗೇ ಎಣ್ಣೆಲಿ ಹಲ್ಸಿನ ತೋಲೆ ಹಾಕಿ ಚಿಪ್ಸ್ ಮಾಡ್ದು, ಇಡ್ಲಿ ಮಾಡ್ದು ,ಮುಲ್ಕ ಮಾಡ್ದು ಎಲ್ಲಾ ಒಂದು ವಿಷೇಷವಾಗಿದ್ದದೇ ಅಂತಾ ಹೇಳಕ್.
ಕೆಲವು ಮಕ್ಕಳಿಗೆ ಹಲ್ಸಿನಕಿಯ ಸಾಂತನಿಮಾಡಿ ತಿಂಬೊದು ಅಂತಾ ಹೇಳಿರೆ ಒಂದು ಜೀವದಂಗೆಂತಾ ಹೇಳಕ್ ಹಲ್ಸಿನಕಾಯಿ ಹಣ್ಣಾಗುವ ಹೊತ್ಲಿ ಒಂದು ಊರು ಇಡೀ ಅದ್ರದೆ ಪರಿಮಳಬಾತ ಇದ್ದದೇ ಆಗ ಮನೆಗಲ್ಲಿ ಯಾರರ್ ಹಿರಿಯವು ಇದ್ದರೆ ಹಲ್ಸಿನಕಾಯಿ ಹಣ್ಣಾಗಿರೋಕು ತಗಂಡ್ ಬನ್ನಿಂತಾ ಬೊಬ್ಬೆ ಹೊಡೆಕೆ ಸರುಮಾಡುವೆ. ಮಳೆಬಾಕನ ಹೆಚ್ಚಿನ ಮನೆಯ ಮಕ್ಕ ಎಲ್ಲಾ ಕೊಡೆ, ರೈನ್ ಕೋಟು ಇದ್ರು ಕೂಡ ಸುಮ್ಮನಾರ್ ಚಂಡಿ ಆಕಂಡ್ ಮನೆಯವರ ಕೈಯಿಂದ ಬೊಯಿಗ್ಲ್,ಪೆಟ್ಟ್ ತಿಂದ್ಕಂಡ್ ಕುದ್ದವೆ ಅಲ್ಲದೇ ಜ್ವರ ಶೀತ ಸುರುಮಾಡಿಕಂಡ್ ಶಾಲೆಗೆ ರಜೆ ಮಾಡಿಕಂಡ್ ಶಾಲೆಲಿ ಟೀಚರ್ ಗಳ ಕೈಯಿಂದ ಕೂಡ ಬೊಯಿಗ್ಲ್ ತಿಂದವೆ. ಟೀಚರ್ಗ ಬೊಯೊದು ಒಂದು ಹಾಜರಿ ಕಡಿಮೆ ಬಿದ್ದದೆಂತಾ ಇನ್ನೊಂದು ಪಾಠ ಮಾಡ್ದ್ ಮಕ್ಕಳಿಗೆ ಅರ್ಥ ಆಲ್ಲೆಂತಾ.ಮಳೆಗಾಲ ಕೆಲವರ ಪಾಲಿಗೆ ಶನಿ ಇದ್ದಂಗೆ ಅಂತಾ ಹೇಳಕ್ ಯಾಕೆಂತಾ ಹೇಳಿರೆ ಕೆಲವು “ಮಳೆ “ಬಾಕನ ನೀರ್ ಲಿ ಕೊಚ್ಚಿ ಹೋದವೆ .ಹಂಗೆ “ಗಾಳಿ” ಬಾಕನ ಮರಗ ಎಲ್ಲಾ ಬಿದ್ದ್ ಸತ್ತವೆ. ಇನ್ನೊಂದು ಉಟ್ಡು ಭಯಂಕರವಾದ್ ಸಿಡ್ಲ್ ಅದ್ ಯಾವುದರ ಮರಕ್ಕೆನ ಅಲ್ಲಾ ಕಾಲಿ ಇರುವ ಜಾಗಲಿ ಇರ್ಕನ ,ಕರೆಂಟ್ ಮುಟ್ಟಿಕಂಡ್ ಇದ್ದರೆ ಎಲ್ಲಾ ನಮ್ಮ ಜೀವ ತೆಗ್ದದೆ ಅಂತಾ ಹೇಳಕ್.
ಕೆಲವರ ಪಾಲಿಗೆ ದೇವ್ರು ಇದ್ದಂಗೆ ಅದ್ ಉತ್ತರ ಕರ್ನಾಟಕದ ಜನಗಳಿಗೆ ಅಂತಾ ಹೇಳಕ್ ಯಾಕೆ ಗೊತ್ತುಟ್ಟಾ ಅಲ್ಲಿಯಲ ಇಲ್ಲಿಯ ಹಂಗೆ ನೀರ್ ಇಲ್ಲೆ ಅಲ್ಲಿ ಭತ್ತ ಬೆಳೆವೆ ಜಾಸ್ತಿ ಇರ್ದು . ಆಚೆ ಮಳೆ ಬಾದೆ ಅಪ್ರೂಪ ಹಂಗೆ ಮಳೆ ಬಾಕನ ಒಮ್ಮೆ ಎಲ್ಲವುಕ್ಕು ಖುಷಿ ಆದೆ ನಮ್ಮ ಗದ್ದೆಗೆ ನೀರ್ ಸಿಕ್ಕಿತ್, ಇನ್ನೂ ಲಾಯಿಕ್ ಬೆಳೆ ಬೆಳ್ದದೆ ಅಂತಾ. ಹಂಗೇನೇ ನಮ್ಮ ದಕ್ಷಿಣ ಕನ್ನಡ ಜಿಲ್ಲೆವಕ್ಕೆ ಮಳೆ ಬಂದರೆ ಅಡಿಕಿಗೆ ಎಲ್ಲಾ ರೋಗ ಹಿಡ್ದದೆ ಅಂತಾ ಮಂಡೆಬೆಚ್ಚಾ ಮತ್ತೆ ಇರುವ ಅಡಿಕೆನೆ ಅನೀಸ್ ಅದು ಕೂಡ ಹೋದರೇ ಮತ್ತೆ ಎಂತಾ ಉಟ್ಡು.ಬಿದ್ದ ಅಡಿಕೆ ಹೆಕ್ಕಿಕೆ ಕೂಡ ನಮ್ಮಲಿ ಯಾರ್ ಇಲ್ಲೆ . ಎಲ್ಲಾ ಕಣಿಲಿ ಬಿದ್ದ್ ಬೊಲ್ಲ ಹೋದೆ .
ಮಳೆ ಬಂದರೆ ಒಳ್ಳೆದ್ ಉಟ್ಟು ಕೆಟ್ಟದ್ ಉಟ್ಟು
# ಅನನ್ಯ. ಎಚ್, ಸುಬ್ರಹ್ಮಣ್ಯ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ಕಡಬ ಅರಣ್ಯ ಹಾಗೂ ಅರಣ್ಯದಂಚಿನ…
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…