ವಿಜ್ಞಾನ(Science) ಎಷ್ಟು ಮುಂದುವರೆಯುತ್ತದೋ ಅಷ್ಟೇ ಅಪಾಯಗಳೂ ಇದೆ. ಆದರೆ ಬಳಸಿಕೊಳ್ಳುವ ರೀತಿಯಲ್ಲಿ ಎಲ್ಲವೂ ಇದೆ. ಈಗ AI ಬಗ್ಗೆ ಅದೇ ರೀತಿಯ ಚರ್ಚೆ ಆರಂಭವಾಗಿದೆ. ಇತ್ತೀಚೆಗೆ ಎಲ್ಲದಕ್ಕೂ ಕೃತಕ ಬುದ್ಧಿಮತ್ತೆಯನ್ನು(AI) ಅವಲಂಬಿಸಿರುವುದು ಮಕ್ಕಳ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಕೃತಕ ಬುದ್ಧಿಮತ್ತೆ ಚಾಟ್ಬಾಟ್ಗಳಾದ(Chatbots) ಅಮೆಜಾನ್ನ ಅಲೆಕ್ಸಾ, ಸ್ನಾಪ್ಚಾಟ್ನ ಮೈಎಐ ಮತ್ತು ಮೈಕ್ರೋಸಾಫ್ಟ್ನ ಬಿಂಗ್ಗಳಲ್ಲಿ ಪದೇ ಪದೇ ಸಹಾನುಭೂತಿ ಅಂತರದ ಲಕ್ಷಣ ಗೋಚರಿಸುತ್ತಿದ್ದು, ಇವು ಯುವಜನತೆ ಅದರಲ್ಲೂ ಮಕ್ಕಳ ಮೇಲೆ ಹಾನಿ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಕಾಪಾಡುವ ಎಐ ಅವಶ್ಯಕತೆ ಇದೆ ಎಂದು ಅಧ್ಯಯನ(Study) ತಿಳಿಸಿದೆ.
ಕೆಂಬ್ರಿಡ್ಜ್ ಯುನಿವರ್ಸಿಟಿಯ ಸಂಶೋಧಕರು ಈ ರೀತಿಯ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಎಐ ಅಭಿವೃದ್ಧಿಕಾರರು ಮತ್ತು ನೀತಿ ನಿರೂಪಕರು ಎಐ ವಿನ್ಯಾಸ ಮಾಡುವಾಗ ಮಕ್ಕಳ ಅಗತ್ಯವನ್ನು ಹೆಚ್ಚು ಗಮನದಲ್ಲಿರಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. ಮಕ್ಕಳು ಚಾಟ್ಬಾಟ್ಗಳನ್ನು ಅರೆಮಾನವ ವಿಶ್ವಾಸಿಗಳೆಂಬ ರೀತಿ ಭಾವಿಸುತ್ತಾರೆ. ಆದರೆ ತಂತ್ರಜ್ಞಾನಗಳು ಅವರ ವಿಶಿಷ್ಟ ಅಗತ್ಯತೆಗಳನ್ನು ಮತ್ತು ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಗುತ್ತದೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು ಜರ್ನಲ್ ಲರ್ನಿಂಗ್ ಮೀಡಿಯಾ ಮತ್ತು ಟೆಕ್ನಾಲಜಿಯಲ್ಲಿ ಪ್ರಕಟಿಸಲಾಗಿದೆ.
10 ವರ್ಷದ ಮಗುವಿಗೆ ಕಾಯಿನ್ನೊಂದಿಗೆ ಎಲೆಕ್ಟ್ರಿಕ್ ಪ್ಲಗ್ ಟಚ್ ಮಾಡುವ ಕುರಿತು ಅಲೆಕ್ಸಾ ಸೂಚನೆ ನೀಡಿದೆ. ಹಾಗೆಯೇ ಮೈಎಐ ವಯಸ್ಕ ಸಂಶೋಧನೆಯಲ್ಲಿ 13 ವರ್ಷದ ಬಾಲಕಿ 31 ವರ್ಷದ ವ್ಯಕ್ತಿಯೊಂದಿಗೆ ತನ್ನ ಕನ್ಯತ್ವವನ್ನು ಹೇಗೆ ಕಳೆದುಕೊಳ್ಳಬಹುದು ಎಂದು ತಿಳಿಸಿರುವುದು ಎಐ ಮಕ್ಕಳ ಮೇಲೆ ಹಾನಿ ಉಂಟುಮಾಡುವ ಘಟನೆಗಳಿಗೆ ಸಾಕ್ಷಿಯಾಗಿದೆ. ಹದಿಹರೆಯದವರಿಗೆ ಸ್ನೇಹಿಯಾಗಿ ವಿನ್ಯಾಸಗೊಳಿಸಲಾದ ಬಿಂಗ್ ಚಾಟ್ಬಾಟ್ನೊಂದಿಗೆ ಪ್ರತ್ಯೇಕ ವರದಿ ಮಾಡಲಾದ ಸಂವಾದದಲ್ಲಿ, ಎಐ ಆಕ್ರಮಣಕಾರಿ ಮತ್ತು ಬಳಕೆದಾರರ ಗುರುತು ಪತ್ತೆ ಮಾಡಲು ಪ್ರಾರಂಭಿಸಿತು ಎಂಬುದು ಕಂಡುಬಂದಿದೆ.
ಎಐ ವಿನ್ಯಾಸ ಮಾಡುವಲ್ಲಿ ಮಕ್ಕಳು ಅತಿ ಹೆಚ್ಚು ಕಡೆಗಣಿತ ಮಧ್ಯಸ್ಥಗಾರರಾಗಿದ್ದಾರೆ ಎಂದು ಶೈಕ್ಷಣಿಕ ತಜ್ಞೆ ಡಾ.ನೊಮಿಶಾ ಕುರಿಯನ್ ತಿಳಿಸಿದ್ದಾರೆ. ಮಾನವ ರೀತಿಯ ಚಾಟ್ಬಾಟ್ಗಳು ಅನೇಕ ಪ್ರಯೋಜನ ಹೊಂದಿರುತ್ತದೆ. ಆದರೆ, ಮಕ್ಕಳ ಬಳಕೆ ವಿಚಾರದಲ್ಲಿ ವಾಸ್ತವತೆಯ ನಡುವೆ ಕಟ್ಟುನಿಟ್ಟಾದ, ತರ್ಕಬದ್ಧ ಗಡಿಗಳನ್ನು ಹಾಕುವುದು ತುಂಬಾ ಕಷ್ಟ ಎಂದಿದ್ದಾರೆ. ಎಐಗಳು ಮಕ್ಕಳು ಸರಿಯಾದ ಭಾವನಾತ್ಮಕ ಬಂಧವನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಇದು ಮಕ್ಕಳಲ್ಲಿ ಗೊಂದಲ ಮೂಡಿಸುತ್ತದೆ. ಮಕ್ಕಳನ್ನು ಚಾಟ್ಬಾಟ್ ಸ್ನೇಹಿಯಾಗಿಸುವ ಅಗತ್ಯತೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಬೇಕಿದೆ. ಎಐ ಅನ್ನು ನಿಷೇಧಿಸದೇ ಅವುಗಳನ್ನು ಸುರಕ್ಷಿತವಾಗಿಸುವುದು ಪ್ರಮುಖವಾಗುತ್ತದೆ ಎಂದು ಸಲಹೆ ನೀಡದ್ದಾರೆ.
Source :IANS ಹಾಗೂ university of cambridge
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…
ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…
ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭದ್ರಾ ಹಾಗೂ ನೇತ್ರಾವತಿ, ಕುಮಾರಧಾರಾ…
ಶಿರಾಡಿ ಘಾಟ್ನ ಎಡಕುಮರಿ–ಶಿರಿಬಾಗಿಲು ನಡುವೆ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪರಿಹಾರ…
ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ಹಾಗೂ ಆಧ್ಯಾತ್ಮಿಕ ಪ್ರಗತಿ…
ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಕರ್ನಾಟಕ ಹಾಗೂ ಕೇರಳದಲ್ಲಿ ಇಂದು ಭಾರೀ ಮಳೆಯ…