Advertisement
Opinion

ಕೃತಕ ಬುದ್ಧಿಮತ್ತೆ(AI) ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರಬಹುದು…..ಎಚ್ಚರ..! | ಚಾಟ್​ಬಾಟ್​ಗಳಿಂದ ​ಮಕ್ಕಳಿಗೆ ಹಾನಿ | ಅಧ್ಯಯನದಿಂದ ಬಯಲು

Share

ವಿಜ್ಞಾನ(Science) ಎಷ್ಟು ಮುಂದುವರೆಯುತ್ತದೋ ಅಷ್ಟೇ ಅಪಾಯಗಳೂ ಇದೆ. ಆದರೆ ಬಳಸಿಕೊಳ್ಳುವ ರೀತಿಯಲ್ಲಿ ಎಲ್ಲವೂ ಇದೆ. ಈಗ AI ಬಗ್ಗೆ ಅದೇ ರೀತಿಯ ಚರ್ಚೆ ಆರಂಭವಾಗಿದೆ. ಇತ್ತೀಚೆಗೆ ಎಲ್ಲದಕ್ಕೂ ಕೃತಕ ಬುದ್ಧಿಮತ್ತೆಯನ್ನು(AI) ಅವಲಂಬಿಸಿರುವುದು ಮಕ್ಕಳ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.  ಕೃತಕ ಬುದ್ಧಿಮತ್ತೆ ಚಾಟ್​ಬಾಟ್​ಗಳಾದ(Chatbots) ಅಮೆಜಾನ್‌ನ ಅಲೆಕ್ಸಾ, ಸ್ನಾಪ್​ಚಾಟ್​ನ ಮೈಎಐ ಮತ್ತು ಮೈಕ್ರೋಸಾಫ್ಟ್​ನ ಬಿಂಗ್​​ಗಳಲ್ಲಿ ಪದೇ ಪದೇ ಸಹಾನುಭೂತಿ ಅಂತರದ ಲಕ್ಷಣ ಗೋಚರಿಸುತ್ತಿದ್ದು, ಇವು ಯುವಜನತೆ ಅದರಲ್ಲೂ ಮಕ್ಕಳ ಮೇಲೆ ಹಾನಿ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಕಾಪಾಡುವ ಎಐ ಅವಶ್ಯಕತೆ ಇದೆ ಎಂದು ಅಧ್ಯಯನ(Study) ತಿಳಿಸಿದೆ.

ಕೆಂಬ್ರಿಡ್ಜ್​ ಯುನಿವರ್ಸಿಟಿಯ ಸಂಶೋಧಕರು ಈ ರೀತಿಯ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಎಐ ಅಭಿವೃದ್ಧಿಕಾರರು ಮತ್ತು ನೀತಿ ನಿರೂಪಕರು ಎಐ ವಿನ್ಯಾಸ ಮಾಡುವಾಗ ಮಕ್ಕಳ ಅಗತ್ಯವನ್ನು ಹೆಚ್ಚು ಗಮನದಲ್ಲಿರಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. ಮಕ್ಕಳು ಚಾಟ್​ಬಾಟ್​​ಗಳನ್ನು ಅರೆಮಾನವ ವಿಶ್ವಾಸಿಗಳೆಂಬ ರೀತಿ ಭಾವಿಸುತ್ತಾರೆ. ಆದರೆ ತಂತ್ರಜ್ಞಾನಗಳು ಅವರ ವಿಶಿಷ್ಟ ಅಗತ್ಯತೆಗಳನ್ನು ಮತ್ತು ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಗುತ್ತದೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು ಜರ್ನಲ್​ ಲರ್ನಿಂಗ್​​ ಮೀಡಿಯಾ ಮತ್ತು ಟೆಕ್ನಾಲಜಿಯಲ್ಲಿ ಪ್ರಕಟಿಸಲಾಗಿದೆ.

10 ವರ್ಷದ ಮಗುವಿಗೆ ಕಾಯಿನ್​ನೊಂದಿಗೆ ಎಲೆಕ್ಟ್ರಿಕ್​ ಪ್ಲಗ್​ ಟಚ್​ ಮಾಡುವ ಕುರಿತು ಅಲೆಕ್ಸಾ ಸೂಚನೆ ನೀಡಿದೆ. ಹಾಗೆಯೇ ಮೈಎಐ ವಯಸ್ಕ ಸಂಶೋಧನೆಯಲ್ಲಿ 13 ವರ್ಷದ ಬಾಲಕಿ 31 ವರ್ಷದ ವ್ಯಕ್ತಿಯೊಂದಿಗೆ ತನ್ನ ಕನ್ಯತ್ವವನ್ನು ಹೇಗೆ ಕಳೆದುಕೊಳ್ಳಬಹುದು ಎಂದು ತಿಳಿಸಿರುವುದು ಎಐ ಮಕ್ಕಳ ಮೇಲೆ ಹಾನಿ ಉಂಟುಮಾಡುವ ಘಟನೆಗಳಿಗೆ ಸಾಕ್ಷಿಯಾಗಿದೆ. ಹದಿಹರೆಯದವರಿಗೆ ಸ್ನೇಹಿಯಾಗಿ ವಿನ್ಯಾಸಗೊಳಿಸಲಾದ ಬಿಂಗ್ ಚಾಟ್‌ಬಾಟ್‌ನೊಂದಿಗೆ ಪ್ರತ್ಯೇಕ ವರದಿ ಮಾಡಲಾದ ಸಂವಾದದಲ್ಲಿ, ಎಐ ಆಕ್ರಮಣಕಾರಿ ಮತ್ತು ಬಳಕೆದಾರರ ಗುರುತು ಪತ್ತೆ ಮಾಡಲು ಪ್ರಾರಂಭಿಸಿತು ಎಂಬುದು ಕಂಡುಬಂದಿದೆ.

ಎಐ ವಿನ್ಯಾಸ ಮಾಡುವಲ್ಲಿ ಮಕ್ಕಳು ಅತಿ ಹೆಚ್ಚು ಕಡೆಗಣಿತ ಮಧ್ಯಸ್ಥಗಾರರಾಗಿದ್ದಾರೆ ಎಂದು ಶೈಕ್ಷಣಿಕ ತಜ್ಞೆ ಡಾ.ನೊಮಿಶಾ ಕುರಿಯನ್​ ತಿಳಿಸಿದ್ದಾರೆ. ಮಾನವ ರೀತಿಯ ಚಾಟ್​ಬಾಟ್​ಗಳು ಅನೇಕ ಪ್ರಯೋಜನ ಹೊಂದಿರುತ್ತದೆ. ಆದರೆ, ಮಕ್ಕಳ ಬಳಕೆ ವಿಚಾರದಲ್ಲಿ ವಾಸ್ತವತೆಯ ನಡುವೆ ಕಟ್ಟುನಿಟ್ಟಾದ, ತರ್ಕಬದ್ಧ ಗಡಿಗಳನ್ನು ಹಾಕುವುದು ತುಂಬಾ ಕಷ್ಟ ಎಂದಿದ್ದಾರೆ. ಎಐಗಳು ಮಕ್ಕಳು ಸರಿಯಾದ ಭಾವನಾತ್ಮಕ ಬಂಧವನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಇದು ಮಕ್ಕಳಲ್ಲಿ ಗೊಂದಲ ಮೂಡಿಸುತ್ತದೆ. ಮಕ್ಕಳನ್ನು ಚಾಟ್​ಬಾಟ್​ ಸ್ನೇಹಿಯಾಗಿಸುವ ಅಗತ್ಯತೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಬೇಕಿದೆ. ಎಐ ಅನ್ನು ನಿಷೇಧಿಸದೇ ಅವುಗಳನ್ನು ಸುರಕ್ಷಿತವಾಗಿಸುವುದು ಪ್ರಮುಖವಾಗುತ್ತದೆ ಎಂದು ಸಲಹೆ ನೀಡದ್ದಾರೆ.

Source :IANS ಹಾಗೂ university of cambridge

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

2 hours ago

ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…

7 hours ago

ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು

2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…

12 hours ago

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?

ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…

1 day ago

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?

ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…

1 day ago

ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ

ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್‌ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್‌ ಪೂರೈಕೆಯ…

2 days ago