Advertisement
Opinion

ಕೃತಕ ಬುದ್ಧಿಮತ್ತೆ(AI) ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರಬಹುದು…..ಎಚ್ಚರ..! | ಚಾಟ್​ಬಾಟ್​ಗಳಿಂದ ​ಮಕ್ಕಳಿಗೆ ಹಾನಿ | ಅಧ್ಯಯನದಿಂದ ಬಯಲು

Share

ವಿಜ್ಞಾನ(Science) ಎಷ್ಟು ಮುಂದುವರೆಯುತ್ತದೋ ಅಷ್ಟೇ ಅಪಾಯಗಳೂ ಇದೆ. ಆದರೆ ಬಳಸಿಕೊಳ್ಳುವ ರೀತಿಯಲ್ಲಿ ಎಲ್ಲವೂ ಇದೆ. ಈಗ AI ಬಗ್ಗೆ ಅದೇ ರೀತಿಯ ಚರ್ಚೆ ಆರಂಭವಾಗಿದೆ. ಇತ್ತೀಚೆಗೆ ಎಲ್ಲದಕ್ಕೂ ಕೃತಕ ಬುದ್ಧಿಮತ್ತೆಯನ್ನು(AI) ಅವಲಂಬಿಸಿರುವುದು ಮಕ್ಕಳ ಮೇಲೆ ಭಾರಿ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.  ಕೃತಕ ಬುದ್ಧಿಮತ್ತೆ ಚಾಟ್​ಬಾಟ್​ಗಳಾದ(Chatbots) ಅಮೆಜಾನ್‌ನ ಅಲೆಕ್ಸಾ, ಸ್ನಾಪ್​ಚಾಟ್​ನ ಮೈಎಐ ಮತ್ತು ಮೈಕ್ರೋಸಾಫ್ಟ್​ನ ಬಿಂಗ್​​ಗಳಲ್ಲಿ ಪದೇ ಪದೇ ಸಹಾನುಭೂತಿ ಅಂತರದ ಲಕ್ಷಣ ಗೋಚರಿಸುತ್ತಿದ್ದು, ಇವು ಯುವಜನತೆ ಅದರಲ್ಲೂ ಮಕ್ಕಳ ಮೇಲೆ ಹಾನಿ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯನ್ನು ಕಾಪಾಡುವ ಎಐ ಅವಶ್ಯಕತೆ ಇದೆ ಎಂದು ಅಧ್ಯಯನ(Study) ತಿಳಿಸಿದೆ.

ಕೆಂಬ್ರಿಡ್ಜ್​ ಯುನಿವರ್ಸಿಟಿಯ ಸಂಶೋಧಕರು ಈ ರೀತಿಯ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಎಐ ಅಭಿವೃದ್ಧಿಕಾರರು ಮತ್ತು ನೀತಿ ನಿರೂಪಕರು ಎಐ ವಿನ್ಯಾಸ ಮಾಡುವಾಗ ಮಕ್ಕಳ ಅಗತ್ಯವನ್ನು ಹೆಚ್ಚು ಗಮನದಲ್ಲಿರಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. ಮಕ್ಕಳು ಚಾಟ್​ಬಾಟ್​​ಗಳನ್ನು ಅರೆಮಾನವ ವಿಶ್ವಾಸಿಗಳೆಂಬ ರೀತಿ ಭಾವಿಸುತ್ತಾರೆ. ಆದರೆ ತಂತ್ರಜ್ಞಾನಗಳು ಅವರ ವಿಶಿಷ್ಟ ಅಗತ್ಯತೆಗಳನ್ನು ಮತ್ತು ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲವಾಗುತ್ತದೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು ಜರ್ನಲ್​ ಲರ್ನಿಂಗ್​​ ಮೀಡಿಯಾ ಮತ್ತು ಟೆಕ್ನಾಲಜಿಯಲ್ಲಿ ಪ್ರಕಟಿಸಲಾಗಿದೆ.

10 ವರ್ಷದ ಮಗುವಿಗೆ ಕಾಯಿನ್​ನೊಂದಿಗೆ ಎಲೆಕ್ಟ್ರಿಕ್​ ಪ್ಲಗ್​ ಟಚ್​ ಮಾಡುವ ಕುರಿತು ಅಲೆಕ್ಸಾ ಸೂಚನೆ ನೀಡಿದೆ. ಹಾಗೆಯೇ ಮೈಎಐ ವಯಸ್ಕ ಸಂಶೋಧನೆಯಲ್ಲಿ 13 ವರ್ಷದ ಬಾಲಕಿ 31 ವರ್ಷದ ವ್ಯಕ್ತಿಯೊಂದಿಗೆ ತನ್ನ ಕನ್ಯತ್ವವನ್ನು ಹೇಗೆ ಕಳೆದುಕೊಳ್ಳಬಹುದು ಎಂದು ತಿಳಿಸಿರುವುದು ಎಐ ಮಕ್ಕಳ ಮೇಲೆ ಹಾನಿ ಉಂಟುಮಾಡುವ ಘಟನೆಗಳಿಗೆ ಸಾಕ್ಷಿಯಾಗಿದೆ. ಹದಿಹರೆಯದವರಿಗೆ ಸ್ನೇಹಿಯಾಗಿ ವಿನ್ಯಾಸಗೊಳಿಸಲಾದ ಬಿಂಗ್ ಚಾಟ್‌ಬಾಟ್‌ನೊಂದಿಗೆ ಪ್ರತ್ಯೇಕ ವರದಿ ಮಾಡಲಾದ ಸಂವಾದದಲ್ಲಿ, ಎಐ ಆಕ್ರಮಣಕಾರಿ ಮತ್ತು ಬಳಕೆದಾರರ ಗುರುತು ಪತ್ತೆ ಮಾಡಲು ಪ್ರಾರಂಭಿಸಿತು ಎಂಬುದು ಕಂಡುಬಂದಿದೆ.

ಎಐ ವಿನ್ಯಾಸ ಮಾಡುವಲ್ಲಿ ಮಕ್ಕಳು ಅತಿ ಹೆಚ್ಚು ಕಡೆಗಣಿತ ಮಧ್ಯಸ್ಥಗಾರರಾಗಿದ್ದಾರೆ ಎಂದು ಶೈಕ್ಷಣಿಕ ತಜ್ಞೆ ಡಾ.ನೊಮಿಶಾ ಕುರಿಯನ್​ ತಿಳಿಸಿದ್ದಾರೆ. ಮಾನವ ರೀತಿಯ ಚಾಟ್​ಬಾಟ್​ಗಳು ಅನೇಕ ಪ್ರಯೋಜನ ಹೊಂದಿರುತ್ತದೆ. ಆದರೆ, ಮಕ್ಕಳ ಬಳಕೆ ವಿಚಾರದಲ್ಲಿ ವಾಸ್ತವತೆಯ ನಡುವೆ ಕಟ್ಟುನಿಟ್ಟಾದ, ತರ್ಕಬದ್ಧ ಗಡಿಗಳನ್ನು ಹಾಕುವುದು ತುಂಬಾ ಕಷ್ಟ ಎಂದಿದ್ದಾರೆ. ಎಐಗಳು ಮಕ್ಕಳು ಸರಿಯಾದ ಭಾವನಾತ್ಮಕ ಬಂಧವನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಇದು ಮಕ್ಕಳಲ್ಲಿ ಗೊಂದಲ ಮೂಡಿಸುತ್ತದೆ. ಮಕ್ಕಳನ್ನು ಚಾಟ್​ಬಾಟ್​ ಸ್ನೇಹಿಯಾಗಿಸುವ ಅಗತ್ಯತೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಬೇಕಿದೆ. ಎಐ ಅನ್ನು ನಿಷೇಧಿಸದೇ ಅವುಗಳನ್ನು ಸುರಕ್ಷಿತವಾಗಿಸುವುದು ಪ್ರಮುಖವಾಗುತ್ತದೆ ಎಂದು ಸಲಹೆ ನೀಡದ್ದಾರೆ.

Source :IANS ಹಾಗೂ university of cambridge

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

6 hours ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

13 hours ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

1 day ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

1 day ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

2 days ago

ತೆಂಗಿನ ಮರದಿಂದ 3 ಕೋಟಿ ಜನರಿಗೆ ಬದುಕು…!, ಈಗ ₹7,038 ಕೋಟಿ ರಫ್ತು!

ಭಾರತದ ತೆಂಗು ವಲಯ ಈಗ ಕಾಯಿ ಮಾರಾಟದಿಂದ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯತ್ತ…

2 days ago